Sunday, January 18, 2009

ಸ್ಲಮ್ ಹುಡುಗನೊಬ್ಬ ಮಿಲಿಯನೇರ್ ಆಗ್ತಾನಂದ್ರೆ!




ಸ್ಲಮ್ ಬಗ್ಗೆ ಬಾಲಿವುಡ್ನಲ್ಲಿ ಎಷ್ಟು ಫಿಲ್ಮ್ಸ್ ಬಂದಿಲ್ಲ. ಬಂದವೆಲ್ಲವೂ ಹೆಚ್ಚ ಕಡಿಮೆ ಅಂಡರ್ವಲ್ಡರ್್ಗೆ ಸಂಬಂಧಪಟ್ಟವೆ. ಅಲ್ಲಿ ಗನ್ ಮಾತಾಡುತ್ತವೆ. ಮನುಷ್ಯನ ಪ್ರೀತಿ ಅನ್ನೋದು ಮರೀಚಿಕೆಯಾಗುತ್ತದೆ. ಮುಂಬೈ ಜಗತ್ತಿನ ಖದರೇ ಅಂಥದು ಬಿಡಿ. ಅದರ ಒಡಲಾಳದಲ್ಲಿ ಅದೆಷ್ಟು ರಕ್ತ ಚೆಲ್ಲಿಲ್ಲ. ಎಷ್ಟು ಜನ ಡಾನ್ಗಳು ಅವಳ ಎದೆಯ ಕದಕ್ಕೆ ತಲೆ ಆನಿಸಿ ಸತ್ತಿಲ್ಲ. ಮುಂಬೈ ಆಳಬೇಕು ಅಂಥ ಬಂದವರೆಲ್ಲ ಅದರ ಒಡಲಲ್ಲೇ ಬೀದಿ ನಾಯಿಗಿಂತ ಕಡೆಯಾಗಿ ಸತ್ತುಹೋಗಿದ್ದಾರೆ. ಆದರೂ ಮುಂಬೈ ಯಾವಾಗಲೂ ಎಂದಿಗೂ ಜಗತ್ತಿನ ಪಾಲಿಗೆ ಒಂದು ವಿಚಿತ್ರ ಕನಲಿಕೆಯೇ! ಅಲ್ಲಿನ ಸ್ಲಮ್ ಬದುಕಿದೆಯಲ್ಲ ಅದು ಜಗತ್ತಿನ ಇತರೆ ಸ್ಲಮ್ಗಳಿಗಿಂತ ವಿಚಿತ್ರ.
ಸ್ಲಮ್ಡಾಗ್ ಮಿಲಿಯನೇರ್ ಅಂತ ಒಂದು ಚಿತ್ರ ಬಂದಿದೆ. ಈ ಚಿತ್ರದ ಕಥೆ ಕೂಡ ಬಿಚ್ಚಿಕೊಳ್ಳುವುದು ಅದೇ ಸ್ಲಮ್ನಲ್ಲೆ. ಆದ್ರೆ ಇಲ್ಲಿ ಗನ್ ಮಾತಾಡುವುದಕ್ಕಿಂತ ಮನುಷ್ಯತ್ವದ ಇನ್ನೊಂದು ಮಗ್ಗಲು ಮಾತಾಡುತ್ತಾ ಹೋಗುತ್ತದೆ. ಬದುಕು ಅನ್ನುವುದು ಸ್ಲಮ್ಮಿನ ಆಸುಪಾಸಿನಲ್ಲೆ ಚಾಚಿಕೊಂಡು ಮಲಗಿದ್ದಾಗ ಜಮಾಲ್ ಅನ್ನೋ ಹುಡುಗ ಕೌನ್ ಬನೇಗಾ ಕರೊಡ್ಪತಿಯಲ್ಲಿ ಭಾಗವಹಿಸಿ ಇದ್ದಕ್ಕಿದ್ದಂತೆ ಮಿಲಿಯನೇರ್ ಆಗಿಬಿಟ್ಟರೆ? ಆದ್ರೆ ಇನ್ನೊಂದೇ ಒಂದು ಕ್ವಶ್ಚನ್ ಬಾಕಿ ಇದೆ ಅನ್ನಿಸಿದಾಗ ಶೋ ಹೋಸ್ಟ್ ಮಾಡುತ್ತಿದ್ದ ಪ್ರೇಮ್ ಕುಮಾರ್(ಅನಿಲ್ಕಪೂರ್) ಗೆ ಇವನು ಚೀಟ್ ಮಾಡುತ್ತಿದ್ದಾನೆ ಅನ್ನಿಸಿಬಿಡುತ್ತದೆ. ಕೇವಲ ಸ್ಲಮ್ ಹುಡುಗನೊಬ್ಬ ಈ ಪರಿ ಎಲ್ಲಾ ಪ್ರಶ್ನೆಗಳಿಗೂ ಸರಿ ಉತ್ತರ ಕೊಡೋದು ಅಂದ್ರೆ ಹೇಗೆ ಸಾಧ್ಯ? ಆದ್ರೆ ಜಮಾಲ್ನ ಬದುಕು ಅಂತದ್ದೊಂದು ಅನುಭವವನ್ನ ಅವನಿಗೆ ಕಟ್ಟಿಕೊಟ್ಟಿರುತ್ತದೆ. ಇನ್ಸ್ಪೆಕ್ಟರ್ ಮಾಡುವ ಇಂಟರಾಗೇಷನ್ನಲ್ಲಿ ಜಮಾಲ್ ಅವನ ಬದುಕಿನ ಒಂದೊಂದೂ ಘಟನೆ ಹೇಗೆ ತಾನು ಹೇಳುವ ಪ್ರಶ್ನೆಗಳಿಗೆ ಸಾಥ್ ಕೊಟ್ಟವು ಅನ್ನುವುದನನ್ನು ಮನವರಿಕೆ ಮಾಡಿಕೊಡುತ್ತಾನೆ. ಕೊನೆಗೆ ಹುಡುಗ ಕೊನೆ ಪ್ರಶ್ನೆಗೆ ಉತ್ತರ ಹೇಳಲು ಹೋಗಿ ಕುಳಿತುಕೊಳ್ಳುತ್ತಾನೆ ಮತ್ತು ಆ ಪ್ರಶ್ನೆಗೆ ಉತ್ತರ ಹೇಳಿ ಮಿಲಿಯನೇರ್ ಆಗಿಬಿಡುತ್ತಾನೆ. ಇಡೀ ಮುಂಬೈ ಅವತ್ತು ಟಿವಿ ಮುಂದೆ ಕುಳಿತು ಈ ಜಮಾಲ್ನ ಚಮತ್ಕಾರವನ್ನ ನೋಡಿಬಿಡುತ್ತದೆ. ಸ್ಲಮ್ಮಿನ ಪಡ್ಡೆ ಹುಡುಗನೊಬ್ಬ ಮಿಲಿಯನೇರ್ ಆಗಿಬಿಡುವುದೆಂದ್ರೆ ಹೇಗೆ? ಅನ್ನುವುದೇ ಚಿತ್ರದ ತಿರುಳು.
ಚಿತ್ರ ನಿಂತಿರುವುದೇ ಸ್ಕ್ರೀನ್ಪ್ಲೇ ಮೇಲೆ. ಒಂದೇ ಒಂದು ದೃಶ್ಯ ವೇಸ್ಟ್ ಅನ್ನದಹಾಗೆ ಸೈಮನ್ ಚಿತ್ರಕತೆ ರಚಿಸಿದ್ದಾರೆ. ಸಲಿಮ್, ಜಮಾಲ್ ಮಲಿಕ್ ಮತ್ತ ಲತಿಕಾ ಮೂರು ಮೇನ್ ಪಾತ್ರಗಳು. ಮಾಮನ್ ಅನ್ನೋ ಪಾತ್ರ ಮೊದಲಿಗೆ ನೋಡಿದ್ರೆ ತುಂಬಾ ಸಾಫ್ಟ್ ಅನಿಸುತ್ತದೆ. ಮಕ್ಕಳಿಗೆ ಒಂದು ಬದುಕು ಕೊಟ್ಟನಲ್ಲ ಅನಿಸುತ್ತದೆ. ಆದ್ರೆ ಅವನು ಎಷ್ಟು ಕ್ರೂರಿ ಅಂದ್ರೆ ಮಕ್ಕಳ ಕಣ್ಣು ಕಿತ್ತು ಅವರನ್ನು ಭಿಕ್ಷಾಟನೆಗೆ ದೂಡುತ್ತಾನೆ. ತನ್ನ ಗೆಳೆಯ ಸಲೀಮನ ಕಣ್ಣು ಕೀಳಲು ಮಾಮನ್ ಪ್ಲಾನ್ ಕಂಡು ಅವನ ಮೇಲೆಯೇ ಸೀಮೆ ಎಣ್ಣೆ ಬುಡ್ಡಿ ಎಸೆದು ಸಲೀಮ್, ಜಮಾಲ್ ಲತಿಕಾ ಮೂವರೂ ತಪ್ಪಿಸಿಕೊಳ್ಳಲು ಯತ್ನಿಸುತ್ತಾರೆ. ಸಲೀಮ್, ಜಮಾಲ್ ಟ್ರೈನ್ ಹತ್ತಿದ್ರೆ ಲತಿಕಾ ಮತ್ತೆ ಅವರ ಕೈಗೆ ಸಿಕ್ಕಿಹಾಕಿಕೊಳ್ಳುತ್ತಾಳೆ. ಆಮೇಲೆ ಗೊತ್ತಾಗುವುದು ಅವಳು ಮುಂಬೈನ ವೇಶ್ಯಾವಾಟಿಕೆಯೊಂದರಲ್ಲಿ ಡ್ಯಾನ್ಸ್ ಮಾಡುತ್ತಿದ್ದಾಳೆ ಅಂತ. ಅಲ್ಲಿಗೆ ಹೋಗುವಷ್ಟರಲ್ಲಿ ಜಮಾಲ್ ಮತ್ತು ಸಲೀಮ್ಗೆ ಹದಿಹರೆಯದ ಪ್ರಾಯ. ಮಾಮನ್ನನ್ನು ಕೊಂದು ಲತಿಕಾಳನ್ನು ಕಾಪಾಡುತ್ತಾನೆ ಸಲೀಮ್. ಆದ್ರೆ ಹಾಗೆ ಬಂದ ಸಲೀಮ್ ಒಮ್ಮೆ ಹೇಳುತ್ತಾನೆ. ನಾನು ಇಲ್ಲಿ ಬಾಸ್. ನಾನು ಹೇಳಿದ ಹಾಗೆ ನೀನು ಕೇಳಬೇಕು. ಇಲ್ಲದಿದ್ರೆ ಗೆಟ್ಔಟ್ ಅಂತ ಜಮಾಲ್ಗೆ. ಅಲ್ಲಿಂದ ಹೋದ ಜಮಾಲ್ ಕಾಲ್ ಸೆಂಟರ್ನಲ್ಲಿ ಟೀ ಮಾರುತ್ತಾನೆ. ಇತ್ತ ಸಲೀಮ್ ಜಾವೆದ್ ಅನ್ನೋ ಕ್ರೈಮ್ ಲಾಡರ್್ ಜತೆ ಕೆಲಸ ಮಾಡುತ್ತಿರುತ್ತಾನೆ. ಅಲ್ಲೇ ಜಮಾಲ್ಗೆ ಸಲೀಮ್ ಎಲ್ಲಿದ್ದಾನೆ ಅಂತ ಗೊತ್ತಾಗುವುದು.
ಜಮಾಲ್ಗೆ ಲತಿಕಾ ಅಂದ್ರೆ ಅಷ್ಟಿಷ್ಟ. ಆದ್ರೆ ಅವಳು ಸಲೀಮ್ ಜೊತೆ ಇರುತ್ತಾಳೆ. ಅವನು ಈಗ ಬೆಳೆದು ಜಾವೆದ್ ಸಾಮ್ರಾಜ್ಯದಲ್ಲಿ ದೊಡ್ಡ ದಂಧೆ ಮಾಡುತ್ತಿರುತ್ತಾನೆ. ಏನು ಮಾಡುವುದಕ್ಕೂ ಹೇಸದವ. ಹೀಗಿರುವಾಗಲೇ ಜಮಾಲನ ಪ್ರೀತಿ ಸಲೀಮ್ಗೆ ಗೊತ್ತಾಗಿ ಹೋಗುತ್ತದೆ. ಇಲ್ಲಿಂದ ನೀನು ಹೊರಟು ಹೋಗು ಅಂತ ಕಾರಿನ ಕೀ ಕೊಟ್ಟು ಕಳಿಸುತ್ತಾನೆ. ಆಗಲೇ ಜಮಾಲ್ ಅಲ್ಲಿ ಕೊನೆ ಪ್ರಶ್ನೆಗೆ ಫೋನೋ ಫ್ರೆಂಡ್ ಆಪ್ಷನ್ ಬಳಸಲು ಕೇಳಿಕೊಳ್ಳುವುದು. ಫೋನ್ ಮಾಡಿದರೆ ಆ ಪೋನ್ ಲತಿಕಾ ಹತ್ತಿರ ಇರುತ್ತದೆ. ಟೀವಿ ನೋಡುತ್ತಿದ್ದ ಲತಿಕಾ ಕೂಡಲೇ ಕಾರಲ್ಲಿದ್ದ ಫೋನ್ ತೆಗೆದುಕೊಳ್ಳುತ್ತಾಳೆ. ಅವಳಿಗೋ ಫುಲ್ ಎಕ್ಸೈಟ್ಮೆಂಟು. ಅವನು ಸಿಕ್ಕಿದನಲ್ಲ ಅನ್ನುವ ಖುಷಿಯಲ್ಲೆ ನನಗೆ ಆನ್ಸರ್ ಗೊತ್ತಿಲ್ಲ ಅಂದುಬಿಡುತ್ತಾಳೆ. ಅಷ್ಟರಲ್ಲಾಗಲೇ ಜಾವೆದ್ಗೆ ನಿಜ ಏನು ಅಂತ ಗೊತ್ತಾಗಿ ಸಲೀಮ್ ಮೇಲೆ ಅಟ್ಯಾಕ್ ಮಾಡುತ್ತಾರೆ. ಆದ್ರೆ ಸಲೀಮ್ ಅವರನ್ನು ಕೊಂದು ತಾನೂ ಕೊಂದುಕೊಳ್ಳುತ್ತಾನೆ. ಅವನು ಸತ್ತ ಬಾತ್ ಟಬ್ನ ತುಂಬ ಹಣದ ರಾಶಿ ರಾಶಿ.
ಕೊನೆಗೆ ಜಮಾಲ್ ಮತ್ತು ಲತಿಕಾ ಒಂದಾಗುತ್ತಾರೆ.
ಸ್ಲಮ್ ಡಾಗ್ ಸ್ಟೋರಿ ಅನುಪ್ ಸ್ವರೂಪ್ ಅವರ ಕಾದಂಬರಿ ಕಿ & ಂ ನಿಂದ ಪ್ರೇರಿತವಾಗಿದ್ದು. ನಿದರ್ೇಶಕ ಡ್ಯಾನಿ ಬಾಯ್ಲ್. ರಚನೆ ಸೈಮನ್ ಬೀಫಾಯ್ ಅವರದ್ದು. ಎ ಆರ್ ರೆಹಮಾನ್ ಸಂಗೀತ ನೀಡಿದ್ದಾರೆ. ನಾಲ್ಕು ವಿಭಾಗಗಳಲ್ಲಿ -Best director, picture, screenplay and score-ಸ್ಲಮ್ಡಾಗ್ ಗೋಲ್ಡನ್ ಅವಾಡರ್್ ಬಾಚಿಕೊಂಡಿದೆ. ಹದಿನೈದು ಮಿಲಿಯನ್ ವೆಚ್ಚದಲ್ಲಿ ನಿಮರ್ಾಣಗೊಂಡಿರುವ ಈ ಚಿತ್ರದಲ್ಲಿ ಪಾತ್ರಗಳು ಮುಖ್ಯವಾಗುತ್ತವೆಯೇ ಹೊರತು ಅಲ್ಲಿ ನಟಿಸಿರುವವರಲ್ಲ. ಹಾಗಾಗೆ ಚಿತ್ರ ಗೆಲ್ಲುತ್ತದೆ. ಸ್ಲಮ್ ಮಕ್ಕಳ ಮನೋಲೋಕವನ್ನು ಡ್ಯಾನಿ ಬ್ಲಾಯ್ ಅಷ್ಟು ಮನೋಜ್ಞವಾಗಿ ಬಿಚ್ಚಿಡುತ್ತಾ ಹೋಗುತ್ತಾರೆ.
ಸಿನೆಮಾಟೋಗ್ರಫಿ ಸೂಪರ್. ರೆಹಮಾನ್ ಮ್ಯೂಸಿಕ್ ಫೆಂಟಾಸ್ಟಿಕ್. ನಿದರ್ೇಶನವಂತೂ ಎಲ್ಲೂ ಬೋರಾಗುವುದಿಲ್ಲ. ನೂರಾ ಇಪ್ಪತ್ತು ನಿಮಿಷಗಳ ಸ್ಲಮ್ ಡಾಗ್ ಈಗ ಆಸ್ಕರ್ ಅವಾಡರ್್ನ ಹೊಸ್ತಿಲಲ್ಲಿದೆ. ಈ ಬಾರಿ ಸಿಕ್ಕೇ ಸಿಗಬೇಕು ಅನ್ನುವುದು ಹಲವರ ಅಭಿಪ್ರಾಯ.
ಸಿಗಲಿ ಅನ್ನುವುದು ನಮ್ಮೆಲ್ಲರ ಆಶಯ ಕೂಡ.


ಮತ್ತೆ ಕನಸು ಕಾಣೋ ಸರದಿ
ಆಸ್ಕರ್ ಅನ್ನುವುದು ಭಾರತೀಯರ ಪಾಲಿಗೆ ಇನ್ನೂ ಗಗನ ಕುಸುಮವಾಗಿಯೇ ಉಳಿದಿದೆ. ಈ ಸಲ ಬಂದೇ ಬರುತ್ತೆ ಬಿಡಿ ಅನ್ನುವ ಆಸೆ ಇಟ್ಟುಕೊಂಡಾಗಲೆಲ್ಲ ನಿರಾಶೆ ಬಂದು ಆವರಿಸಿಕೊಂಡಿದೆ.
ಹಾಗಾದ್ರೆ ಇಂಡಿಯನ್ ಫಿಲ್ಮ್ಗಳು ಆಸ್ಕರ್ ಅವಾಡರ್್ ಪಡೆಯುವುದಕ್ಕೆ ಲಾಯಕ್ಕಿಲ್ಲವೇ? ಲಾಯಕ್ಕಿವೆ ಅಂತ ತೋರಿಸಲೆಂದೇ ಅಮೀರ್ಖಾನ್ ನಂತಹವರು, ದೀಪಾ ಮೆಹ್ತಾರಂತಹವರು, ಮೀರಾ ನಾಯರ್ ರಂತಹವರು ಪ್ರಯತ್ನ ಮಾಡುತ್ತಲೇ ಇದ್ದಾರೆ. ಈಗ ಮತ್ತೊಂದು ಕನಸು ಚಿಗುರೊಡೆದಿದೆ. ಆ ಕನಸಿನ ಹೆಸರು ಸ್ಲಮ್ಡಾಗ್ ಮಿಲಿಯನೇರ್!
ನೀವು ನಂಬಿಲಿಕ್ಕಿಲ್ಲ. ಸಿನೆಮಾ ಕ್ರೇಜ್ ಇದೆಯಲ್ಲ ಅದು ಭಾರತೀಯರಿಗಿರುವಷ್ಟು ಬೇರೆ ಯಾವ ದೇಶದವರಿಗೂ ಇಲ್ಲ. ಇಲ್ಲಿ ವರ್ಷಕ್ಕೆ ಸಾವಿರದಷ್ಟು ಫಿಲ್ಮ್ಗಳು ರಿಲೀಸ್ ಆಗುತ್ತವೆ. ಅದರಲ್ಲಿ ಆಸ್ಕರ್ಗೆ ಹೋಗುವಂತಹವು ಇಲ್ಲೇ ಇಲ್ಲ ಅನ್ನಬೇಕೇನೋ! 1957ರಲ್ಲಿ ಬಂದ ಮದರ್ ಇಂಡಿಯಾ ಮೊದಲಿಗೆ ಆಸ್ಕರ್ಗೆ ನಾಮಿನೇಟ್ ಆದಂತಹ ಚಿತ್ರ. ನಗರ್ಿಸ್ ಮತ್ತು ಸುನಿಲ್ ದತ್ ಅದ್ಭುತವಾಗಿ ಅಭಿನಯಿಸಿದ್ದರು. 1988ರಲ್ಲಿ ಮೀರಾ ನಾಯರ್ರ ಸಲಾಮ್ ಬಾಂಬೆ, 2001ರಲ್ಲಿ ಅಮೀರ್ಖಾನ್ನ ಲಗಾನ್, 2006ರಲ್ಲಿ ದೀಪಾ ಮೆಹ್ತಾರವರ ವಾಟರ್, ಮತ್ತೆ ಅಮೀರ್ ಖಾನ್ನ ರಂಗ್ದೇ ಬಸಂತಿ, ತಾರೇ ಜಮೀನ್ ಪರ್ ಆಸ್ಕರ್ಗೆ ನಾಮಿನೇಟ್ ಆದಂತಹ ಚಿತ್ರಗಳು. ಲಗಾನ್ ಭಾರೀ ನಿರೀಕ್ಷೆ ಮೂಡಿಸಿದರೂ ಕೊನೆ ಘಳಿಗೆಯಲ್ಲಿ ಪ್ರಶಸ್ತಿ ಕಣದಲ್ಲಿ ಬಿದ್ದುಹೋಯಿತು.

ಈಗ ಸ್ಲಮ್ ಡಾಗ್ಗೆ ನಾಲ್ಕು ಗೋಲ್ಡನ್ ಅವಾಡರ್್ ಬಂದಿದೆ. ಈ ಅವಾಡರ್ೂ ಭಾರತೀಯರ ಪಾಲಿಗೆ ಮೊದಮೊದಲನೆಯದು. ಚಿತ್ರವೂ ಅದ್ಭುತವಾಗಿ ಮೂಡಿ ಬಂದಿದೆ. ಸೆನ್ಸಿಬಲ್ ಸಬ್ಜೆಕ್ಟ್ ಕೂಡ. ರೆಹಮಾನ್ ಸಂಗೀತಕ್ಕೆ ಆಸ್ಕರ್ ಗ್ಯಾರಂಟಿ ಅಂತಲೇ ಬಾಲಿವುಡ್ನಲ್ಲಿ ಲೆಕ್ಕಾಚಾರ ನಡೆದಿದೆ. ಅಲ್ಲರೀ ಅಲ್ಜೀರಿಯಾ, ಬೋಸ್ನಿಯಾ, ಇರಾನ್ನಂತಹ ರಾಷ್ಟ್ರಗಳಿಗೆ ಆಸ್ಕರ್ ಸಿಕ್ಕಿದೆ ಅಂದ್ರೆ ನಾವು ಸೆನ್ಸಿಬಲ್ ಫಿಲ್ಮ್ಗಳನ್ನು ತೆಗೆಯುವುದರಲ್ಲಿ ಸೋಲುತ್ತಿದ್ದೇವೆ ಅನ್ನಿಸುತ್ತಿಲ್ಲವೇ? ರಾಜ್ ಕಪೂರ್, ದಿಲೀಪ್ ಕುಮಾರ್, ಅಮಿತಾಭ್ ಬಚ್ಚನ್, ಯಶ್ ಚೋಪ್ರಾ, ಸುಭಾಷ್ ಘಾಯ್, ಶಾರುಖ್ ಖಾನ್ ಎಂತೆಂಥಹ ನಟರಿದ್ದಾರೆ, ನಿದರ್ೇಶಕರಿದ್ದಾರೆ ನಮ್ಮಲ್ಲಿ. ಅವರಿಂದ ಒಂದೇ ಒಂದು ಆಸ್ಕರ್ ಅವಾಡರ್್ ನಮ್ಮ ಪಾಲಿಗೆ ತಂದು ಕೊಡಲಿಕ್ಕೆ ಆಗಲಿಲ್ಲ ಅಂದ್ರೆ ಏನರ್ಥ?
ಬಟ್ ಡೋಂಟ್ ವರಿ. ಈಗ ಸ್ಲಮ್ ಡಾಗ್ ಆಸ್ಕರ್ನ ಬಾಗಿಲು ಬಡಿಯುತ್ತಿದೆ. ಮತ್ತೆ ಕನಸು ಕಾಣೋ ಸರದಿ ಬಂದಿದೆ.
ಜಸ್ಟ್ ವೇಯ್ಟ್!


ಜಸ್ಟ್ ಥಿಂಕ್
ಸ್ಲಮ್ಡಾಗ್ ಮತ್ತು ದೇಶಪ್ರೇಮ ಅಂತೆಲ್ಲ ಕೆಲವರು ಮಾತಾಡುತ್ತಿದ್ದಾರೆ. ಅದು ಅವರವರ ಭಾವಕ್ಕೆ, ಪ್ರೇಮಕ್ಕೆ ಸಂಬಂಧಿಸಿದ್ದು. ಹೇಳುವುದಕ್ಕೆ ಎಲ್ಲರಿಗೂ ಸ್ವಾತಂತ್ರ್ಯವಿದೆ ಬಿಡಿ.
ಆದರೆ ರಿಯಾಲಿಟಿ ಅಂತ ಒಂದಿರುತ್ತದೆ. ನಾನಿರುವ ಸ್ಥಿತಿಯನ್ನಲ್ಲದೇ ನಾನು ಬೇರೇ ಏನನ್ನ ತೋರಿಸಲಿಕ್ಕೆ ಸಾಧ್ಯ? ಅದನ್ನು ತೋರಿಸಿದ್ರೆ ಭಾರತೀಯರಿಗೆ ಅವಮಾನ ಮಾಡಿದಿರಿ ಅನ್ನೋದು ಎಷ್ಟು ಸರಿ? ಹಾಗಂತ ಮುಂಬೈನಲ್ಲಿ ಸ್ಲಮ್ಗಳಿಲ್ಲವೇ? ಅಲ್ಲಿನ ನರಕ ಜೀವನವನ್ನು ನೋಡಿಕೊಂಡೂ ನಮ್ಮ ರಾಜಕೀಯ ನಾಯಕರು ಕಣ್ಣು ಮುಚ್ಚಿಕೊಂಡು ಕುಳಿತಿಲ್ಲವೇ? ಅವರಿಗೆ ಸ್ಲಮ್ ಅನ್ನುವುದು ಹಾಗೇ ಇರಬೇಕು. ಅಲ್ಲಿನ ಜನ ಇವರ ಹಲ್ಕಾ ಕೆಲಸಗಳಿಗೆ ಬಳಕೆಯಾಗಬೇಕು. ಅಲ್ಲಿನ ಮಕ್ಕಳು ಓದಬಾರದು. ಅಲ್ಲಿನ ಸುಂದರಿಯರು ಇವರ ಸಖ್ಯಕ್ಕೆ ಬೇಕು. ಅದಕ್ಕೆ ಅವರು ಸ್ಲಮ್ನ ಉದ್ಧಾರ ಮಾಡುವುದಿಲ್ಲ. ನಿಮಗೆ ಗೊತ್ತಿರಲಿ ಮುಂಬೈನ ಧಾರಾವಿ ಸ್ಲಮ್ ಏಷಿಯಾದಲ್ಲೇ ಅತ್ಯಂತ ದೊಡ್ಡ ಸ್ಲಮ್. ಅಲ್ಲಿ ನಡೆಯುವ ಅನೈತಿಕ ಚಟುವಟಿಕೆಗಳು ಒಂದಾ ಎರಡಾ? ಅದರಿಂದಲೇ ಆ ಸ್ಲಮ್ ಉಸಿರಾಡುತ್ತಿದೆ. ಅಂತ ಸ್ಲಮ್ನಿಂದ ಒಂದು ಹುಡುಗ ಕಾಂಪಿಟೇಷನ್ನಲ್ಲಿ ಭಾಗವಹಿಸಿ ಮಿಲಿಯನೇರ್ ಆಗೋ ಕಥೆಯಲ್ಲಿ ದೇಶಪ್ರೇಮ ಹುಡುಕಿದ್ರೆ ಏನನ್ನೋದು.
ಇವತ್ತಿನ ಫಿಲ್ಮ್ಗಳಲ್ಲಿ ಅಪಾಟಿ ಮಚ್ಚು, ಕೊಚ್ಚು, ಹೊಡೆದಾಟ, ಅಸಭ್ಯ ಮಾತುಗಳಿವೆಯಲ್ಲ, ಅದರಿಂದೆಲ್ಲ ಭಾರತದ ಘನತೆಗೆ ಕುತ್ತು ಬರೋದಿಲ್ವೆ?
ಜಸ್ಟ್ ಥಿಂಕ್.

1 comment:

Unknown said...

"ಇಡೀ ಮುಂಬೈ ಅವತ್ತು ಟಿವಿ ಮುಂದೆ ಕುಳಿತು ಈ ಜಮಾಲ್ನ ಚಮತ್ಕಾರವನ್ನ ನೋಡಿಬಿಡುತ್ತದೆ." idee mumbai alla swamy, idee desha!!