Friday, February 22, 2008

ಮೀರ್ವಾಲಾದ ಅಂಧಕಾರದಲ್ಲೊಂದು ಬೆಳಕಿನ ಕಿರಣ


Iam just the first drop of water in this village, but then the rains will come. And many drops of rains make a big river.
- Mukhtar Mai


ಮನುಷ್ಯ ಇಷ್ಟೊಂದು ಕ್ರೂರಿ ಆಗಿಬಿಟ್ನಾ?

ಹಾಗಂತ ತುಂಬಾ ಸಲ ಯೋಚಿಸಿದ್ದೇನೆ. ಇಲ್ಲ ಅನ್ನುವುದಕ್ಕೆ ಸಿಕ್ಕ ಪುರಾವೆಗಳಿಗಿಂತ ಹೌದು ಅನ್ನುವುದಕ್ಕೆ ಸಿಕ್ಕ ಪುರಾವೆಗಳೇ ಜಾಸ್ತಿ ಆನಿಸ್ತಿದೆ. ಅದರಲ್ಲೂ ಪಾಕಿಸ್ತಾನದಂತಹ ಒಂದು ಅರಾಜಕ ರಾಷ್ಟ್ರದಲ್ಲಿ ಜೀವಕ್ಕೆ ಬೆಲೆಯಾದರೂ ಎಲ್ಲಿದ್ದೀತು? ಅಲ್ಲಿ ಕೊಲೆಗೆ ಕಾರಣಗಳೇ ಬೇಕಿಲ್ಲ. ಪ್ರೀತಿ ಅನ್ನೋದು ಬಾಂಬಿನ ಒಳಸುಳಿಗಳಲ್ಲಿ, ಬಂದೂಕಿನ ಟ್ರಿಗ್ಗರ್ಗಳಲ್ಲಿ, ಕಟ್ಟಾ ಮುಲ್ಲಾಗಳ ಅಬ್ಬರದಲ್ಲಿ ಇನ್ನಿಲ್ಲದಂತೆ ಕಳೆದುಹೋಗಿದೆ. ಪಾಕಿಸ್ತಾನಕ್ಕೆ ಬುದ್ಧಿ ಬರುವುದಿಲ್ಲ!ಆದರೆ ಇಂತಹ ನಾಡಿನಲ್ಲಿರುವ ಹೆಣ್ಣುಮಕ್ಕಳ ಪಾಡಾದರೂ ಎಂಥದು?ಅದು ತಿಳೀಬೇಕಾದ್ರೆ ಮುಕ್ತಾರ್ ಮಾಯಿ ಅನ್ನೋ ಹೆಣ್ಣುಮಗಳ ಕಣ್ಣೀರಿನ ಕಥೆ ಕೇಳಲೇಬೇಕು.
ಆಕೆ ಮುಕ್ತಾರ್ ಮಾಯಿ

ಅದು ದಕ್ಷಿಣ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿನ ಒಂದು ಊರು. ಹೆಸರು ಮೀರ್ವಾಲಾ. ಅಲ್ಲಿನ ಕಡುಬಡತನದ ಕುಟುಂಬದವಳೇ ಈ ಮಾಯಿ. ಅವಳ ಮನೆಯಲ್ಲೇಕೆ ಇಡೀ ಊರಿನಲ್ಲೇ ಹಾಸಿ ಹೊದ್ದುಕೊಳ್ಳುವಷ್ಟು ಬಡತನವಿತ್ತು, ಹಸಿವಿತ್ತು, ಅರಾಜಕತೆಯಿತ್ತು, ಅನಕ್ಷರತೆಯೂ ಇತ್ತು. ಎಲ್ಲಕ್ಕಿಂತ ಹೆಚ್ಚಾಗಿದ್ದದ್ದೆಂದರೆ ದಿನಕ್ಕೆ ಐದು ಸಲ ನಮಾಜ್ ಮಾಡುವ ಅಲ್ಲಿನ ಕಟ್ಟಾ ಮುಸ್ಲಿಂ ಸಂಪ್ರದಾಯವಾದಿಗಳ ಅಮಾನುಷ ಕಟ್ಟುಪಾಡುಗಳು. ನಿಜ ಹೇಳಬೇಕೆಂದರೆ, ಅಲ್ಲಿನ ಯಾವ ಹೆಣ್ಣೂ ಬುಕರ್ಾ ಧರಿಸದೆ ಹೊರಗೆ ಬರುವಂತಿರಲಿಲ್ಲ. ಗಂಡಸರ ಜೊತೆ ತಿರುಗಾಡುವಂತಿರಲಿಲ್ಲ. ಇಂಥ ನೆಲದಲ್ಲಿ ಜನ್ಮ ತಾಳಿದ ಮಾಯಿಗೆ ಇನ್ನೂ ಹದಿನೆಂಟು ತುಂಬುವ ಮೊದಲೇ ಮದುವೆ ಮಾಡಲಾಯ್ತು. ಪ್ರೀತಿ ಇಲ್ಲದೆ ಮೇಲೆ ಗಂಡನೊಟ್ಟಿಗಾದರೂ ಸರಿ ಬಾಳ್ವೆ ಮಾಡುವುದು ಹೇಗೆ? ಮದುವೆಯಾಗಿ ಒಂದು ವರ್ಷದೊಳಗೇ ಅದಕ್ಕೇ ತಲಾಕ್ ಸಿಕ್ತು. ಮಾಯಿಗೂ ಗಂಡನ ಜೊತೆ ಬದುಕು ಮಾಡುವುದು ಕಷ್ಟ ಎನಿಸಿತ್ತು. ಹೊರಬಂದಳು. ಆದ್ರೆ ಪಾಕಿಸ್ತಾನದ ಹಳ್ಳಿಗಾಡುಗಳಲ್ಲಿ ಡಿವೋಸರ್್ ಪ್ರಕರಣಗಳು ಕಡಿಮೆ. ಯಾಕೆಂದ್ರೆ, ಹಾಗೆ ಡಿವೋಸರ್್ ತೆಗೆದುಕೊಂಡು ಬಂದ ಹೆಣ್ಣುಮಕ್ಕಳನ್ನು ಹಳ್ಳಿಗಳಲ್ಲಿ ತೀರಾ ನಿಕೃಷ್ಟವಾಗಿ ಕಾಣಲಾಗುತ್ತದೆ. ಆದ್ರೆ ಮಾಯಿ ಅವಕ್ಕೆಲ್ಲ ಹೆದರಲಿಲ್ಲ. ಒಂದಿನ ಬಂದು ತನ್ನ ಮೀರ್ವಾಲಾದ ಮಣ್ಣಿನ ಜೋಪಡಿಯಲ್ಲಿ ಕುಳಿತುಬಿಟ್ಟಳು.ಹಾಗೆ ಕುಳಿತವಳ ಮನಸ್ಸಿಗೆ ಬಂದದ್ದು ಹೇಗಾದ್ರೂ ಮಾಡಿ ನನ್ನ ಕಾಲ ಮೇಲೆ ನಾನು ನಿಂತುಕೊಳ್ಳಬೇಕಲ್ಲ ಅನ್ನುವುದು. ಎಂಬ್ರಾಯಿಡರಿ ಕಲಿತಳು, ಮಕ್ಕಳಿಗೆ ಕುರಾನ್ ಹೇಳಿಕೊಟ್ಟಳು, ಬದುಕು ಹೇಗೋ ಸಾಗುತ್ತಿತ್ತು. ಸಕಲ ನೋವಿನ ನಡುವೆಯೇ!

ಅದೊಂದು ಕರಾಳ ರಾತ್ರಿ

ಆದ್ರೆ ಅಲ್ಲಿನ ಜನ ಹಾಗೆಲ್ಲ ನಿರುಮ್ಮಳವಾಗಿ ಬದುಕಲು ಬಿಡುವುದಿಲ್ಲ. ಮೇಲ್ವರ್ಗ ಕೆಳವರ್ಗದ ನಡುವಿನ ಬೆಂಕಿ ನಮ್ಮಂತ ಅಭಿವೃದ್ಧಿಶೀಲ(?) ರಾಷ್ಟ್ರಗಳನ್ನು ಶಾಂತಿಯಿಂದ ಬದುಕಲು ಬಿಟ್ಟಿಲ್ಲ. ಬಿಡುವುದೂ ಇಲ್ಲವೇನೋ?ಮೀರ್ವಾಲಾ ಕೂಡ ಇದಕ್ಕೆ ಹೊರತಲ್ಲ. ಅಲ್ಲಿನ ಮೇಲ್ವರ್ಗದ ಮಾಸ್ತೋಯಿಸ್ಗಳು ಮಾಯಿಯ ತಮ್ಮ, ತಮ್ಮ ಜನಾಂಗದ ಹೆಣ್ಣುಮಕ್ಕಳೊಂದಿಗಿದ್ದ ಅನ್ನುವ ಒಂದೇ ಕಾರಣಕ್ಕೆ ಚೆನ್ನಾಗಿ ತಳಿಸಿದ್ದರು. ಅಲ್ಲದೆ ಅದಕ್ಕೆ ಕ್ಷಮೆ ಎಂಬಂತೆ ಮಾಯಿ ನಮ್ಮ ತೃಷೆ ತೀರಿಸಬೇಕು ಅನ್ನುವ ಇಚ್ಛೆಯನ್ನೂ ವ್ಯಕ್ತಪಡಿಸಿದ್ದರು. ಅಲ್ಲಿ ಮೇಲ್ವರ್ಗದವರದೇ ಕೊನೆಯ ಮಾತು, ಕೊನೆಯ ಅಸ್ತ್ರ. ಮಾಯಿ ಇದ್ಯಾವ ನ್ಯಾಯ ಎನ್ನುವಷ್ಟರಲ್ಲಿ ಅವಳ ತಂದೆ ಮತ್ತು ಚಿಕ್ಕಪ್ಪನನ್ನು ಹೊರಗಾಕಿ ಮಾಯಿಯ ಮೇಲೆ ಇಡೀ ರಾತ್ರಿ ಅತ್ಯಾಚಾರ ಎಸಗಿದ್ದರು. ಹೊರಗಡೆ ಆರ್ತನಾದ. ಒಳಗೂ ಮಾಯಿಯದು. ಆದರೆ ಮೇಲ್ವರ್ಗದವರ ಅಟ್ಟಹಾಸದ ನಡುವೆ ಅದು ಯಾರ ಕಿವಿಗೂ ಬೀಳಲೇ ಇಲ್ಲ. ಬಿದ್ದಿದ್ದರೂ ಯಾರೂ ಆ ಬಗ್ಗೆ ಸೊಲ್ಲೆತ್ತುವಂತಿರಲಿಲ್ಲ. ಪೊಲೀಸರಿಗೆ ದೂರು ಕೊಡುವ ಹಾಗಿರಲಿಲ್ಲ. ಯಾರೊಟ್ಟಿಗೂ ಹೇಳಿಕೊಳ್ಳುವಂತೆಯೂ ಇರಲಿಲ್ಲ. ಉಳಿದದ್ದು ಒಂದು ನಿಟ್ಟುಸಿರು ಮತ್ತು ಅಖಂಡ ನೋವು ಅಷ್ಟೆ. ಅದು ಅವರ ದಬ್ಬಾಳಿಕೆ, ಬಂದೂಕಿನ ಸುಳಿಯ ನಡುವೆ.

ನಾನು ಬದುಕಿರಬಾರದು!

ಇಷ್ಟಾದ ಮೇಲೆ ಮಾಯಿಗೆ ಬದುಕುವ ಆಸೆಯೇ ಇಲ್ಲದಾಗಿ ಹೋಯಿತು. "ಇನ್ನು ನಾನು ಬದುಕಿರುವುದರಲ್ಲಿ ಅರ್ಥ ಇಲ್ಲ. ಸಾಯುವುದೇ ಸರಿ" ಅಂತ ತೊಟ್ಟು ನೀರನ್ನೂ ಮುಟ್ಟದೆ ಸಾವಿಗಾಗಿ ಹಂಬಲಿಸಿದಳು. ಆದರೆ ಆ ಕಟ್ಟುಪಾಡುಗಳ ನಡುವೆಯೂ ಮಾಯಿಯ ಅಪ್ಪ ಅಮ್ಮ ಇವಳಲ್ಲಿ ಧೈರ್ಯ ತುಂಬಿದರು. ಆ ಕಡೆ ಮೇಲ್ವರ್ಗದ ಮಾಸ್ತೋಯಿಸ್ಗಳು ಮಾತ್ರ ಧಮಕಿ ಹಾಕುತ್ತಲೇ ಇದ್ದರು.ಆದರೆ ಇಂಥ ಕ್ರೌರ್ಯವೇ ತುಂಬಿಕೊಂಡ ನೆಲದಲ್ಲೂ ಎಲ್ಲೋ ಒಂದು ಕಡೆ ಸಣ್ಣದೊಂದು ಮಾನವೀಯತೆಯ ಅಂತರ್ಜಲವೂ ಇರುತ್ತದೆ. ಇಲ್ಲದಿದ್ದರೆ ಈ ಜಗತ್ತಿನಲ್ಲಿ ಬದುಕಿರಲು ಸಾಧ್ಯವಿತ್ತೆ? ಅಲ್ಲಿನ ಲೋಕಲ್ ಮುಲ್ಲಾ ಒಂದಿನ ಸಭೆಯಲ್ಲಿ ಮಾಯಿ ಮೇಲೆ ನಡೆದ ಅತ್ಯಾಚಾರವನ್ನು ಖಂಡಿಸಿ ಮಾತಾಡಿದ. ಇದು ನಮ್ಮ ಊರಿಗೇ ಕಳಂಕ ಎಂದ. ಪೊಲೀಸರೇನು ಕತ್ತೆ ಕಾಯ್ತಾ ಇದಾರಾ ಅಂತ ತರಾಟೆಗೆ ತೆಗೆದುಕೊಂಡ. ಆದರೆ ಪೊಲೀಸರೇನು ಮಾಡಿಯಾರು? ಕಂಪ್ಲೆಂಟ್ ಕೊಟ್ಟರೆ ತಾನೆ ಅಪರಾಧಿಗಳನ್ನು ಬಂಧಿಸಲು ಸಾಧ್ಯ. ಕಂಪ್ಲೆಂಟ್ ಕೊಡಲು ಅಲ್ಲಿ ಧೈರ್ಯವಾದರೂ ಯಾರಿಗಿತ್ತು?ಆದರೆ ಇಂಥದ್ದೊಂದು ಸಣ್ಣ ಸಪ್ಪೋಟರ್್ ಮುಕ್ತರ್ ಮಾಯಿಗೆ ಸಾಕಿತ್ತು. ಅದಾಗಲೇ ಅವಳೊಂದು ನಿಧರ್ಾರಕ್ಕೆ ಬಂದಂತಿತ್ತು. ತನ್ನ ಮೇಲೆ ವಿನಾಕಾರಣ ಅತ್ಯಾಚಾರವೆಸಗಿದವರಿಗೆ ಸರಿಯಾದ ಶಿಕ್ಷೆಯಾಗಬೇಕೆನ್ನುವುದು ಅವಳ ಹಂಬಲವಾಗಿತ್ತು. ಮನೆಯವರು ಹೆದರಿ ಬೇಡ ಮಗಳೇ ಅಂದ್ರು. ಆದ್ರೆ ಮಾಯಿ ಬಿಡಲಿಲ್ಲ. ತನ್ನ ನೋವು, ಅಪಮಾನ ಎಲ್ಲವನ್ನೂ ನುಂಗಿಕೊಂಡೇ ಪೊಲೀಸ್ ಸ್ಟೇಷನ್ ಹತ್ತಿ ತನ್ನ ಮೇಲೆ ನಡೆದ ದೌರ್ಜನ್ಯವನ್ನು ಬಿಚ್ಚಿಟ್ಟಳು. ತನಗೆ ನ್ಯಾಯ ಕೊಡಿಸಿ ಅಂತ ಅಂಗಲಾಚಿದಳು. ಸುದ್ದಿ ದೊಡ್ಡ ಸುದ್ದಿಯಾಯಿತು. ಮಹಿಳಾ ಸಂಘಟನೆಗಳು, ಮಾನವತಾವಾದಿಗಳು ಮಾಯಿಯ ಬೆಂಬಲಕ್ಕೆ ನಿಂತರು. ನೋಡ ನೋಡುತ್ತಲೇ ಮುಕ್ತರ್ ಮಾಯಿ ಎಲ್ಲಾ ನೊಂದವರ ದನಿಯಾಗಿಹೋದಳು. ಊರು ಎರಡು ಭಾಗವಾಗಿ ಹೋಯ್ತು. ನೀನು ಕಂಪ್ಲೆಂಟ್ ಕೊಟ್ಟಿದ್ದು ಮಹಾಪರಾಧ ಎನ್ನುವಂತೆ ಮಾತಾಡಿದರು ಅರ್ಧ ಊರಿನವರು. ನನ್ನ ಮೇಲೆ ನಡೆದ ದೌರ್ಜನ್ಯ ಮಹಾಪರಾಧವಲ್ಲವಾ? ಅಂತ ಕೇಳಿದ್ರೆ ಅವರಲ್ಲಿ ಉತ್ತರವಿರಲಿಲ್ಲ.ಕೊನೆಗೂ ಅತ್ಯಾಚಾರಿಗಳ ಬಂಧನವಾಯ್ತು. ಅವರಿಗೆ ಮರಣದಂಡನೆಯೂ ವಿಧಿಸ್ತು ಕೋಟರ್ು. ಆದ್ರೆ ಅವರು ಲಾಹೋರ್ ಹೈಕೋಟರ್ಿಗೆ ನಾವು ತಪ್ಪು ಮಾಡಿಲ್ಲ ಅಂತ ಮೊರೆ ಹೋದ್ರು. ಕೋಟರ್ಿಗೆ ಅದೇನನ್ನಿಸಿತೋ ಅವರನ್ನೆಲ್ಲ ಬಿಡುಗಡೆ ಮಾಡಿಬಿಡ್ತು. ಮಾಯಿ ಧೃತಿಗೆಡಲಿಲ್ಲ. ತನ್ನ ಬೆಂಬಲರೊಂದಿಗೆ ಮತ್ತೆ ಹೋರಾಟದ ಕಣ್ಕಿಕ್ಕ್ಕಿಳಿದಳು. ಎಚ್ಚೆತ್ತ ಕೋಟರ್ು ಮತ್ತೆ ಬಂಧನದ ಆಜ್ಞೆ ಹೊರಡಿಸಿತು.

ನೋವಿನಲ್ಲೂ ಅರಳಿದ ಕನಸು

ಈ ನಡುವೆ ಸಕರ್ಾರ ಮುಕ್ತಾರ್ ಮಾಯಿಗೆಂದು ಪರಿಹಾರವಾಗಿ ಐದು ಲಕ್ಷ ರುಗಳ ಚೆಕ್ ಕೊಡಲು ಬಂದಿತು. ಅದುವರೆಗೂ ಮಾಯಿ ಅಷ್ಟು ಹಣ ಕೇಳಿರಲೇ ಇಲ್ಲವೇನೋ! ಇನ್ನು ಚೆಕ್ ನೋಡುವುದೆಲ್ಲಿ ಬಂತು? ಆದ್ರೆ ಮಾಯಿಯ ನಿಧರ್ಾರ ಅಚಲವಾಗಿತ್ತು. ನನಗೆ ಈ ಹಣ ಬೇಡ. ಅದರ ಬದಲು ಅದೇ ಹಣವನ್ನ ತನ್ನ ಊರಿನ ಮಕ್ಕಳಿಗೆ ವಿದ್ಯಾಭ್ಯಾಸ ನೀಡಲು ಬಳಸುತ್ತೇನೆ. ನಾನೊಂದು ಸ್ಕೂಲ್ ಸ್ಥಾಪಿಸಬೇಕಿದೆ. ನನಗೆ ಸಹಕಾರ ಕೊಡಿ ಅಂದಳು. ಹಾಗೇ ಮಾಡಿದಳು ಕೂಡ. ಮೊದ ಮೊದಲು ಮಾಯಿ ಶಾಲೆ ಸ್ಥಾಪಿಸುತ್ತೇನೆ ಎಂದಾಗ ಊರಿನ ಜನ ನಗಾಡಿದ್ದರು, ಕುಹಕವಾಡಿದ್ದರು. ಆದರೆ ಮಾಯಿ ಸೋಲಲಿಲ್ಲ. ಊರಿನಲ್ಲೊಂದು ಶಾಲೆ ಸ್ಥಾಪಿಸಿದಳು. ಶಾಲೆಗೆ ಮಕ್ಕಳನ್ನು ಕಳುಹಿಸಲು ಹಿಂಜರಿಯುತ್ತಿದ್ದವರನ್ನು ಮನವೊಲಿಸಿ ಮಕ್ಕಳನ್ನು ಶಾಲೆಗೆ ಕರೆತಂದಳು. ಈಗ ಮಾಯಿಯ ಶಾಲೆ ವಿಸ್ತಾರ ಪಡೆದುಕೊಳ್ಳುತ್ತಿದೆ. ಅವಳ ಬೆಂಬಲಕ್ಕೆ ಜಗತ್ತಿನ ಎಲ್ಲಾ ಮಾನವೀಯ ಕೈಗಳೂ ಕೈ ಜೊಡಿಸುತ್ತಿವೆ.ಮೀರ್ ವಾಲಾದ ಅಂಧಕಾರದಲ್ಲೊಂದು ಬೆಳಕಿನ ಕಿರಣ ಪ್ರಜ್ವಲಿಸುತ್ತಿದೆ. ಪಾಕಿಸ್ತ್ತಾನದ ನೊಂದ, ಬಸವಳಿದ, ದೌರ್ಜನ್ಯಕ್ಕೊಳಗಾದ ಹೆಣ್ಣುಮಕ್ಕಳು ಮುಕ್ತಾರ್ ಮಾಯಿಯ ಮಡಿಲಿಗೆ ಬಂದು ಬೀಳುತ್ತಿದ್ದಾರೆ. ಮಾಯಿಯೂ ಮಕ್ಕಳ ನಡುವೆ ಕುಳಿತು ಮಗುವಾಗಿ ಅಕ್ಷರ ಕಲಿಯುತ್ತಿದ್ದಾಳೆ. ಮಾಯಿಯ ಕೈ ಈಗ ಒಂಟಿಯಲ್ಲ. ಅವಳಿಗೆ ಸಾಥ್ ನೀಡಲು ಸಾವಿರ ಸಾವಿರ ಕೈಗಳಿವೆ. ಒಂದು ನಿಮರ್ಾನುಷ ನೆಲದಿಂದ, ರಕ್ತಸಿಕ್ತ ಕೈಗಳ ನಡುವಿನಿಂದ, ನಿಭರ್ಾವುಕ ಮನಸ್ಸುಗಳ ನಡುವಿನಿಂದ ಎದ್ದು ಹೋರಾಟದ ಹಾದಿ ಹಿಡಿದಳಲ್ಲ ಈ ಮುಕ್ತಾರ್ ಮಾಯಿ ....ಅವಳಿಗೊಂದು ಹ್ಯಾಟ್ಸಾಫ್ ಹೇಳಲೇಬೇಕು.ಅವಳ ಹೋರಾಟ ನಿರಂತರವಾಗಿರಲಿ.

***

ಯಾಕೋ ಇದಿಷ್ಟೂ ನಿಮ್ಮ ಜೊತೆ ಹಂಚಿಕೊಳ್ಳಬೇಕೆನಿಸಿತು.ಮುಕ್ತರ್ ಮಾಯಿಯಂಥ ಹೆಣ್ಣುಮಕ್ಕಳು ನಮ್ಮ ನಡುವೆಯೂ ಇದಾರೆ. ಈ ಸಮಾಜ ಕೊಡುವ ಅಪಮಾನವನ್ನ ಅವರು ಒಂದು ಸಣ್ಣ ಸದ್ದೂ ಇಲ್ಲದೇ ನುಂಗಿಕೊಂಡಿದ್ದಾರೆ. ಯಾಕೆಂದರೆ ,ಯಾವ ಸಮಾಜ ತಪ್ಪಿತಸ್ಥರನ್ನು ಶಿಕ್ಷಿಸಬೇಕಿತ್ತೋ ಅದೇ ಸಮಾಜ ಕೊಲೆಗಡುಕರನ್ನ, ಅತ್ಯಾಚಾರಿಗಳನ್ನ ರಕ್ಷಿಸುತ್ತಿದೆ. ನೊಂದವರ ನಿಟ್ಟುಸಿರು ಯಾರಿಗೂ ಗೊತ್ತಿಲ್ಲದಂತೆ ಕರಗಿಹೋಗುತ್ತಿದೆ. ಎಲ್ಲಿಯವರೆಗೂ ನಾವು ನ್ಯಾಯಕ್ಕಾಗಿ ಸೆಟೆದು ನಿಲ್ಲುವುದಿಲ್ಲವೋ ಅಲ್ಲಿಯವರೆಗೂ ದೌರ್ಜನ್ಯ ಎಸಗುತ್ತಲೇ ಇರುತ್ತಾರೆ. ನಿಮ್ಮ ಕೈ ಗಟ್ಟಿಯಾಗಿರಲಿ... ಹಾಗೇ ಮನಸ್ಸೂ.ಮುಕ್ತ್ತಾರ್ ಮಾಯಿಯ ಹೋರಾಟದ ಹಾದಿ ನಿಮ್ಮವರೆಗೂ ವಿಸ್ತರಿಸಲಿ.

4 comments:

ಶ್ರೀನಿಧಿ.ಡಿ.ಎಸ್ said...

nim blog ide anta gotte irlilla. nice to see...

Anonymous said...

sir nanage ee mahataayiya bagge modalu alpa swalpa tilidittu..aadare ee lekhana odida mele swalpa hottu yen matadbeku antha gottagade sumne aag bitte ashtu parinaamakaariyaagi chitrisiddiri......

ohnalli sigtha idda neevu..blognalliddira antha nodi tumba kushi aaythu....

Anonymous said...

ರವಿಯವರೆ ನಮಸ್ಕಾರ,

ನಿಮ್ಮ ಬರವಣಿಗೆ ಓ ಮನಸೆಯಲ್ಲಿ ಓದುತ್ತಿದ್ದೆ. ಈಗ ನಿಮ್ಮ ಬ್ಲಾಗ್ ನೋಡಿ ಸಂತೋಷವಾಯಿತು. ನಿಮ್ಮ ಬರವಣಿಗೆ ಇಷ್ಟವಾಗುತ್ತದೆ.

ಪ್ರೀತಿಯಿಂದ
ಸುಧೀಂದ್ರ ಬುದ್ಯ

ಸುಧೇಶ್ ಶೆಟ್ಟಿ said...

ನಿಮ್ಮ ಈ ಲೇಖನವನ್ನು ’ಓ ಮನಸೇ….’ ಪತ್ರಿಕೆಯಲ್ಲಿ ಓದಿದ್ದೆ. ನೀವು ಲೇಖನದ ಆರಂಭದಲ್ಲಿ ಕೇಳಿದಂತೆ, ನನಗೂ ಮನುಷ್ಯ ಇಷ್ಟೊಂದು ಕ್ರೂರಿಯಾಗತ್ತಾನ? ಎ೦ದು ಸ೦ಶಯವಾಯಿತು. ನಿಮ್ಮ ಬರಹಗಳು ನನಗೆ ತುಂಬಾ ಹಿಡಿಸುತ್ತವೆ.