Friday, May 10, 2019


ಬೇಸಿಕಲಿ ನಾನೊಬ್ಬ ಬರಹಗಾರ. ಹಲ್ಲುಮುಡಿ ಕಚ್ಚಿ ಕುಳಿತರೆ ಭರಪೂರ ಬರೆದುಬಿಡಬಲ್ಲೆ.ಅಂಥದ್ದೊಂದು ಆತ್ಮವಿಶ್ವಾಸ ನನ್ನಲ್ಲಿದೆ. ಹತ್ತು ವರ್ಷ ಎಲೆಕ್ರ್ಟಾನಿಕ್ ಮೀಡಿಯಾದಲ್ಲಿ ಕೆಲಸ ಮಾಡುವಾಗ ಬರಹ ನನ್ನನ್ನ ಇನ್ನಿಲ್ಲದೆ ಕಾಡಿತ್ತು.ಅಲ್ಲೇನಾದ್ರೂ ಸಮ್ ಥಿಂಗ್ ಮಾಡಲೇಬೇಕು ಅಂತಲೇ ನಾನು ಹೋದವನು. ಅಲ್ಲಿನ ರಾಜಕೀಯ ಮತ್ತು ಕೆಲಸದ ಒತ್ತಡ ನನ್ನನ್ನ ಕಟ್ಟಿಹಾಕತ್ತು.ನನ್ನೊಳಗಿನ ಬರಹಗಾರನನ್ನ ಉಸಿರುಗಟ್ಟಿಸಿತ್ತು. ಎಷ್ಟೋ ಸಲ ಥೋ ಇದೆಂಥ ಕೆಲಸ. ಬಿಟ್ಟು ಹೋಗೋಣ ಅಂತ ಬಾಗಿಲು ತನಕ ಬಂದು ಒಳಗೋಗಿದ್ದೆ.ಕಾರಣ ಒಂದಿಷ್ಟು ಕಮಿಟ್ ಮೆಂಟ್. ಫೈನಲಿ ಐಯಾಮ್ ಫ್ರೀ ಟು ರೈಟ್ ಅಂಡ್ ರೀಡ್. ಬರೋಬ್ಬರಿ ಹತ್ತು ವರ್ಷ ಹಸಿದಿದ್ದ ಕಣ್ಣಿಗೆ ಪುಸ್ತಕ ಓದುವ ಪುಳಕ. ಬೆರಳ ತುದಿಗೆ‌ ಮತ್ತೆ ಬರಹದ ಪಸೆ.ಇದಕ್ಕಿಂತ ಖುಷಿ ಇನ್ನೇನಿದೆ. ಇನ್ನೊಂದು ಖುಷಿ ನಾನೀಗ ಓ ಮನಸೇ ಸಂಪಾದಕ. ಎಂದಿನಂತೆ ನಿಮ್ಮ ಪ್ರೀತಿ ಇರಲಿ.

ಎಷ್ಟು ಕಾಲ ಆಯ್ತಲ್ಲಾ ನದಿಗಿಳಿದು? ಅಲ್ಮೋಸ್ಟ್ ಹತ್ತು ವರ್ಷಗಳೇ ಕಳೆದುಹೋದವು. ಈ ಅವಧಿಯಲ್ಲಿ ಎಷ್ಟು ಮಳೆ ಬಂದಿಲ್ಲ. ಎಷ್ಟು ನೀರು ಹರಿದಿಲ್ಲ. ನಾನು ನಿಜ್ಜ ಕಳೆದುಹೋಗಿದ್ದೆ. ಇವತ್ತು ಇದ್ದಕ್ಕಿದ್ದಂತೆ ಯಾಕೋ ನನ್ನ ನದಿ ಕೈ ಹಿಡಿದು ಎಳೆಯಿತು. ಇಳಿದಿದ್ದೇನೆ. ಇನ್ನು ನದಿ ನಿರಂತರ.