Thursday, October 2, 2008

ಅವಣಿ ಬೆಟ್ಟ ಮತ್ತದರ ಕಾಲ ಬುಡಕ್ಕೆ ಕಟ್ಟಿದ ಕುದುರೆ...


ಭಾನುವಾರ ಬೆಳಿಗ್ಗೆ ಆರಕ್ಕೆಲ್ಲ ನನ್ನ ಆಲ್ಟೋ ಜುಮ್ ಅಂತ ಕೋಲಾರದ ಕಡೆಗೆ ಸಾಗಿತ್ತು. ಜೊತೆಗೆ ಗೆಳೆಯ ಸದಾನಂದ ಇದ್ದ. ಪತ್ರಕತರ್ೆಯರಾದ ಸುಪ್ರಭಾ, ಶ್ರೀಕಲಾ ಹಿಂದಿನ ಸೀಟಿನಲ್ಲಿ ಕುಳಿತು ತರ್ಲೆ ಮಾಡ್ತಿದ್ದರು. ನಮ್ಮ ಟಾಗರ್ೆಟ್ ಇದ್ದದ್ದು ಅವಣಿ ಬೆಟ್ಟವನ್ನ ಇಡೀದಿನ ಸುತ್ತಬೇಕು ಅನ್ನೋದು. ಆದ್ರೆ ಅಲ್ಲಿಗೆ ಹೋದ ಮೇಲೆ ನನಗೆ ಬೆಟ್ಟಕ್ಕಿಂತ ಹೆಚ್ಚು ಇಷ್ಟ ಆಗಿದ್ದು ಬೆಟ್ಟದ ತಪ್ಪಲಿನಲ್ಲಿರುವ ಕಲ್ಯಾಣಿಗಳು. ಕೋಲಾರ ಬೇಸಿಕಲಿ ಡ್ರೈಲ್ಯಾಂಡ್ ಅಂತಾರೆ. ಆದ್ರೆ ಅಲ್ಲಿರುವ ಕೆರೆಗಳು ಕಲ್ಯಾಣಿಗಳು ಬೇರೆಲ್ಲೂ ಇಲ್ಲ . ಪತ್ರಕರ್ತ ಗೆಳೆಯ ರೋಹಿತ್ ಅವುಗಳ ಥರೋ ಸಂಶೋಧನೆಗೆಂದೇ ಅಲ್ಲಿ ಹೋಗಿ ಕುಳಿತಿದ್ದಾನೆ. ಕುಮಾರ ಸ್ವಾಮಿ, ಶ್ರೀನಿವಾಸ್, ಒಂದಿಷ್ಟು ಚಿಳ್ಳೆಪಳ್ಳೆಗಳೆಲ್ಲ ಸೇರಿ ನೋಡು ನೋಡುತ್ತಲೇ ನಮ್ಮ ಟೀಮು ಗಿಜುಗುಟ್ಟತೊಡಗಿತು. ಜೊತೆಗೆ ರೋಹಿತ್ ತಂದಿದ್ದ ಚಿತ್ರಾನ್ನ, ಚಕ್ಕುಲಿ, ಚಿಪ್ಸ್. ಇಬ್ಬರು ಗೈಡ್. ಈ ಗೈಡ್ಗಳದ್ದೇ ಸಕತ್ ಮಜಾ ಮಾರಾಯ್ರೇ!ಈ ಅವಣಿ ಬೆಟ್ಟದ ತಪ್ಪಲಿನಲ್ಲೊಂದು ರಾಮನ ದೇವಸ್ಥಾನವಿದೆ. ಅದರ ಇತಿಹಾಸವೇ ಸಾವಿರ ವರ್ಷಗಳ ಆಚೆಗೆ ನೆಗೆಯುತ್ತದೆ. ತುಂಬಾ ಸುಂದರವಾದ ದೇವಸ್ಥಾನ, ತುಂಬಾ ನೀಟಾಗಿದೆ. ಅಲ್ಲಿ ಬೆಣ್ಣೇ ಬಸವ ಇದ್ದಾನೆ. ರಾಮ ಇದ್ದಾನೆ. ಅದರ ಪಕ್ಕದಲ್ಲೇ ಒಂದು ಕಲ್ಯಾಣಿ ಇದೆ. ಅಲ್ಲಿನ ಮುರಿದು ಬಿದ್ದ ಮರದ ಮೇಲೆ ಕುಳಿತು ಸುಪ್ರಭ ಮತ್ತು ಕಲಾ ಗತಕಾಲದ ಪಳೆಯುಳಿಕೆಗಳಂತೆ ಫೋಟೊ ತೆಗೆಸಿಕೊಂಡ್ರು. ಈ ದೇವಸ್ಥಾನದ ಮುಂಭಾಗದಲ್ಲಿ ತುಂಬಾ ಹಳೆಯದಾದ ಒಂದು ತೇರು ಇದೆ. ನಮ್ಮ ಕಲಾ ಅದನ್ನ ಕಂಡ ಕೂಡಲೇ ಅದಕ್ಕಾಕಿದ್ದ ಕಬ್ಬಿಣದ ಗೇಟಿನಿಂದ ಅದು ಹ್ಯಾಗೋ ನುಸುಳಿ ತೇರಿನ ಗರ್ಭಸ್ಥಾನಕ್ಕೋಗಿ ದೇವಿಯಂತೆ ಕೈ ಮಾಡಿ ಕುಳಿತಳು. ಇಲ್ಲಿಂದ ಬೀಳುತ್ತೇನೆ ಅಂತ ಬೀಳೋ ಥರ ಫೊಟೋಗೆ ಪೋಸ್ ಕೊಟ್ಟಳು. ಅವಳ ಕ್ಯಾಮರಾಗೆ ಸಿಲುಕದವರೇ ಇರಲಿಲ್ಲ. ಕಂಡಲ್ಲಿ ಗುಂಡು ಅನ್ನುವ ಹಾಗೇ ಇವಳು ಸಿಕ್ಕಸಿಕ್ಕಿದ್ದನೆಲ್ಲ ತನ್ನ ಕೆಮೆರಾಗೆ ಆಹಾರವಾಗಿಸಿಕೊಳ್ಳುತ್ತಾ ಹೋಗುತ್ತಿದ್ದರೆ ನಮಗೋ ಬೆರಗು. ಬಂಡೆ ಮುಂದೆ ಸನ್ಯಾಸಿ ಥರ, ಬಂಡೆ ಬೆಂಡಾಗಿದ್ದರೆ ಅದನ್ನು ಕಿರುಬೆರಳಿನಲ್ಲಿ ಎತ್ತಿಹಿಡಿದ ಕೃಷ್ಣನ ಥರ ಹೀಗೆಲ್ಲ ಅವಳದು ಹಲವು ವೇಷ. ಮಜಾ ಇತ್ತು. ಅವಣಿ ಬೆಟ್ಟ ಒಂಥರಾ ಅಷ್ಟು ಕಡಿದಾದ ಬೆಟ್ಟವೇನಲ್ಲ. ಹತ್ತಲಿಕ್ಕೆ ಮೆಟ್ಟಿಲುಗಳಿವೆ. ನನಗೆ ವಿಚಿತ್ರ ಅನಿಸಿದ್ದು ಇಲ್ಲಿನ ಪ್ರತಿ ಕಲ್ಲು, ಬಂಡೆಗೂ ಒಂದೊಂದು ಪ್ರತೀತಿ ಇದೆ ಅಂತ ಹೇಳುವುದು. ಬೆಟ್ದದ ತಪ್ಪಲಿನಲ್ಲಿ ಒಂದು ಮಾವಿನ ತೋಟವಿದೆ. ಅಲ್ಲಿ ಅಶ್ವಮೇಧ ಯಾಗದ ಕುದುರೆ ಕಟ್ಟಿ ಹಾಕ್ತಿದ್ದರಂತೆ. ಅದರ ಹಿಂದಿನ ಎರಡು ಕಾಲನ್ನು ಮಾವಿನ ತೋಟದ ಕಂಬಕ್ಕೆ ಕಟ್ಟಿಹಾಕಿದ್ದರೆ ಮುಂದಿನ ಎರಡು ಕಾಲನ್ನು ಬೆಟ್ಟದ ಮೇಲೆ ಇರುವ ಬೃಹತ್ ಬಂಡೆಗೆ ಕಟ್ಟಿಹಾಕ್ತಿದ್ದರಂತೆ. ಅಲ್ಲ ಮಾರಾಯ ಅದಿರೋದು ಬೆಟ್ದದ ತಪ್ಪಲಿನಲ್ಲಿ. ಹೆಚ್ಚಕಡಿಮೆ ಎರಡು ಕಿಲೋಮೀಟರ್ ಆಗಬಹುದು. ಇನ್ನು ಬೆಟ್ಟದ ಮೇಲಕ್ಕೆ ಅಂದ್ರೆ ಅದು ಹೇಗೆ ಸಾಧ್ಯ? ಅಷ್ಟು ದೊಡ್ಡ ಕುದುರೆ ಇತ್ತಾ? ಅಂದದ್ದಕ್ಕೆರೀ ಸ್ವಾಮಿ ಆಗ( ಅಂದಕಾಲತ್ತಿಲ್) ಜನ ಕೂಡ ಇಪ್ಪತ್ತಿಪ್ಪತ್ತಡಿ ಇದ್ದರು ಕಣ್ರೀ ಅಂದ ಆ ಗೈಡ್.ಇಂತಿಪ್ಪ ಸಮಯದಲ್ಲೇ ನಮ್ಮ ಕುಮಾರಸ್ವಾಮಿ ಜಾರಿ ಬಿದ್ದುಬಿಟ್ಟ. ಬಿದ್ದ ಪೊಸಿಷನ್ ಹೇಗಿತ್ತೆಂದ್ರೆ ಎಲ್ಲರೂ ಕಿಸಕ್ ಅಂತ ನಕ್ಕಿದ್ದೇ ನಕ್ಕಿದ್ದು. ಅದನ್ನು ಫೋಟೋ ತೆಗಿಯಲಿಕ್ಕೆ ಆಗಲಿಲ್ಲವಲ್ಲ ಅಂತ ಸುಪ್ರಭ ಬೇಜಾನ್ ಬೇಜಾರು ಮಾಡ್ಕೋತಾ ಇದ್ದಳು. ಸುಮ್ನಿರಿ ಇದು ಕುಡ ಪ್ರತೀತಿ ಆಗುತ್ತೆ. ರೀ ಗೈಡ್ ನೆಕ್ಸ್ಟ್ ಬರುವವರಿಗೆ ಇಲ್ಲಿ ಕುಮಾರ ಜಾರಿ ಬಿದ್ದಿದ್ದಿ ಅಂತ ಹೇಳ್ರಿ ಅಂತ ಕುಮಾರ ಖ್ಯಾತೆ ತೆಗೆದ. ಪಾಪ ಆ ಗೈಡ್ ಸುಮ್ಮನೆ ನಕ್ಕ.ಇಡೀ ಬೆಟ್ಟದ ಉದ್ದಕ್ಕೂ ಇಂಥ ಉತ್ಪ್ರೇಕ್ಷಿತ(?) ಕಲ್ಪನೆಗಳೇ ಸಿಗುತ್ತವೆ. ಬೆಟ್ಟದ ಮೇಲೆ ಕುಳಿತು ಸೀತೆ ಅಳುತ್ತಿರುವುದು, ಲವ ಕುಶರ ತೊಟ್ಟಿಲು, ಸೀತೆಯ ತಿಜೋರಿ, ಅದನ್ನು ಕಾಯುವುದಕ್ಕೆ ಅಂತ ನಿಂತ ನಾಗರಾಜ, ರಾಮನ ಬೃಹತ್ ಕತ್ತಿ, ಲವಕುಶ ಹುಟ್ಟಿದ ಸ್ಥಳ, ಪಂಚ ಪಾಂಡವರ ಗುಡಿ. ಈ ನಡುವೆ ಅಲ್ಲಿ ನೂರಾರು ಕಲ್ಲಿನ ಮೇಲೆ ಕಲ್ಲು ಜೋಡಿಸಿಟ್ಟಿದ್ದು ಕಂಡುಬಂತು. ಹಾಗೆ ಜೋಡಿಸಿಟ್ಟರೆ ಮಕ್ಕಳಾಗುತ್ತವಂತೆ. ಮನೆ ಕಟ್ಟುತ್ತಾರಂತೆ ಅನ್ನುವುದೊಂದು ಪ್ರತೀತಿ. ನಮ್ಮ ಕುಮಾರಸ್ವಾಮಿ ಹತ್ತು ಕಲ್ಲನ್ನ ಪೇರಿಸಿಟ್ಟ. ಯಾಕೋ ಅಂದ್ರೆ ನನಗೆ ಹತ್ತು ಅಂತಸ್ತಿನ ಅಪಾಟರ್್ಮೆಂಟ್ ಕಟ್ಟೋದಿದೆ ಅಂದ. ಒನ್ಸ್ ಎಗೇನ್ ನಗು. ಹುಡುಗಿಯರಿಗೆಲ್ಲ ನೀವು ಕಲ್ಲುಜೋಡಿಸಿ ಬೇಗ ಮದುವೆ ಆಗಲಿ ಮಕ್ಕಳಾಗಲಿ ಅಂತ ಗೋಳು ಹುಯ್ದುಕೊಂಡ್ವಿ.ಬೆಟ್ದದ ನೆತ್ತಿಮೇಲೆ ಸೀತಾಮಾತೆಯ ದೇವಸ್ಥಾನವಿದೆ. ಸೀತೆಗೆ ಬೇರೆಲ್ಲೂ ಈ ಥರದ ದೇವಸ್ಥಾನ ಇಲ್ಲ ಅಂತಾರೆ ಪೂಜಾರಪ್ಪ. ಇರಬಹುದೇನೋ? ನಮಗೆ ಅಲ್ಲೇ ಇದ್ದ ಕೋತಿಗಳು ತುಂಬಾ ಇಂಟರೆಸ್ಟಿಂಗ್ ಅನಿಸಿದ್ವು. ಎರಡು ಕೋತಿಗಳಂತೂ ಡಿಸಪ್ಪಾಯಿಂಟ್ಗೆ ಒಳಗಾದ ಲವ್ವರ್ಗಳಂತೆ ಒಂದು ಬಂಡೆಯ ಮೇಲೆ ಮೌನವಾಗಿ ಕುಳಿತಿದ್ದವು.ಇನ್ನೊಂದು ಮಗುವನ್ನ ಮಲಗಿಸಿಕೊಂಡು ಹೇನು ಹೆಕ್ಕುತ್ತಿತ್ತು. ನೀವು ಹೋಗೋದಾದ್ರೆ ಬೆಟ್ಟದ ಸುತ್ತ ಮುತ್ತ ತಿನ್ನೋದಕ್ಕಾಗಲೀ ಕುಡಿಯೋದಕ್ಕಾಗಲೀ ಏನೂ ಸಿಗೋಲ್ಲ. ಏನಾದ್ರೂ ತಗೋಂಡೋದರೇನೆ ಒಳ್ಳೆಯದು.ಬೆಳಿಗ್ಗೆ ಬೆಳಿಗ್ಗೆ ಹೋದ್ರೆ ಒಂದು ಗಂಟೆಯಲ್ಲಿ ಬೆಟ್ಟದ ನೆತ್ತಿಮೇಲೆ ಇರಬಹುದು. ಬಿಸಿಲಾದ್ರೆ ತುಸು ಹತ್ತೋದು ಕಷ್ಟ. ದಟ್ಸ್ ಆಲ್. ಮಧ್ಯಾಹ್ನ ಎನ್ಜಿಓ ಒಂದರಲ್ಲಿ ಸಖತ್ ಊಟ. ಸಂಜೆ ಗೆಳೆಯ ನಾಗರಾಜ(ಸೆಂಟ್ ನಾಗ ಅಂತೀವಿ ಅವನ್ನ) ನ ಮನೆಗೋಗಿ ಜ್ಯೂಸ್ ಕುಡಿದು ವಾಪಸ್ ಬರುವಷ್ಟರಲ್ಲಿ ಕತ್ತಲು ಕತ್ತಲು.ಬೆಂಗಳೂರಿನ ಜಾಮ್ಗಳಲ್ಲಿ, ಅದೇ ಮನಾಟನಸ್ ಕೆಲಸದಲ್ಲಿ ಮುಳುಗಿಹೋದವರಿಗೆ ಅವಣಿ ಬೆಟ್ಟ ನಿಜಕ್ಕೂ ಒಂದು ರಿಲೀಫ್.ಸಾಧ್ಯ ಆದರೆ ನೀವೂ ಹೋಗಿ ಬನ್ನಿ.