Friday, May 15, 2009

ಟಿಪಿಕಲ್ ದೇವನೂರು




ನನಗೆ ಇನ್ನೂ ಚೆನ್ನಾಗಿ ನೆನಪಿದೆ.
ದೇವನೂರು ಮಹಾದೇವರನ್ನ ನಾನು ಮೊದಲ ಸಲ ನೋಡಿದ್ದು. ಮಹಾರಾಜ ಕಾಲೇಜಿನಲ್ಲಿ ಓದುವಾಗ ನನ್ನ ಗುರುಗಳೂ ಆತ್ಮೀಯರೂ ಆದ ಮೈಸೂರು ಲತಾ ಮೇಡಮ್ ಇದ್ದರು. ನನ್ನಲ್ಲೇನಾದ್ರೂ ಚೂರು ಪಾರು ಕವಿತೆಯ ಗಂಧ ಇದೆ ಅಂತ ಆದರೆ ಅದಕ್ಕೆ ಕಾರಣ ಲತಾ ಅವರೆ. 'ಬರೀತಾ ಇರು. ನಿಲ್ಲಿಸಬೇಡ' ಅಂತ ಬೆನ್ನುತಟ್ಟಿದವರೂ ಅವರೇ. ಒಮ್ಮೆ ದೆಹಲಿಯ ಪೊಯಿಟ್ರಿ ಸೊಸೈಟಿ ಆಫ್ ಇಂಡಿಯಾದವರು ಪೊಯಿಟ್ರಿ ವಕರ್್ ಶಾಪ್ ಅಂತ ಮಾಡಿದ್ರು. ಐದು ದಿನಾನೋ ಏನೋ ಇರಬೇಕು ನೆನಪಿಲ್ಲ. ಎನ್ಸಿಇಆರ್ಟಿ ಕ್ಯಾಂಪಸ್ನಲ್ಲಿ. ಅಲ್ಲಿನ ಮಲಯಾಳಂ ಹುಡುಗೀರ ಸೌಂದರ್ಯಕ್ಕೆ ಫಿದಾ ಆಗಿದ್ದು ಆವಾಗಲೇ. ಎನ್ಸಿಇಆರ್ಟಿಯಲ್ಲಿ ಇಂಗ್ಲೀಷ್ ರೀಡರ್ ಆಗಿದ್ದ ಎನ್ ಎಸ್ ರಘುನಾಥ್ ಆ ಶಿಬಿರದ ಸಂಚಾಲಕರಾಗಿದ್ರು. ಅದೊಂದು ಮರೆಯಲಾರದ ವಕರ್್ಶಾಪ್. ಅಲ್ಲಿ ಭಾಗವಹಿಸಿದ್ದ ತುಂಬಾ ಜನ ಗೆಳೆಯ ಗೆಳತಿಯರು ಇವತ್ತಿಗೂ ಸಂಪರ್ಕದಲ್ಲಿದ್ದಾರೆ. ಬಹುತೇಕರು ಜರ್ನಲಿಸ್ಟ್ಗಳೆ.
ಆ ವಕರ್್ಶಾಪ್ನಿಂದ ಬಂದ ಮೇಲೆ ನನ್ನ ಕವನದ ಖದರೇ ಬದಲಾಗಿ ಹೋಯಿತು. ಅದನ್ನು ಗಮನಿಸಿದ ಲತಾ ಅವರು 'ಪರವಾಗಿಲ್ಲ ಕಣೋ ವಕರ್್ಶಾಪ್ಗೆ ಹೋಗಿದ್ದೂ ಸಾರ್ಥಕ ಆಯ್ತು. ನಿನ್ನ ಕವಿತೆಯಲ್ಲಿ ಬದಲಾವಣೆ ಆಗಿದೆ' ಅಂದಿದ್ದರು. ಚಂಪಾ, ಎಲ್ ಬಸವರಾಜು, ಜಿ ಹೆಚ್ ನಾಯಕ್, ಪ್ರಭುಶಂಕರ್, ವಿಜಯಾ ದಬ್ಬೆ ಮುಂತಾದವರನ್ನೆಲ್ಲ ನೋಡಿದ್ದೂ ಅಲ್ಲೆ. ಅಲ್ಲಿಂದ ಬಂದ ಮೇಲೆ ಕಾಲೇಜಿನ ಕಾವ್ಯವಾಚನ ಸ್ಪಧರ್ೆಯಲ್ಲಿ ನನಗೆ ಮೊದಲ ಬಹುಮಾನ ಬಂತು.
ಹೀಗಿರುವಾಗಲೇ ಒಂದಿನ ಲತಾ ಮೇಡಮ್ ಹೇಳಿದ್ರು. 'ನೀನು ದೇವನೂರರನ್ನ ನೋಡಬೇಕು ಅಂದಿದ್ಯಲ್ಲ. ಸಂಜೆ ಹೋಗೋಣ. ಅವರು ಗಾಂಧಿಭವನಕ್ಕೆ ಬರುತ್ತಾರೆ. ಅಲ್ಲಿ ರಾಮ್ದಾಸ್ ಒಂದು ಇಂಟರ್ಕ್ಯಾಸ್ಟ್ ಮದುವೆ ಮಾಡಸ್ತಿದಾರೆ' ಅಂದ್ರು. ನನಗೆ ಖುಷಿ. ದೇವನೂರರನ್ನು ನೋಡಬಹುದಲ್ಲ ಅಂತ.
ಅಲ್ಲಿ ಹೋದ್ರೆ ಸಣ್ಣದೊಂದು ಸಮಾರಂಭ ಅದು. ರಾಮ್ದಾಸ್ ಇದ್ದರು. ದೇವನೂರು ಬಂದ್ರು. ನೋಡಿ ಅವಾಕ್ಕಾಗಿ ಹೋದೆ ನಾನು. ಒಡಲಾಳದಂತಹ, ಕುಸುಮಬಾಲೆಯಂತಹ ಮೌಲಿಕ ಕೃತಿ ಬರೆದದ್ದು ಈ ಮನುಷ್ಯನಾ?
ಅದೇ ಕಾಡ್ರಾಯ್ ಪ್ಯಾಂಟ್, ಇಸ್ತ್ರೀ ಇಲ್ಲದ ಕಾಟನ್ ಶಟರ್್, ಹಳೇ ಚಪ್ಲಿ. ಬಾಚದ ತಲೆ, ಅಥವಾ ಆ ತಲೆ ಬಾಚಿದರೂ ಹಾಗೇ ಇರುತ್ತೆ ಅನ್ನುವುದು ನನ್ನ ಅನಿಸಿಕೆ. ಟಿಪಿಕಲ್ ದೇವನೂರ ಮಹಾದೇವ. 'ಮೇಡಮ್ ಇವರಾ?' ಅಂದೆ. 'ಎಷ್ಟು ಸಿಂಪಲ್ ಆಗಿದಾರೆ ನೋಡು' ಅಂದ್ರು.
ಆಮೇಲೆ ಅವರನ್ನು ನಾನು ಅವಾಗವಾಗ ನೋಡತೊಡಗಿದೆ. ಕೆಲವು ಸಲ ಲೂನಾದಲ್ಲಿ ನಮ್ಮ ಕಾಲೇಜಿನ ಮುಂದೇನೆ ಹಾದು ಹೋಗ್ತಿದ್ರು.
ಅದಾಗಿ ಎಷ್ಟೋ ದಿನಗಳ ನಂತರ ನಾನು ಒಂದು ಪ್ರಿಂಟಿಂಗ್ ಪ್ರೆಸ್ನಲ್ಲಿ ಕೆಲಸ ಮಾಡುತ್ತಿದ್ದೆ. ಬಡತನ ಕೆಲಸ ಮಾಡುವುದನ್ನು ಕಲಿಸಿತ್ತು. ಪ್ರೆಸ್ನಲ್ಲಿ ದೇವನೂರರ ಒಡಲಾಳ ಪ್ರಿಂಟಾಗುತ್ತಿತ್ತು. ಬಹುಶಃ ಅದು ಯಾವುದೋ ವಿಶ್ವವಿದ್ಯಾನಿಲಯಕ್ಕೆ ಟೆಕ್ಸ್ಟ್ಬುಕ್ ಆಗಿತ್ತು ಅನಿಸುತ್ತೆ. ನಾನಾಗಲೇ ಅವರನ್ನು ಓದಿಕೊಂಡಿದ್ದೆ. ಮೆಚ್ಚಿಕೊಂಡಿದ್ದೆ.
ಒಂದಿನ ಇದ್ದಕ್ಕಿದ್ದಂತೆ ನಮ್ಮ ಪ್ರೆಸ್ಸಿಗೆ ಬಂದರು. ಅದದೇ ಗೆಟಪ್. ಕೈಯಲ್ಲೊಂದು ಸಿಗರೇಟ್. ಕಡುಗಪ್ಪಿನ ಗಡ್ಡ.
ಬಂದವರೇ ಪುಸ್ತಕ ಕೊಡಿ ಅಂತ ದೊಡ್ಡ ಟೇಬಲ್ ಮೇಲೇನೆ ಕೂತರು. ಕೊಟ್ಟೆ. ನಮ್ಮ ಓನರ್ ಇರಲಿಲ್ಲ. ಚೆನ್ನಾಗಿ ಮಾಡ್ತಿದೀರಿ ಕಣ್ರಯ್ಯಾ. ಅಂದರು. ನಾನು ನನ್ನ ಪರಿಚಯ ಹೇಳಿಕೊಂಡೆ. ಖುಷಿಯಾಯ್ತು ಅವರಿಗೆ. ಸರ್ ನಿಮ್ಮ ಕುಸುಮಬಾಲೆ ಒಂದು ಕಾಪಿ ಇದ್ರೆ ಕೊಡಿ. ಹುಡುಕಿ ಹುಡುಕಿ ಸಾಕಾಯ್ತು ಅಂದೆ. ಮುಂದಿನ ಸಲ ತರ್ತೀನಿ ಅಂದ್ರು. ಹಾಗನ್ನುತ್ತಲೇ ಮತ್ತೊಂದು ಸಿಗರೇಟು ಹಚ್ಚಿ ಕೂತರು. ಹಣ ಕೊಡಲು ಬಂದರು. ನಾನು ಬೇಡ ಸಾರ್ ಅಂದೆ. ಚೆನ್ನಾಗಿ ಮಾಡ್ತಿದೀರಿ. ಏನಾದರೂ ತಿಂಡಿ ತರಿಸ್ಕೊಂಡು ತಿನ್ನಿ ಅಂದರು. ಎಷ್ಟೇ ಬೇಡವೆಂದರೂ ಬಿಡಲಿಲ್ಲ. ಅವರ ಒತ್ತಾಯಕ್ಕೆ ಮಣಿದು ಪಡೆದುಕೊಂಡೆ. ವಿಷಯ ಏನಂದ್ರೆ ನನ್ನನ್ನ ಬಿಟ್ಟರೆ ಅಲ್ಲಿದ್ದ ಉಳಿದ ಇಬ್ಬರೂ ತಮಿಳರು. ಅವರಿಗೆ ದೇವನೂರರ ಬಗ್ಗೆ ಏನೆಂದರೆ ಏನೂ ಗೊತ್ತಿಲ್ಲ. ಅಷ್ಟರಲ್ಲಿ ನಮ್ಮ ಓನರ್ ಮಹಾಶಯ ಬಂದ. ದೇವನೂರರು ಸ್ವಲ್ಪ ಹೊತ್ತು ಕುಳಿತಿದ್ದು ಹೊರಟರು.
ಅವರು ಹೋದ ಮೇಲೆ ನಮ್ಮ ಓನರ್ ಕೇಳಿದ.
'ನೀನಾದರೂ ಹೇಳಬಾರದೇನಯ್ಯಾ ಸಿಗರೇಟ್ ಸೇದಬೇಡಿ ಅಂತ'.
'ನಾನೇಗೆ ಹೇಳಲಿ ಸಾರ್, ಅಷ್ಟು ದೊಡ್ಡವರಿಗೆ. ನೀವೇ ಹೇಳಬಹುದಿತ್ತಲ್ಲ. ನೀವು ಬಂದಮೇಲೂ ಸಿಗರೇಟ್ ಸೇದುತ್ತಿದ್ರಲ್ಲ' ಅಂದೆ.
'ಹೋಗಲಿ ಬಿಡು. ಇನ್ನೊಮ್ಮೆ ಬಂದಾಗ ಸರ್ ಪ್ರೆಸ್ನಲ್ಲಿ ಸಿಗರೇಟ್ ಸೇದೋ ಹಾಗಿಲ್ಲ ಅನ್ನು. ಪೇಪರ್ ಜಾಸ್ತಿ ಇರುತ್ತಲ್ಲ. ಬೆಂಕಿ ಬಿದ್ರೆ ಕಷ್ಟ ಅಂತ ಹೇಳು' ಅಂದ್ರು.
ಆಯ್ತು ಅಂದೆ.
ಅವರು ಮತ್ತೆ ಬರಲಿಲ್ಲ. ನಾನೋ ಬದುಕು ಅರಸಿಕೊಂಡು ಬೆಂಗಳೂರಿನ ಹಾದಿ ಹಿಡಿದೆ.
ಇದೆಲ್ಲ ಯಾಕೆ ನೆನಪಾಯ್ತು ಅಂದ್ರೆ ನಿನ್ನೆ ಅವರ ಒಡಲಾಳ ನಾಟಕ ನೋಡಿ ಬಂದೆ. ತುಂಬಾ ಖುಷಿ ಆಯ್ತು. ಉಮಾಶ್ರೀ ಸಾಕವ್ವನ ಪಾತ್ರಕ್ಕೆ ಜೀವ ತುಂಬಿದ್ದರು. ಬೆಳಕೂ ನೈಜವಾಗಿತ್ತು. ಎಲ್ಲಾ ಓಕೆ. ಆದರೆ ಇಡೀ ನಾಟಕದಲ್ಲೇನೋ ಕೊರತೆ ಇದೆ ಅನಿಸ್ತು. ಅದು ಭಾಷೆಯದ್ದು. ಸಾಮಾನ್ಯವಾಗಿ ದೇವನೂರರ ಭಾಷೆ ಸ್ವಲ್ಪ ಕಷ್ಟಾನೆ. ಆದರೆ ನನ್ನಂಥವರಿಗೆ ಅದು ತುಂಬಾನೆ ಇಷ್ಟ. ಆ ಭಾಷೆಯ ಸೊಗಡೇ ಅಂಥದ್ದು. ಪ್ರಾದೇಶಿಕವಾದ ಆ ಭಾಷೆಗೆ ಅದರದೇ ಆದ ಒಂದು ಗುಣವಿದೆ. ಲಾಲಿತ್ಯವಿದೆ. ಅದನ್ನು ಸರಿಯಾಗಿ ಬಳಸಿಕೊಂಡಿದ್ರೆ ನಾಟಕ ಇನ್ನಷ್ಟು ಪ್ರಬುದ್ಧವಾಗ್ತಿತ್ತೇನೋ ಅನಿಸ್ತು.
ಇವತ್ತಿಗೂ ನನ್ನ ಅಚ್ಚುಮೆಚ್ಚಿನ ಲೇಖಕ ದೇವನೂರು. ಮೈಸೂರು ಕಡೆ ಹೋದಾಗ ಒಮ್ಮೆ ಅವರ ತೋಟದ ಕಡೆಗೆ ಹೋಗಿಬರೋಣ ಅಂದುಕೊಂಡಿದ್ದೇನೆ.
ನೋಡೋಣ.

Sunday, May 10, 2009

ವೇಗ






ನನಗೆ ಅವಳ ಪರಿಚಯ ಆಗಿದ್ದು ಇಂಟನರ್ೆಟ್ ಚಾಟ್ ಮೂಲಕ.
ಸಿಕ್ಕ ಮೂರೇ ನಿಮಿಷದಲ್ಲಿ ಗತಕಾಲದ ಫ್ರೆಂಡ್ಸ್ನಂತಾಗಿಬಿಟ್ಟಿದ್ದೆವು. ನಾನೋ ಮೊದಲೇ ಮಹಾನ್ ತರಲೆ. ಅವಳೂ ಅಂತವಳೇ! ನಿನಗಿಂತ ನಾನೇನು ಕಡಿಮೆ ಅನ್ನುವಂತೆ ಬುರಬುರನೆ ಮಾತಾಡತೊಡಗಿದಳು. ನನ್ನ ತುಂಟತನ ಕೆಲವೊಮ್ಮೆ ಅವಳಲ್ಲಿ ನಗು ಉಕ್ಕಿಸುತ್ತಿತ್ತು.
ಅವಳು ವೇಗ.
ಆಕರ್ುಟ್ನಲ್ಲಿ ಅವಳ ಪ್ರೊಫೈಲ್ ಸಿಗಬಹುದೇನೋ ಅಂತ ಹುಡುಕಾಡಿದೆ. ಊಹುಂ ಸಿಗಲಿಲ್ಲ. ಆದರೆ ನಾನು ಆನ್ಲೈನ್ಗೆ ಹೋದಾಗಲೆಲ್ಲ ಅವಳು ಫಕ್ಕನೆ ಸಿಗುತ್ತಿದ್ದಳು. ನಾನು ಎಂಟ್ರಿ ಆದಕೂಡಲೇ ಹಾಯ್ ತುಂಟ ಅನ್ನೋ ಅವಳ ಶಬ್ದ ಕಣ್ಣಿಗೆ ರಾಚುತಿತ್ತು. ಯಾರಿರಬಹುದು ಇವಳು?
ದಿನೇ ದಿನೇ ಚಾಟ್ ಮಾಡುತ್ತ ಹೋದ ಹಾಗೆ ನನಗೆ ಅವಳ ಮೇಲೆ ಅದೆಂಥದೋ ಸೆಳೆತ ಶುರುವಾಗಿಬಿಟ್ಟಿತು. ರಜೆಯಲ್ಲಿದ್ದಾಗಲಂತೂ ಚಡಪಡಿಸಿಹೋಗುತ್ತಿದ್ದೆ.
ಹೀಗಿರುವಾಗಲೇ,
ನೀವು ಸಖತ್ ಹ್ಯಾಂಡಸಮ್ ಆಗಿ ಇದ್ದೀರಿ! ಅಂತ ಒಂದಿನ ಚಾಟ್ ಮಾಡಿದಳು.
ಇದ್ಯಾಕೋ ಸ್ವಲ್ಪ ಅತಿಯಾಯ್ತು ಅನಿಸೋಲ್ವ? ಅಂದೆ.
ಕಿಸ್ಸಕ್ಕನೆ ನಕ್ಕಳು.
ನಾನು ಆಕರ್ುಟ್ನಲ್ಲಿ ಹಾಕಿದ್ದ ಫೋಟೊ ಕೋತಿಯದ್ದು.
ಆಮೇಲೆ ಮೊಬೈಲ್ ನಂಬರ್ ಬೇಕು ಅಂದಳು. ಕೊಟ್ಟೆ. ಅವಳೇ ಫೋನ್ ಮಾಡಿದಳು. ನಿಮ್ಮ ಬಗ್ಗೆ ಕೇಳಿದ್ದೇನೆ. ಅಷ್ಟು ಚಂದಕ್ಕೆ ಹೇಗೆ ಬರೀತೀರಾ? ಎಲ್ಲಿ ಸಿಗುತ್ತವೆ ಆ ವಿಷಯಗಳೆಲ್ಲ? ಅಂದಳು. ನಾನು ನಿಮ್ಮ ಫ್ಯಾನ್ ಗೊತ್ತಾ? ಅಂದಳು.
ಯಾವ ಫ್ಯಾನ್? ಕೇತಾನಾ? ಉಷಾನಾ?ಅಂದೆ.
ಮತ್ತೆ ಕಿಸ್ಸಕ್ಕನೇ ನಗು.
ಪರಸ್ಫರ ಮಾತು, ಎಸ್ಸೆಮ್ಮೆಸ್ಸುಗಳ ಭರಾಟೆ ಶುರುವಾಯ್ತು. ಮಾತುಕತೆ ಚಾಟ್ನಿಂದ ಮೊಬೈಲ್ಗೆ ಶಿಫ್ಟ್ ಆಗಿತ್ತು. ಗಂಟೆಗಟ್ಟಲೆ ಹರೀತು. ವೇಗಳ ವಾಯ್ಸ್ ತುಂಬಾ ಸ್ವೀಟ್ ಆನಿಸ್ತಿತ್ತು.
ಮರುಳಾದೆ.
ಅದೇನು ವೇಗ ಅಂತ ಇಟ್ಟುಕೊಂಡಿದ್ದೀರಾ?
ನನ್ನೆಸರು ಸುಭದ್ರಾ ಅಂತ. ಎಲ್ಲರೂ ಸುಬ್ಬಿ ಸುಬ್ಬಿ ಅನ್ನೋರು. ನನಗ್ಯಾಕೋ ಅದು ಹಿಡಿಸಲಿಲ್ಲ. ಇದನ್ನ ಒಮ್ಮೆ ಅಪ್ಪನಿಗೆ ಹೇಳಿದಾಗ ಅಪ್ಪ ಹೇಳಿದ್ರು. ನೀನು ಅತ್ಯಂತ ಚೂಟಿ ಹುಡುಗಿ ಅಲ್ವ!. ತುಂಬ ವೇಗವಾಗಿ ಎಲ್ಲವನ್ನೂ ಗ್ರಹಿಸಿಕೊಳ್ತೀಯ. ವೇಗ ಅಂತಿಟ್ಕೋ ಅಂದ್ರು. ನನಗೇನೋ ಆ ಹೆಸರು ಕೇಳಿದ ತಕ್ಷಣ ಓಕೆ ಡಿಫರೆಂಟ್ ಆಗಿದೆ ಅನಿಸ್ತು. ಇರಲಿ ಅಂದೆ, ಅಂದಳು.
ಗುಡ್. ಚೆನ್ನಾಗಿದೆ. ತಂಗಿ ಇದಾಳಾ?
ಹ್ಞೂಂ ಇದಾಳೆ.
ಅವಳಿಗೆ ಸ್ಲೋ ಅಂತ ಇಡಿ.
ಮತ್ತೆ ಕಿಸ್ಸಕಿಸ್ಸಕ್ಕನೆ ನಗು.
ಓಕೆ, ನೀನು ಹೇಗಿದೀರಾ ನೋಡಲು? ಅಂದೆ.
ಕೆಟ್ಟದಾಗಿದ್ದೇನೆ!
ಪರವಾಗಿಲ್ಲ ಒಂದು ಫೋಟೋ ಕಳಿಸಿ?
ಅದೊಂದು ಮಾತ್ರ ಕೇಳಬೇಡಿ. ನಿಮ್ಮ ಫೋಟೋ ಕೂಡ ನನಗೆ ಬೇಡ. ಒಮ್ಮೆ ಭೇಟಿಯಾದ ಮೇಲೆ ಬೇಕಾದ್ರೆ ಅದೆಲ್ಲ ಆಗಲಿ ಅಂದಳು.
ಬಲವಂತ ಮಾಡುವುದು ಬೇಡ ಅಂತ ಸುಮ್ಮನಾದೆ.
***
ಅವತ್ತು ಭಾನುವಾರ. ಬೆಳಿಗ್ಗೆ.
ಇವತ್ತು ಭೇಟಿ ಆಗೋಣ ಅನಿಸ್ತಿದೆ. ಸಂಜೆ ಐದಕ್ಕೆ ಮೆಜೆಸ್ಟಿಕ್ನ ಸಂಗಮ್ ಟಾಕೀಸ್ ಎದುರಿಗೆ ನಾನು ನಿಂತಿರುತ್ತೇನೆ. ಬರ್ತೀರಾ? ಅಂದಳು ವೇಗ.
ನನ್ನಲ್ಲಿ ಅವಳನ್ನು ಭೇಟಿ ಆಗುವ ಎಕ್ಸೈಟ್ಮೆಂಟ್ ಇನ್ನೂ ಕಡಿಮೆ ಆಗಿರಲಿಲ್ಲ.
ಆಯ್ತು. ಬರ್ತೇನೆ. ಆದ್ರೆ ಇಬ್ಬರೂ ಪರಸ್ಫರ ಗುರುತು ಹಿಡಿಯೋದು ಹೇಗೆ?
ನಾನು ಆಕಾಶ ಬಣ್ಣದ ಚೂಡಿ ಹಾಕಿರ್ತೇನೆ. ನೀವು? ಅಂದಳು.
ನಾನು ಗುಲಾಬಿ ಬಣ್ಣದ ಶಟರ್್.
ಓಕೆ ಡನ್ ಅಂದಳು.
ನಾಲ್ಕೂವರೆಗೆಲ್ಲ ನನ್ನ ರೂಮು ಬಿಟ್ಟಿದ್ದೆ. ಆದರೆ ನಾನು ಹಾಕಿಕೊಂಡಿದ್ದು ಮೊಲದ ಬಿಳುಪಿನ ಶಟರ್್.
ಸುಮ್ಮನೆ ಒಂದು ಸಪ್ರರ್ೈಸ್ ಕೊಡೋಣ ಅನ್ನಿಸಿ ಹಾಗೆ ಮಾಡಿದ್ದೆ.
ಸರಿಯಾಗಿ ಐದು ಗಂಟೆ ಮೂರು ನಿಮಿಷ ಮುವತ್ತೊಂಬತ್ತು ಸೆಕೆಂಡಿಗೆ ನಾನು ಸಂಗಮ್ ಟಾಕೀಸಿನ ಎದುರಿಗೆ ನಿಂತಿದ್ದೆ.
ಜನ ತುಂಬಾ ಇದ್ದರು. 'ಹಾಗೆ ಸುಮ್ಮನೆ' ಏಳುವರೆ ಶೋ ಗೆ ಜನ ಮುಗಿ ಬೀಳುತ್ತಿದ್ರು.
ಐದು ಗಂಟೆ ಐದು ನಿಮಿಷ ಇಪ್ಪತ್ತೆಂಟು ಸೆಕೆಂಡಿಗೆ ಸರಿಯಾಗಿ ಅವಳು ಬಂದಳು. ಅದೇ ಆಕಾಶ ಬಣ್ಣದ ಚೂಡಿ. ಮುಡಿಯಲ್ಲಿ ಮೊಳದುದ್ದ ಮಲ್ಲಿಗೆ. ನನ್ನ ಕಣ್ಣನ್ನ ನಾನೇ ನಂಬದಾದೆ. ನನ್ನ ಪಕ್ಕದಲ್ಲೇ ಬಂದು ನಿಂತುಕೊಂಡಳು. ದೇವರೆ ನಾನು ಮಾತಾಡುತ್ತಿದ್ದ ಹುಡುಗಿ ಇವಳೇನಾ? ಇಷ್ಟು ಸುಂದರವಾಗಿಯೂ ಹುಡುಗೀರು ಇರ್ತಾರಾ?
ಟೈಮ್ ಪ್ಲೀಸ್ ಅಂದಳು. ತಡವರಿಸುತ್ತಾ ಐದು ಹತ್ತು ಅಂದೆ.
ಥ್ಯಾಂಕ್ಸ್ ಅಂದಳು. ನನ್ನ ಕಣ್ಣು ಅವಳನ್ನು ಬಿಟ್ಟು ಕದಲಲಿಲ್ಲ.
ಆದರೇ ಅವಳ ಕಣ್ಣು ಮಾತ್ರ ನನ್ನ ಬರುವಿಕೆಯನ್ನೇ ಅರಸುತ್ತಿದ್ದವು.
ನನ್ನ ಮನಸ್ಸೇಕೋ ನೀನು ನೋಡಿದ್ರೆ ಹೀಗಿದೀಯ. ಅವಳು ನೋಡಿದ್ರೆ ಅಷ್ಟು ಚಂದಕ್ಕಿದ್ದಾಳಲ್ಲೋ. ನಿನ್ನ ಕೆಟ್ಟ ಮುಖ ಅವಳಿಗೆ ಹ್ಯಾಗೋ ತೋರಿಸ್ತೀಯ. ಬೇಡ ಬಿಡು ಅಂದಂಗಾತು.
ಗಂಟೆ ಐದೂ ಕಾಲಾಯ್ತು. ಐದೂವರೆ ಆಯ್ತು. ಫೋನ್ ಮಾಡತೊಡಗಿದಳು ನನಗೆ.
ಅಯ್ಯೋ ಫೋನ್ ಮಾಡ್ತಿದಾಳಲ್ಲ, ರಿಂಗಾದ್ರೆ ಅಂತ ಗಾಬರಿಯಿಂದ ಜೇಬಿಗೆ ಕೈ ಹಾಕಿದರೆ! ಎಲ್ಲಿದೆ ಫೋನ್? ಬರುವ ಗಡಿಬಿಡಿಯಲ್ಲಿ ರೂಮಿನಲ್ಲೇ ಮರೆತು ಬಂದಿದ್ದೆ.
ನಿಜಕ್ಕೂ ಅವಳಿಗೆ ಸಿಟ್ಟು ಬಂದಿತ್ತು. ಈ ಹುಡುಗರೆ ಹೀಗೆ, ಛೇ ಅಂತೇನೋ ಗೊಣಗಿಕೊಂಡದ್ದು ಸಣ್ಣಗೆ ಕೇಳಿಸಿತು. ಮುಖದಲ್ಲಿ ಗಲಿಬಿಲಿ.
ಫೋನ್ ಮಾಡುತ್ತಲೇ ಇದ್ದಳು. ನನ್ನ ಕಡೆ ಒಮ್ಮೆ ತಿರುಗಿ ನೋಡಿದಳು. ನಾನು ಆಕಾಶದತ್ತ ನೋಡಿದೆ.
ಅವಳ ಚಡಪಡಿಕೆ ನನಗೆ ನೋಡಲಾಗಲಿಲ್ಲ.
ಇನ್ನು ಇಲ್ಲಿ ನಿಲ್ಲುವುದು ಬೇಡ ಅನ್ನಿಸಿ ವೇಗವಾಗಿ ಅಲ್ಲಿಂದ ಹೆಜ್ಜೆ ಕಿತ್ತೆ.