Tuesday, July 29, 2008

ಪ್ರೇಮ ನಿವೇದನೆಗೊಂದು ಪಲ್ಲವಿ


ಮೆಲ್ಲ ಮೆಲ್ಲ ಮೆಲ್ಲುವ

ಸನ್ನೆಯಲ್ಲೆ ಕೊಲ್ಲುವ

ಸದ್ದೆ ಇರದ ಉತ್ಸವ

ಪ್ರೀತಿಯೊಂದೇ ಅಲ್ಲವಾ...

ಆಹಾ ಆಹಾ! ಎಂಥ ಸಾಲುಗಳು. ಅದ್ಯಾವ ಗಳಿಗೆಯಲ್ಲಿ ಕವಿ ಈ ಹಾಡು ಬರೆದನೋ, ಅದ್ಯಾವ ಗಳಿಗೆಯಲ್ಲಿ ನಾನು ಶ್ರದ್ಧೆಯಿಂದ ಕೇಳಿಸಿಕೊಂಡೆನೋ ಅವಾಗಿನಿಂದ ಅದರದೇ ಹುಚ್ಚು ಹಿಡಿದಿದೆ. ಹಾಡೊಂದು ಗುಂಗು ಹಿಡಿಸುತ್ತೇ ಅಂತಾರಲ್ಲ ಅದು ಇದೇ ಇರಬೇಕು. ಟೀವಿ ಹಾಕಿದ್ರೆ, ಕಾರ್ ಹತ್ತಿದ್ರೆ, ಎಫ್ ಎಂ ಹಾಕಿದ್ರೆ, ಹೊರಗೋದ್ರೆ ದೇವರೇ ಆ ಹಾಡು ಒಮ್ಮೆ ಕಿವಿಗೆ ಬೀಳಲೀ ಅಂತ ಮನಸ್ಸು ಕಾತರಿಸುತ್ತೆ. ಅಷ್ಟು ಇಂಪು. ಮುಂಗಾರು ಮಳೆಯ ಅನಿಸುತಿದೆ ಯಾಕೋ ಇಂದು ಕೂಡ ಕೆಲ ಕಾಲ ಹೀಗೆ ಗುಂಗು ಹಿಡಿಸಿತ್ತು. ಆಮೇಲೆ ಸೌಂದರ್ಯ ಚಿತ್ರದ ಹೃದಯದ ಮಾತು ಕೇಳು ಕೇಳು ನನ್ನ ಒಲವೇ ಅನ್ನುವುದು ಇನ್ನಿಲ್ಲದೇ ಕಾಡಿತು. ಈಗ ನಿನ್ನ ನೋಡಲೆಂತೋ ... ಮಾತನಾಡಲೆಂತೋ... ಅನ್ನುವ ಪ್ರೇಮ ನಿವೇದನೆ.

ಈ ಹಾಡು ಮುಸ್ಸಂಜೆ ಮಾತು ಚಿತ್ರದ್ದು. ಟ್ಯೂನ್ ಕೂಡ ಚೆನ್ನಾಗಿದೆ. ಹಿತವಾಗಿದೆ ಅಂದ್ರೆ ಸರಿಹೋಗುತ್ತೇನೋ. ಬರೀ ಅಹಿತ ಗೀತೆಗಳೇ ಕಿವಿಗೆ ಬೀಳುತ್ತಿದ್ದಾಗ ರಾಮ್ ನಾರಾಯಣ್ ಗೀತೆ ರಚಿಸಿ ಶ್ರೀಧರ್ ಸಂಗೀತವಿರುವ ಇಂತಹ ಹಾಡು ಯಾಕೋ ಮನಕ್ಕೆ ಹತ್ತಿರವಾಗಿಬಿಡುತ್ತದೆ. ಭಾವ ಜೀಕುತ್ತದೆ. ಸೋನು ನಿಗಮ್ ಶ್ರೇಯ ಘೋಷಲ್ ದನಿ ಸೂಪರ್ಬ್.

ನನಗೆ ಈ ಹಾಡು ಬರೀವಾಗಲೇ ಇದು ಗ್ಯಾರಂಟಿ ಹಿಟ್ ಆಗುತ್ತೆ ಅನಿಸಿತ್ತು ಅಂತಾರೆ ರಾಮ್ ನಾರಾಯಣ್. ಅವರಿಗೊಂದು ಗುಡ್ಲಕ್ ಹೇಳೋಣ. ಹಾಗೆ ಶ್ರೀಧರ್ ಗೂ.