Wednesday, November 26, 2008

ಜರ್ನಿ ಟು ಹಂಪಿ












ಅವತ್ತು ಶುಕ್ರವಾರ. ಸಮಯ ರಾತ್ರಿ ಹತ್ತೂವರೆ.
ಹನ್ನೊಂದು ಜನರ ಪುಂಡ ಪಡೆಯನ್ನು ತುಂಬಿಕೊಂಡ ಹಂಪಿ ಎಕ್ಸ್ಪ್ರೆಸ್ ಹೊಸಪೇಟೆಯೆಡೆಗೆ ಶಿಳ್ಳೆ ಹಾಕುತ್ತಾ ಸಾಗಿತ್ತು. ನಮ್ಮ ಮೈಮನದ ತುಂಬೆಲ್ಲ ಜೋಷ್ ಜೋಷ್ ಮತ್ತು ಸಿಫರ್್ ಜೋಷ್. ಬೆನ್ನಿಗಿದ್ದ ಬ್ಯಾಗುಗಳನ್ನು ಒಗೆದು ಎಲ್ಲರಂತೆ ಬತರ್್ ಹತ್ತಿ ಮಲಗಿ ಗೊರಕೆ ಹೊಡೆಯಲಿಲ್ಲ. ರಾತ್ರಿ ಒಂದರ ತನಕ ಹರಟೆ, ಜೋಕು, ಅಂತ್ಯಾಕ್ಷರಿ ಎಲ್ಲಾ ನಿರಾತಂಕವಾಗಿ ಸಾಗಿತ್ತು. ಯಾರೋ ರಿಟೈಡರ್್ ಆಫೀಸರ್ ಒಬ್ಬರು ನಮ್ಮ ನಡುವೆ ತಗಲಿಹಾಕಿಕೊಂಡ್ರು. ತೋಳಗಳ ನಡುವೆ ಕುರಿ ತಗಲಿಬಿದ್ದಂಗಾಗಿತ್ತು ಅವರ ಸ್ಥಿತಿ. ಅವರೇನೂ ಕಡಿಮೆ ಇಲ್ಲ ಬಿಡಿ. ಮಾತು ಅಂದ್ರೆ ಸಾಕು ಸೇರಿಗೆ ಸವ್ವಾ ಸೇರು ಅಂತಾರಲ್ಲ ಅಂಥವರು. ಕೊನೆಗೆ ನಮ್ಮ ಚೀಕಲಾ, ಸರ್ ಮಲಗಿ ನೀವು. ವಯಸ್ಸಾಗಿದೆ. ಜಾಸ್ತಿ ಮಾತಾಡಿದ್ರೆ ಹೃದಯ ಬೇರೆ ನಿಮಗೆ ಇರೋದ್ರಿಂದ ತೊಂದ್ರೆ ಆದೀತು ಅಂತ ಮಲಗಿಸಿದಳು. ಅವರು ಆಗಲೂ ನೀವೆಲ್ಲ ಜರ್ನಲಿಸ್ಟ್ ಅಂದ್ರಲ್ಲ ಪಗಾರ ಜೋರೈತೇನು ಅಂದ್ರು. ಭಾಳ ಕೊಡ್ತೇವಿ ಅಂದ್ರು. ನಾವೇ ಸ್ವಲ್ಪ ಕಡಿಮೆ ಇಸಿಕೊಂತಾ ಇದೀವಿ ಅಂದ್ವಿ. ಅಷ್ಟರಲ್ಲಿ ಯಾರೋ ಪ್ರಶ್ನೆ ಹಾಕಿದ್ರು. ಸರ್ ಈ ರವಿ ಅಜ್ಜೀಪುರಗೆ ವಯಸ್ಸೆಷ್ಟು ಗೊತ್ತಾ ಅಂತ. ಅವರು ಬಹಳ ಏನಿಲ್ಲ ಬಿಡ್ರಿ ಮೂವತ್ತು ಇರಬಹುದು ಅಂದ್ರು. ಸರ್ ನನಗೆ ಅಂತ ಚುಪ್ಪಿ. ಸರ್ ನನಗೆ ಅಂತ ಸುಮಾ, ಕೋಲಾ. ಎಲ್ಲಾ ಕಿತ್ಕೊಂಡು ತಿನ್ನೋದಕ್ಕೆ ಶುರುಮಾಡಿದ್ರು. ಕೊನೆಗೆ ಸರ್ ನಿಮಗೆ ಅಂದ್ವಿ. ರಿಟೈಡರ್್ ಆಯ್ತಲ್ಲ ಅಂತ ಮುಖದ ತುಂಬಾ ಬೆಡ್ಶಿಟ್ ಎಳೆದುಕೊಂಡು ಮಲಗಿದ್ರು. ಮಲಗುವಾಗ ಲಗ್ಗೇಜ್ ಜೋಪಾನ ಅಂತ ಹೇಳೋದನ್ನ ಅವರು ಮರೆಯಲಿಲ್ಲ. ಹಾಗಂದ ನಿಮಿಷಕ್ಕೆ ಅವರದು ಒಂದು ಫುಲ್ ಗೊರಕೆ.
ಬೆಳಿಗ್ಗೆ ನಾನು ಕಣ್ಣುಬಿಟ್ಟಾಗ ಅವರು ಆಗಲೇ ಇಳಿದುಹೋಗಿದ್ರು.
ಹೊಸಪೇಟೆಯ ಶಾನುಭಾಗ ಲಾಡ್ಜ್ನಲ್ಲಿ ನಮ್ ವಾಸ್ತವ್ಯ. ಚೆನ್ನಾಗಿ ಮಿಂದು, ತಿಂದು ಹಂಪಿಕಡೆ ನಡೆದವು. ಅವತ್ತು ಶನಿವಾರ ಪೂತರ್ಿ ಹಂಪಿಯ ನೆಲದಲ್ಲಿ ನಮ್ಮ ಹೆಜ್ಜೆಗಳು ಹರಿದಾಡಿದ್ದವು. ಈ ಮೊದಲೂ ನಾನೂ ಹಂಪಿಗೆ ಎರಡುಮೂರು ಸಲ ಹೋಗಿದ್ದಿದೆ. ಪ್ರತಿ ಸಲ ಹೋದಾಗಲೂ ಅದು ಹೊಸದೇ ಅನಿಸುತ್ತೆ. ಅರೆ ಈ ಕಲ್ಲು ಇಲ್ಲಿತ್ತಾ ಅನಿಸಿಬಿಡುತ್ತೆ. ಹಂಪಿ ತುಂಬಾ ಹರಡಿಕೊಂಡಿರುವ ಕಲ್ಲುಗಳನ್ನು ನೋಡಿದ್ರೆ ಅದೆಲ್ಲ ಒಂದೊಂದು ದೇಗುಲವೇನೋ ಅನ್ನುವಂತೆ ಭಾಸವಾಗುತ್ತೆ. ಅಷ್ಟರಮಟ್ಟಿಗೆ ಹಂಪಿ ದ ಗ್ರೇಟ್ ಹೆರಿಟೇಜ್ ಸೆಂಟರ್. ಕಡಲೆಕಾಳು ಗಣಪ, ಸಾಸಿವೆಕಾಳು ಗಣಪದಿಂದ ಹಿಡಿದು, ರಾಣಿಯರ ಸ್ನಾನಗೃಹ, ಲೋಟಸ್ ಮಹಲ್, ಮಹಾನವಮಿ ದಿಬ್ಬ, ಪುಷ್ಕರಣಿ. ಅರೆಬರೆ ಅರಮನೆಗಳ ಅವಶೇಷ, ವೀಕ್ಷಣಾ ಗೋಪುರ, ಗಜಶಾಲೆ, ವಜ್ರ ವೈಢೂರ್ಯವನ್ನ ಮಾರುತ್ತಿದ್ದರೆನ್ನಲಾದ ಬೀದಿ, ಕಲ್ಲಿನ ರಥ, ಓಹ್ ಒಂದಾ ಎರಡಾ. ಹಂಪಿಯ ವೈಭವವೇ ಅಂಥದು ಬಿಡಿ. ಅದನ್ನು ಕಣ್ತುಂಬಿಕೊಳ್ಳುವ ಅನುಭವವೇ ಬೇರೆ. ಆದ್ರೆ ಅಷ್ಟು ಮೆರೆದಿದ್ದ ಒಂದು ಸಾಮ್ರಾಜ್ಯ ಹೇಗೆ ಕಾಲನ ಕಾಲಬುಡದಲ್ಲಿ ಮಂಡಿಯೂರಿಕೊಂಡು ಬಿದ್ದೋಗಿದೆ ಅಲ್ವ! ಇನ್ನು ನಾವ್ಯಾವ ಲೆಕ್ಕ!
ನಮ್ಮ ಕುಮಾರಸ್ವಾಮಿ ಮಹಾನವಮಿ ದಿಬ್ಬದ ಮೇಲೆ ರಾಜಗಾಂಭೀರ್ಯದಲ್ಲಿ ಕುಳಿತು ಯಾರಲ್ಲಿ ನರ್ತಕಿಯನ್ನು ಬರಹೇಳು ಅಂದಿದ್ದು ಅದನ್ನು ಕೇಳಿಸಿಕೊಂಡ ಚೀಕಲಾ ಅಪ್ಪಣೆ ಪ್ರಭು ಅಂದಿದ್ದು, ಮಂತ್ರಿಯಾಗಿ ರವಿರಾಜ್ ಗಲಗಲಿ ಪಕ್ಕದಲ್ಲೆ ಆಸೀನನಾಗಿದ್ದು, ಅದೆಲ್ಲಿಂದಲೋ ದಂಡೆತ್ತಿ ಬಂದ ಶೂರನಂತೆ ಶ್ಯಾಮ್ ಬಂದು ಮಹಾರಾಜರೇ ನೀವು ಬಂದ ರೂಟ್ ಸರಿಗಿಲ್ಲ ಅಂತ ಅಬ್ಬರಿಸಿದ್ದು, ್ಲ ಕಣ್ಣಿಗೆ ಇಪ್ಪತ್ತು ರೂಪಾಯಿನ ಕನ್ನಡಕ ಹಾಕಿಕೊಂಡು ಏಯ್ ಫೊಟೋ ತೆಗಿಯೇ ಚುಪ್ಪಿ ಅಂತ ಸುಮ ಅಬ್ಬರಿಸಿದ್ದು ಎಲ್ಲಾ ಸೂಪರ್. ನನಗೆ ಅಲ್ಲಿ ಸೋಜಿಗವೆನಿಸಿದ್ದು ಕೇವಲ ಬೇಸ್ಮೆಂಟ್ ಮಾತ್ರ ಉಳಿದಿರುವ ಅರಮನೆಯ ಅವಶéೇಷಗಳು. ಅದನ್ನೆಲ್ಲ ಮರದಲ್ಲಿ ಕಟ್ಟಿದ್ದರು. ಹಾಗಾಗಿ ಎಲ್ಲಾ ನಾಶವಾಗಿ ಈಗ ಕೇವಲ ಪಳೆಯುಳಿಕೆ ಮಾತ್ರ ಉಳಿದಿದೆ ಅಂದ ನಮ್ಮ ಗೈಡ್. ಈಗೈಡ್ದು ಒಂದು ಕಥೆ. ಸುಮ್ಮನೆ ಅವನು ಹೇಳಿದ್ದನ್ನೆಲ್ಲ ನಾವು ಕೇಳಿಸಿಕೊಳ್ಳಬೇಕು ಅಷ್ಟೆ. ಮಧ್ಯ ಬಾಯಿ ಹಾಕಬಾರದು. ಆದ್ರೂ ನಮ್ಮ ಗಲಗಲಿ ಬಿಡುತ್ತಿರಲಿಲ್ಲ. ಛಲ ಬಿಡದ ತ್ರಿವಕ್ರಮನಂತೆ ಅದ್ಯಾಕೆ ಹಿಂಗೆ ಇದ್ಯಾಕೆ ಹಿಂಗೆ ಅಂತ ಕೇಳುತ್ತಲೇ ಇದ್ದರು. ನಮ್ಮ ಇಡೀ ಟೀಮಿಗೆ ಹುರುಪು ತುಂಬಿದ್ದು ಸಾಧು ಮಗ. ಅವನು ಒಂದುಕ್ಷಣಕ್ಕೂ ಅತ್ತದ್ದು ನಾನು ನೋಡಿಲ್ಲ. ಮರಿ ಸೂಪರ್ಮ್ಯಾನ್ ಥರ ಎಲ್ಲೆಂದರಲ್ಲಿ ಸೊಂಯ್ ಟಪಕ್ ಅಂತ ನುಗ್ಗುತ್ತಲೇ ಇದ್ದ.
ಹಂಪಿಗೆ ಎಂಟ್ರಿ ಆದ ಕೂಡಲೇ ಒಂದಷ್ಟು ಸ್ವಾಮೀಜಿಗಳು ಎದುರಿಗೆ ಸಿಕ್ಕರು. ಅವರು ನಿಜಕ್ಕೂ ಸ್ವಾಮೀಜಿಗಳಾ ಅಂತ ನೋಡಿದ್ರೆ ಜಸ್ಟ್ ವೇಷದಾರಿಗಳು ಅಷ್ಟೆ. ವಿದೇಶಿಯರನ್ನ ನೋಡಿದ ತಕ್ಷಣ ಆಶೀವರ್ಾದ ಮಾಡುವ ಭಂಗಿಯಲ್ಲಿ ಸಾಲಾಗಿ ನಿಂತುಕೊಂಡುಬಿಡೋರು. ವಿದೇಶಿಯರಿಗೂ ಇವರು ನಮ್ಮನ್ನ ಬಕ್ರ ಮಾಡುತ್ತಾರೆ ಅಂತ ಗೊತ್ತಾಗಿದೆಯಾದ್ದರಿಂದ ಅವರು ಕ್ಯಾರೆ ಅಂತ ಕೂಡ ನೋಡುತ್ತಿರಲಿಲ್ಲ. ನಾನು ಸುಮಾ ಚುಪ್ಪಿ ಒಟ್ಟಿಗೆ ಹೋಗುತ್ತಿದ್ದದ್ದನ್ನು ನೋಡಿ ಒಬ್ಬಾಕೆ ಸರ್ರ ಬಾಳೆ ಹಣ್ಣು ತಗೋರಿ. ಆನೆಗೆ ಹಾಕಿ ಅಂದಳು. ನಮ್ಮಲ್ಲೇ ಎರಡು ಆನೆಗಳಿವೆ ಬೇಡ ಅಂದೆ ನಾನು. ಕೊನೆಗೆ ಒಂದು ಲಿಂಬು ಸೋಡಾ ಕುಡಿದು ಜಾಗ ಖಾಲಿ ಮಾಡಿದ್ವಿ. ಚೌಕಾಸಿ ಮಾಡಿ ಬ್ಯಾಗ್ ತೊಗೊಂಡ್ವಿ. ಆ ದಟ್ಟ ಬಣ್ಣದ ಬ್ಯಾಗಿನ ಮೇಲೆಲ್ಲ ಪುಟ್ಟ ಪುಟ್ಟ ಕನ್ನಡಿಗಳ ಮಿಣುಕು.
ಅವತ್ತು ರಾತ್ರಿ ಕುಮಾರ ಕಂಠೀರವ ಮತ್ತು ನಮ್ಮ ರೋಹಿತನ ಹುಟ್ಟಿದ ಹಬ್ಬ. ಇನ್ನುಮೇಲಾದ್ರೂ ಸ್ನಾನ ಮಾಡಿ, ದಿನಕ್ಕೊಮ್ಮೆ ಬಟ್ಟೆಬದಲಾಯಿಸಿ, ಬ್ರಷ್ ಬೇಡ ಕಲ್ಲಿನಿಂದಲೇ ಮೈ ತಿಕ್ಕಿಕೊಳ್ಳಿ. ಆಗಲಾದ್ರೂ ಚೂರು ಕೆಂಪಾಗಿ ಅಂತ ಅವರಿಗೆ ಗೈಡ್ ಮಾಡಿದ್ವಿ. ಗೆಳತಿಯರೆಲ್ಲ ಖುಷಿಗೆ ಕ್ಯಾಟ್ವಾಕ್ ಮಾಡಿ ಎಂಜಾಯ್ ಮಾಡಿದ್ರು. ಜಡ್ಜ್ ಆಗಿದ್ದ ನಾನು ಕೊನೆಗೆ ಯಾರಿಗೂ ಮಿಸ್ ಹೊಸಪೇಟ್ ಅಂತ ಕಿರೀಟ ತೊಡಿಸದೆ ಎಸ್ಕೇಪ್ ಆಗಿಬಿಟ್ಟೆ. ಕುಮಾರಂಗೆ, ರೋಹಿತ್ಗೆ ಮುಖಕ್ಕೆಲ್ಲ ಯರ್ರಾಬಿರ್ರೀ ಕ್ರೀಮ್ ಹಚ್ಚಿದ್ವಿ, ಚೀಕಲಾ ಭಾಷಣ ಮಾಡಿದ್ಲು, ಚುಪ್ಪಿ ಫೋಟೋ ತೆಗೆದ್ಲು. ಆಮೇಲೆ ಗಿಫ್ಟ್ ಕೊಡುವ ಸಮಾರಂಭ. ಶಟರ್್ ಒಂದನ್ನ ಗಿಫ್ಟ್ ಅಂತ ಕೊಟ್ಟಿದ್ರು. ಅದನ್ನ ಬೆಳಿಗ್ಗೆ ಎದ್ದ ಕುಮಾರ ಹಾಕ್ಕೋಳ್ಳ ಅಂದ. ಹಾಕ್ಕೋ ಮಾರಾಯ ನಿನಗೇ ಕೊಟ್ಟಿರೋದು ಅಂದೆ. ಹಾಕಿಕೊಂಡು ನಿಂತ. ಸೇಮ್ ಬ್ಲೌಸ್ ಇದ್ದಂಗಿತ್ತು. ಇದನ್ನ ಯಾರಿಗಾದ್ರೂ ಮಕ್ಕಳಿಗೆ ದಾನ ಅಂತ ಮಾಡಿಬಿಡುತ್ತೀನಿ ಬಾಸ್ ಅಂತ ಅವಾಗಲೇ ಅವನು ಪ್ರತಿಜ್ಞೆ ಮಾಡಿದ್ದು.
ಉಫ್ ... ಇಷ್ಟಾಯಿತಲ್ಲ ಗದಗಿಗೆ ಹೋಗೋಣ ಅಂತ ರೈಲ್ವೆ ಸ್ಟೇಷನ್ಗೋದ್ರೆ ನಮ್ಮ ಸಾಧು ಸೇವಿಂಗ್ ಮಾಡಿಸ್ಕೊಂಡು ಬರ್ತೀನಿ ಅಂತ ಹೋದೋರು ಪತ್ತೇನೆ ಇಲ್ಲ. ಸೋ ಟ್ರೈನ್ ಮಿಸ್. ಆಮೇಲೆ ನಾವು ಅವರ ಮೇಲೆ ಹದ್ದಿನ ಕಣ್ಣಿಟ್ಟಿದ್ವಿ. ಮತ್ತೆಲ್ಲಾದ್ರೂ ಕಟಿಂಗ್ ಅಂತ ಹೊರಟೋದ್ರೆ ಏನು ಮಾಡೋದು? ಸರಿ ಗದಗ ಟ್ರೈನ್ ಬಂತು. ಎಲ್ಲಾ ಹತ್ತೋದಕ್ಕೆ ಅಂತ ಹೋದ್ವಿ. ಆದ್ರೆ ಯಾರೂ ಹತ್ತಲಿಲ್ಲ. ಹತ್ತಿದವರು ಗಲಗಲಿ ಮಾತ್ರ. ನಾವೆಲ್ಲ ಅಲ್ಲೇ ರೈಲ್ವೇಸ್ಟೇಷನ್ನಲ್ಲಿ ಗಡದ್ದಾಗಿ ಇಡ್ಲಿ ವಡೆ ತಿಂದು ಇನ್ನೊಂದು ಟ್ರೈನ್ ಹತ್ತಿದ್ವಿ.
ಗದಗಿಗೆ ಹೋಗಿ ಅಲ್ಲಿ ಶಿರಹಟ್ಟಿ ತಲಪಿದ್ರೆ ನಮ್ಮ ಸಂಗಮೇಶ ಮೆಣಸಿನಕಾಯಿಯ ಮದುವೆ. ನಿಜ್ಜ ಹೇಳಬೇಕು ಅಂದ್ರೆ ಈ ಮದುವೆಗೆ ಅಂತಾನೆ ನಾವು ಬಂದಿದ್ದು. ಅವರು ನೋಡಿದ್ರೆ ತಲೆಗೆ ಕಿರೀಟ ಹಾಕ್ಕೊಂಡು ನಿಂತಿದ್ರು. ಎಲ್ಲರೂ ವಿಷ್ ಮಾಡಿ ಉಪ್ಪಿಟ್ಟು, ಅವಲಕ್ಕಿ ತಿಂದು ಮುಖಗಿಕ ತೊಳೆದು ರಿಸಪ್ಷನ್ಗೆ ಅಂತ ಹೋದ್ರೆ ಫುಲ್ ಹಾಡು.
ಚಿತ್ರಾನ್ನ ಚಿತ್ರಾನ್ನ ಚಿತ್ರ ಚಿತ್ರ ಚಿತ್ರಾನ್ನ ಚಿತ್ರಾನ್ನ
ನಾನಂತೂ ಬಿದ್ದು ಬಿದ್ದು ನಕ್ಕೆ. ಬೇರೆ ಯಾರ್ಯಾರು ನಕ್ಕರೋ ಗೊತ್ತಾಗಲಿಲ್ಲ.
ನಮ್ಮ ಚುಪ್ಪಿ ಕೈಯಲ್ಲಿದ್ದ ಕ್ಯಾಮೆರಾ ನೋಡಿ ಪುಟ್ಟ ಪುಟ್ಟ ಹುಡುಗ್ರು ನಂದೂ ಒಂದು ಪೋಟೋ ತೆಗಿತಾಳೇನೋ ಚೆಲುವೆ ಅಂತ ಚೇರನ್ನೆಲ್ಲ ತಲೆ ಮೇಲೆ ಹೊತ್ಕೊಂಡು ಕುಣಿದ್ವು. ಪಲ್ಟಿ ಹೊಡೆದ್ವು, ಟಪ್ಪಾಂಗುಚ್ಚಿ ಸ್ಟೆಪ್ ಹಾಕಿದ್ವು, ಕುಮಾರ ತಡಕೊಳಾಕೆ ಆಯ್ತಾ ಇಲ್ಲ ಬಾಸ್ ಎರಡೇ ಎರಡು ಸ್ಟೆಪ್ ಹಾಕ್ಲಾ ಅಂದ. ಬೇಡ ಸುಮ್ನಿರೋ ಇದು ಮದ್ವೆ ಸಮಾರಂಭ. ಎಲ್ಲರೂ ಓಡಿಹೋದ್ರೆ ಏನು ಗತಿ ಅಂದೆ. ಪಕ್ಕದಲ್ಲಿ ಕುಳಿತಿದ್ದ ಚೀಕಲಾ ಕಿಸಕ್ಕನೆ ನಕ್ಕಳು.
ಆಮೇಲೆ ಅಲ್ಲಿಂದ ಹೊರಟು ಹುಬ್ಬಳ್ಳಿ ಸೇರಿ ಅಲ್ಲಿ ಗಿರಮಿಟ್ಟ್ ತಿಂದ್ವಿ. ಅದೆಂಥದೂ ಜ್ಯೂಸ್ ಕುಡಿಸಿದ್ರು. ನಮ್ಮ ಕುಮಾರ ಅದನ್ನು ಕುಡಿದು ಕುಡಿದವನ ಥರ ಆ್ಯಕ್ಟ್ ಮಾಡಿ ಹೆಂಗೆ ಪರವಾಗಿಲ್ಲವಾ ಬಾಸ್ ಅಂದ. ಆಮೇಲೆ ಊಟ. ಮತ್ತೆ ಟ್ರೈನ್ಗೆ ಗಾಳ. ಆದ್ರೆ ನಮ್ಮದು ವೇಯಿಟಿಂಗ್ ಲಿಸ್ಟ್ನಿಂದ ಆಚೆ ಬರಲೇ ಇಲ್ಲ. ಇದ್ಯಾಕೋ ಸರಿಗಿಲ್ಲ ಅಂತ ಟ್ರೈನ್ ಕ್ಯಾನ್ಸಲ್ ಮಾಡಿಸಿ ಬಸ್ ಹತ್ತಿ ಬೆಂಗಳೂರು ತಲಪಿದ್ವಿ.
ಆಮೇಲೆ ಎಲ್ಲರದೂ ಅವರವರ ಪಾಡು. ಬದುಕು ಒನ್ಸ್ ಎಗೇನ್ ಬಿಸಿ ಆಗಿದೆ.
ಲಾಸ್ಟ್ ನೆನಪು: ಟ್ರಿಪ್ಗೆ ಬಂದು ಎರ್ರಾಬಿರ್ರೀ ಎಂಜಾಯ್ ಮಾಡಿದ, ಎಂಜಾಯೇ ಮಾಡದ ಎಲ್ಲರಿಗೂ ನನ್ನ ಥ್ಯಾಂಕ್ಸ್.
ಅಂದಹಾಗೆ ಮುಂದಿನ ಟ್ರಿಪ್ ಎಲ್ಲಿಗೆ?

>>> ನಮ್ಮ ಕೆಟ್ಟ ಮುಖಗಳ ಜೊತೆಗೆ ಈ ಸುಂದರವಾದ ಫೋಟೋಗಳನ್ನೆಲ್ಲಾ ತೆಗೆದಿದ್ದು ಸುಪ್ರಭಾ.

8 comments:

shreekala said...

ನನ್ನ ಹೆಸರನ್ನ ಚೀಕಲಾ ಅಂತ ಅಪಭ್ರಂಶ ಮಾಡಿದ್ದಕ್ಕೆ ಧಿಕ್ಕಾರವಿರಲಿ... ಗುರ್ ಗುರ್...

from chikala :)

Anonymous said...

Ravi,

next time nannu karkondhogtira nimma gangalli???

armanikanth said...

Akkareya Ravi ajjipura,
Photo nodide.takshana comment mmadabeku annistu.
neevu punyatmaru hampi ge hogi,kunidu kuppalisi namma hotte urisiddu nenapalli itkonde ee comment haaktaa idini.
nimma photo kandaagaannisiddu....CHATRI JOTE GE CHATRI!
HEGIDE?
manikanth

siddu devaramani said...

houdu hampi andre hange....
avarella hege badukidarappa..
namma kaile avana ulisikolladu aguttilla..duka agutte

NADIPREETI said...

ಪ್ರತಿಕ್ರಿಯಿಸಿದ ಎಲ್ಲರಿಗೂ ನನ್ನ ನಮನ
ಅದರಲ್ಲೂ ಆತ್ಮೀಯ ಗೆಳೆಯ ಮಣಿಕಾಂತ್ ಛತ್ರಿ ಅಂದಿದ್ದು ಬಹಳ ಖುಷಿ ಕೊಡ್ತು.ಅವರ ಪ್ರೀತಿ ದೊಡ್ಡದು.

ಯಾರೋ ಹೆಸರಿಲ್ಲದವರು ನನ್ನೂ ಕರ್ಕೊಂಡು ಹೋಗಿ ನಿಮ್ಮ ಗ್ಯಾಂಗ್ ಜೊತೆ ಅಂದಿದ್ದಾರೆ. ನಮ್ಮೆಲ್ಲ ಕೀಟಲೆ,ಅರಚಾಟ ಕಿರುಚಾಟಗಳನ್ನೆಲ್ಲ ಸಹಿಸಿಕೊಳ್ಳುತ್ತೀನಿ ಅಂದ್ರೆ ಬನ್ನಿ ಅದಕ್ಕೇನು.

ಉಳಿದಂತೆ ಗೆಳತಿ ಶ್ರೀಕಲಾಗೆ ಮತ್ತು ಗೆಳೆಯ ಸಿದ್ದು ದೇವರಮನಿಗೂ ಥ್ಯಾಂಕ್ಸ್.
ರವಿ ಅಜ್ಜೀಪುರ

ARNAB SADHU said...

yen saar idella!? sadhu anthaha sadhoo mele inthaha aropave. akatakata.

ravi, i'll write 2 u in detail about yr blog. ok!

- sadhu magana appa, arthath tandakke train miss madisida (nish)paapi.
(mari sadhu inda yellarigu flying kiss)

Unknown said...

allari nanna maduve nepadalli ishtu enjoy maadidiralla, nannanne kareelilla neevu tripge! chitrannakke neevu step haakidre naanu madumagan vesh tegedu haaki bandubidtidde! -sangamesh menasinakai

Girija said...

Dear Ravi,
Doorada london nalli kulithu, kannada blog yaavudappa readable antha nodthirovaaga kannige biddiddu, nadi preethi... it's just fantastic! I feel proud to say that i visit your blog almost everyday...page galannu design maadiruva reethi, nimma barahadalliruva jeevanthike, naughtiness thumba khushi kodaththe..thank u for that.