Saturday, January 26, 2008

ನನ್ನ ಇಂಗ್ಲಿಷ್ ಎಕ್ಕುಡಿಸಿದವ

ನಾನು ಪಿಯುಸಿ ಮಾಡುವಾಗ ಒಬ್ಬರು ಅಧ್ಯಾಪಕರಿದ್ದರು.
ಇಂಗ್ಲಿಷ್ ತಗೋಳೋರು. ಪಾಠಾನೆ ಮಾಡ್ತಿರಲಿಲ್ಲ. ಕ್ಲಾಸಿಗೆ ಬಂದು ಐದು ನಿಮಿಷ ಕೂತಿರೋರು. ನೋಡಿ ಒಬ್ಬೊಬ್ಬರಾಗಿ ಕ್ಲಾಸಿಂದ ಎದ್ದು ಹೋಗಿ. ಪ್ರಿನ್ಸಿಪಲ್ ಕೇಳಿದ್ರೆ ಪೋರ್ಷನ್ ಕಂಪ್ಲೀಟ್ ಮಾಡಿದಾರೆ ಅಂತ ಹೇಳಿ, ಆಯ್ತ. ನಾನು ನಿಮಗೆ ಎಕ್ಸಾಮ್ನಲ್ಲಿ ಫುಲ್ ಮಾಕ್ಸರ್್ ಕೊಡಿಸ್ತೀನಿ ಅನ್ನೋರು. ನಮಗೆ ಎದೆಯ ಒಳಗೆ ಢವಢವ. ಎಲ್ಲಿ ಫೇಲ್ಗೀಲ್ ಮಾಡಿಬಿಡ್ತಾನಪ್ಪ ಈ ಕಳ್ಳ ಅನಿಸೋದು.ಎಷ್ಟೋ ಹುಡುಗರು ಕ್ಲಾಸ್ ಬಿಟ್ರೆ ಸಾಕು ಅಂಥ ಕಾಯ್ತಾ ಇದ್ದರಲ್ಲ ಅಂಥವರಿಗೆ ಖುಷಿಯೋ ಖುಷಿ. ಬಿಟ್ಟ ತಕ್ಷಣ ಸಿನೆಮಾ ಹಾಲ್ನಲ್ಲೋ, ಅಡ್ಡಾದಲ್ಲೋ ಕೂತು ಕಾಲ ಕಳೀತಿದ್ರು. ಹುಡುಗೀರು ಮಾತ್ರ ಹಿಡೀ ಶಾಪ ಹಾಕ್ತಿದ್ರು.
ಒಂದಿನ, ಸಾರ್ ನೀವು ಹಿಂಗ್ ಮಾಡಿದ್ರೆ ನಮ್ಮ ಗತಿ ಏನು? ಅಂತ ಒಬ್ಬಳು ಹುಡುಗಿ ಕೇಳಿಯೇಬಿಟ್ಲು.ತಗಳಪ್ಪ ಅವಯ್ಯ ಸಕ್ಕತ್ ಗರಮ್.
ವಿಷಯ ಏನಪ್ಪ ಅಂದ್ರೆ, ಪ್ರಿನ್ಸಿಪಲ್ಗೂ ಈವಯ್ಯನಿಗೂ ಆಗ್ತಿರಲಿಲ್ಲ. ಆ ಸೇಡನ್ನ ನಮಗೆ ಪಾಠ ಹೇಳಿಕೊಳ್ಳದೇ ಇರುವ ಮುಖಾಂತರ ತೀರಿಸಿಕೊಳ್ಳುತ್ತಿದ್ದನಂತೆ. ಉರಿಯಾಕಿಲ್ವಾ ಹೇಳಿ?
ಈಗಲೂ ನನಗೆ ಆ ಮೇಸ್ಟ್ರು ನೆನಪಿಗೆ ಬಂದ್ರೆ ಸಕ್ಕತ್ ಕೋಪ ಬರುತ್ತೆ.
ಯಾಕೆಂದ್ರೆ, ನನ್ನ ಇಂಗ್ಲಿಷ್ ಎಕ್ಕುಟ್ಟೋಗೋದಕ್ಕೆ ಕಾರಣಕರ್ತರಾದವರಲ್ಲಿ ಅವರೂ ಒಬ್ರು.

ಕತೆ: ನಿನ್ನ ಆಸೆ... ನನ್ನ ಪ್ರೀತಿ.

ಸ್ವೆಟರ್ ಅಂದ್ರೆ ಅದು ಅನಿಸುತ್ತೆ.
ಕಡುಗೆಂಪು ಬಣ್ಣಕ್ಕಿತ್ತು.
ಬಡ್ಡೀಮಗಂದು ಎಷ್ಟು ಚೆನ್ನಾಗಿತ್ತು ಅಂದ್ರೆ, ನಾನು ಈ ಮೊದಲು ಆ ಥರದ್ದನ್ನು ಎಲ್ಲೂ ನೋಡಿಯೇ ಇರಲಿಲ್ಲ. ಮನಸ್ಸು ಪಕಪಕ ಕುಣಿಯತೊಡಗಿತು. ತಗೋ ತಗೋ ಅಂತ ಪೀಡಿಸಿತು. ಆದರೆ ದುಡ್ಡೆಲ್ಲಿದೆ? ಮೊದಲು ಸ್ವೆಟರ್ ನೋಡಿ ಖುಷಿಯಾದೆ ಆಮೇಲೆ ಬೆಲೆ ನೋಡಿ ಬೇಜಾರು ಮಾಡಿಕೊಂಡೆ.
ಒಂದು ಸಂಜೆ ಸೂರ್ಯ ಇಳಿಯುವಾಗ ಅವಳಿಗೆ ಹೇಳಿದೆ. ಆ ಸ್ವೆಟರ್ ಎಷ್ಟು ಚೆನ್ನಾಗಿದೆ ಗೊತ್ತಾ?ಹೌದಾ? ಎಷ್ಟು? ಕಣ್ಣರಳಿಸಿದಳು.ಬಾ ತೋರಿಸುತ್ತೇನೆ ಅಂತ ಕೈ ಹಿಡಿದು ಕರೆದೋಯ್ದು ತೋರಿಸಿದೆ. ಅವಳ ಕಣ್ಣಿನ ತುಂಬಾನೂ ಕೆಂಪು ಸ್ವೆಟರಿನದೇ ಬಿಂಬ. ನನ್ನನ್ನೊಮ್ಮೆ ನೋಡಿ ನಿನಗದು ಒಪ್ಪುತ್ತೆ ಕಣೋ ತಗೋ ಅಂದಳು.ಆದರೆ ದುಡ್ಡೆಲ್ಲಿದೆ?ಆಸೆ ನಿಲ್ಲಲಿಲ್ಲ. ಹೇಗಾದರೂ ಮಾಡಿ ಆ ಸ್ವೆಟರ್ ತಗೊಂಡು, ಹಾಕ್ಕೊಂಡು ಅವಳ ಮುಂದೆ ನಿಂತು ಹೇಗಿದೆ ಅಂತ ಕೇಳಬೇಕು. ಅವಳು ಹತ್ತಿರ ಬಂದು ನೈಸ್ ಸೆಲೆಕ್ಷನ್ ಅನ್ನಬೇಕು. ಆಗ ನನ್ನ ಮನಸ್ಸು ಆಕಾಶದಲ್ಲಿ ಜುಮ್ಮಂತ ತೇಲಬೇಕು... ಆಸೆಗೊಂದು ಆಸೆ ಅಂದರೆ ಇದೇ ಇರಬೇಕು!
ಈ ಆಸೆಗಾಗಿ ನಾನು ಒಂದು ತಿಂಗಳು ಹಣ ಕೂಡಿಡುತ್ತಾ ಹೋದೆ. ಮಧ್ಯೆ ಮಧ್ಯೆ ಅಂಗಡಿಗೆ ಹೋಗಿ ನೋಡಿಕೊಂಡೂ ಬರುತ್ತಿದ್ದೆ, ಯಾರಾದರೂ ತೆಗೆದುಕೊಂಡು ಹೋಗಿಬಿಟ್ಟರೇನು ಅಂತ.ಆದರೆ ಅದು ನನಗೋಸ್ಕರಾನೆ ಇದ್ದಂತೆ ಅಲ್ಲೊಂದು ಕಡುಗಪ್ಪು ಹ್ಯಾಂಗರಿನಲ್ಲಿ ನೇತಾಡುತ್ತಿತ್ತು.ಕೊನೆಗೂ ಆ ದಿನ ಬಂತು.ಜೇಬಲ್ಲಿ ಹಣ ಇಟ್ಟುಕೊಂಡು, ಅವಳ ಕೈ ಹಿಡಿದುಕೊಂಡು ಓಡಿಹೋಗಿ ನೋಡಿದರೆ ಎಲ್ಲಿದೆ ಸ್ವೆಟರ್?ಯಾರೋ ಒಬ್ಬರು ಈಗ ಅರ್ಧ ಗಂಟೆ ಮೊದಲು ತೆಗೆದುಕೊಂಡು ಹೋದ್ರೂ ಅಂದ ಅಂಗಡಿಯವ.ನನ್ನ ಆಸೆ ಅಲ್ಲೇ ನೆಗೆದುಬಿತ್ತು. ಇವಳು ಅಲ್ಲೇ ಅತ್ತುಬಿಟ್ಟಳು.ಕೈ ಹಿಡಿದು ಮೆಲ್ಲಗೆ ಅದುಮಿ ಸಾಂತ್ವನ ಹೇಳಿದಳು. ನಿರಾಶೆಗೊಳ್ಳಬೇಡ ಕಣೋ? ನಾನಿದೀನಿ.
ಅದಾಗಿ ಒಂದು ತಿಂಗಳಾಗಿತ್ತು. ನಾನು ಕ್ರಮೇಣ ಆ ಸ್ವೆಟರ್ರೂ ಮರೆತೂ ಬಿಟ್ಟಿದ್ದೆ. ಆದ್ರೆ ಇವಳು ಮಾತ್ರ ನನ್ನನ್ನು ಅಷ್ಟಾಗಿ ಈಗ ಭೇಟಿ ಆಗುತ್ತಿರಲಿಲ್ಲ. ಯಾಕೆ ಅಂದ್ರೆ ಸಿಕ್ಕಾಬಟ್ಟೆ ಕೆಲಸ ಅಂದಿದ್ದಳು. ರಾತ್ರಿಯೆಲ್ಲ ನಿದಿರೆ ಎಲ್ಲ ಅಂತ ಕನವರಿಸಿದ್ದಳು.
ಇದೆಲ್ಲ ಆಗಿ ಒಂದು ತಿಂಗಳಾಗಿತ್ತು ಅನಿಸುತ್ತೆ...ಒಂದಿನ ಬಂದವಳೆ ನನ್ನ ಕೈಗೊಂದು ತಿಳಿ ನೀಲಿ ಬಣ್ಣದ ರಿಬ್ಬನ್ ಕಟ್ಟಿದ್ದ ಪುಟ್ಟ ಗಿಫ್ಟ್ ಪ್ಯಾಕ್ ಇಟ್ಟಳು.
ಏನೇ ಇದು?
ನಿನ್ನ ಆಸೆ... ನನ್ನ ಪ್ರೀತಿ.
ಒಡೆದು ನೋಡಿದೆ.
ಒಳಗೆ ಅದೇ ಕೆಂಪು ಕೆಂಪಿನ ಸ್ವೆಟರ್ ಮುದುಡಿಕೊಂಡು ಕುಳಿತಿತ್ತು.
ಎಲ್ಲಿತ್ತೇ?
ಸುಮ್ಮನೆ ನಕ್ಕಳು.

Thursday, January 24, 2008

ನನ್ನದೇನಿದ್ದರೂ ಸಣ್ಣ ಕನಸುಗಳ ಸಾಮ್ರಾಜ್ಯ

ನಾನು ಈ ಬ್ಲಾಗ್ನಲ್ಲಿ ತುಂಬಾ ಗಹನವಾದ ವಿಷಯವನ್ನ ತೆಗೆದುಕೊಂಡು ಚಿಂತಿಸುವ ಕೆಲಸ ಮಾಡೊಲ್ಲ. ಅದನ್ನೆಲ್ಲ ತುಂಬಾ ತಿಳಿದುಕೊಂಡವರು, ಬುದ್ಧಿ ಜೀವಿಗಳು ಮಾಡಿಯಾರು, ನನ್ನದೇನಿದ್ದರೂ ಕೈಗೆ ನಿಲುಕುವ ಪುಟ್ಟ ಪುಟ್ಟ ಕನಸುಗಳದೇ ಸಾಮ್ರಾಜ್ಯ. ಇಂಥ ಪುಟ್ಟ ಪುಟ್ಟ ಕನಸುಗಳೇ ನಮ್ಮನ್ನು ಬದುಕಿಡೀ ಕೈ ಹಿಡಿದು ನಡೆಸಬಲ್ಲವು.
ಹೇಳಬೇಕೆಂದರೆ, ಎಲ್ಲರ ಬದುಕೂ ಒಂದು ಪುಟ್ಟ ಕನಸಿನಿಂದಲೇ ಆರಂಭವಾಗೋದು.ಅದರಲ್ಲಿ ಮೊದಲ ಕನಸು ಅಮ್ಮ. ಈ ಜಗತ್ತಿಗೆ ಬಂದ ಮೊದಲ ಕ್ಷಣ ಅವಳಪ್ಪುಗೆ ಸಿಗುತ್ತಲ್ಲ ಅದೇ ಮಗುವಿನ ಮೊದಲ ಕನಸು. ಅಲ್ಲಿಂದ ಶುರುವಾಗುವ ಕನಸು ಕೊನೆಗೆ ಬಂದು ನಿಂತುಕೊಳ್ಳುವುದು ಬಾಯಿಗೆ ಹನಿ ನೀರು ಹಾಕಿ ಅನ್ನೋ ಕೊನೆ ಕನಸಿಗೆ.ನಿಜ್ಜ ಹೇಳ್ಲ... ಇಂಥ ಪುಟ್ಟ ಕನಸುಗಳೇ ನಮ್ಮನ್ನು ಜೀವಂತವಾಗಿಡೋದು. ಗೆಳೆಯ ಬತರ್್ಡೇಗೊಂದು ವಿಷ್ ಮಾಡಲಿ ಅಂತ ಮನಸು ಕಾತರಿಸುತ್ತದೆ... ಗಂಡ ಒಂದು ಸೀರೆ ಕೊಡಿಸಲಿ ಅನ್ನುವ ಕನಸು ಹಬ್ಬ ಇನ್ನೂ ಮೂರು ವಾರ ಇದೆ ಅನ್ನುವಾಗಲೇ ಎದ್ದು ಕುಳಿತುಬಿಡುತ್ತದೆ, ಪುಟ್ಟ ಹುಡುಗ ಮಮ್ಮಿ ನನಗೆ ಆ ಹೊಸ ಆಟದ ಕಾರ್ ಕೊಡಿಸು ಅಂತ ಕೈ ಹಿಡಿದು ಜಗ್ಗುತ್ತಾನೆ, ಈ ವ್ಯಾಲೆಂಟೈನ್ಸ್ ಡೇ ಗಾದರೂ ಅವನಿಗೆ ಐ ಲವ್ ಯು ಅಂತ ಹೇಳಲೇಬೇಕು ಎಂದು ಮನಸ್ಸು ಪತರಗುಟ್ಟುತ್ತದೆ, ಮಗ ಒಳ್ಳೆ ಮಾಕರ್್ ತರಲಿ, ಮಗಳಿಗೊಂದು ಗುಡ್ ಗುಡ್ ಅನ್ನುವಂತಹ ಹುಡುಗ ಸಿಗಲಿ..... ಒಂದೇ ಎರಡೇ ಈ ಲಿಟ್ಟಲ್ ಲಿಟ್ಟಲ್ ಕನಸುಗಳ ಸಾಮ್ರಾಜ್ಯ. ಅವುಗಳನ್ನು ಒಂದೊಂದೇ ಹೆಕ್ಕಿ ತೆಗೆದು ಜತನದಿಂದ ಈಡೇರಿಸಿಕೊಂಡು ಹೋದರೂ ಸಾಕು ಬದುಕು ಹಸನಾಗುತ್ತದೆ. ಆದರೆ ನಾವೇನು ಮಾಡುತ್ತೇವೆ ಗೊತ್ತಲ್ಲ.... ಏಕ್ದಮ್ ಬಿಲ್ ಗೇಟ್ಸ್ ಆಗಬೇಕು, ಅಂಬಾನಿ ಆಗಬೇಕು ಅಂತೆಲ್ಲ ಕನಸು ಕಾಣುತ್ತೇವೆ. ಅಂಥ ದೊಡ್ಡ ದೊಡ್ಡ ಕನಸುಗಳ ಎಡೆಯಲ್ಲಿ ಸಣ್ಣ ಸಣ್ಣ ಕನಸುಗಳು ಸದ್ದಿಲ್ಲದೆ ಸಿಕ್ಕಿ ಕಮರಿಹೋಗುವುದು ಗೊತ್ತಾಗುವುದೇ ಇಲ್ಲ.ನಮಗೆ ಅಂತ ದೊಡ್ಡ ಕನಸುಗಳು ಬೇಡ. ಸಣ್ಣವೇ ಇರಲಿ.
ಅವನ್ನೇ ಮೆಟ್ಟಿಲನ್ನಾಗಿ ಮಾಡಿಕೊಂಡು ದೊಡ್ಡದರ ಕಡೆಗೆ ಸಾಗೋಣ.
ನನ್ನ ಬ್ಲಾಗ್ ಅಂತ ಸಣ್ಣ ಸಣ್ಣ ಕನಸುಗಳ ಗೂಡು.
ಅಲ್ಲಿ ನಾನಿರುತ್ತೀನಿ.... ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನೀವಿರುತ್ತೀರಿ.
ಇನ್ನು ಸಣ್ಣ ಕನಸುಗಳಿಗೆ ಬರವಿಲ್ಲ ಬಿಡಿ.

Monday, January 21, 2008

ಅವಳ ಎರಡು ಪ್ರಶ್ನೆಗೆ ಉತ್ತರ

ಅವಳು ನಿಜಕ್ಕೂ ಅಳುತ್ತಿದ್ದಳು.
ನನ್ನ ಎದುರಿಗೆ ಅವಳು....ಅವಳ ಎದುರಿಗೆ ನಾನು ಕುಳಿತಿದ್ದೆ.
ಇಬ್ಬರೂ ಎಷ್ಟು ಹೊತ್ತು ಕುಳಿತಿದ್ದೆವೋ ಗೊತ್ತಿಲ್ಲ. ಆಡಿದ್ದು ಮಾತ್ರ ಎರಡೇ ಮಾತು. ಅದೂ ಅವಳೇ ಆಡಿದ್ದು.
ಒಂದು.
ನೀನು ನನ್ನನ್ನು ಕೈ ಬಿಡೊಲ್ಲ ತಾನೇ?
ಇನ್ನೊಂದು.
ನಾನು ಸತ್ತರೆ ನೀನೂ ಸಾಯ್ತೀಯ?
ಎರಡಕ್ಕೂ ನನ್ನಲ್ಲಿ ಉತ್ತರ ಇಲ್ಲವೆಂದೇನಲ್ಲ, ಆದರೆ ಅವಳಿಗೆ ಹೇಗೆ ಹೇಳಬೇಕೋ ಎನ್ನುವುದು ತಿಳಿಯದೇ, ಪೆಕರುಪೆಕರಾಗಿ ಪ್ರಶ್ನೆ ಕೇಳ್ತೀಯಲ್ಲೇ. ತಲೆಗಿಲೆ ಕೆಟ್ಟಿದೆಯಾ ನಿಂಗೆ ಅಂತ ಗದರಿದ್ದೆ. ಆದರೆ ಅವಳ ಮುಸಿಮುಸಿ ಅಳು ಮಾತ್ರ ನಿಲ್ಲಲಿಲ್ಲ. ಅವೆರಡು ಪ್ರಶ್ನೆಯನ್ನೇ ರಿವೈಂಡ್ ಮಾಡಿ ಮಾಡಿ ನೂರು ಸಲ ಕೇಳಿದ್ದಳು.
ಇಷ್ಟಕ್ಕೂ ಆದದ್ದಾದರೂ ಏನು?
ಇವತ್ತು ಅವಳ birthday. ನನಗೆ ಆಫೀಸಿನಲ್ಲಿ ಮಣ ಕೆಲಸ. ರಜೆ ಹಾಕು ಇಬ್ಬರೂ ನಂದಿಬೆಟ್ಟಕ್ಕೆ ಹೋಗೋಣ ಅಂತ application ಹಾಕಿದ್ದಳು; ವಾರದಿಂದಲೇ! ನಾನೇನಾದರೂ ರಜೆ ಕೇಳಿದ್ದರೆ ಪೆಡಂಭೂತದಂತಿರುವ ಬಾಸ್ ಬೋಳೀಮಗನೆ ಗೆಟ್ಲಾಸ್ಟ್ ಅಂತ ಉಗಿದು ಅಟ್ಟುತ್ತಿದ್ದದ್ದಂತೂ ಗ್ಯಾರಂಟಿ. ಈ ಗಡಿಬಿಡಿಯಲ್ಲಿ ಅವಳಿಗೊಂದೂ ವಿಷ್ಷೂ ಮಾಡದೆ ಕುಳಿತುಬಿಟ್ಟಿದ್ದೆ. ಮಧ್ಯೆ ಒಮ್ಮೆ ಫೋನ್ ಮಾಡಿದ್ದಳು. ನನಗೆ ಇವತ್ತೇ ನನ್ನ ಪ್ರಾಜೆಕ್ಟ್ ಕಂಪ್ಲೀಟ್ ಮಾಡಬೇಕಿತ್ತು. ಇನ್ನು ಇವಳೊಟ್ಟಿಗೆ ಮಾತಾಡುವುದೆಲ್ಲಿ?ಸಂಜೆ ಸಿಗೋಣ ಕಣೆ ಅಂತ ಎಸ್ಸೆಮ್ಮೆಸ್ ಮಾಡಿದ್ದೆ. ಈಗ ನೋಡಿದರೆ ಎರಡು ಪ್ರಶ್ನೆ ಹಿಡಿದು ಧುಮ್ಮಂತ ಕುಳಿತಿದ್ದಾಳೆ.ನಿಮಗೆ ಗೊತ್ತಿಲ್ಲ, ನಾನು ಅವಳನ್ನು ಪ್ರಾಣ ಹೋಗುವಷ್ಟು ಪ್ರೀತಿಸುತ್ತೇನೆ. ಅವಳೂ ನನ್ನನ್ನು ಪ್ರೀತಿಸುತ್ತಾಳೆ. ಆದ್ರೆ ಎಷ್ಟು ಅಂತ ಮಾತ್ರ ಗೊತ್ತಿಲ್ಲ.

***
ಯಾಕೋ ಅವಳು ಅಳು ನಿಲ್ಲಿಸುವುದಿಲ್ಲ ಅನಿಸಿತು. ಅವಳ ಗಲ್ಲ ಹಿಡಿದು ನಿನ್ನ ಎರಡೂ ಪ್ರಶ್ನೆಗೆ ಉತ್ತರ ಹೇಳ್ತೀನಿ ಕೇಳು ಕಣೆ ಅಂದೆ.
ತಿರುಗಿ ಕುಳಿತಳು.
ಒಂದು.
ಬಿಡುವುದಕ್ಕೆ ನಾನು ನಿನ್ನ ಕೈ ಹಿಡಿದುಕೊಂಡಿದ್ದರೇ ತಾನೆ? ನೀನು ನನ್ನ ಕೈಲಿಲ್ಲ ಕಣೆ, ಹೃದಯದಲ್ಲಿದೀಯ.
ಎರಡು.
ನಿನಗಿಂತ ಮೊದಲೇ ನಾನು ಸಾಯುತ್ತೇನೆ. ಯಾಕೆಂದರೆ ಡಾಕ್ಟರು ನನಗೆ ಇನ್ನು ಎರಡು ತಿಂಗಳು ಮಾತ್ರ ಬದುಕುತ್ತೀಯ ಅಂತ ಹೇಳಿದ್ದಾರೆ.
ಬಿಕಾಸ್ ಆಫ್ ಬ್ಲಡ್ ಕ್ಯಾನ್ಸರ್.
ಹಾಗಂತ ಅವಳ ಕೈ ಹಿಡಿದುಕೊಂಡೆ.
ಅವಳ ಕಣ್ಣಲ್ಲಿದ್ದದ್ದು ಎಂಥ ಭಾವವೋ ಆ ಕ್ಷಣಕ್ಕೆ ನನಗೆ ಗೊತ್ತಾಗಲಿಲ್ಲ.

ಅವನ "ಅವಳು" ಮಾತ್ರ ನನಗೆ ಇನ್ನೂ ಮಿಲಿಯನ್ ಡಾಲರ್ ಪ್ರಶ್ನೆಯೇ?

ಮೊನ್ನೆಯಷ್ಟೇ ಹಾಸನಕ್ಕೆ ಹೋಗಿದ್ದೆ.

ಅಲ್ಲಿನ ಬಸ್ ಸ್ಟಾಂಡಿನಲ್ಲಿ ರಾತ್ರಿ ಎರಡಕ್ಕೆ ಇಳಿದವನಿಗೆ ಯಾಕೋ ಕ್ಷಣ ಕೂರಬೇಕೆನಿಸಿತು. ಲಗ್ಗೇಜನ್ನು ಪಕ್ಕಕ್ಕೆ ಒಗೆದು ಅಲ್ಲೇ ಒಂದು ಕಲ್ಲು ಬೆಂಚಿನ ಮೇಲೆ ಕುಳಿತೆ. ಕ್ಷಣ ಕೂಡ ಆಗಿಲ್ಲ... ಎಲ್ಲಿ ಇಲ್ಲೇ ನಿದ್ರೆ ಮಾಡಿಬಿಡುತ್ತೇನೋ ಅನ್ನುವ ಭಯ ಕಾಡತೊಡಗಿತು. ಕಣ್ಣುಗಳಲ್ಲಿ ಜೋಂಪು ಬೇರೆ. ಸರಿಯಾಗಿ ನಿದ್ರೆ ಮಾಡಿಯೇ ಮೂರು ದಿನವಾಗಿತ್ತು. ಇನ್ನು ಕೂರುವುದು ಸರಿಯಿಲ್ಲ ಅಂತ ಎದ್ದು ಆಟೋ ಹಿಡಿಯೋಣ ಅಂತ ಹೊರಟೆ.

"ಅಷ್ಟರಲ್ಲಿ ಸಾರ್ ನಿಮ್ಮ ಲಗ್ಗೇಜ್ ತಗೊಳ್ಲಾ?" ಅಂತ ಯಾರೋ ಕೇಳಿದಂಗಾಯ್ತು. ತಿರುಗಿ ನೋಡಿದರೆ... ಇನ್ನೂ ಮೂವತ್ತರ ಆಸುಪಾಸಿನ ಯುವಕ. ಬಟ್ಟೆ ಎಲ್ಲಾ ಕೊಳಕಾಗಿದ್ದವು. "ಏನು ಬೇಡಪ್ಪ... ನಾನೇ ತೆಗೆದುಕೊಂಡು ಹೋಗ್ತೇನೆ!"ಅಂದೆ. ಆದರೆ ಅವನು ನನ್ನನ್ನು ಬಿಡುವ ಹಾಗೆ ಕಾಣಲಿಲ್ಲ. "ಸಾರ್ ಹಾಗನ್ನಬೇಡಿ. ನೀವು ಕೊಡುವ ಐದೋ ಹತ್ತೋ ರುಪಾಯಿಯಿಂದ ನನ್ನ ಹೊಟ್ಟೆ ಪಾಡು ತುಂಬಬೇಕು. ನಿಮ್ಮ ಕೈಯಲ್ಲಿ ಇದನ್ನು ಹೊರಲು ಆಗೊಲ್ಲ ಅಂತಲ್ಲ. ಆದ್ರೆ ನಾವೂ ಬದುಕಬೇಕಲ್ಲ. ತಗಳ್ತೀನ್ ಬಿಡಿ ಸಾರ್..." ಅಂದವನೆ ನನ್ನ ಮಾತಿಗೂ ಕಾಯದೆ ಲಗ್ಗೇಜನ್ನ ತೆಗೆದುಕೊಂಡು ಮುಂದೆ ಮುಂದೆ ನಡೆದ.

ನನ್ನ ಮನದಲ್ಲಿ ಎಂಥವನೋ ಏನೋ ಅನ್ನುವ ಅಳುಕು ಬೇರೆ!ಇನ್ನು ಮಾತಾಡಿ ಪ್ರಯೋಜನವಿಲ್ಲ ಅನಿಸಿತು. ಜೊತೆಗೆ ಅವನು ಹೇಳಿದ ಮಾತೂ ಸತ್ಯವೆನಿಸಿತು.ನೂರು-ಸಾವಿರ ರುಪಾಯಿಗಳನ್ನ ಎಲ್ಲೋ ಒಮ್ಮೊಮ್ಮೆ ಅನವಶ್ಯಕವಾಗಿ ಕಳೆದುಬಿಡುತ್ತೇವೆ. ಇಲ್ಲಿ ನಿಮ್ಮ ಬ್ಯಾಗ್ ತೆಗೆದುಕೊಳ್ಳುತ್ತೇನೆ ಅನ್ನುವ ವ್ಯಕ್ತಿಗೆ ಹತ್ತು ರುಪಾಯಿ ಕೊಡಲು ಹಿಂದೆ ಮುಂದೆ ನೋಡುತ್ತೇವಲ್ಲ ಇದು ಸರಿಯಿಲ್ಲ ಅನಿಸಿತು.ಲಗ್ಗೇಜನ್ನ ರಸ್ತೆ ಪಕ್ಕ ಇಟ್ಟು ನಿಂತವನ ಕಣ್ಣಲ್ಲಿ ಎಂಥದೋ ನಿಭರ್ಾವುಕತೆಯಿತ್ತು."ಯಾವೂರು?" ಕೇಳಿದೆ."ಇದೇ ಊರು ಸಾರ್. ಹಾಸನವೇ!" "ಯಾಕೆ ಎಲ್ಲೂ ಕೆಲಸಕ್ಕೆ ಟ್ರೈ ಮಾಡಲಿಲ್ವಾ?""ನಮ್ಮಂತೋರಿಗೆ ಎಲ್ಲಿ ಕೆಲಸ ಕೊಡ್ತಾರೆ ಬಿಡಿ . ಅದೂ ಅಲ್ದೆ ನಾನು ಓದಲೂ ಇಲ್ಲ. ಅಪ್ಪ ಸಿಕ್ಕಾಬಟ್ಟೆ ಕುಡೀತಾನೆ. ಅಮ್ಮಾನು ಅಲ್ಲಿ ಇಲ್ಲಿ ಕೂಲಿ ಮಾಡ್ತಾಳೆ. ಹೊಟ್ಟೆ ಪಾಡು ಹೇಗೋ ನಡೀತಾ ಇದೆ. ಇವತ್ತು ಈ ಊರು ನಾಳೆ ಇನ್ಯಾವ ಊರೋ? ಆದ್ರೆ ಅವಳು ಮಾತ್ರ ಹಾಗೆ ಕೈ ಕೊಟ್ಟುಬಿಟ್ಟು ಹೋಗಬಾರದಿತ್ತು? ............ನೀವು ಬೆಂಗಳೂರವ್ರ...?" ನಾನು ಹೂಂ ಅನ್ನುವ ಮೊದಲೇ "ನನಗೂ ಬೆಂಗಳೂರಿಗೆ ಬರಬೇಕು ಅನ್ನೋ ಆಸೆ ಇದೆ, ಆದರೆ ಅಲ್ಲಿ ಬಂದು ಏನು ಮಾಡಲಿ ಅನ್ನೋದೇ ಗೊತ್ತಿಲ್ಲ. ಅದೂ ಅಲ್ದೆ ಅಲ್ಲಿ ನಮ್ಮಂತೋರಿಗೆಲ್ಲ ಜಾಗ ಇದೆಯಾ? ನೀವು ಏನು ಕೆಲ್ಸ ಮಾಡ್ತೀರಾ ? ಅಂದ.

"ನಾನು ಪತ್ರಕರ್ತ."

"ಒಳ್ಳೆ ಸಂಬಳ ಇರಬೇಕು ಅಲ್ವಾ ಬಾಸ್?" ಅಂದ.

ನಾನು ಸುಮ್ಮನೆ ನಕ್ಕೆ.

ಯಾಕೋ ಅವಳು ಅಂದನಲ್ಲ ಅದೇನೆಂದು ಕೇಳಬೇಕೆನಿಸಿತು. ಮನಸ್ಸು ಕೆಲವೊಮ್ಮೆ ಹೆಣ್ಣಿನ ಬಗ್ಗೆ ಇನ್ನಿಲ್ಲದ ಕುತೂಹಲ ಹುಟ್ಟಿಸಿಕೊಂಡು ಬಿಡುತ್ತೆ ಅಲ್ವ!

"ಅವಳೂ ಅಂದಲ್ಲ ಯಾರದು?" "ನನ್ನ ಹೆಂಡ್ತೀ? ಚೆನ್ನಾಗೆ ಇದ್ಲು ಬಾಸ್. ನನ್ನನ್ನ ಕಂಡರೆ ಅವಳಿಗೆ ಸಕ್ಕತ್ ಪ್ರೀತೀನೂ ಇತ್ತು. ಆದ್ರೆ ಒಂದಿನ ಹೇಳದೆ ಕೇಳದೆ ಯಾರದೋ ಜೊತೆ ಹೊರಟೋದ್ಲು ಸಾರ್. ಎಲ್ಲಿಗೋದ್ಲು, ಬದುಕಿದಾಳಾ ಸತ್ತಿದಾಳಾ ಅಂತಾನೂ ಗೊತ್ತಿಲ್ಲ"."ಓಹೋ" ಅಂದವನೆ "ಯಾಕೆ ನೀನು ಚೆನ್ನಾಗಿ ನೋಡಕೊಳ್ತಾ ಇರಲಿಲ್ವಾ?" ಅಂದೆ."ಸಾರ್ ಚಿನ್ನ ಚಿನ್ನ ನೋಡ್ಕೊಳೋ ಅಂಗೆ ನೋಡ್ಕತಾ ಇದ್ದೆ. ಎಷ್ಟೋ ಸಾರಿ ನಾನು ಅವಳಿಗೆಂದೇ ಹೆಚ್ಚು ಹೊತ್ತು ಕೆಲಸ ಮಾಡಿ ಅವಳಿಗೇನೇನು ಬೇಕೋ ಎಲ್ಲಾನು ತೆಗೊಂಡು ಹೋಗ್ತಿದ್ದೆ. ಆದ್ರೂ ಹೋಗಬಿಟ್ಲು. ಮನಸ್ಸು ಯಾಕೋ ಅವಳಿಲ್ದೆ....... ಪತರಗುಟ್ಟತಾ ಇದೆ..."

ಯಾಕೋ ಇನ್ನು ಹೆಚ್ಚಿಗೆ ಮಾತಾಡುವುದು ಬೇಡ ಅನಿಸಿತು.ಅವನ ಕೈಗೆ ಇಪ್ಪತ್ತು ರುಪಾಯಿ ಇಟ್ಟೆ."ಬಾಸ್ ಇಲ್ಲಿಂದಿಲ್ಗೆ ಇಷ್ಟೊಂದು ಯಾಕೆ. ಬೇಡ ತಗೊಳಿ. ಐದು ರುಪಾಯಿ ಕೊಡಿ ಸಾಕು" ಅಂತ ಹಿಂದಿರುಗಿಸಲು ಬಂದ. "ನಾನು ಪರವಾಗಿಲ್ಲ ಇಟ್ಕೋ" ಅಂದಿದ್ದಕ್ಕೆ"ಇವತ್ತು ನಿಮ್ಮ ಹೆಸರು ಹೇಳ್ಕಂಡು ಒಂದು ಬಿರಿಯಾನಿ ತಿಂದುಬಿಡ್ತೀನಿ ಬಿಡಿ" ಅಂತ ನಕ್ಕ.

ನಾನೂ ನಕ್ಕೆ. ಅಷ್ಟರಲ್ಲಿ ಆಟೋ ಬಂದಿದ್ದರಿಂದ ತಕ್ಷಣ ಆಟೋ ಹತ್ತಿ ಕುಳಿತೆ.

ಅವನು ಬಿರಿಯಾನಿ ತಿಂದನಾ... ಇಲ್ಲವಾ ಗೊತ್ತಿಲ್ಲ.

ಆದರೆ ಅವನ "ಅವಳು" ಮಾತ್ರ ನನಗೆ ಇನ್ನೂ ಮಿಲಿಯನ್ ಡಾಲರ್ ಪ್ರಶ್ನೆಯೇ?

Sunday, January 20, 2008

ನಿಮ್ಮ ಮೊಬೈಲ್ನಲ್ಲಿ ಐಸಿಇ ಅನ್ನೋ ಹೆಸರಿರಲಿ..

ನೀವು ಮೊಬೈಲ್ ಬಳಸ್ತಾ ಇದೀರಾ?
ಹಾಗಾದ್ರೆ ಒಂದು ವಿಷಯ ನೀವು ತಿಳಿದುಕೊಳ್ಳಲೇ ಬೇಕು.ಸಾಮಾನ್ಯವಾಗಿ ಹೊರಗಡೆ ಹೋದ ಸಮಯದಲ್ಲಿ ಯಾರಿಗಾದ್ರೂ ಏನಾದ್ರೂ ಹೆಚ್ಚು ಕಡಿಮೆ ಆಗಿ ಅವರ ಸಂಬಂಧಪಟ್ಟವರಿಗೆ ಸುದ್ದಿ ಮುಟ್ಟಿಸಬೇಕೆಂದಾಗ ಆ ವ್ಯಕ್ತಿಯ ಪರ್ಸನಲ್ ಡೀಟೈಲ್ಸ್ ಸಹಕಾರಿಯಾಗುತ್ತೆ ಅಲ್ವ!. ಅದರಲ್ಲಿ ಬಹು ಮುಖ್ಯವಾದದ್ದು ಫೋನ್ ನಂಬರ್ಸ್ ಅನ್ನೋದು ನಿಮಗೆ ಗೊತ್ತಿದೆ. ಆದರೆ ಈಗೇನಾಗಿದೆ ಅಂದರೆ ಮೊಬೈಲ್ ಬಂದ ಮೇಲೆ ನೂರಾರು ಹೆಸರನ್ನ ಫೀಡ್ ಮಾಡಿ ಇಟ್ಟಿರುತ್ತೇವೆ. ಅದರಲ್ಲಿರೋ ನಂಬರ್ರುಗಳಲ್ಲಿ ಯಾರಿಗೆ ಮಾಡಿದ್ರೆ ಬೇಗ ಸುದ್ದಿ ತಲುಪುತ್ತೆ ಅನ್ನೋದು ತುಂಬಾ ಕಷ್ಟ. ಆಪತ್ಕಾಲದಲ್ಲಿ ಅಷ್ಟೆಲ್ಲ ನಂಬರಿಗೂ ಟ್ರೈ ಮಾಡ್ತಾ ಕೂರುವುದಕ್ಕಾಗುವುದಿಲ್ಲವಲ್ಲ, ಅದಕ್ಕೆ ಒಂದು ಸಿಂಪಲ್ ಮೆಥೆಡ್ ಫಾಲೋ ಮಾಡಿ.ಏನಪ್ಪ ಅಂದ್ರೆ, ನಿಮ್ಮ ಮೊಬೈಲ್ನಲ್ಲಿ ಐಸಿಇ (Incase of emergency) ಅನ್ನೋ ಹೆಸರಲ್ಲಿ ನಿಮಗೆ ಆಪ್ತರಾಗಿರುವವರ ಹೆಸರನ್ನು ಸೇವ್ ಮಾಡಿ ಇಡಿ. ಏನಾದ್ರೂ ತೊಂದರೆ ಆದಾಗ( ಆಗದೇ ಇರಲಿ ಅನ್ನೋದು ನಮ್ಮ ಹಾರೈಕೆ) ತಕ್ಷಣಕ್ಕೆ ನಾವಿರುವ ಸ್ಥಿತಿಯ ಬಗ್ಗೆ ಸಂಬಂಧಪಟ್ಟವರಿಗೆ ತಿಳಿಸಲು ಸಹಾಯವಾಗುತ್ತೆ. ತುಂಬಾ ಜನ ಇದ್ದಾಗ ಐಸಿಯು 1, 2, 3 ಅಂತ ಬೇಕಾದ್ರೆ ಸೇವ್ ಮಾಡ್ತಾ ಹೋಗಿ. ನೋ ಪ್ರಾಬ್ಲಮ್. ಮನೆಯಿಂದ ಆಚೆ ಹೋದ್ರೆ ಮತ್ತೆ ಮನೆ ತಲಪುತ್ತೀವಿ ಅನ್ನೋ ಗ್ಯಾರಂಟಿಯೇ ಇಲ್ಲ ಈಗ. ಇಂಥ ಸಂದರ್ಭದಲ್ಲಿ ಐಸಿಇ ನಂಬರ್ರು ಖಂಡಿತಾ ನಮ್ಮ ನೆರವಿಗೆ ಬರುತ್ತೆ.

ನನಗ್ಯಾಕೋ ಹೌದಲ್ಲ ಅನಿಸ್ತು.

ನಿಮಗೂ ಹಾಗನ್ನಿಸಿದರೆ ನಿಮ್ಮ ಮೊಬೈಲ್ನಲ್ಲೊಂದು ಐಸಿಇ ಹೆಸರಿರಲಿ...

ಹೂಗಳು ಬೆಳಕು ಕಾಣುವ ಮೊದಲೇ ಹೋಗಿಬಿಟ್ರಲ್ಲ ಸಾರ್

ಹೇಗೆ ಹೇಳಬೇಕೋ ಗೊತ್ತಾಗುತ್ತಿಲ್ಲ.

ತೇಜಸ್ವಿ ಹೋದ್ರು, ರಾಮ್ದಾಸ್ ಹೋದ್ರು. ಅವರು ಬಿಟ್ಟು ಹೋದ ದುಃಖದ ಛಾಯೆ ಇನ್ನೂ ಮನದಲ್ಲಿ ಆರಿಲ್ಲ. ಆಗಲೇ ನೀವೂ ಅವರನ್ನು ಹಿಂಬಾಲಿಸಿದವರಂತೆೆ ಸುಮ್ಮನೆ ಎದ್ದು ಹೊರಟುಬಿಟ್ಟಿದೀರಿ. ಯಾಕೆ ಸರ್, ನಿಮಗೇನು ಅಷ್ಟೊಂದು ಅವಸರವಿತ್ತೆ? ಅಥವಾ ಈ ಜಗತ್ತೇ ಏನಾದರೂ ಬೇಸರವಾಯ್ತೇ?

ನಿಜ ಹೇಳ್ಲ ಸರ್, ನಾನು ನಿಮ್ಮನ್ನು ಮೊದಲ ಬಾರಿ ನೋಡಿದ್ದು ನವಕನರ್ಾಟಕದಲ್ಲಿ. ಆಗಿನ್ನೂ ನಾನು ಪತ್ರ್ರಿಕೋದ್ಯಮದ ಖದರಿಗೆ ಹೊಂದಿಕೊಳ್ಳುತ್ತಿದ.್ದೆ ಹೊಸತು ಪತ್ರಿಕೆ ಆಗ ತಾನೆ ಶುರುವಾಗಿತ್ತು. ಅದರಲ್ಲಿ ನನ್ನ ಮೊದಲ ಕವನ ಪ್ರಕಟವಾದಾಗ ಎಂಥ ಖುಷಿಯಾಗಿತ್ತು ಗೊತ್ತಾ? ಅದನ್ನು ಸೆಲೆಕ್ಟ್ ಮಾಡಿದ್ದು ನೀವೇ ಅನ್ನೋದು ನನ್ನ ಅನಿಸಿಕೆ! ಆಮೇಲೆ ಎಷ್ಟೊಂದು ಬಾರಿ ಸಿಕ್ಕಿದಿರಿ. ಸಿಕ್ಕಾಗಲೆಲ್ಲ ಪ್ರೀತಿಯಿಂದ ಮಾತನಾಡಿಸುತ್ತಿದ್ರಿ. ಚೆನ್ನಾಗಿ ಓದಿ ಅಂತಿದ್ರಿ. ಬರೀರಿ ಅಂತಿದ್ರಿ. ಇನ್ನಾರು ಸಾರ್ ನಮಗೆ ಅಂತ ಮಾರ್ಗದರ್ಶನ ಕೊಡೋರು? ಪ್ರೀತಿಯಿಂದ ಮಾತನಾಡಿಸೋರು?ಅವತ್ತು ನೀವು ನನ್ನನ್ನು ನವಕನರ್ಾಟಕದ ಪಡಸಾಲೆಯಲ್ಲಿ ಕೂರಿಸಿಕೊಂಡು ನನ್ನ ನೂರಾರು ಕವನಗಳನ್ನು ತಿರುವಿ ಹಾಕುತ್ತಿದ್ದರೆ ನಾನು ನಿಜಕ್ಕೂ ಎಕ್ಸೈಟ್ ಆಗಿಹೋಗಿದ್ದೆ. ನಾನೊಂದು ಕವನ ಸಂಕಲನ ತರಬೇಕೆಂದಿದ್ದೇನೆ. ಬೆಳಕು ಕಾಣದ ಹೂಗಳು ಅಂತ. ಅದಕ್ಕೆ ನೀವೇ ಮುನ್ನುಡಿ ಬರೆಯಬೇಕು. ಪ್ಲೀಸ್ ಸರ್ ಇಲ್ಲ ಅನ್ನಬೇಡಿ ಅಂದಿದ್ದೆ. ನೀವೂ ಆಯ್ತು. ಬರಕೊಡ್ತೀನಿ, ಆದರೆ ಅಜರ್ೆಂಟ್ ಮಾಡಬೇಡಿ ಅಂತ ತೆಗೆದುಕೊಂಡು ಹೋದ್ರಿ. ಹೋದವ್ರು ಮುನ್ನುಡಿ ಕೊಡೋ ಅಷ್ಟರಲ್ಲಿ ಬರೋಬ್ಬರಿ ಎರಡು ವರ್ಷ ಆಗೋಗಿತ್ತು. ಆದ್ರೆ ಒಂದಿನ ಇದ್ದಕ್ಕಿದ್ದಂತೆ ಅದೇ ಥಣ್ಣನೆ ನಡಿಗೆಯಲ್ಲಿ ಬಂದು ನನ್ನ ಕೈಯಲ್ಲಿ ಮುನ್ನುಡಿ ಇಟ್ರಿ. ನಾನು ಅದನ್ನು ಪರಮ ಕುತೂಹಲದಿಂದ ಏನು ಬರೆದಿರಬಹುದೆಂದು ಓದಿದರೆಅದರಲ್ಲಿದ್ದದ್ದು ನಿಮ್ಮ ನಿಷ್ಕಲ್ಮಶ ಪ್ರೀತಿ ಮತ್ತು ಮೆಚ್ಚುಗೆ ಮಾತ್ರ.ಅದಿನ್ನೂ ನನ್ನಲ್ಲಿ ಹಾಗೇ ಇದೆ. ಅದು ಬರೆದುಕೊಟ್ಟೂ ನೀವು ಎರಡು ವರ್ಷದ ಮೇಲಾಗಿಹೋಯಿತು. ಬೆಳಕು ಕಾಣದ ಹೂಗಳು ಇನ್ನೂ ಬೆಳಕು ಕಂಡಿಲ್ಲ. ಇತ್ತೀಚೆಗೇ ಗೆಳೆಯರ ಹತ್ತಿರ ರವಿ ಅಜ್ಜೀಪುರಗೆ ಮುನ್ನುಡಿ ಬರೆದುಕೊಟ್ಟಿದ್ದೆ. ಅವರ ಕವನ ಸಂಕಲನ ಹೊರಬಂತೋ ಇಲ್ಲವೋ ಗೊತ್ತಾಗಲೇ ಇಲ್ಲ, ಅಂದಿರಂತೆ. ಹಾಗೇ ನಾನು ಬರೆದುಕೊಟ್ಟಿದ್ದು ಅವರಿಗೆ ಇಷ್ಟ ಆಯ್ತೋ ಇಲ್ಲವೋ ಅಂತಲೂ ಅನುಮಾನ ಪಟ್ಟರಂತೆ. ಇಷ್ಟ ಆಗದೇ ಇರೋದಿಕ್ಕೆ ಅದೇನು ಯಾವುದೋ ಒಂದು ವಸ್ತುವೆ ಶ್ರೀನಿವಾಸ್ ಸರ್. ನಿಜ ಹೇಳ್ಲ ಆ ಮುನ್ನುಡಿಯಲ್ಲಿ ್ಲ ನಿಮ್ಮ ಬೆಚ್ಚನೆ ಪ್ರೀತಿ ಬಿಟ್ಟರೆ ಬೇರೇನೂ ಇಲ್ಲ. ನಿಮ್ಮ ಪ್ರೀತಿ ದೊಡ್ಡದು. ನಿಮ್ಮ ಬಗ್ಗೆ ನಮಗಿದ್ದ ಗೌರವವೂ ದೊಡ್ಡದು. ಅವತ್ತು ಬೆೆಳಿಗ್ಗೆ ಶರತ್ ಕಲ್ಕೋಡ್ ಚಿ. ಶ್ರೀನಿವಾಸ್ ರಾಜ್ ಹೋಗಿಬಿಟ್ಟರು ಅಂದಾಗ ಕ್ಷಣ ನನ್ನ ಮನಸ್ಸು ಒಪ್ಪಿಕೊಳ್ಳಲಿಕ್ಕೆ ರೆಡಿ ಇರಲಿಲ್ಲ.ಸರ್, ಮನಸ್ಸು ನೀವಿಲ್ಲದೆ ಬಿಕೋ ಅನ್ತಿದೆ. ಆದ್ರೆ ನೀವು ಬರೆದುಕೊಟ್ಟ ಮುನ್ನುಡಿ ಮಾತ್ರ ನನ್ನ ಅಂಗೈಯಲ್ಲಿ ಹಾಗೇ ಉಳಿದಿದೆ. ಅದೇ ಬೆಚ್ಚನೆ ಪ್ರೀತಿ ತುಂಬಿಕೊಂಡು.ಬೆಳಕು ಕಾಣದ ಹೂಗಳು ಪುಸ್ತಕದ ಮೊದಲ ಪ್ರತಿ ನಿಮಗೇ ಕೊಡಬೇಕು ಅನ್ನೋ ಆಸೆ ಇತ್ತು.ಈಗ ಆ ಆಸೆಯೋ ಕಮರಿಹೋಗಿದೆ. ಇನ್ನಾರಿಗೆ ಕೊಡಲಿ?