Friday, April 18, 2008

ಒಂದು ಮಜಬೂತಾದ ಕತೆ ಹಿಡಿದುಕೊಂಡು ಕುಳಿತ ...

ಯಾಕೋ ಗೊತ್ತಿಲ್ಲ ಒಂದು ಫಿಲ್ಮ್ ತೆಗೀಬೇಕು ಅನ್ನೋ ಆಸೆ ಇತ್ತೀಚೆಗೆ ಬಲವಾಗಿ ಕಾಡತೊಡಗಿದೆ. ಅದ್ಭುತವಾದೊಂದು ಕಥೆ ರೆಡಿ ಮಾಡಿಟ್ಟುಕೊಂಡಿದ್ದೇನೆ. ಅದು ಎಂಥ ಕತೆ ಎಂದ್ರೆ ಅದನ್ನು ಗೆಳೆಯನಿಗೆ ಮೊನ್ನೆ ಕೂರಿಸಿಕೊಂಡು ಹೇಳುತ್ತಾ ಹೋದೆ. ಅದನ್ನು ನಾನು ಹೇಳಿ ಮುಗಿಸೋ ಅಷ್ಟರಲ್ಲಿ ಅವನು ತುಂಬಾ ಭಾವುಕನಾಗಿದ್ದ. ಆ ಕಥೆಯ ಹಂದರವೇ ಹಾಗಿದೆ. ಸಣ್ಣ ಸಣ್ಣ ಮನುಷ್ಯ ಸಂಬಂಧಗಳನ್ನು ಕಟ್ಟಿಕೊಡುವ ಪ್ರಯತ್ನ ಅದು.
ಕಮಷರ್ಿಯಲ್ ಆಗಿ ಎಲ್ಲ ವರ್ಗದವರಿಗೂ ಇಷ್ಟವಾಗುವ ಮಜಬೂತಾದ ಕತೆ ಅದು.ನನಗೆ ಟೆಕ್ನಿಕಲ್ ಸೈಡ್ ಗೊತ್ತಿಲ್ಲದಿರಬಹುದು. ಆದ್ರೆ ಒಂದು ಫಿಲ್ಮ್ ಹೇಗಿರಬೇಕು ಅನ್ನೋದನ್ನ ಅದ್ಭುತವಾಗಿ ವéಿಷುವಲೈಸ್ ಮಾಡೋ ಅಷ್ಟು ಕಲ್ಪನೆ ನನಗಿದೆ. ಒಮ್ಮೊಮ್ಮೆ ಈ ಎಲ್ಲ ಕೆಲಸ ಬಿಟ್ಟು ಫಿಲ್ಮ್ ದಾರಿ ಹಿಡಿದುಬಿಡೋಣವೇ ಅನ್ನಿಸುತ್ತೆ. ಹಾಗಂದುಕೊಂಡ ಮರುಕ್ಷಣವೇ ಹಾಗೆಲ್ಲ ಮಾಡಿಗೀಡಿಯೇ ಮಗನೇ ಅಂತ ಮನಸ್ಸು ಕೈ ಹಿಡಿದು ಜಗ್ಗುತ್ತೆ.ಹಾಗೆ ನೋಡಿದರೆ ಈ ಫಿಲ್ಮ್ ಹುಚ್ಚು ನನಗೆ ಹೊಸದೇನಲ್ಲ. ನನ್ನ ಕಾಲೇಜಿನ ದಿನಗಳಲ್ಲಿಯೇ ನನಗೆ ಅಂಥದ್ದೊಂದು ಹುಚ್ಚು ತೀವ್ರವಾಗಿತ್ತು. ಗೆಳೆಯರೆಲ್ಲ ಸೇರಿ ಸಾರ್ ಇವನು ಫಿಲ್ಮ್ ಡೈರೆಕ್ಡ್ ಮಾಡಬೇಕಂತೆ...ಇನ್ಸ್ಟಿಟ್ಯೂಟ್ಗೆ ಸೇರಿಸಿಕೊಳ್ಳಿ ಸಾರ್ ಅಂತ ನಂಜರಾಜೇ ಅರಸ್ಗೆ ದುಂಬಾಲು ಬೀಳುತ್ತಿದ್ದರು. ಅವರು ಆಗತಾನೆ ಮೈಸೂರು ಯೂನಿವಸರ್ಿಟಿಯಲ್ಲಿ ಆರಂಭವಾಗಿದ್ದ ಫಿಲ್ಮ್ ಇನ್ಸ್ಟಿಟ್ಯೂಟ್ನ ಛೀಫ್ ಆಗಿದ್ದರು. ಅದಕ್ಕೆ ಅವರು ಎಷ್ಟು ಎಕರೆ ಜಮೀನು ಇಟ್ಟಿದ್ದೀಯಯ್ಯ ...ಮಾರಿಬಿಟ್ಟು ಬಾ ನಿನ್ನನ್ನೇ ಹೀರೋ ಮಾಡ್ತೀನಿ... ಅಂತ ರೇಗಿಸ್ತಿದ್ದರು. ಒಮ್ಮೆ ಅವರು ಒಂದು ಫಿಲ್ಮ್ ಶುರು ಮಾಡಿದ್ದು ನೆನಪಿದೆ. ಹೆಸರು ಮರೆತುಹೋಗಿದೆ. ಕುಕ್ಕರಹಳ್ಳಿ ಕೆರೆಯ ಮೇಲೆ ಕುಳಿತಿದ್ದ ನನ್ನನ್ನು ಅವರ ಮನೆಗೆ ಕರೆದುಕೊಂಡು ಹೋಗಿ ಆವರ ಫಿಲ್ಮ್ನ ಎಲ್ಲಾ ಹಾಡುಗಳನ್ನು ಕೇಳಿಸಿದ್ದರು. ಹಂಸಲೇಖ ಕಾಸ್ಟ್ಲೀ ಕಣಯ್ಯಾ ಅದಕ್ಕೆ ಬೇರೊಬ್ಬನ ಹತ್ತಿರ ಮಾಡಿಸಿದ್ದೀನಿ ಅಂದಿದ್ದರು. ನಿಜಕ್ಕೂ ಆ ಹಾಡುಗಳು ತುಂಬಾ ಚೆನ್ನಾಗಿದ್ದವು. ಅದಾದ ಮೇಲೆ ನಾನೂ ಬೆಂಗಳೂರಿನ ಸೆರಗು ಹಿಡಿದು ಬಂದುಬಿಟ್ಟೆ. ಅವರ ಆ ಫಿಲ್ಮ್ ಏನಾಯಿತೋ ಗೊತ್ತೇ ಆಗಲಿಲ್ಲ.ಬೆಂಗಳೂರಿಗೆ ಬಂದು ಪತ್ರಿಕೋದ್ಯಮದ ದಾರಿ ಹಿಡಿದ ಮೇಲೆ ಟೈಮ್ ಅನ್ನೋದು ಹುರಕ್ಕೊಂಡು ಮುಕ್ಕತೊಡಗಿತು. ಅದರ ಗುಂಗಿನಲ್ಲೇ ಮುಳುಗಿಹೋದೆ. ಈಗ ಮತ್ತೆ ಫಿಲ್ಮ್ರಂಗಕ್ಕಿಳಿಯುವ ಆಸೆ ಗರಿಕೆದರಿ ಕೂತಿದೆ.
ಆ ಕ್ಷಣ ಎಂದೋ ಯಾವತ್ತೋ . ಗೊತ್ತಿಲ್ಲ.

1 comment:

Unknown said...

esto dinadimda blogalli full khali
Evattu 2 item nodi khushi aytu. andahage nimma cinema katena kelo bhagya nanagoo ede anta andukondiddeeni

nimmava
Appenahalli thippeswamy