Thursday, November 6, 2008


ಸುಮ್ಮನೆ ಕುಳಿತವನ ಮನದ ಪಟಲದಲ್ಲಿ ಎದ್ದು ಕುಳಿತದ್ದು ಈ ಕವಿತೆ. ಆದ್ರೆ ಬರೆದು ಮುಗಿಸಿದವನಿಗೆ ಯಾಕೋ ಒಂದು ಶೀಷರ್ಿಕೆ ಕೊಡಲು ಆಗಲಿಲ್ಲ. ಕೊಡಬೇಕೆನಿಸದರೆ ನೀವೇ ಅದಕ್ಕೊಂದು ಶೀಷರ್ಿಕೆ ಕೊಟ್ಟುಬಿಡಿ.


ಬೀದಿ ಬದಿಯ ಗೂಡಂಗಡಿಯಲಿ
ಬೀಡಿಕೊಳ್ಳುವಾಗ
ಹೋದದ್ದು ನೀನಾ?
ಹಸಿರು ಲಂಗಕ್ಕೆ
ಹೂ ಮಲ್ಲಿಗೆಯ ಹೊದಿಕೆ
ಮೇಲೆ ಕನಕಾಂಬರದ ರವಿಕೆ
ಎಂಥ ಸೊಗಸಿತ್ತು ಗೊತ್ತಾ
ನಿನ್ನ ಸುತ್ತ
ಅಂಗಡಿಯವ ಕೇಳಿದ
ಅವಳು ನಿನಗೆ ಗೊತ್ತಾ?
ಮನಸು ಗೊತ್ತು ಅಂತು
ಮಾತು ಗೊತ್ತಿಲ್ಲ ಅಂತು

ಊರ ಹೊರಗಿನ
ಮಾರೀ ಗುಡಿಯ ಬಳಿ
ಇತ್ತಲ್ಲ ಬಾವಿ
ಅಲ್ಲಿಗೆ ನೀನು ಬರುವಾಗಲೆಲ್ಲ
ದಾಹ ನನ್ನಲ್ಲಿ
ನಾನು ಕಳ್ಳ ಕಳ್ಳನೇ ಬರುತ್ತಿದ್ದೆ
ನೀನು ಮೆಲ್ಲಮೆಲ್ಲನೇ ನಡೆಯುತ್ತಿದ್ದೆ

ನಿನಗೋ ಆಗಾಗ
ಕೋಪ
ಹುಸಿ ಮುನಿಸು
ತುಂಟ ಸೆರಗಿನ ಮೇಲೆ
ಅದರದ್ದು ಜಾರುವ ಜಾಯಮಾನ
ನಿನಗೋ ಜಾರಿಬಿದ್ದೇನೆಂಬ ಅನುಮಾನ

ನನಗೆ ನಿನ್ನ ಗೆಲ್ಲುವ ಬಯಕೆ
ನಿನಗೋ ಸೋತೇನೆಂಬ ಹೆದರಿಕೆ

ನಡುವೆ ನನ್ನ
ಎದೆಯ ಗೂಡಿನ ಗೋಡೆಗೆ ಹೊರಗಿ
ಕುಳಿತಿದ್ದ ಪ್ರೀತಿ
ಫಕ್ಕನೆದ್ದು ಕುಳಿತು ಹಾಡಿತು
ಒಳಗೊಳಗೇ
ಜೀಕಿತು
ಅವಳೆಂದ್ರೆ ನಿನಗೆ ಇಷ್ಟಾನಾ?

ಅವತ್ತು ಬಿಡು
ನನ್ನ ಮನದ ತುಂಬಾ
ಬಿಸಿಲಮಳೆ
ಕಣ್ತುಂಬಾ
ಕಾಮನ ಬಿಲ್ಲು

ನಾನು ಸೋಲದ
ರಾಜಕುಮಾರನಂತಿದ್ದವ
ಅಂಥವನನ್ನೂ ಕಣ್ಣ ಇಷಾರೆಯಲ್ಲಿ
ಸೋಲಿಸಿದ
ಯಶೋಧರೆ ನೀನು

ಹೀಗಿರುವಾಗ
ಅಂದು ನೀನು
ಸಿಕ್ಕೆ, ನಕ್ಕೆ
ಬಂದ ಮಾತಿಗೂ ಬೀಗ ಹಾಕಿದೆ
ಮಾತಾಡಲು ಮಾತಿರಲಿಲ್ಲವಾ?
ಗೊತ್ತಿಲ್ಲ!

ಪ್ರೀತಿಯೆಂದ್ರೆ
ಗಾಳಿಮಾತಲ್ಲ ಬಿಡು
ಮನದ ಮಾತು

ಅವತ್ತು ಭಾನುವಾರ
ಊರ ಕೆರೆ ಬಳಿಯ
ಕಡುಗಪ್ಪು ಕಲ್ಲಿನ ಮೇಲೆ
ಕುಳಿತಿದ್ಯಲ್ಲ ನೀನು
ಪಕ್ಕದಲ್ಲೇ
ನಿನ್ನ ಎದೆಗಾನಿಸಿಕೊಂಡಿದ್ದನಲ್ಲ
ಅವನು

ಅವತ್ತೇ ಕೊನೆ

ಅಂದಿನಿಂದ ನನಗೆ ಹುಷಾರಿಲ್ಲ
ಉಸಿರೂ ಇಲ್ಲ

ಕಾಲ ಬುಡದಲ್ಲೆ
ಪ್ರೀತಿ ಸತ್ತು ಮಲಗಿದೆ
ಎಬ್ಬಿಸಬೇಕಾದ ನೀನೇ
ಎದ್ದುಹೋದೆ

ಇನ್ನೆಲ್ಲಿಯ ಬದುಕು?

2 comments:

Anonymous said...

Adbhutavaagide ree!!!

Aaa goodangadi hatra nimma hinde nitntu nimma tadakaata, taakalaatagalanna nodidhangide!!

Superb!!!

Sowmya

paapu paapa said...

hi kumaar.....
sheershike

manasinangadige bandu hoda hudugi