Thursday, December 11, 2008

ಎದೆಯ ಬಟ್ಟಲು ಒಡೆದ ಶಬ್ದ ಕೇಳುತಿದೆಯೆನಗೆ



...'ಯಾರದೋ ಕೈಯಿಂದ ಜಾಮು ಬಿದ್ದಿರಬೇಕು... ಎದೆಯ ಬಟ್ಟಲು ಒಡೆದ ಶಬ್ದ ಕೇಳುತಿದೆಯೆನಗೆ ಹಾಗಂತ ಬರೆಯುತ್ತಾನೆ ಫಿರಾಖ್ ಗೋರಖ್ಪುರಿ. ಭಗ್ನ ಹೃದಯವೊಂದರ ಚಿತ್ರಣವನ್ನು ಇದಕ್ಕಿಂತ ಚೆನ್ನಾಗಿ ಕಟ್ಟಿಕೊಡಲು ಸಾಧ್ಯವೇ? ಉಫ್ ....... ನಾನಂತೂ ಫಿದಾ ಆಗೋಗಿಬಿಟ್ಟೆ. ನಿಮಗೆ ಗೊತ್ತಿದೆ, ಈ ಪ್ರೀತಿಗೂ ಮದ್ಯಕ್ಕೂ ಅದೆಂಥದೋ ಸಂಬಂಧವಿದೆ. ಅದೂ ಅಮಲೇ ಇದೂ ಅಮಲೇ! ಹೇಳಬೇಕೆಂದ್ರೆ ಪ್ರೀತಿ ಮದ್ಯಕ್ಕಿಂತ ಅಮಲಮಲು. ಪ್ರೀತಿಯಲ್ಲಿ ಸೋತವನು ಮದ್ಯಕ್ಕೆ ದಾಸನಾಗುತ್ತಾನೆ. ಮದ್ಯಕ್ಕೆ ದಾಸನಾದವನು ಬದುಕನ್ನೇ ಗಂಟುಕಟ್ಟಿ ಗಟಾರಕ್ಕೆ ಎಸೆದುಬಿಡುತ್ತಾನೆ. ಅಲ್ಲಿ ನೋ ಮುಜುಗರ, ನೋ ಹೋಪ್ಸ್, ನೋ ಲೈಫ್. ಪ್ರೀತಿ ಎದೆಯೊಳಗಿನ ದಾವಾಗ್ನಿ. ಯಾವ ಪ್ರೀತಿ ತನ್ನ ಬದುಕನ್ನು ಬಂಗಾರಮಾಡಬಲ್ಲದು ಅಂದುಕೊಂಡಿದ್ದನೋ ಅದೇ ಪ್ರೀತಿ ಅವನ ಬದುಕನ್ನ ಮುಕ್ಕಳಿಸಿ ಎಸೆದುಬಿಡುತ್ತದೆ. ಇನ್ನೆಲ್ಲಿ ಪ್ರೀತಿ?
ಕವಿ ಶಾಂತರಸ ಅವರು ಸೊಗಸಾದ, ಮನತಬ್ಬುವ ಇಂಥ ಎಷ್ಟೋ ದ್ವಿಪದಿಗಳನ್ನ ಉದರ್ುವಿನಿಂದ ಕನ್ನಡಕ್ಕೆ ತಂದಿದ್ದಾರೆ. ಉದರ್ುಕಾವ್ಯದಲ್ಲಿ ಮದ್ಯ ಮತ್ತು ಮದಿರೆ ಅನ್ನುವ ಹೆಸರಿನಲ್ಲಿ.
ಮೊನ್ನೆ ಶಶಿಕಲಾ ವೀರಯ್ಯಸ್ವಾಮಿಯವರು ತಂದುಕೊಟ್ಟು ಓದಿ ನೋಡಿ ನಿಮಗಿಷ್ಟ ಆಗುತ್ತೆ ಅಂದ್ರು. ಓದಿದೆ. ನೀವು ನೆನಪಾದೀರಿ. ಅದಕ್ಕೇ ಕೆಲವನ್ನ ಇಲ್ಲಿ ಕೊಡುತ್ತಿದ್ದೇನೆ.



ನಿನ್ನ ಕೇಶಗಳ ನೆರಳಲ್ಲಿ ಕೆಲ ನಿಮಿಷ ಕಳೆದವಗೆ
ಬೆಳುದಿಂಗಳಿಂದಲೂ ಹಿಂಸೆಯಾಗುವುದವಗೆ
- ನಾಷಾದ್
ಜೀವನವು ಏನೆಂದು ನಾನು ಕೇಳಿದೆನು
ಕೈ ಜಾರಿ ಬಿದ್ದು ಜಾಮು ಒಡೆದುಹೋಯ್ತು
- ಜಗನ್ನಾಥ ಆಜಾದ್
ಯಾರದೋ ಕೈಯಿಂದ ಜಾಮು ಬಿದ್ದಿರಬೇಕು
ಎದೆಯ ಬಟ್ಟಲು ಒಡೆದ ಶಬ್ದ ಕೇಳುತಿದೆಯೆನಗೆ
- ಫಿರಾಖ್ ಗೋರಖ್ಪುರಿ
ನೂರು ನೋವುಗಳನ್ನು ಹಿಚುಕಿ ಹಿಂಡಿದರೆ
ಒಂದೇ ಒಂದು ಹನಿ ಮದ್ಯವಾಗುವುದು
-ಸಾಹಿರ್ ಹೊಷಿಯಾರ್ ಪೂರಿ
ಯಾರು ಎಬ್ಬಿಸಬೇಕು ಉದ್ಯಾನದಂಗಳದ ಮೊಗ್ಗುಗಳನು
ಮಲಗಿಹುದು ನಿನ್ನ ಕೇಶಗಳ ನೆರಳಲ್ಲಿ ಮುಂಜಾವಿನೆಲರು
-ಕೈಫ್ ಅಹಮದ್ ಸಿದ್ದೀಖಿ
ಏನಾದರೂ ಸಿಗಲಿ ಈ ಮಧುರ ತುಟಿಯಿಂದ
ವಿಷ ಕುಡಿವ ಆದೇಶವಾದರೂ ಸರಿಯೆ
-ಆಜರ್ೂ ಲಖ್ನವಿ
ಹೊಳೆವ ಕೆನ್ನೆಯ ಮುಂದೆ ಸಮೆಯಿಟ್ಟು ಹೇಳುವರು:
ಯಾವ ಕಡೆ ಹೋಗುವುದೋ ಪತಂಗ ನೋಡೋಣ
-ದಾಗ್
ಎಷ್ಟು ಎದೆಗಳ ದೀಪ ನಂದಿಸಿ ನಿನ್ನ ನೋಟ
ಚುಕ್ಕೆ ಬಳಗಕೆ ಬೆಳಕನೀವುದು ತಿಳಿಯದಲ್ಲ
-ಆನಂದನರಾಯನ ಮುಲ್ಲಾ
ನೀಡು ಒಪ್ಪಿಗೆ ನಿನ್ನ ಕೆನ್ನೆಗಳ ನನ್ನೆದೆಗೆ ಅಪ್ಪಿಕೊಳ್ಳಲು
ಕಾವು ಕೊಡುವೆನೀ ಕೆಂಡಗಳಿಂದೆನ್ನ ಎದೆಯ ಗಾಯಗಳಿಗೆ
-ಖಿಜಲ್ ಬಾಷ್

Tuesday, December 9, 2008

ನಮ್ಮ ಮನೆಗೆ ಒಬ್ಬ ಪೊಲಿಟಿಷಿಯನ್ ಬರೋದಕ್ಕಿಂತ ಒಂದು ನಾಯಿ ಬಂದ್ರೆ ಒಳ್ಳೇದು



ಮನಸ್ಸು ದುಃಖಕ್ಕೆ ಬಿದ್ದಿದೆ.
ಅತ್ತ ಮುಂಬೈನ ನೂರಾರು ಸೋದರ ಸೋದರಿಯರು ಜೀವ ಕಳೆದುಕೊಂಡಿದ್ದಾರೆ. ನೂರಾರು ಸ್ನೇಹಿತರು ಗಾಯಗೊಂಡಿದ್ದಾರೆ. ತಾಜ್ ಹೋಟೆಲ್ಗಂಟಿದ ರಕ್ತದ ಕಲೆ ಆರುವುದಕ್ಕೆ ಎಷ್ಟುಕಾಲ ಬೇಕೋ! ಅಗೈನ್ ಉಗ್ರವಾದಿಗಳ ಕೊಲ್ಲುವ ಆಟ ಮುಂದುವರೆದಿದೆ. ಇಡೀ ಮುಂಬೈ ನಗರವೂ ಸೇರಿದಂತೆ ದೇಶಕ್ಕೆ ದೇಶವೇ ಪ್ರತಿ ಕ್ಷಣವನ್ನೂ ಆತಂಕ, ಭಯದಿಂದಲೇ ಎದುರುನೋಡುತ್ತಿದೆ. ಏನಾಗಿದೆ ಈ ದೇಶಕ್ಕೆ?
ಫ್ರೆಂಡ್ಸ್ ನೀವೇ ಹೇಳಿ, ಎಷ್ಟು ದಿನ ಅಂತ ಹೀಗೆ ಸಾವಿಗೆ ತಲೆ ಒಡ್ಡುತ್ತಲೇ ಬದುಕುವುದು? ಬದುಕಲಾಗದಷ್ಟು ಈ ಸಮಾಜ ಕ್ರೂರವಾಗುತ್ತಿದೆಯಾ? ಮನುಷ್ಯ ಮನುಷ್ಯನನ್ನ ಕೊಲ್ಲುವುದೇ ಉದ್ದೇಶವಾಗಿಬಿಟ್ಟರೆ ಜೀವಿಸುವ ಹಕ್ಕಾದರೂ ಉಳಿದೀತು ಎಲ್ಲಿ?
ಇವತ್ತು ಮುಂಬೈ, ನಾಳೆ ಬೆಂಗಳೂರು, ನಾಳಿದ್ದು ಗುಜರಾತ್, ಅದರ ನಾಳೆ ಇನ್ನಾವುದೋ? ಕೊಲ್ಲುವವರು ಬಂದು ನಿರಾತಂಕವಾಗಿ ಕೊಂದು ಹೋಗುತ್ತಿದ್ದಾರೆ. ಪ್ರತಿ ಸಲ ಕೊಂದಾಗಲೂ ನಮ್ಮ ಪುಢಾರಿಗಳದ್ದು ಅದೇ ನರ ಸತ್ತ ಹೇಳಿಕೆ. 'ನಾವು ಎಂಥ ಸ್ಥಿತಿಯನ್ನೂ ಎದುರಿಸಲು ಸಿದ್ಧ' ಅನ್ನುವುದು. ಘನವೆತ್ತ ಪುಢಾರಿಗಳೇ ನಿಮಗೆ ಮನುಷ್ಯತ್ವ ಅನ್ನುವುದೇನಾದರೂ ಇದೆಯಾ? ಒಂದು ಕೋಲು ಕೊಟ್ಟು ದೇಶ ಕಾಯಿರಿ ಅಂದ್ರೆ ಹೇಗೆ ಸಾಧ್ಯ ಅಂತೇನಾದ್ರೂ ಯೋಚಿಸಿದ್ದೀರಾ? ನಿಮಗೆ ಟೆರ್ರರಿಸ್ಟ್ ಹತ್ರ ಎಂತೆಂಥ ವೆಪೆನ್ಸ್ ಇದೆ ಅಂತೇನಾದ್ರೂ ಗೊತ್ತಾ? ಇವತ್ತು ಟೆರ್ರರಿಸ್ಟ್ಗೆ ಎದೆ ಒಡ್ಡಿ ನಿಂತು ಕಾದಾಡಲು ನಮ್ಮ ಪೊಲೀಸರ ಹತ್ರ ಒಂದು ಬುಲ್ಲೆಟ್ ಪ್ರೋಫ್ ಜಾಕೆಟ್ ಇಲ್ಲ. ಆಧುನಿಕವಾದ ವೆಪೆನ್ಸ್ ಎಷ್ಟು ಜನ ಪೊಲೀಸರ ಕೈಲಿದೆ? ನಮಗಿಂತ ಆತಂಕವಾದಿಗಳು ಟೆಕ್ನಾಲಜಿಯಲ್ಲಿ ಸೌಂಡ್ ಇರಬಾರದು ಅನ್ನುವ ಸಣ್ಣದೊಂದು ತಂತ್ರ ನಿಮಗೆ ಗೊತ್ತಿಲ್ಲ ಅಂದ್ರೆ ಹೇಗೆ? ಒಂದೇ ಒಂದು ಕ್ಷಣ ಯೋಚಿಸಿ. ನೀವು ಲೂಟಿ ಮಾಡುವ ಹಣದಲ್ಲಿ ಇಂಥ ಎಷ್ಟು ಒಳ್ಳೆ ಕೆಲಸ ಮಾಡಬಹುದಿತ್ತು. ಎಷ್ಟು ಒಳ್ಳೆ ಬು.ಪ್ರೂ. ಜಾಕೆಟ್ ಕೊಡಿಸಬಹುದಿತ್ತು, ಶೂ ಕೊಡಿಸಬಹುದಿತ್ತು, ಗನ್ ಕೊಡಿಸಬಹುದಿತ್ತು. ದೇಶಕ್ಕಾಗಿ ಹುತಾತ್ಮರಾದವರ ಕುಟುಂಬಕ್ಕೆ ಎಂಥ ಕಂಫಟರ್್ ಕೊಡಬಹುದಿತ್ತು. ಅದೆಲ್ಲ ನಿಮಗೆ ಎಲ್ಲಿ ಹೊಳೆಯಬೇಕು! ನಿಮಗೆ ಮಾತ್ರ ಟೈಟ್ ಸೆಕ್ಯೂರಿಟಿ ಬೇಕು. ಜನಸಾಮಾನ್ಯರು ಸಾಯಲಿ ಅಂದ್ರೆ ಈ ದೇಶ ನಿಮ್ಮನ್ನ ಯಾವತ್ತೂ ಕ್ಷಮಿಸುವುದಿಲ್ಲ, ತಿಳಿದುಕೊಳ್ಳಿ.
ಮಗನನ್ನೋ, ಮಗಳನ್ನೋ, ಅಪ್ಪನನ್ನೋ, ಅಮ್ಮನನ್ನೋ ಕಳೆದುಕೊಂಡವರ ನೋವು ನಿಮಗೆಲ್ಲಿ ಅರ್ಥ ಆಗಬೇಕು. ಅದಕ್ಕೂ ರಾಜಕೀಯ ಬೆರೆಸುತ್ತೀರಿ. ಇತ್ತ ಮಗನ ಸಾವಿನ ದುಃಖ ಭರಿಸಲಾಗದೇ ಕುಳಿತ ಅಪ್ಪನ ಮುಂದೆ ಸಿಎಮ್ ಬಂದಾಗ ಯಾಕೆ ಬಂದೆ ಅಂತ ಕೇಳಿದ್ದೇ ತಪ್ಪಾಗಿಹೋಯಿತಾ? ಅಷ್ಟಕ್ಕು ಆತ ಬಂದದ್ದಾರೂ ಯಾಕೆ? ಮೀಡಿಯಾದವರು ತರಾಟೆಗೆ ತೆಗೆದುಕೊಂಡಿದ್ದಕ್ಕೆ ಅಲ್ಲವೇ! ಅದೂ ಒಂದು ರಾಜಕೀಯ ಗಿಮಿಕ್ಕೇ! ಅದನ್ನೆ ಆತ ನಿನ್ನ ಮನೆಗೆ ಯಾವ ನಾಯಿ ಬಂದೀತು ಅಂದ್ರೆ ಏನರ್ಥ. ಒಂದು ಜವಾಬ್ದಾರಿಯುತ ಸ್ಥಾನದಲ್ಲಿ ಕುಳಿತ ವ್ಯಕ್ತಿಯೊಬ್ಬ ಆಡುವ ಮಾತೇ ಅದು. ನೀವು ಜವಾಬ್ದಾರಿಯುತವಾಗಿ ನಡೆದುಕೊಂಡಿದ್ದರೇ ಆ ಮಾತೇ ಬರುತ್ತಿರಲಿಲ್ಲ ಅಲ್ವಾ ಸಿಎಮ್ ಸಾಹೇಬರೇ! ಒಬ್ಬ ಬೆಳೆದ ಮಗನನ್ನು ಕಳೆದುಕೊಂಡ ದುಃಖ ಒಮ್ಮೆ ಭರಿಸಿ ನೋಡಿ ಗೊತ್ತಾಗುತ್ತೆ. ಆ ಸಂಕಟ ಎಂಥದು ಅಂತ. ದೇಶ ಕಾಯಿರಿ ಅಂತ ಹೇಳುತ್ತೀರಿಯೇ ಹೊರತು ಹಾಗೆ ಕಾಯುವಾಗ ಎದುರಾಳಿಗಳ ದಾಳಿಗೆ ಸಿಕ್ಕು ಸತ್ತರೇ ಅವರ ಕುಟುಂಬಕ್ಕೆ ಆಸರೆಯಾಗಿ ನಿಲ್ಲುವವರಾರು? ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡ ಆ ಸಂಸಾರಕ್ಕೆ ಯಾರು ದಿಕ್ಕು? ನಿಮಗೇನು ನಿಮ್ಮ ಮಕ್ಕಳನ್ನು ಆಕ್ಸ್ಫಡರ್್ನಲ್ಲೇ ಓದಿಸುತ್ತೀರಿ, ಅವರಿಗೆ ಬೇಕಾದ ಸೆಕ್ಯೂರಿಟಿ ಕೊಡಿಸುತ್ತೀರಿ. ನಿಮಗೇನು ಧಾಡಿ? ಇರುವ ಎನ್ಎಸ್ಜಿ ಪಡೆ ನಿಮ್ಮಂತ ದುರುಳರನ್ನು ಕಾಯುವುದಕ್ಕೆ ಬಳಕೆಯಾಗುತ್ತಿದೆಯಲ್ಲ ಅದಕ್ಕಿಂತ ದುದರ್ೈವದ ಸಂಗತಿ ಈ ದೇಶಕ್ಕೆ ಬೇರೇನಿದೆ! ಅವತ್ತು ಅಂತದ್ದೊಂದು ಪಡೆ ಇಲ್ಲದಿದ್ದರೇ ದೇಶದ ಗೌರವವಾದರೂ ಎಲ್ಲಿರುತ್ತಿತ್ತು ಬಲ್ಲಿರಾ? ನಿಮ್ಮ ಆತ್ಮಸಾಕ್ಷಿಯಾಗಿ ಹೇಳಿ, ನೀವು ಮಾಡುವ ಕೆಲಸ ನಿಮ್ಗೆ ತೃಪ್ತಿ ತಂದಿದೆಯಾ? ಈ ದೇಶಕ್ಕೋಸ್ಕರ ಏನಾದ್ರೂ ಒಳ್ಳೇದು ಮಾಡಿದ್ದೀರಾ? ನಮ್ಮ ಹಣವನ್ನ ಲೂಟಿ ಹೊಡೆಯುತ್ತೀರಿ. ಮೆರೆಯುತ್ತೀರಿ, ನಾವೇನು ನಿಮ್ಮನ್ನು ನಿಮ್ಮನ್ನ ಉದ್ಧಾರ ಮಾಡಿಕೊಳ್ಳಲಿಕ್ಕೆ ಅಂತ ಆರಿಸಿ ಕಳಿಸಿದ್ದೀವಾ?
ಯಾವುದಕ್ಕೆ ರಾಜಕೀಯ ಮಾಡಬೇಕು, ಯಾವುದಕ್ಕೆ ಮಾಡಬಾರದು ಅನ್ನುವ ಪರಿಜ್ಞಾನ ಇಲ್ಲದವರೇ ಇವತ್ತು ನಮ್ಮನ್ನಾಳುತ್ತಿರುವಾಗ ಟೆರ್ರರಿಸ್ಟ್ಗಳಿಗೆ ಅದಕ್ಕಿಂತ ಇನ್ನೇನು ಬೇಕು. ನಿಜಕ್ಕೂ ನಮಗೆ ಆತಂಕವಿರುವುದು ಟೆರ್ರರಿಸ್ಟ್ಗಳಿಂದಲ್ಲ ನಮ್ಮ ಪುಢಾರಿಗಳಿಂದಲೇ! ಟೆರ್ರರಿಸ್ಟ್ಗಳಿಗೆ ಜನರನ್ನು ಕೊಲ್ಲುವುದು ಈಸಿ ಅನಿಸಿಬಿಟ್ಟಿದೆ. ಕೊಂದ ಮೇಲೆ ಎಸ್ಕೇಪ್ ಆಗುವುದು ಅವರಿಗೆ ಕರಗತ. ಅಥವಾ ಅರೆಸ್ಟ್ ಆದರೂ ಇನ್ನೊಂದು ಅಟ್ಯಾಕ್ ಮಾಡಿ ಇವರನ್ನು ಬಿಡಿಸಿಕೊಂಡು ಹೋಗಲು ಅವರ ಪಡೆ ಸನ್ನದ್ಧವಾಗಿದೆ. ಅಂದ್ರೆ ನಮ್ಮನ್ನಾಳುವವರು ರೂಪಿಸುವ ಕಾನೂನುಗಳಿಗೆ, ನಾಟಕಗಳಿಗೆ ಅವರು ಕ್ಯಾರೆ ಅಂತ ಕೂಡ ಅನ್ನುತ್ತಿಲ್ಲ.
ಅಲ್ಲರೀ ಟೆರ್ರರಿಸ್ಟ್ ಯಾವನೇ ಆಗಿರಲಿ ಅವನು ಮನುಕುಲದ ವಿರೋಧಿ. ಅಂತಹವನನ್ನು ಹಿಡಿದು ತಂದು ಎನ್ಕ್ವೈರಿ ಮಾಡುವುದಾದರೂ ಎಂಥದು? ವರ್ಷಗಟ್ಟಲೆ ಅವನನ್ನ ಇಟ್ಟುಕೊಂಡು ವಿಚಾರಿಸಲು ಅವನಲ್ಲಿ ಏನು ಉಳಿದಿದೆ? ತಪ್ಪು ಮಾಡಿರುವುದು ಸಾಬೀತಾಗಿದೆ. ಹಿಡಿದು ಎಲ್ಲರೆದುರೇ ನೇತುಹಾಕಿ.ಅವರು ನಮ್ಮ ಇನ್ನೂರು ಜನ ಸೋದರ ಸೋದರಿಯರನ್ನು ಕೊಲ್ಲುತ್ತಾರೆ ಹೌದಾ? ಹಾಗಾದ್ರೆ ನಮಗೆ ಅವರು ಎಂಟತ್ತು ಮಂದಿಯನ್ನು ಕೊಲ್ಲಲ್ಲು ಹಾಗುವುದಿಲ್ಲ ಅಂದ್ರೆ ಹೇಗೇ? ಹಾಗಂತ ಕೊಲೆಗೆ ಕೊಲೆಯೇ ಪರಿಹಾರವಲ್ಲ ಒಪ್ಪಿಕೊಳ್ಳೋಣ. ಆದ್ರೆ ಕೊಲ್ಲುವವರನ್ನ ಹೀಗೆ ರಾಜಕೀಯದವರು ಪೋಷಿಸುತ್ತಾ ಬಂದ್ರೆ ದೇಶ ಸುಭದ್ರವಾಗಿರಲು ಎಲ್ಲಿ ಸಾಧ್ಯ?
ಗೇಟ್ವೇ ಆಫ್ ಇಂಡಿಯಾ ಮುಂದೆ ಮಡುವುಗಟ್ಟಿದ ದುಃಖದ ನಡುವೆಯೇ ಒಬ್ಬ ತನ್ನ ಫ್ಲಕಾಡರ್್ನಲ್ಲಿ ಹೀಗೆ ಬರೆದಿದ್ದ. ನಮ್ಮ ಮನೆಗೆ ಒಬ್ಬ ಪೊಲಿಟಿಷಿಯನ್ ಬರೋದಕ್ಕಿಂತ ಒಂದು ನಾಯಿ ಬಂದ್ರೆ ಒಳ್ಳೇದು ಅಂತ. ಇದರರ್ಥವಾದರೇ ಚೆನ್ನ.
ನಿಜಕ್ಕು ಈ ದೇಶದ ಜನಸಾಮಾನ್ಯ ರೋಸತ್ತುಹೋಗಿದ್ದಾನೆ. ಒಂದು ದೇಶದ ಪ್ರಜೆಗೆ ನೆಮ್ಮದಿಯಾಗಿ ಬದುಕುವಂತಹ ವಾತಾವರಣ ಕಲ್ಪಿಸಿಕೊಡದಿದ್ರೆ ಆ ದೇಶದ ಪುಢಾರಿಗಳೇನು ಕತ್ತೆಕಾಯಲಿಕ್ಕೆ ಇದ್ದಾರಾ?
ಜನರ ತಾಳ್ಮೆಯನ್ನ ಮತ್ತೆ ಮತ್ತೆ ಪರೀಕ್ಷಿಸಲು ಹೋಗಬೇಡಿ. ಜಗತ್ತಿನಲ್ಲಿ ಎಲ್ಲದಕ್ಕೂ ಒಂದು ಫುಲ್ಸ್ಟಾಪ್ ಇದೆ. ಅದು ನಿಮಗೂ ಅನ್ವಯಿಸುತ್ತೆ.
ಮೈಂಡ್ ಇಟ್.