Friday, April 24, 2009

ದಿ ಪೇಯ್ನ್



ಪ್ರಿಯ ಸ್ನೇಹಿತರೆ
ಇದು ಕೆಲವು ವಾರಗಳ ಹಿಂದೆ ಹಾಯ್ ಬೆಂಗಳೂರ್ ಪತ್ರಿಕೆಯಲ್ಲಿ ಪ್ರಕಟವಾದ ಕಥೆ.
ಮತ್ತೆ ಇಲ್ಲಿ ನಿಮಗಾಗಿ ಹಾಕುತ್ತಿದ್ದೇನೆ. ಓದಿಕೊಳ್ಳಿ





ಕಿಟಕಿ ತೆರೆದೇ ಇತ್ತು.
ದೂರದಲ್ಲಿ ಯಾರದೋ ಒಕ್ಕಳಾಳದಿಂದ ಎದ್ದು ಬಂದ ಸಣ್ಣದೊಂದು ಆಲಾಪ್. ಅದು ನೋವಿನ ಎಳೆ ಎಂದು ಗುರುತಿಸಿಕೊಳ್ಳುವುದಕ್ಕೆ ಪ್ರಿಯಾಗೆ ಸಮಯ ಹಿಡಿಯಲಿಲ್ಲ.
ಮಗ್ಗಲು ಬದಲಿಸಿದಳು. ಸಣ್ಣಗೆ ಕೆಮ್ಮು ಬಂದು ಉಸಿರು ಹಿಂಡಿದಂಗಾಯಿತು. ಕತ್ತು ಆನಿಸಿದಳು. ಉಫ್. ಒಂದು ನಿಡಿದಾದ ಉಸಿರಿಗಾಗಿ ಎಷ್ಟು ಪರದಾಡಬೇಕು?
ಥತ್...ಇನ್ನೂ ಯಾಕೆ ಬದುಕಿದ್ದೀನಿ ನಾನು? ಬದುಕು ಅನ್ನುವುದು ಕೇವಲ ಇಪ್ಪತ್ತೊಂದನೇ ವಯಸ್ಸಿಗೆ ಈ ಪರಿ ಮಕ್ಕಾಡೆ ಮಲಗಿಬಿಡುತ್ತದೆ ಅಂತ ನಾನು ಎಂದಾದರೂ ಭಾವಿಸಿದ್ದೆನಾ? ಎಷ್ಟು ಬೇಗ ನನ್ನೆಲ್ಲ ದಾರಿಗಳು ಮುಚ್ಚಿಹೋದುವಲ್ಲ. ಕನಸುಗಳು ಕಳೆದುಹೋದವು. ಮನಸ್ಸು ನಿಲರ್ಿಪ್ತವಾಯಿತು. ನಿದ್ರೆ ದೂರಾಯಿತು. ನೋವು ದಿನ ಕಳೆದಂತೆ ಅಭ್ಯಾಸವಾಗಿ ಹೋಯಿತು. ಪ್ರತಿ ಕ್ಷಣ ಕೂಡ ನಾನು ಸಾವಿಗೆ ಹತ್ತಿರಾಗುತ್ತಿದ್ದೇನೆ ಅನಿಸುತ್ತಿದೆ. ಸಾವು ಇಷ್ಟು ಯಾತನಾಮಯವಾಗಿರುತ್ತಾ? ಇನ್ನು ಎಷ್ಟು ನಿಮಿಷವೋ, ಎಷ್ಟು ವಾರವೋ, ಎಷ್ಟು ತಿಂಗಳೋ ನನ್ನ ಈ ಉಸಿರು.
ಪ್ರಿಯಾ ಬಳಿಗೆ ಬಂದ ನಸರ್್ ಯಾವುದೋ ಮಾತ್ರೆ ಕೈಗಿಟ್ಟು ನುಂಗಿ ಅನ್ನುವಂತೆ ಸನ್ನೆ ಮಾಡಿದಳು. ಅವಳ ಹೆಸರು ಪಾರ್ವತಿ. ಕೇರಳದಿಂದ ಬಂದವಳಂತೆ. ಕನ್ನಡ ಕಲಿತಿದ್ದಾಳೆ. ಹಾಸ್ಪಿಟಲ್ಗೆ ಬಂದ ದಿವಸದಿಂದ ನನ್ನ ಆರೈಕೆ ಮಾಡುತ್ತಿರುವ ಅಮ್ಮನಂಥವಳು. ಅವಳ ಪ್ರೀತಿ ದೊಡ್ಡದು. ನೀವು ಇಷ್ಟು ಚೆನ್ನಾಗಿದ್ದೀರಾ? ಆ ದೇವರು ನಿಮಗೆ ಯಾಕೆ ಈ ಕ್ಯಾನ್ಸರ್ ಅನ್ನೋ ಕಾಯಿಲೆ ಕೊಟ್ಟ ಸಿಸ್ಟರ್. ಅವನಿಗೆ ಚೆನ್ನಾಗಿರೋರನ್ನ ನೋಡಿದ್ರೆ ಆಗೊಲ್ಲ. ಪಕ್ಕಾ ಈಡಿಯಟ್ ಅವನು. ನನ್ನ ಅಕ್ಕನಿಗೂ ಹೀಗೆ ಆಗಿತ್ತು. ಅವಳೂ ನಿಮ್ಮಷ್ಟೇ ಚಂದಕ್ಕಿದ್ದಳು. ಏನೇ ಪ್ರಯತ್ನ ಮಾಡಿದರೂ ಅವಳನ್ನು ಮರೆಯೋದಕ್ಕೆ ಆಗುತ್ತಾ ಇಲ್ಲ. ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಅನಿಸುತ್ತೆ ಅಂತ ಒಂದಿನ ಕಣ್ಣು ತುಂಬಿಕೊಂಡಿದ್ದಳು. ಅವಳಿಗೂ ಗೊತ್ತು ನಾನು ಹೆಚ್ಚು ದಿನ ಬದುಕೊಲ್ಲ ಅಂತ. ಏನೂ ಆಗೊಲ್ಲ ಸಿಸ್ಟರ್. ಒಂದಿನ ನೀವು ಹುಷಾರಾಗೇ ಆಗ್ತೀರ. ಡೋಂಟ್ ವರಿ ಅಂತ ಕೈ ಹಿಡಿದು ಸಾಂತ್ವನ ಹೇಳುತ್ತಾಳೆ. ಅದೆಲ್ಲ ನನ್ನ ಮೇಲಿನ ಪ್ರೀತಿಗಾಗಿ ಅಷ್ಟೆ.
ನಾನು ಕಣ್ಣೀರಾಗುತ್ತೇನೆ. ಪಾರ್ವತಿ ಕೈ ನನ್ನ ನೆತ್ತಿ ಸವರುತ್ತದೆ.
ಪಕ್ಕದ ರೂಮಿನಲ್ಲಿ ಯಾರೋ ಕಿರುಚಿದರು. ಅದೇನು ಕೊನೆಯ ಆರ್ತನಾದವಾ? ಕಳಕೊಂಡವರ ದುಃಖವಾ? ಆಸ್ಪತ್ರೆ ಅನ್ನುವುದು ನರಕ ಕೂಪಗಳಿದ್ದ ಹಾಗೆ! ಇಲ್ಲಿಗೆ ಜನ ಸಾಯಲಿಕ್ಕೆಂದೇ ಬರುತ್ತಾರಾ? ಓಹ್... ಅಮ್ಮ ಬರಬಹುದು ಈಗ. ನನಗೆ ಅಂತ ಅವಳು ಹಾಲು ತರುತ್ತಾಳೆ. ಎಂತೆಂಥದೋ ಹಣ್ಣು ತರುತ್ತಾಳೆ. ಮಗಳು ಬದುಕಿಯಾಳು ಅನ್ನುವ ಸಣ್ಣ ಭರವಸೆ ಅವಳಲ್ಲಿ ಮಾತ್ರ ಗಟ್ಟಿಯಾಗಿದೆ. ಯಾಕೆಂದ್ರೆ ಅವಳು ತಾಯಿ. ಯಾವ ತಾಯಿ ತಾನೆ ಮಗಳು ತನ್ನ ತೊಡೆಯ ಮೇಲೇ ಸಾಯುವುದನ್ನ ಇಷ್ಟಪಟ್ಟಾಳು. ನಿನಗೆ ಏನೂ ಆಗೊಲ್ಲ ಮಗಳೆ. ಡಾಕ್ಟರು ಹೇಳಿದ್ದಾರೆ. ಈಗೇನು ಎಂಥ ಕ್ಯಾನ್ಸರನ್ನೂ ಗುಣ ಪಡಿಸಬಹುದಂತೆ. ಅದರಲ್ಲೂ ಡಾ. ಸುರೇಶ್ ಪಾಟೀಲ್ ತುಂಬಾ ಫೇಮಸ್ ಆದಂಥವರು. ಅವರು ನಿಮ್ಮ ಮಗಳಿಗೆ ಏನೂ ಆಗೋದಿಲ್ಲ ಅಂತ ಹೇಳಿದ್ದಾರೆ. ನೀನು ಧೈರ್ಯ ಗೆಡಬೇಡ ಮಗಳೇ, ಅಂತ ಅಮ್ಮ ಹೇಳುತ್ತಿರುತ್ತಾಳೆ. ಅವಳಿಗೂ ಗೊತ್ತು ನನ್ನ ಮಗಳು ಬದುಕೋಲ್ಲ ಅಂತ. ಆದರೂ ನನ್ನ ಮೇಲಿನ ಪ್ರೀತಿಗಾಗಿ ಹಾಗೆ ಹೇಳುತ್ತಾಳೆ. ಅಪ್ಪ ಇದ್ದಿದ್ದರೆ ಅಮ್ಮನಿಗಿಂತ ಹೆಚ್ಚು ಸಂಕಟ ಪಡುತ್ತಿದ್ದನೇನೋ. ಇದನ್ನೆಲ್ಲ ನೋಡಬೇಕಾಗುತ್ತೆ ಅಂತ ಮೊದಲೇ ಹೋಗಿಬಿಟ್ಟ. ಡೋಂಟ್ ವರಿ ಡ್ಯಾಡಿ ಇನ್ನೇನು ಕೆಲವೆ ದಿನ ನಾನು ನಿನ್ನಲ್ಲಿಗೆ ಬರುತ್ತೇನೆ.
ಅಮ್ಮ ಸರಸ್ವತಿ ಬಂದರು.
ಬರುವಾಗಲೇ ಕಣ್ಣ ತುಂಬಾ ನೀರು. ಮಗಳಿಗೆ ಗೊತ್ತಾದೀತು ಅಂತ ಸಣ್ಣಗೆ ತಿರುಗಿ ಸೀರೆ ಸೆರಗಿನಿಂದ ಒರೆಸಿಕೊಂಡರು.
ಸೇಬು ತಿನ್ನು ಮಗಳೇ!
ಅಮ್ಮ ನಾನು ಅಂದ್ರೆ ನಿನಗೆ ಅಷ್ಟಿಷ್ಟಾನಾ?
ಯಾಕೆ ಹಾಗೆಲ್ಲ ಕೇಳ್ತೀಯ?
ಅಲ್ಲ ನಾನು ಸತ್ತು ಹೋದ್ರೆ ನೀನು ಎಷ್ಟು ಸಂಕಟ ಪಡ್ತೀ ಅಂತ ನನಗೆ ದಿಗಿಲಾಗಿದೆ!
ಸರಸ್ವತಿಗೆ ದುಃಖ ತಡೆಯಲಾಗಲಿಲ್ಲ. ಮಗಳನ್ನು ಬಾಚಿ ತಬ್ಬಿಕೊಂಡರು.
ದೇವರೆ ಎಷ್ಟು ಅಂತ ದುಃಖ ಕೊಡುತ್ತೀ. ಗಂಡನನ್ನ ಕಿತ್ತುಕೊಂಡೆ. ಆದರೂ ನಾನು ಬದುಕಿದೆ, ಅದು ನನ್ನ ಮಗಳಿಗಾಗಿ. ಅವಳು ಚೆನ್ನಾಗಿರಬೇಕು ಅಂತ ನಾನು ಮಾಡಿದ ಕೆಲಸ, ಪಟ್ಟ ಯಾತನೆ ಇದೆಯಲ್ಲ ಅದು ಬೇರೆ ಯಾವ ತಾಯಿಗೂ ಬೇಡ. ಇದ್ದದ್ದೊಂದು ಮನೆ ಬೆಳಕಿನಂತವಳು ಮಗಳು. ಈಗ ಅವಳನ್ನು ಕಿತ್ತುಕೊಳ್ಳಲು ಹೊರಟಿದ್ದೀಯಲ್ಲ. ಮುಂದೆ ನಿನಗೆ ಯಾವತ್ತೂ ನಾನು ಕೈ ಮುಗಿಯಲಾರೆ, ದೀಪ ಹಚ್ಚಲಾರೆ. ಇದ್ದೊಂದು ದೀಪವನ್ನೂ ನೀನೇ ಆರಿಸಿದ ಮೇಲೆ ನನಗೆ ಇನ್ನೆಲ್ಲಿದೆ ಬದುಕು.
ಸರಸ್ವತಿಯ ದುಃಖ ಇನ್ನೂ ಬತ್ತಿರಲಿಲ್ಲ.
ಯಾರೋ ಹೆಗಲ ಮೇಲೆ ಕೈ ಇಟ್ಟಂತಾಯಿತು. ತಿರುಗಿದರೆ ಅದೇ ಹುಡುಗ.
ನೀನಾ?
ಆ್ಯಂಟಿ. ಹಾಗನ್ನುವ ಮೊದಲೇ ಅವನ ಕಣ್ಣು ತುಂಬಿಬಂತು. ಹೀಗೆ ಕೇಳಿದೆ ಪ್ರಿಯಾಳಿಗೆ ಹುಷಾರಿಲ್ಲ ಅಂತ. ನೋಡಿ ಹೋಗೋಣ ಅಂತ ಬಂದೆ. ಅವಳಿಗೆ ಏನೂ ಆಗೊಲ್ಲ ಆ್ಯಂಟಿ. ದೇವರಿದ್ದಾನೆ.
ಎಲ್ಲಿದ್ದಾನೆ ದೇವರು. ನನ್ನ ಪಾಲಿಗೆ ಅವನು ಯಾವತ್ತೋ ಸತ್ತು ಹೋದ. ಹೇಗೆ ಭರಿಸಲಿ ಈ ದಃಖವನ್ನ? ಸರಸ್ವತಿಯ ಕಣ್ಣು ಅತ್ತು ಅತ್ತು ಬತ್ತಿಹೋದ ಕೊಳದಂತಾಗಿದ್ದವು.
ವಿಕಾಸ್ ಹೋಗಿ ಪ್ರಿಯಾಳ ಪಕ್ಕ ಕುಳಿತ. ಕೈ ಹಿಡಿದುಕೊಂಡ.
ಡೋಂಟ್ ವರಿ ನಾನಿದ್ದೇನೆ. ನಿನಗೆ ಏನೂ ಆಗೊಲ್ಲ.
ಯಾಕೆ ಹಾಗಂತೀಯ ವಿಕಿ. ನೀನೂ ಸುಳ್ಳು ಹೇಳ್ತೀಯಲ್ಲ ಅನ್ನಬೇಕೆನಿಸಿತು ಪ್ರಿಯಾಳಿಗೆ.
ಸುಮ್ಮನೆ ಅವನ ಕೈ ಅದುಮಿದಳು ಅಷ್ಟೆ.
ಎಂಥ ಹುಡುಗ ಇವನು. ನನಗಾಗಿ ಪ್ರಾಣ ಬೇಕಾದ್ರೆ ಕೊಡ್ತೀನಿ ಅಂದಿದ್ದ ಒಮ್ಮೆ. ಹುಚ್ಚಾ ಅದೆಲ್ಲ ಯಾಕೆ, ನಿನ್ನನ್ನ ಪ್ರೀತಿ ತಾನೆ ಮಾಡಬೇಕು. ಮಾಡ್ತೀನಿ ಬಿಡು ಅಂದಿದ್ದೆ ನಾನು. ಅವತ್ತು ಅವನಷ್ಟು ಖುಷಿ ಪಟ್ಟವರನ್ನ ನಾನು ಈ ಜನ್ಮದಲ್ಲಿ ಕಂಡಿಲ್ಲ. ಮುಗಿಲೇ ಎಟಕುವಷ್ಟು ಜಿಗಿದಾಡಿದ್ದ. ನನ್ನ ಕರೆದುಕೊಂಡು ಊರೆಲ್ಲ ಸುತ್ತಿಸಿದ್ದ. ಕೇಳಿದ್ದೆಲ್ಲ ಕೊಡಿಸಿದ್ದ. ಒಂದೇ ಒಂದಿನ ನನ್ನ ಪ್ರೀತಿಯನ್ನಲ್ಲದೇ ಬೇರೆ ಏನನ್ನೂ ಬಯಸದ ಹುಡುಗ. ಪ್ಲೆಟಾನಿಕ್ ಪ್ರೀತಿ ಅಂತಾರಲ್ಲ ಅಂಥದು.
ಆಮೇಲೆ ಕೆಲಸದ ಮೇಲೆ ಮುಂಬೈಗೆ ಅಂತ ಹೊರಟು ಹೋದ. ವರ್ಷದ ಮೇಲಾಯಿತು. ಅಲ್ಲ ಕಣೋ ನೀನು ಅಲ್ಲಿ ನಾನು ಇಲ್ಲಿ. ಹೇಗಪ್ಪ ಪ್ರೀತಿ ಅಂದ್ರೆ ದೂರ ಇದ್ದಷ್ಟು ಪ್ರೀತಿ ಜಾಸ್ತಿ ಕಣೆ. ಹತ್ತಿರ ಅದರಲ್ಲೂ ತೀರಾ ಹತ್ರ ಇದ್ರೆ ಪ್ರೀತಿಗೆ ಕಾಮದ ವಾಂಛೆ ಬಂದುಬಿಡುತ್ತೆ. ನಾನು ಬರುವುದಕ್ಕೆ ಇನ್ನೂ ಒಂದು ವರ್ಷ ಆಗಬಹುದು. ಅಲ್ಲಿವರೆಗೂ ನಿನಗೆ ತಾಳ್ಮೆ ಇದ್ದರೆ ಕಾಯಿ. ಇಲ್ಲ ಅಂದ್ರೆ ಒಳ್ಳೆ ಹುಡುಗ ಸಿಕ್ಕಿದ್ರೆ ಮದುವೆ ಆಗಿಬಿಡು. ನಾನು ಪ್ರಾಕ್ಟಿಕಲ್ ಮನುಷ್ಯ. ಯಾರಿಗಾಗೋ ಕಾಯುತ್ತಾ ಕೂತು ಬದುಕನ್ನ ವ್ಯರ್ಥ ಮಾಡಿಕೊಳ್ಳುವುದರಲ್ಲಿ ಅರ್ಥ ಇಲ್ಲ ಪ್ರಿಯಾ ಅಂತ ಫೋನ್ ಮಾಡಿದ್ದ.
ಅವತ್ತೇ ನನಗೆ ಗೊತ್ತಾಗಿದ್ದು ಇವನು ನನ್ನ ಬುದ್ಧಿಗೆ ಮೀರಿದ ಹುಡುಗ ಅಂತ.
ಅದಾದ ಮೇಲೆ ನಮ್ಮಿಬ್ಬರದು ಸಂಪರ್ಕವೇ ಇಲ್ಲ.
ಈಗ ನೋಡಿದ್ರೆ ಪಕ್ಕದಲ್ಲೇ ಬಂದು ಕುಳಿತಿದ್ದಾನೆ. ಪ್ರೀತಿಗೆ ಅಷ್ಟೊಂದು ಸೆಳೆತವಿದೆಯಾ?
ಪ್ರಿಯಾಳ ಕಣ್ಣು ಮತ್ತೆ ಹನಿಗೂಡಿದವು.
ಏನನ್ನೋ ಹೇಳಲು ಹೊರಟ ವಿಕಾಸ್ ಅವಳ ಕಣ್ಣೊರೆಸಿದ.
ಮತ್ತೆ ಮತ್ತೆ ಹನಿಗೂಡುತ್ತಿದ್ದ ಕಣ್ಣನ್ನು ಒರೆಸುವುದಾದರೂ ಯಾಕೆ?
ಪ್ರಿಯಾ ಅವನ ಮುಖ ನೋಡಲಿಕ್ಕಾಗದೆ ಚಡಪಡಿಸಿದಳು.
***
ಡಾಕ್ಟರ್ ಪ್ರಿಯಾಳ ಸ್ಥಿತಿ ಹೇಗಿದೆ?
ಎದುರಿಗೆ ಕುಳಿತ ಸುರೇಶ್ ಪಾಟೀಲರು ಕ್ಷಣ ಮೌನವಾದರು.
ಅವಳನ್ನು ಬದುಕಿಸಿಕೊಡಲಿಕ್ಕೆ ಆಗಲ್ಲವಾ ಡಾಕ್ಟರ್? ವಿಕಾಸ್ ಡಾಕ್ಟರ್ರ ಕೈ ಹಿಡಿದುಕೊಂಡ.
ಪ್ಲೀಸ್ ಡಾಕ್ಟರ್. ಅದಕ್ಕೋಸ್ಕರ ನಾನು ಏನು ಮಾಡಬೇಕು ಹೇಳಿ?
ಸುರೇಶ್ ಪಾಟೀಲ್ರ ಕಣ್ಣು ತುಂಬಿಬಂತು. ಇಷ್ಟು ವರ್ಷದಲ್ಲಿ ಎಂಥೆಂತ ಕ್ಯಾನ್ಸರ್ ಕೇಸ್ಗಳನ್ನು ನೋಡಿಲ್ಲ ನಾನು .ಇದರಷ್ಟು ಕರಳು ಹಿಂಡಿದ್ದು ಮತ್ತೊಂದಿಲ್ಲ. ಯಾಕೋ ಪ್ರಿಯಾ ಬದುಕಬೇಕು ಅನಿಸುತ್ತೆ. ಆದ್ರೆ ಅವಳು ಬದುಕುವ ಯಾವ ಕುರುಹೂ ಇಲ್ಲ. ಕ್ಯಾನ್ಸರ್ ಅವಳನ್ನು ಅಷ್ಟು ಆವರಿಸಿಕೊಂಡುಬಿಟ್ಟಿದೆ.
ಐ ಯಾಮ್ ಸಾರಿ ಮಿಸ್ಟರ್ ವಿಕಾಸ್. ಪ್ರಿಯಾ ಬದುಕಲಾರದಷ್ಟು ದೂರ ಹೊರಟುಹೋಗಿದ್ದಾಳೆ. ಅವಳಿಗೆ ಲಂಗ್ ಕ್ಯಾನ್ಸರ್. ಉಸಿರಾಟ ಈಸಿಯಾಗಿ ಆಗೊಲ್ಲ. ನೋವಿಗೆ ಮಾಫರ್ಿನ್ ಕೊಡುತ್ತಿದ್ದೇವೆ. ಅದನ್ನು ನಿಲ್ಲಿಸಿದರೆ ಅವಳಿಗೆ ನೋವು ತಡೆದುಕೊಳ್ಳಲು ಕಷ್ಟ್ಲ. ಮಾಫರ್ಿನ್ ಕೊಡೋದರಿಂದ ಅವಳ ಇತರೆ ಆರ್ಗನ್ಗಳಿಗೂ ತೊಂದರೆ ಆಗಿದೆ. ಬಿಲೀವ್ ಮಿ, ಅವಳನ್ನ ಇನ್ನು ಮರೆತುಬಿಡೋದು ಒಳ್ಳೇದು.
ಅವರ ಕಣ್ಣಂಚಿನಿಂದ ಜಾರಿದ ಹನಿಯೊಂದು ವಿಕಾಸ್ನ ಮುಂಗೈ ಬೇಲೆ ಬಿತ್ತು.
ಪ್ಲೀಸ್ ಇನ್ನೊಂದೇ ಒಂದು ಚಾನ್ಸ್ ನೋಡಿ ಡಾಕ್ಟರ್!
ಇಲ್ಲ ವಿಕಾಸ್. ಇರುವಷ್ಟು ದಿನ ಅವಳಿಗೆ ಒಂದು ಕಂಫಟರ್್ ಕೊಡಿ. ನನಗೂ ಅವಳು ಬದುಕಬೇಕು ಅನಿಸುತ್ತಿದೆ. ಬಟ್ ಐಯಾಮ್ ಹೆಲ್ಪ್ಲೆಸ್. ಸಾರಿ ಅಂತ ಎದ್ದರು.
ವಿಕಾಸ್ ಕುಸಿದುಹೋದ. ಹಾಗಾದರೆ ಇನ್ನೆಷ್ಟು ದಿನ ಪ್ರಿಯಾಳ ಈ ಯಾತನಾ ಬದುಕು.
ಡಾಕ್ಟರ್ ಒಂದು ನಿಮಿಷ ಪ್ಲೀಸ್.
ಮತ್ತೆ ಸುರೇಶ್ ಪಾಟೀಲ್ ಕುಳಿತರು.
ನಾನೊಂದು ನಿಧರ್ಾರಕ್ಕೆ ಬಂದಿದ್ದೇನೆ.
ಏನು?
ನಾನು ಪ್ರಿಯಾಳನ್ನು ಮದುವೇ ಆಗಬೇಕೆಂದಿದ್ದೇನೆ.
ವಾಟ್?
ಹೌದು. ಅವಳು ನನ್ನ ಹೃದಯದ ಹುಡುಗಿ. ಅಂಥ ಹುಡುಗಿಯನ್ನ ನಾನು ಮತ್ತೆಲ್ಲಿಯೂ ಕಾಣಲಾರೆ. ಅವಳು ನನಗೆ ಮಾತ್ರ ಹುಟ್ಟಿ ಬಂದಿದ್ದವಳು. ನನ್ನ ಬದುಕಿನ ಮುದುವೆಯ ಅಧ್ಯಾಯವೂ ಅವಳು ಬದುಕಿರುವಾಗಲೆ ಮುಗಿದುಹೋಗಲಿ.
ಒಮ್ಮೆ ಯೋಚಿಸಿ ನಿಧರ್ಾರ ತೆಗೆದುಕೊಂಡರೆ ಒಳಿತು. ಅವಳಿರುವ ಸ್ಥಿತಿಯಲ್ಲಿ ಅದೆಲ್ಲ ಬೇಕಾ? ಒಪ್ಪುತ್ತಾಳಾ?
ನಾನು ಒಪ್ಪಿಸುತ್ತೇನೆ. ಇದು ನನ್ನ ಮತ್ತು ಅವಳ ವೈಯಕ್ತಿಕ ನಿಧರ್ಾರ. ಅದಕ್ಕೆ ಪಮರ್ಿಷನ್ ಕೊಡಬೇಕು ನೀವು.
ಆಯಿತು. ನಾನೇ ಎಲ್ಲಾ ವ್ಯವಸ್ಥೆ ಮಾಡಿಸುತ್ತೇನೆ. ನಿನ್ನ ಮನಸ್ಸು ದೊಡ್ಡದು. ನೀನು ನಮ್ಮೆಲ್ಲರ ಮುಂದೆ ಗ್ರೇಟ್ ಆಗಿಬಿಟ್ಟಿರಿ ವಿಕಾಸ್. ದೇವರು ಈಡಿಯಟ್ ಅಂತ ನನಗೆ ಈಗ ಅನಿಸುತ್ತಿದೆ. ಅವಳು ಬದುಕಿರಬೇಕಿತ್ತು ವಿಕಾಸ್ ... ಬದುಕಿರಬೇಕಿತ್ತು. ಅವರ ಕಣ್ಣಾಲಿಗಳು ತುಂಬಿಬಂದವು.
ಎದ್ದು ಸರಸರನೆ ಹೊರಟುಹೋದರು.
***
ಅಮ್ಮ ನಾನು ಪ್ರಿಯಾಳನ್ನು ಮದುವೆ ಆಗುತ್ತಿದ್ದೇನೆ.
ಅವಳಿಗೆ ಕ್ಯಾನ್ಸರ್ ಇದೆ ಅಂತಿದ್ರು.
ಗೊತ್ತಿದ್ದೇ ಮದುವೆ ಆಗಬೇಕು ಅಂತಿದ್ದೀನಿ ಮಮ್ಮಿ. ಅವಳು ಇನ್ನು ಹೆಚ್ಚೆಂದರೆೆ ಎಷ್ಟು ದಿನ ಬದುಕುತ್ತಾಳೋ ಗೊತ್ತಿಲ್ಲ. ಆದ್ರೆ ಅವಳು ಮುತ್ತೈದೆ ಆಗಿಯೇ ಹೋಗಲಿ ಅನ್ನೋದು ನನ್ನ ಇಷ್ಟ. ಇದಕ್ಕೆ ನಿನ್ನ ಒಪ್ಪಿಗೆ ಬೇಕು.
ವಿಕಾಸ್ನ ಅಮ್ಮ ಶಾರದಾಗೆ ಮಗ ಎಂಥವನು ಅಂತ ಗೊತ್ತು. ಅವನ ಮನಸ್ಸು ಎಂಥದು ಅಂತ ಗೊತ್ತು. ಒಂದೇ ಒಂದು ದಿನ, ಕ್ಷಣ ಇನ್ನೊಬ್ಬರಿಗೆ ಕೇಡಾಗಲಿ ಅಂತ ಬಗೆದವನಲ್ಲ. ಅವನದು ಹೂವಿನಂತಹ ಮನಸ್ಸು. ಆದ್ರೆ ಈಗ ನೋಡಿದ್ರೆ ಪ್ರಿಯಾಳನ್ನೆ ಮದುವೆ ಆಗುತ್ತೇನೆ ಅಂತಿದಾನಲ್ಲ. ಹೇಗೆ ಇದು? ಅರ್ಥವೇ ಆಗುತ್ತಿಲ್ಲ. ಖಡಾಖಂಡಿತವಾಗಿ ಬೇಡ ಅಂದು ಅವನ ಮನಸ್ಸನ್ನು ಹೇಗಾದರೂ ನೋಯಿಸಲಿ.
ಒಮ್ಮೆ ಯೋಚಿಸಿ ನೋಡಿದ್ರೆ ಒಳ್ಳೇದು ಕಣೋ ವಿಕ್ಕಿ. ಪ್ರಿಯಾ ಬದುಕೋಲ್ಲ ಅಂತ ನೀನೇ ಹೇಳ್ತಿದೀಯಾ? ಅವಳು ಹೋದ ನಂತರ ಹೇಗಿರ್ತೀಯಾ?
ಅವಳ ನೆನಪಿನೊಂದಿಗೆ ಮಮ್ಮಿ. ಇದರಲ್ಲಿ ಯೋಚಿಸಿ ನೊಡೋದು ಏನೂ ಇಲ್ಲ. ಇದು ಫೈನಲ್ ಡಿಸಿಷನ್. ಪ್ಲೀಸ್ ನನ್ನ ಬದುಕು ನನಗೆ ಬೇಕಾದ ಹಾಗೆ ರೂಪಿಸಿಕೊಳ್ಳೋದಕ್ಕೆ ಒಂದು ಅವಕಾಶ ಕೊಡಿ ಮಮ್ಮಿ. ಅವಳನ್ನು ನಾನು ನಿನಗಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದೆ. ಈಗ ಅವಳೇ ಇಲ್ಲವಾದ ಮೇಲೆ ನನಗೆ ಮದುವೆಯ ಸಂತೋಷ ಎಲ್ಲಾ ಯಾಕೆ. ಇದೆಲ್ಲ ಅವಳ ಸಂತೋಷಕ್ಕಾಗಿ. ಪ್ಲೀಸ್ ನನ್ನನ್ನ ತಡೆಯಬೇಡಿ.
ಶಾರದಾ ಅಳು ತಡೆಯಲಾರದೇ ಒಳಕ್ಕೆ ಹೋದರು.
ಇದ್ದೊಬ್ಬ ಮಗನೂ ಹೀಗೆ ಆದ್ರೆ ನನ್ನ ಪಾಡೇನು. ಯಜಮಾನರು ಒಪ್ಪುತ್ತಾರಾ?
ದೇವರೆ ಎಂಥ ಪರೀಕ್ಷೆಗೆ ಒಡ್ಡಿದೆಯಲ್ಲ.
***
ರಾತ್ರಿ ವಿಕಾಸ್ಗೆ ನಿದಿರೆ ಹತ್ತಲಿಲ್ಲ. ಕಣ್ಣು ಮುಚ್ಚಿದರೆ ಸಾಕು ಪ್ರಿಯಾ ಬಂದು ನಿಲ್ಲುತ್ತಿದ್ದಳು. ಹೋಗ್ತೀನಿ ಕಣೋ. ಏನೂ ಅನ್ಕೋ ಬೇಡ. ನನಗೂ ನಿನ್ನ ಜೊತೆ ದಿವಿನಾಗಿ ಬದುಕಬೇಕು ಅನ್ನೋ ಆಸೆ ಇತ್ತು. ನಿಜ್ಜ ಹೇಳ್ತೀನಿ, ನನ್ನ ಬದುಕಿನಲ್ಲಿ ನೀನೊಬ್ಬನಿದ್ದರೆ ನನಗೆ ಅಷ್ಟೇ ಸಾಕಿತ್ತು. ಆದ್ರೆ ಏನು ಮಾಡಲಿ. ನಿನ್ನೊಬ್ಬನನ್ನೇ ಬಿಟ್ಟು ಹೋಗುತ್ತಿದ್ದೇನೆ. ಐ ಯಾಮ್ ಸಾರಿ.
ದಿಂಬು ತೋಯ್ಯುವಷ್ಟು ಅತ್ತ.
ಹಳೆಯ ದಿನಗಳು ನೆನಪಾದವು. ಒಂದಿನ ನನಗೆ ವಿಪರೀತ ಜ್ವರ. ಆಸ್ಪತ್ರೆಗೆ ಅಡ್ಮಿಟ್ ಆಗಿದ್ದೆ. ಒಂದೇ ಒಂದು ದಿನ ಕ್ಲಾಸಿಗೆ ಹೋಗಿರಲಿಲ್ಲ. ಎರಡನೇ ದಿನ ಬಂದವಳು ಯಾಪಾಟಿ ಅತ್ತಿದ್ದಳು ಅಂದ್ರೆ ನೀನಿಲ್ದೆ ನಾನು ಸತ್ತೇಹೋಗ್ತೀನಿ ಕಣೋ ಅಂದಿದ್ದಳು. ಇದೆಂಥ ಹುಚ್ಚು ಪ್ರೀತಿ ಅಂದುಕೊಂಡಿದ್ದೆ ನಾನು. ಆಸ್ಪತ್ರೆಯಲ್ಲಿ ನಾನಿದ್ದ ವಾರವೂ ಅಲ್ಲೇ ಇದ್ದಳು. ಇಡೀ ರಾತ್ರಿ ಕಣ್ಣು ಮುಚ್ಚಿದವಳಲ್ಲ. ನಿನ್ನ ಪ್ರೀತಿಗೋಸ್ಕರ ನಾನು ಇಷ್ಟು ಮಾಡದೇ ಹೋದ್ರೆ ಹೇಗೋ?
ಈಗ ಅದೆ ಪ್ರಿಯಾ ಸಾವಿನ ಕುದುರೆ ಏರಿ ಕುಳಿತಿದ್ದಾಳೆ. ತಡೆದು ನಿಲ್ಲಿಸುವವರು ಯಾರು?
ಟೆರೇಸ್ ಮೇಲಕ್ಕೆ ಹೋದ. ಕತ್ತಲು ಹಾಸಿ ಹೊದ್ದುಕೊಂಡು ಮಲಗಿದ್ದಂತಿತ್ತು.
ಅಲ್ಲೇ ಅಂಗಾತ ಮಲಗಿ ಆಕಾಶ ದಿಟ್ಟಿಸಿದ. ಯಾರೋ ಕರೆದಂಗಾಯಿತು. ನಾನೂ ಪ್ರಿಯಾ ಜೊತೆ ಹೋಗಿಬಿಡಲಾ?
ಮೈ ಬೆವೆತಿತು.
***
ಮೂರು ದಿನ ಕಳೆಯುವಷ್ಟರಲ್ಲಿ ವಿಕಾಸ್ ಪ್ರಿಯಾ ಜೊತೆ ಮದುವೆ ಬಗ್ಗೆ ಮಾತಾಡಿದ. ಅವಳು ನಿಜಕ್ಕು ಖಿನ್ನಳಾದಳು. ಹೇಗಿದ್ರೂ ನಾನು ಸಾಯುವವಳು. ನನಗೇಕೆ ಮದುವೆ. ನಾನು ಹೋದ ಮೇಲೆ ನೀನು ಮದುವೆ ಆಗಿ ಸುಖವಾಗಿರಬೇಕು ಅನ್ನೋದೆ ನನ್ನ ಆಸೆ ಅಂದಳು. ಇವನು ಒಪ್ಪಲಿಲ್ಲ. ಮದುವೆ ಅಂತ ಆದ್ರೆ ಅದು ನಿನ್ನನ್ನೆ. ನನ್ನ ಜೊತೆ ನಿನ್ನನ್ನು ಬಿಟ್ಟು ಬೇರೆ ಯಾರನ್ನೂ ನಾನು ನಿರೀಕ್ಷಿಸಲಾರೆ. ಪ್ಲೀಸ್ ಇದು ನನ್ನ ಕೊನೆ ಬಯಕೆಯೂ ಹೌದು. ಅದು ನಿನ್ನದೂ ಆಗಲಿ ಬಿಡು ಅಂತ ಪರಿಪರಿಯಾಗಿ ಬೇಡಿದ. ಮೂರು ರಾತ್ರಿ ಮೂರು ಹಗಲು ಒತ್ತಾಯಿಸಿದ ಮೇಲೆ ಪ್ರಿಯಾ ಒಪ್ಪಿಕೊಂಡಳು.
ಆ ದಿನವೂ ಬಂತು.
ಪ್ರಿಯಾಳನ್ನು ಆಕ್ಸಿಜನ್ ಕೊಳವೆಯ ಜೊತೆಗೆ ತುಸು ಸಿಂಗಾರ ಮಾಡಲಾಯಿತು.
ತೀರಾ ಸಿಂಪಲ್ ಆಗಿ ಆಸ್ಪತ್ರೆಯ ಅಂಗಳದಲ್ಲೇ ಪ್ರಿಯಾ ಮತ್ತು ವಿಕಾಸ್ ಮದುವೆ ನಡೆದುಹೋಯಿತು.
ಅದು ಪ್ರಿಯಾಳ ಬದುಕಿನ ಸಂತಸದ ಕ್ಷಣವಾ? ದುಃಖದ ಕ್ಷಣವಾ?
ವಿಕಾಸನ ಬದುಕಿನ ಈ ಕ್ಷಣಕ್ಕೆ ಏನಂತ ಹೆಸರಿಡುವುದು?
ಅದಾದ ಸರಿ ಐದನೇ ರಾತ್ರಿ ಪ್ರಿಯಾಳಿಗೆ ಎಚ್ಚರವಾಯಿತು. ವಿಕಾಸ್ ದಡಬಡಾಯಿಸಿ ಎದ್ದ.
ಉಸಿರಾಡಲು ಕಷ್ಟವಾಗ್ತಿದೆ ಕಣೋ ಅನ್ನೋ ರೀತಿ ಸನ್ನೆ ಮಾಡಿದಳು.
ಎದೆಗೊರಗಿಸಿಕೊಂಡ.
ಒಂದೇ ಬಿಕ್ಕು ಅಷ್ಟೆ.
ಇವನ ಕೈಯೊಳಗಿದ್ದ ಅವಳ ಕೈ ತಣ್ಣಗಾಗತೊಡಗಿತು.

Friday, April 17, 2009

ಮಣಿಕಾಂತ್ ಅವರ ಪುಸ್ತಕ ಬಿಡುಗಡೆಗೆ ನಾನೂ ಬರ್ತೇನೆ ನೀವೂ ಬನ್ನಿ






ಪತ್ರಕರ್ತ ಮಿತ್ರ ಮಣಿಕಾಂತ್ರ ಮತ್ತೊಂದು ಪುಸ್ತಕ 'ಅಮ್ಮ ಹೇಳಿದ ಎಂಟು ಸುಳ್ಳುಗಳು'ಬಿಡುಗಡೆಯಗುತ್ತಿದೆ. ಮಣಿಕಾಂತ್ ಮತ್ತು ನನ್ನ ಸ್ನೇಹ ಐದಾರು ವರ್ಷದಷ್ಟು ಹಳೆಯದು. ಮಾತಿಗೆ ಸಿಕ್ಕಾಗಲೆಲ್ಲ ನಮ್ಮಗಳ ಮಾತು ಚಿತ್ರಾನ್ನ. ಮೈಸೂರ್ ಪಾಕು ಕೊಡಸ್ತೀನಿ ಅಂತ ವರ್ಷದಿಂದ ರೈಲ್ ಬಿಡ್ತಾನೆ ಇದಾರೆ. ಈ ಸಲ ಮಾತ್ರ ಪುಸ್ತಕ ಬಿಡುಗಡೆಯ ನೆಪದಲ್ಲಿ ತಿನ್ನದೇ ಬಿಡುವುದಿಲ್ಲ. ಅವರ ಪ್ರೀತಿ ದೊಡ್ಡದು. ತುಂಬಾ ನಿಷ್ಕಲ್ಮ್ಮಷ ಹೃದಯಿ. ಅದೆಲ್ಲಕ್ಕಿಂತ ಹೆಚ್ಚಾಗಿ ಚೆನ್ನಾಗಿ ಬರೆಯುತ್ತಾರೆ. ಉಭಯಕುಶಲೋಪರಿ ಅವರ ಅತ್ಯಂತ ಫೇಮಸ್ ಅಂಕಣ. ಅವರದೆ 'ಈ ಗುಲಾಬಿಯು ನಿನಗಾಗಿ' ಅಂಕಣ ನಾಡಿನ ಯುವಕ ಯುವತಿಯರ ಗಮನಸೆಳೆದು ಅದು ಪುಸ್ತಕ ಕೂಡ ಆಗಿದೆ.
'ಅಮ್ಮ ಹೇಳಿದ ಎಂಟು ಸುಳ್ಳುಗಳು' ಮುದ್ದಾದ ಮುಖಪುಟದೊಂದಿಗೆ ರೆಡಿಯಾಗಿದೆ. ಒಳಗಿನ ಲೇಖನಗಳೂ ಅಷ್ಟೆ ಮನಸ್ಸಿಗೆ ತಟ್ಟುತ್ತವೆ. ಕೈ ಹಿಡಿದು ಸಾಂತ್ವನ ಹೇಳುತ್ತವೆ. ಅರೆ ಇವಳು ಹೇಗೆ ಅಷ್ಟೆಲ್ಲ ನೋವು ಗೆದ್ದು ಚೂರೇ ಚೂರು ಖುಷಿ ತಂದುಕೊಂಡಳು ಅಂತ ಸೋಜಿಗ ಆಗುತ್ತೆ. ಇಲ್ಲಿ ಸೋತು ಗೆದ್ದವರ ಕಥೆಗಳಿವೆ. ನೋವಿನ ಆಳದಿಂದೆದ್ದು ಬಂದು ಚೂರು ಪ್ರೀತಿಗಾಗಿ ಹಂಬಲಿಸಿದವರ ಕಥೆಗಳಿವೆ. ಅವೆಲ್ಲವನ್ನೂ ಮಣಿ ಎಲ್ಲೆಲ್ಲಿಂದಲೋ ಹೆಕ್ಕಿ ನಿಮಗಾಗಿ ಕಟ್ಟಿಕೊಟ್ಟಂತವು. ನೀವು ಓದಲೇಬೇಕಾದ ಪುಸ್ತಕ ಅದು; ಅಮ್ಮ ಹೇಳಿದ ಎಂಟು ಸುಳ್ಳುಗಳು.
ಇದೇ ತಿಂಗಳ 26 ನೇ ತಾರೀಖು ಬೆಳಿಗ್ಗೆ ಹನ್ನೊಂದು ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಪುಸ್ತಕ ಬಿಡುಗಡೆ. ಖ್ಯಾತ ನಟ ಪ್ರಕಾಶ್ ರೈ ಪುಸ್ತಕ ಬಿಡುಗಡೆ ಮಾಡುತ್ತಾರೆ. ರವಿ ಬೆಳಗೆರೆಯವರು ಅಮ್ಮನ ಪ್ರೀತಿಯ ಬಗ್ಗೆ ಮಾತಾಡುತ್ತಾರೆ.
ವಿಶ್ವೇಶ್ವರ ಭಟ್ಟರು ಸಮಾರಂಭದ ಅಧ್ಯಕ್ಷತೆ ವಹಿಸುತ್ತಾರೆ. ಕೃಷ್ಣೇಗೌಡರು ಪುಸ್ತಕದ ಬಗ್ಗೆ ಮಾತಾಡುತ್ತಾರೆ. ಇದಕ್ಕೆಲ್ಲ ಮೊದಲು ಗೆಳೆಯ ಉಪಾಸನಾ ಮೋಹನ್ ತಂಡ ಭಾವಗೀತೆಗಳನ್ನ ಹಾಡಲಿದೆ.
ಅಂತ ಸಮಾರಂಭದಲ್ಲಿ ನೀವು ಇಲ್ಲದೇ ಹೋದರೆ ಹೇಗೆ?
ನಾನೂ ಬರುತ್ತೇನೆ. ನೀವೂ ಬನ್ನಿ.

Sunday, February 15, 2009

ಶಮ




ಶಮಂತಕಮಣಿ.
ಕುಪ್ಪಳಿಸುತ್ತಾ ಮೆಟ್ಟಿಲು ಜಿಗಿಯುತ್ತಿದ್ದ ಅವಳ ಜೋಷ್ಗೆ ಕಾಲಲ್ಲಿನ ಒಂಟಿ ಗೆಜ್ಜೆಯ ಚೈನು ಫಕ್ಕನೆ ನಕ್ಕಿತು. ವಯಸ್ಸು ಹದಿನೇಳಲ್ವ ಅದಕ್ಕೆ ಹೀಗಾಡ್ತಾಳೆ ಬಿಡು. ಎದುರಿಗೆ ಬರುತ್ತಿದ್ದ ಹಾಲಿನವ ಗುಡ್ ಮಾನರ್ಿಂಗ್ ಬೇಬಿ ಅಂದ. ಯಾವನೋ ಎಮ್ಟಿವಿ ಬಕ್ರ ಇರಬೇಕು. ಇಲ್ಲ ಅಂದ್ರೆ ಹಾಲಿನವನ ಬಾಯಲ್ಲಿ ಕಂಗ್ಲಿಷ್ ಎಲ್ಲಿ ಬರಬೇಕು. ಆದರೂ ದೇವರೆ ದಾರಿಯಲ್ಲಿ ಹೋಗೋ ಬರೋರೆಲ್ಲ ಗುಡ್ ಮಾನರ್ಿಂಗ್ ಹೇಳ್ತಿದಾರೆ ಅಂದ್ರೆ ನಾನು ಅಷ್ಟೊಂದು ಬ್ಯೂಟೀನಾ?
ಕ್ಲಾಸಿನ ಮುಂದುಗಡೆ ಬೆಂಚಿನಲ್ಲಿ ಕುಳಿತುಕೊಳ್ಳುವುದು ಅಂದ್ರೆ ಶಮಳಿಗೆ ಯಾವತ್ತೂ ಒಗ್ಗಲ್ಲ. ಕೊನೆ ಬೆಂಚಿನ ಕೊನೆ ಸೀಟೇ ಅವಳಿಗೆ ಇಷ್ಟ. ಅಲ್ಲಾದರೆ ನಿದ್ರೆ ಮಾಡಬಹುದು, ಪಿಸು ಮಾತಾಡಬಹುದು, ಪಜ್ಜಲ್ ಆಡಬಹುದು, ಎಸ್ಸೆಮ್ಮೆಸ್ ಕಳಿಸಬಹುದು, ಡೆಸ್ಕ್ ಮೇಲೆ ಹೆಸರು ಕತ್ತಿಕೊಳ್ಳಬಹುದು. ಇನ್ನೂ ಬೇಜಾರಾಯಿತು ಅಂದ್ರೆ ಎದುರಿಗೆ ಕುಳಿತವಳ ಚೂಡಿ ದುಪ್ಪಟಕ್ಕೆ ಬಣ್ಣ ಬಣ್ಣದ ಕಾಗದ ಕಟ್ಟಿ ಮೇಸ್ಟ್ರು ಹೋದ ಮೇಲೆ ಹುರ್ರೇ ಅನ್ನಬಹುದು. ದಟ್ ಇಸ್ ಕ್ರೇಜಿ! ಮುಂದಿನ ಬೆಂಚಲ್ಲೇನಿದೆ? ಸುಮ್ಮನೆ ಕತ್ತು ಆನಿಸಿಕೊಂಡು ಲೆಕ್ಷರರ್ನ ಬಾಯಿಗೆ ಕಿವಿ ಆಗಬೇಕು. ಯಾರಿಗೆ ಬೇಕು ಅವನ ಪಾಠ.
ಹಾಗಂದುಕೊಂಡೇ ಹಿಂದಿನ ಬೆಂಚಿಗೆ ದೌಡಾಯಿಸಿದಳು ಶಮ. ಹೋದವಳಿಗೆ ಎರಡೇ ನಿಮಿಷದಲ್ಲಿ ಇಲ್ಲೇನೋ ಬದಲಾವಣೆೆ ಇದೆ ಅನ್ನಿಸಿಬಿಟ್ಟಿತು. ಮಾಮೂಲಿನಂತಿಲ್ಲ. ಆದರೆ ಏನೂ ಗೊತ್ತಾಗುತ್ತಿಲ್ಲ. ಇಡೀ ಕ್ಲಾಸ್ ರೂಮ್ನಲ್ಲೆಲ್ಲ ಒಮ್ಮೆ ಕಣ್ಣಾಡಿಸಿದಳು. ಎಲ್ಲ್ಲಾ ಅದೇ ಮುಖಗಳು. ಒಬ್ಬನಾದರೂ ಚಂದದವನಿಲ್ಲ ಕಣೆ ಅಂತು ಮನಸ್ಸು. ಆದ್ರೆ ಅವರೆಲ್ಲರ ಮಧ್ಯೆ ಕೆಂಪಾನೆ ಕೆಂಪು ಟೀ ಶಟರ್್ ಹಾಕಿಕೊಂಡವನೊಬ್ಬ ಕುಳಿತಿದ್ದ. ಅರೆ ಇವನ್ನ ಈ ಮೊದಲು ನನ್ನ ಕ್ಲಾಸ್ನಲ್ಲಿ ನೋಡಿದ ನೆನಪೇ ಆಗುತ್ತಿಲ್ಲವಲ್ಲ. ಎಲ್ಲಿದ್ದ ಇವನು? ಹೊಸಬಾನಾ? ನೋಡೋದಕ್ಕೆ ಬೇರೆ ಹ್ಯಾಂಡ್ಸಮ್ ಆಗಿದ್ದಾನೆ. ಇವತ್ತೇನೋ ಡಿಫರೆಂಟ್ ಆಗಿ ಕಾಣಿಸುತ್ತಿದಾನೆ ಅಂದ್ರೆ ಹೊಸ ಟೀ ಶಟರ್್ ಹಾಕ್ಕೊಂಡಿರಬಹುದು. ಅದೂ ಕಲರ್ಫುಲ್!
ಅಷ್ಟರಲ್ಲಿ ಲೆಕ್ಷರರ್ ಬಂದ್ರು. ಎಲ್ಲಾ ಗಪ್ಚುಪ್. ಕೊನೆ ಬೆಂಚಿನ ರಾವಣ ಉರುಫ್ ರಾಮ ಬಿಟ್ಟ ಪೇಪರ್ ರಾಕೆಟ್ ಇನ್ನೇನು ಲೆಕ್ಷರರ್ ತಲೆಗೆ ಬಡೀಬೇಕು ಅನ್ನೋ ಅಷ್ಟರಲ್ಲಿ ಅದು ದಿಕ್ಕು ಬದಲಿಸಿತು. ಛೇ ಜಸ್ಟ್ ಮಿಸ್ ಅಂದುಕೊಂಡ. ಶಮ ತನ್ನ ಬ್ಯಾಗಿನಿಂದ ಮೊಬೈಲ್ ತೆಗೆದು ಕೆಂಪು ಟೀಶಟರ್್ನವನದೊಂದು ಫೋಟೊ ತೆಗೆದುಕೊಂಡಳು. ಹಾಗೆ ತೆಗಿಬೇಕು ಅನ್ನೋದಕ್ಕೂ ಅವಳ ಹತ್ರ ಕಾರಣ ಇರಲಿಲ್ಲ.
ಕ್ಲಾಸ್ ಬಿಟ್ಟ ಮೇಲೂ ಅವನದೇ ಗುಂಗು ಇವಳಿಗೆ. ಅರೆ ಎಲ್ಲಿದ್ದ ಇವನು. ಇಷ್ಟು ಹ್ಯಾಂಡ್ಸಮ್ ಹಾಗೂ ಹುಡುಗರು ಇರ್ತಾರಾ? ಗ್ರೇಟ್! ಹೋಗಿ ಮಾತನಾಡಿಸಿಬಿಡಲಾ?ಅಂದುಕೊಂಡಳು ಒಮ್ಮೆ. ಏನಾದ್ರು ಅಂದುಕೊಂಡರೆ! ಕತ್ತೆಬಾಲ ಕುದುರೆ ಜುಟ್ಟು. ಅಕೌಂಟ್ಸ್ ನೋಟ್ಸ್ ಕೊಡಿ ಅಂದ್ರೆ ಆಯ್ತು. ದಟ್ಸ್ ಆಲ್.
ಎಕ್ಸ್ಕ್ಯೂಸ್ ಮಿ.
ಎಸ್ ಅಂದ ಇವನು.
ಟೀಶಟರ್್ನ ಎಡಕ್ಕೆ, ಎದೆಯ ಮೇಲ್ಗಡೆ ಡೋಂಟ್ ಲವ್ ಮಿ ಅಂತ ಬರೆದಿತ್ತು. ಹುಚ್ಚಾ ಹಾಗಂದ್ರೆ ಲವ್ ಮಾಡ್ತಾರೆ ಅಂದುಕೊಂಡಿರಬೇಕು.
ಇಫ್ ಯೂ ಡೋಂಟ್ ಮೈಂಡ್ ನನಗೆ ಚೂರೇ ಚೂರು ಅಕೌಂಟ್ಸ್ ನೋಟ್ಸ್ ಬೇಕಿತ್ತು ಅಂದಳು.
ಅಕೌಂಟ್ಸ್ ನೋಟ್ಸ್?!?! ಚೂರೇ ಚೂರು! ಯೂ ನೋ ನಾನು ಸೈನ್ಸ್ ಸ್ಟೂಡೆಂಟ್! ನಿಮ್ಮ ಕ್ಲಾಸೆ!
ಹೋ ಮೈ ಗಾಡ್! ಶುರುವಿನಲ್ಲೇ ಮುಗ್ಗರಿಸಿದೆಯಲ್ಲೇ ಗೂಬೆ ಅಂತು ಮನಸು. ಐಯಾಮ್ ಸಾರಿ. ತಲೆಕೆರೆದುಕೊಂಡಳು. ಅಂದ್ರೆ ನಾನೂ ಸೈನ್ಸ್ ಸ್ಟೂಡೆಂಟೇ. ಗಾಡ್ ಮತ್ತೇಕೆ ಅಕೌಂಟ್ಸ್ ನೋಟ್ಸ್ ಕೇಳಿಸಿದೆ. ಈಡಿಯಟ್ ತಲೆ ಮೇಲೊಂದು ಮೊಟಕಿಕೊಂಡಳು.
ನಾಚಿಕೆ ಎನಿಸಿತು.
ಕನ್ಫ್ಯೂಸ್ ಮಾಡಿಕೊಂಡ್ರಾ? ಅಂದ ಇವಳು ಪೆಕರು ಪೆಕರಾಗಿ ನಿಂತಿದ್ದು ನೋಡಿ.
ಸಾರಿ ಅಂದು ಅಲ್ಲಿಂದ ಪೇರಿಕಿತ್ತಳು.
ಮತ್ತೆ ಕಾಲಿನ ಒಂಟಿ ಗೆಜ್ಜೆಯ ಚೈನು ನಕ್ಕಿತು. ವಯಸ್ಸು ಹದಿನೇಳಲ್ವ ಬಿಡು.
***
ಒಂದೇ ಕ್ಲಾಸ್ನಲ್ಲಿ ಓದಿದರೂ ಅವನ ಹೆಸರು ಮಿಥುನ್ ಅಂತ ಗೊತ್ತಾಗಲಿಕ್ಕೆ ಅರ್ಧ ವರುಷ ಹಿಡೀತಲ್ಲ. ಛೇ ಹಾಗೆ ಕೇಳಬಾರದಿತ್ತು ಅವನನ್ನ. ಎಷ್ಟು ಕೂಲಾಗಿ ಹೇಳಿದ ನಾನು ಸೈನ್ಸ್ ಸ್ಟೂಡೆಂಟ್ ನಿಮ್ಮ ಕ್ಲಾಸೇ ಅಂತ. ಅಯ್ಯೋ ಗೂಬೆ ಅನ್ನೋ ಥರಾನೆ ಇತ್ತು ಅವನ ಆ್ಯನ್ಸರ್. ಆದ್ರೂ ಹುಡುಗ ಸ್ಮಾಟರ್್. ಕೈಯಲ್ಲಿ ಮೊಲದ ಬಣ್ಣದ ಮಫ್ಲರ್ ಹಿಡಿದುಕೊಂಡು ಅದನ್ನ ಮೆಲ್ಲಗೆ ತಲೆ ತುಂಬಾ ಸುತ್ತಿಕೊಂಡಳು. ಫಕ್ಕಾ ಗೂಬೆ ಅಂತು ಮನಸ್ಸು. ನಗು ಬಂತು ಇವಳಿಗೆ. ಯಾಕೋ ಪದೆ ಪದೆ ನೆನಪಾಗ್ತಾನೆ ಹುಡುಗ.
ತಿಂಗಳು ಕಳೆಯುವಷ್ಟರಲ್ಲಿ ಇಬ್ಬರೂ ಅಚ್ಚಾ ಅಚ್ಚಾ ಫ್ರೆಂಡ್ ಆಗಿಹೋದರು. ಒಂದೂವರೆ ತಿಂಗಳು ಮುಗಿಯುವಷ್ಟರಲ್ಲಿ ಶಮಳ ಎದೆಯಲ್ಲಿ ಏನೋ ಕಸಿವಿಸಿ ಶುರುವಾಯಿತು. ನಾನು ಲವ್ವಿಗೆ ಬಿದ್ದಿದ್ದೇನಾ? ಎಸ್, ಬಿದ್ದಿದ್ದೇನಾದ್ರೆ ಅವನಿಗೆ ಹೇಳೋದು ಹೇಗೆ? ಅವನೋ ಸೈಲೆಂಟ್ ಹುಡುಗ. ಎರಡು ಮಾತಿಗಿಂತ ಹೆಚ್ಚು ಮಾತಾಡೋಲ್ಲ. ಮೂರನೇ ಮಾತಿಗೆಲ್ಲ ಮೌನಕ್ಕೆ ಅಂಟಿಕೊಂಡುಬಿಡುತ್ತಾನೆ. ನಾನೆ ಹೇಳಿದರಾಯ್ತು, ನಿನ್ನ ಲವ್ ಮಾಡ್ತಿದೀನಿ ಕಣೋ ಅಂತ. ಏನಂದಾನು? ಅವನಿಗೂ ಲವ್ ಆಗಿದ್ರೆ ಓಕೆ ಅಂತಾನೆ. ಇಲ್ಲ ಅಂದ್ರೆ ಗೆಟ್ಲಾಸ್ಟ್ ಅಂತಾನೆ. ಗೆಟ್ ಲಾಸ್ಟ್ ಅನ್ನೋದಕ್ಕೆ ಅವಕಾಶಾನೆ ಕೊಡಬಾರದು. ಯಾಕೆಂದ್ರೆ ಒಮ್ಮೆ ಹಾಗಂದುಬಿಟ್ರೆ ಇಂಥ ಹುಡುಗರು ಮತ್ತೊಮ್ಮೆ ಸಿಗೋಲ್ಲ. ದೇವರೆ ಅವನು ನನಗೇ ಸಿಗಲಿ.
ಇವಳಿಗೂ ನೀನಂದ್ರೆ ಇಷ್ಟ ಅಂತ ಹೇಳೋದಕ್ಕೆ ಆಗಲಿಲ್ಲ. ಒದ್ದಾಡಿದಳು. ಬೆಳಿಗ್ಗೆ ಸೀದಾ ಸಾಯಿಬಾಬಾ ದೇವಸ್ಥಾನಕ್ಕೆ ಹೋಗಿ ಹುಂಡಿಯಲ್ಲಿ ನೂರಾ ಒಂದು ರೂಪಾಯಿ ಹಾಕಿ, ಚೂರೇ ಚೂರು ಧೈರ್ಯ ಕೊಡಬೇಕೆಂದು, ಇಲ್ಲದಿದ್ದರೆ ಅವನೇ ನಿನ್ನನ್ನು ಪ್ರೀತಿಸುತ್ತಿದ್ದೇನೆ ಕಣೆ ಅಂತ ಹೇಳುವಂತೆ ಮಾಡಬೇಕೆಂದು ಬೇಡಿಕೊಂಡಳು. ಸಂಜೆ ಅವನ ಪಕ್ಕ ಕುಳಿತು ಪಾಪ್ಕಾನರ್್ ಜಗಿದಳೇ ವಿನಃ ಮಾತೇ ಹೊರಡಲಿಲ್ಲ. ನಡುವೆ ನಿನಗೆ ನನ್ನನ್ನ ನೋಡಿದ್ರೆ ಏನೂ ಅನಿಸುತ್ತಿಲ್ವಾ ?ಅಂದಳು. ಏನು ಅನ್ನಿಸಬೇಕೋ ಅದು ಅನ್ನಿಸುತ್ತೆ ಬಿಡು. ಅಂದು ಸುಮ್ಮನಾದ. ಅಂದ್ರೆ? ಇವನೊಳ್ಳೆ ಒಗಟಾದನಲ್ಲ. ಹೋಗಲಿ ಬಿಡು. ಆದ್ರೆ ಎಷ್ಟು ಚಂದ ಇದ್ದಾನೆ. ಜೀವನ ಪೂತರ್ಿ ಹೀಗೆ ನೋಡ್ತಾ ಕೂರಬೇಕು ಅನಿಸ್ತಿದೆ! ಪ್ಲೀಸ್ ಅವನೇ ಐ ಲವ್ ಯೂ ಅಂತ ಹೇಳಲಿ.
ಅಷ್ಟರಲ್ಲಿ ಇವಳ ಹುಟ್ಟಿದ ಹಬ್ಬ ಬಂತು. ಅವತ್ತಾದರೂ ನನಗೆ ಸಪ್ರೈಸ್ ಕೊಡ್ತಾನೆ ಅಂದುಕೊಂಡಳು ಶಮ. ಬದಲಿಗೆ ಅವಳಿಗೆ ಇಷ್ಟದ ಗುಲಾಬಿ ಬಣ್ಣದ ಒಂದು ದೊಡ್ಡ ಬೊಂಬೆ ಕೊಟ್ಟು ಹುಟ್ಟು ಹಬ್ಬದ ಶುಭಾಶಯಗಳು ಅಂದ. ಇವಳಿಗೆ ಸಿಟ್ಟು ಬಂತು. ಐ ಲವ್ ಯು ಅಂತ ಹೇಳುವುದಕ್ಕೆ ಏನಾಗಿದೆ ಇವನಿಗೆ ದಾಡಿ. ಸುಮ್ಮನೆ ಸತಾಯಿಸುತ್ತಿದ್ದಾನಲ್ಲ. ನಾನೇ ಹೇಳೋಣವೆಂದರೂ ಥೂ ನಾಚಿಕೆ ಬಿಟ್ಟು ಹೇಗೆ ಹೇಳೋದು.
ವ್ಯಾಲೆಂಟೈನ್ಸ್ ಡೇ ಬಂತು. ಅವತ್ತೂ ಒಂದು ಗುಲಾಬಿ ಬಣ್ಣದ ಗೊಂಬೆ ತಂದು ಕೈಗಿತ್ತ. ಇವತ್ತಾದರೂ ಹೇಳಬಾರದ? ಚಡಪಡಿಸಿದಳು.
ಕೊಟ್ಟ ಗೊಂಬೆಗಳನ್ನೆಲ್ಲ ತೆಗೆದುಕೊಂಡು ಹೋಗಿ ರೂಮಿನ ಕಬೋಡರ್್ನಲ್ಲಿ ಎಸೆಯುತ್ತಿದ್ದಳು. ಒಂದಾ ಎರಡಾ ಅವನು ಕೊಟ್ಟಿದ್ದು ನೂರಾರು ಬೊಂಬೆಗಳು. ಎಲ್ಲಾ ಗುಲಾಬಿ ಬಣ್ಣದವೇ!
ಇಷ್ಟು ನನ್ನನ್ನ ಹಚ್ಚಿಕೊಂಡಿದ್ದಾನೆ, ಕರೆದಲ್ಲಿಗೆ ಬರುತ್ತಾನೆ, ಕೇಳಿದ್ದನ್ನೆಲ್ಲ ಕೊಡಿಸುತ್ತಾನೆ, ಒಂದಿನ ನಾನು ಕಾಲೇಜಿಗೆ ಹೋಗದೇ ಹೋದ್ರೆ ಯಾಕೆ ನಿನ್ನೆ ಬರಲಿಲ್ಲ ಅಂತ ಮುಖ ಸಪ್ಪಗೆ ಮಾಡಿಕೊಳ್ಳುತ್ತಾನೆ. ಅವನಿಗೆ ನನ್ನಲ್ಲಿ ಪ್ರೀತೀನೆ ಇಲ್ಲವಾ? ಏನಾದ್ರೂ ಫ್ಲಟರ್್ ಮಾಡುತ್ತಿದ್ದಾನಾ? ಎಷ್ಟೊಂದು ಜನ ಹುಡುಗೀರು ಅವನ ಜೊತೆ ಸುತುತ್ತಿರುತ್ತಾರಲ್ಲ. ಯಾರಿಗೊತ್ತು ಅವರಲ್ಲಿ ಯಾರಾದ್ರೂ ಒಬ್ಳು ಇಷ್ಟ ಆಗಿಬಿಟ್ರೆ? ನನ್ನ ಹುಡುಗನನ್ನ ನಾನೇ ಹಾಗೆ ಅನುಮಾನಿಸುವುದಾ! ಇವತ್ತಲ್ಲ ನಾಳೆ ಹೇಳಿಯಾನು ಬಿಡು. ಎಷ್ಟು ದಿನ ಅಂತ ಪ್ರೀತಿಯನ್ನ ಹಾಗೆ ಎದೆಯಲ್ಲಿ ಬಚ್ಚಿಟ್ಟುಕೊಳ್ಳುವುದಕ್ಕೆ ಸಾಧ್ಯ?
ಶಮಾಳದು ನಿಲ್ಲದ ಚಡಪಡಿಕೆ.
ಅವತ್ತು ಎಂದಿನಂತೆ ಬಸ್ಸ್ಟಾಂಡಿನಲ್ಲಿ ನಿಂತಿದ್ದ. ಇವಳಿಗೆ ಹಟ ಬಂತು. ನನ್ನನ್ನ ಲವ್ ಮಾಡ್ತೀಯ ಇಲ್ವಾ? ಅಷ್ಟೊಂದು ಜನ ಹುಡುಗೀರ ಜೊತೆ ಸುತ್ತುತ್ತೀಯಲ್ಲ. ಯಾಕೆ ಹೀಗೆ ಮಾಡ್ತೀಯ? ಅಂತ ಕೇಳಲೇಬೇಕೆನಿಸಿತು. ಹಾಗಂದುಕೊಂಡವಳೇ ಸರ್ರ್ ಅಂತ ಹೋಗಿ ಅವನ ಮಾತಿಗೂ ಕಾಯದೇ ಕೈ ಹಿಡಿದು ಎಳೆದುಕೊಂಡು ರಸ್ತೆಗಿಳಿದಳು ಅಷ್ಟೆೆ. ಎದುರಿಗೆ ಬರುತ್ತಿದ್ದ ಕಾರನ್ನು ಗಮನಿಸಲೇ ಇಲ್ಲ. ಹಿಂದೆ ಬರುತ್ತಿದ್ದ ಮಿಥುನ್ನ ಕಾರು ಹೊಡೆದುಕೊಂಡು ಹೋಗಿತ್ತು.
ಶಮ ಅಲ್ಲೆ ಕುಸಿದು ಕುಳಿತಳು. ಇಪ್ಪತ್ನಾಲ್ಕು ಗಂಟೆ ಆದ ಮೇಲೆ ಎಚ್ಚರ ಬಂತು. ಕಣ್ತುಂಬ ನೀರು. ಬತ್ತಿಹೋದ ಮಾತು. ನಾನೇ ಕರೆತಂದು ಕೊಂದಂಗಾಯಿತಲ್ಲ. ಪ್ರೀತಿ ಅಂತ ಅವನ ಪ್ರಾಣ ತೆಗೆದುಬಿಟ್ಟೆ.
ಹಲುಬಿದಳು.
ಸತ್ತು ಹೋಗಲಾ?
ಅವನಿಲ್ಲದ ಬದುಕಲ್ಲಿ ನನಗೇನಿದೆ?
........................
ಕಬೋಡರ್್ನಲ್ಲಿದ್ದ ಬೊಂಬೆಗಳ್ಯಾಕೋ ತೀರಾ ನೆನಪದವು.
ಹೋಗಿ ಒಂದೊಂದೇ ತೆಗೆದು ಎದೆಗವಚಿಕೊಂಡಳು. ನಿನ್ನ ನೆನಪಿಗೆ ಅಂತ ಇರೋದು ಇದಿಷ್ಟೇ ಕಣೋ.
ಮತ್ತೆ ಮನ ದುಃಖದ ಕಡಲು.
ಹಾಗೆ ಒಂದೊಂದೇ ಗೊಂಬೆ ನೋಡುತ್ತಿದ್ದಳಲ್ಲ ಏನೋ ಕೈಗೆ ಸಿಕ್ಕಂತಾಯಿತು. ನೋಡಿದರೆ ಪುಟ್ಟ ಕೀ.
ಸುಮ್ಮನೆ ತಿರುಗಿಸಿದಳು.
ಐ ಲವ್ ಯೂ ಶಮ, ಐ ಲವ್ ಯೂ ಶಮ ಅನ್ನೋ ಮಿಥುನನದೇ ಮಾತುಗಳು.
ಶಮ ಬಿಳಿಚಿಕೊಂಡಳು.

Tuesday, February 10, 2009

ಅವಳು ಸ್ಕೂಟಿ ತಗೊಂಡಿದಾಳೆ ನಂದಿನ್ನೂ ಹಳೇ ಬೈಕು ಅಂದವನದು ಜೆಲಸಿಯಾ?



ಫೆಬ್ರವರಿ ಬಂತೆಂದರೆ ಸಾಕು ಪ್ರೇಮಿಗಳ ಮನಸ್ಸು ದಿಲ್ಖುಷ್.
ಅದು ಅವರ ಪಾಲಿನ ತಿಂಗಳು. ತಾವು ಇಷ್ಟಪಟ್ಟವರ ಮುಂದೆ ತಮ್ಮ ಪ್ರೇಮ ನಿವೇದನೆ ಮಾಡಿಕೊಳ್ಳಲು ಅವರು ಆರಿಸಿಕೊಳ್ಳುವ ದಿನ ಫೆಬ್ರವರಿ ಹದಿನಾಲ್ಕು. ಗೊತ್ತಿರಲಿ ಅವತ್ತು ಪ್ರೇಮಿಗಳ ದಿನ. ವರ್ಷದಿಂದ ಒಳಗೊಳಗೇ ಬಚ್ಚಿಟ್ಟುಕೊಂಡಿದ್ದ ಭಾವವೊಂದು ಆ ದಿನ ಪ್ರಕಟಗೊಂಡುಬಿಡುತ್ತದೆ. ಆಮೇಲಿಂದ ಅವರು ಜಸ್ಟ್ ಲವ್ವರ್ಸ್.
ವಿಷಯ ಅದಲ್ಲ.
ಲವ್ವರ್ಸ್ ಅಂತ ಅಂದುಕೊಂಡ ಮೇಲೇನೆ ಫಜೀತಿಗಳೆಲ್ಲ ಶುರುವಾಗೋದು. ಅವತ್ತಿನಿಂದ ಅವಳಿಗೆ ಇವನ ಬಗ್ಗೆ ಇವನಿಗೆ ಅವಳ ಬಗ್ಗೆ ಒಂದು ರೀತಿಯ ಪೊಸೆಸೀವ್ನೆಸ್ ಶುರುವಾಗಿಬಿಡುತ್ತದೆ. ಇವನು ಕೇವಲ ನನ್ನವನು/ನನ್ನವಳು ಅನ್ನುವ ಅಧಿಕಾರದ ಮಾತೊಂದು ಅದೆಲ್ಲಿಂದಲೋ ಚಲಾವಣೆಗೆ ಬಂದುಬಿಡುತ್ತದೆ. ಸಮಸ್ಯೆ ಶುರುವಾಗೋದು ಅಲ್ಲೆ. ಅದೂ ಅಲ್ದೆ ಹುಡುಗಿ ತನಗಿಂತ ಬುದ್ಧಿವಂತೆಯಾಗಿದ್ದರೆ, ಒಳ್ಳೆ ಕೆಲಸದಲ್ಲಿದ್ದರೆ ಹುಡುಗ ಜೆಲಸ್ ಆಗುತ್ತಾನಾ?
ನನ್ನ ಆತ್ಮೀಯ ಗೆಳೆಯನೊಬ್ಬನಿದ್ದಾನೆ. ಅವನಿಗೆ ವಯಸ್ಸು ಜಸ್ಟ್ ಥಟರ್ಿ. ಕಳೆದ ವ್ಯಾಲೆಂಟೈನ್ಸ್ ಡೇನಲ್ಲಿ ಒಂದು ಹುಡುಗಿಗೆ ಐ ಲವ್ ಯೂ ಕಣೆ ಅಂತ ಹೇಳಿದ್ದ. ಅವಳು ಆಯ್ತು ಕಣೋ ಅಂತ ಒಪ್ಪಿಕೊಂಡಿದ್ದಳು. ಇವನ ನೇರತನ, ಕಷ್ಟಪಟ್ಟು ದುಡಿಯುವ ಮನಸ್ಸು ಅವಳಿಗೂ ಇಷ್ಟ ಆಗಿತ್ತು ಅನಿಸುತ್ತೆ. ಆಯ್ತು. ಆದ್ರೆ ಒಂದು ಕಂಡೀಷನ್. ನನ್ನನ್ನ ಸಿನೆಮಾಕ್ಕೆ ಕರೆಯಬಾರದು, ಪಾಕರ್್ನಲ್ಲಿ ಕೈ ಕೈ ಹಿಡಿದು ಅಲೆಯೋಣ ಬಾ ಅನ್ನಬಾರದು. ಅಲ್ಲೆಲ್ಲೋ ಕಾಫಿಡೇನ ಮೂಲೆಯಲ್ಲಿ ಕುಳಿತು ಐಸ್ ಕಾಫಿ ಕುಡಿ ಅಂತ ಒತ್ತಾಯಮಾಡಬಾರದು. ಬಿಕಾಸ್ ಐ ಹೇಟ್ ದಟ್. ನನಗೆ ಹೇಗೆ ಬೇಕೋ ಆ ಥರ ನಾನು ಇರುತ್ತೇನೆ. ನೀನಗೆ ಹೇಗೆ ಬೇಕೋ ಆ ಥರ ನೀನಿರು. ಒಬ್ಬರು ತಮ್ಮ ಅಭಿಪ್ರಾಯವನ್ನ ಇನ್ನೊಬ್ಬರ ಮೇಲೆ ಹೇರಬಾರದು. ಬಟ್ ಮದುವೆ ಅಂತ ಆದ ಮೇಲೆ ಇದೆಲ್ಲ ಛೇಂಜ್ ಆಗುತ್ತೆ. ಅಲ್ಲಿವರೆಗೂ ನೋ ಕಾಂಪ್ರಮೈಸ್ ಅಂದುಬಿಟ್ಟಿದ್ದಳು. ಇವನು ಅವತ್ತೇ ಸುಸ್ತಂತೆ.
ಆದ್ರೂ ಅದಕ್ಕೋಸ್ಕಾರಾನೆ ನೀನು ಇಷ್ಟ ಆಗ್ತೀಯ ಕಣೆ ಅಂತ ಅವಳ ಮುಂದೆ ಒದರಿ ಅವಳನ್ನ ಎಲ್ಲಿಗೂ ಕರೆಯದೇ ಏನನ್ನೂ ಗಿಫ್ಟ್ ಅಂತ ಕೊಡದೆ, ತೆಗೆದುಕೊಳ್ಳದೆ ತಣ್ಣಗೆ ಪ್ರೀತಿ ಮಾಡುತ್ತಿದ್ದ.
ನಡುವೆ ಅವಳಿಗೊಂದು ಕೆಲಸದ ಆಫರ್ ಬಂತು. ಸೆಲೆಕ್ಟೂ ಆಗಿಹೋದಳು. ಕೈ ತುಂಬಾ ಪಗಾರ. ಅವಾಗವಾಗ ಟೂರು. ಇತ್ಯಾದಿ ಎಲ್ಲಾ ಕೇಳಿ ಇವನು ಗರಬಡಿದವನಂತೆ ಕುಳಿತ. ಮನದಲ್ಲೇನೋ ತಳಮಳ. ಯಾಕೆಂದ್ರೆ ಇವನಿಗೆ ಅಂಥ ಹೇಳಿಕೊಳ್ಳುವ ಕೆಲಸವೇನೂ ಇರಲಿಲ್ಲ. ಆದ್ರೆ ಅವಳಿಗೆ ಕೈತುಂಬಾ ಪಗಾರ ಬರುತ್ತದೆ. ತಲೆನೋವಾಗಿರುವುದು ಇವನಿಗೆ ಅದೇ! ಇದನ್ನ ಜೆಲಸಿ ಅಂತೀರಾ... ಸಂಕೋಚ ಅಂತೀರಾ ಗೊತ್ತಿಲ್ಲ. ಬಟ್ ಅವನಿಗೆ ನನ್ನ ಹುಡುಗಿ ನನಗಿಂತ ಹೆಚ್ಚಿಗೆ ಸಂಪಾದಿಸುತ್ತಾಳಲ್ಲ ಅನ್ನುವ ಫೀಲಿಂಗ್ ಒಂದು ಎಗ್ಗಿಲ್ಲದೆ ಕಾಡುತ್ತಿದೆ. ಅವನ ಪ್ರಕಾರ ಅಂತ ಹುಡುಗಿಯರು ಹುಡುಗರನ್ನ ಕೀಳಾಗಿ ಕಾಣುತ್ತಾರೆ. ಮದುವೆ ಅಂತ ಆದ ಮೇಲೆ ಅಧಿಕಾರ ಚಲಾಯಿಸುತ್ತಾರೆ. ನಮ್ಮನ್ನ ಹೇಳದೆ ಕೇಳದೆ ಎಲ್ಲೆಲ್ಲಿಗೋ ಹೋಗುತ್ತಾರೆ. ಅವರಿಗೆ ಸುಖಾಸುಮ್ಮನೆ ಫ್ರೆಂಡ್ಸ್ ಜಾಸ್ತಿ. ಕಿಟ್ಟಿಪಾಟರ್ಿ. ಕ್ಲಬ್ಬು, ಪಿಕ್ನಿಕ್ಕೂ ಅದು ಇದೂ ಅಂತ ಸುತ್ತುತ್ತಿರುತ್ತಾರೆ. ಅವರಿಗೆ ಜೊತೆಗೆ ನಾವಿಲ್ಲದಿದ್ರೂ ಆದೀತು. ಓಡಾಡಲು ಕಾರೇಬೇಕು. ಫ್ರೆಂಡ್ಸ್ಗೆ ಕಾಸ್ಟ್ಲೀ ಗಿಫ್ಟ್ ಕೊಡ್ತಾಳೆ. ಹೀಗೆಲ್ಲ ಬೆಳೆಯುತ್ತದೆ ಅವನ ತಕರಾರು?
ಫ್ರೆಂಡ್ಸ್ ಜಸ್ಟ್ ಥಿಂಕ್. ಪ್ರೀತಿ ಅನ್ನೋದು ವಸ್ತಗಳಿಂದ, ಕೆಲಸದಿಂದ ಅಳೆಯುವಂತಹದ್ದಾ? ಅವಳು ಹೇಗೆ ಇರಲಿ, ಇವನು ಹೇಗೆ ಇರಲಿ ಪ್ರೀತಿ ಮಾತ್ರ ಬದಲಾಗಕೂಡದು. ಹಾಗಿದ್ದಾಗ ಮಾತ್ರ ಪ್ರೀತಿ ಜಾರಿಯಲ್ಲಿರುತ್ತದೆ. ಇಲ್ಲದಿದ್ದರೆ ಈ ವ್ಯಾಲೆಂಟೈನ್ಸ್ ಡೇಗೆ ಶುರುವಾದ ಪ್ರೀತಿ ನೆಕ್ಸ್ಟ್ ವ್ಯಾಲೆಂಟೈನ್ಸ್ ಡೇಗೆ ಬಿರುಕು ಬಿಟ್ಟಿರುತ್ತದೆ. ಶಿಥಿಲವಾದ ಪ್ರೀತಿಯನ್ನ ತೇಪೆ ಹಚ್ಚಿ ಹೆಚ್ಚು ದಿನ ಸಾಗಿಸೋದು ಕಷ್ಟ ಕಷ್ಟ. ನಿಮಗೆ ಗೊತ್ತಿರಲಿ, ಪ್ರೀತಿ ವಿಷಯದಲ್ಲಿ ಇಬ್ಬರಲ್ಲಿ ಯಾರೂ ಹೆಚ್ಚಲ್ಲ. ಯಾರೂ ಕಡಿಮೆ ಅಲ್ಲ. ಅಲ್ಲಿ ಇಬ್ಬರೂ ಸರ್ವಸಮಾನರು. ಹಾಗಿದ್ದಾಗ ಮಾತ್ರ ವ್ಯಾಲೆಂಟೈನ್ಸ್ ಡೇಗೂ ಒಂದು ಅರ್ಥ ಬರುತ್ತದೆ.
ಇತ್ತೀಚೆಗೆ ರೇಡಿಯೋ ಪ್ರೋಗ್ರಾಮ್ನಲ್ಲಿ ಒಬ್ಬ ಹುಡುಗ ಹೇಳುತ್ತಿದ್ದ. ನನ್ನದು ಹಳೇ ಬೈಕ್. ಆದ್ರೆ ನನ್ನ ಹುಡುಗಿ ಹೊಸ ಸ್ಕೂಟಿ ತಗೊಂಡಿದಾಳೆ. ಯಾಕೋ ನನಗೆ ಮುಜುಗರ ಅನಿಸುತ್ತಿದೆ. ಏನು ಮಾಡಲಿ ಅಂತ.
ಈ ಥರದ ಸಣ್ಣತನಗಳು, ಕೀಳರಿಮೆಗಳು ಬೇಡ ಅಂತಾನೆ ನಾನು ಹೇಳಲು ಹೊರಟಿದ್ದು. ನಿಮ್ಮ ಜೊತೆಗಾರ ಅಥವಾ ಜೊತೆಗಾತಿ ನಿಮಗಿಂತ ಚೆನ್ನಾಗಿ ಬೆಳೆಯುತ್ತಿದ್ದಾಳೆ ಅಂದ್ರೆ ಅದಕ್ಕಿಂತ ಸಂತೋಷ ಬೇರೇನಿದೆ ಅಲ್ವ!
ಅಂದಹಾಗೆ ಹ್ಯಾಪಿ ವ್ಯಾಲೆಂಟೈನ್ಸ್ ಡೇ.

ಫ್ಲರ್ಟ್ ಎಕ್ಸ್ ಪ್ರೆಸ್
ಈ ವಿದೇಶೀಯರೇ ಹಾಗೇನೋ! ಏನೇ ಮಾಡಿದರೂ ಅದು ಖುಲ್ಲಂಖುಲ್ಲ. ಅಥವಾ ವಿದೇಶಿಯರು ಅನ್ನುವುದಕ್ಕೋಸ್ಕರಾನೇ ಅವರು ನಮ್ಮ ಪಾಲಿಗೆ ಹಾಗೇ ಕಾಣಿಸುತ್ತಾರಾ, ಗೊತಿಲ್ಲ.
ನೋಡಿ, ಜರ್ಮನ್ನಲ್ಲಿ ಫ್ಲಟರ್್ ಎಕ್ಸ್ಪ್ರೆಸ್ ಅಂತ ಒಂದು ಟ್ರೈನ್ ಬಿಟ್ತಾರೆ. ಸಿಫರ್್ ಪ್ರೇಮಿಗಳಿಗೋಸ್ಕರ. ಫೆಬ್ರವರಿ ಹದಿಮೂರನೇ ತಾರೀಖು ರಾತ್ರಿ ಅದು ಹೊರಡುತ್ತದಂತೆ. ಅಲ್ಲಿ ಮದುವೆ ಆಗಿರೋರು, ಮಕ್ಕಳಾಗಿರೋರು ಹೋಗೋ ಹಾಗಿಲ್ಲವಾ, ಗೊತ್ತಿಲ್ಲ. ಆದ್ರೆ ಯಂಗ್ ಹಾಟ್ಸರ್್ ಟ್ರೈನ್ನಲ್ಲಿ ತಮ್ಮ ತಮ್ಮ ಜೊತೆಗಾರರನ್ನ ಹುಡುಕಿಕೊಳ್ಳಬಹುದು. ಪ್ರೀತಿ ಮಾಡಬಹುದು. ವ್ಯಾಲೆಂಟೈನ್ಸ್ ಡೇ ಗಿಫ್ಟ್ ಕೊಡಬಹುದು. ಅವರ ಜೊತೆ ಹಾಡಬಹುದು. ಕುಣಿಬಹುದು. ಪರಸ್ಫರ ಓಕೆ ಆದ್ರೆ ಪರ್ಸನಲ್ ವಿವರಗಳನ್ನ ಹಂಚಿಕೊಳ್ಳಬಹುದು. ಒಟ್ಟಿನಲ್ಲ ಎಲ್ಲೆ ಮೀರದಂತೆ ಇದ್ದರಾಯ್ತು. ಇಷ್ಟಾದ ಮೇಲೆ ಇಷ್ಟ ಆದ್ರೆ ಜೀವನಪೂತರ್ಿ ಸಂಗಾತಿಯನ್ನಾಗಿಯೂ ಇಟ್ಟುಕೊಳ್ಳಬಹುದು. ಕಷ್ಟ ಆದ್ರೆ ಇನ್ನೊಬ್ಬರಿಗೆ ಟ್ರೈ ಮಾಡಬಹುದು. ಇಂಥ ಪ್ರೇಮಯಾನಕ್ಕೆ ಸಖತ್ ಡಿಮ್ಯಾಂಡ್ ಇದೆಯಂತೆ. ಹೋದ ವರ್ಷ ಎಂಟುನೂರು ಮಂದಿಗೆ ಮಾತ್ರ ಇರೋದು ಕಣ್ರಯ್ಯ ಅವಕಾಶ ಅಂದ್ರೂ ಕೇಳದೆ ಬರೋಬ್ಬರಿ ಐದುಸಾವಿರ ಅಪ್ಲಿಕೇಷನ್ ಬಂದಿದ್ದವಂತೆ. ಅಂದ್ರೆ ಪ್ರೀತಿಯ ಹುಚ್ಚು ತುಸು ಜಾಸ್ತೀನೆ ಇದೆ ಅಂತಾಯ್ತಲ್ಲ.
ಈ ಟ್ರೈನ್ ಜರ್ಮನ್ನ ಹತ್ತು ಪ್ರಮುಖ ಪಟ್ಟಣಗಳನ್ನು ಹಾದು ಹೋಗುತ್ತಂತೆ. ಕೊನೆಗೆ ಪ್ರೇಮಯಾನ ಮುಗಿದ ಮೇಲೆ ಒಂದು ಪಾಟರ್ಿ ಇರುತ್ತೆ. ರೈಲ್ನಲ್ಲಿ ಫೇಲ್ ಆದವರು ಪಾಟರ್ಿಯಲ್ಲಿ ಪಾಟರ್್ನರ್ನ ಹುಡುಕಿಕೊಳ್ಳುವುದಕ್ಕೆ ಆವಕಾಶ ಉಂಟು. ನಮ್ಮ ಕಡೆ ಮ್ಯಾಟ್ರಿಮೋನಲ್ಸ್ನವರು ಹುಡುಗ ಹುಡುಗಿಯರನ್ನ ಒಂದೆಡೆ ಸೇರಿಸಿ ಮ್ಯಾಚ್ಮೇಕಿಂಗ್ ಆಂತ ಮಾಡುತ್ತಾರಲ್ಲ ಅದೇ ಥರ ಅನ್ನಿ. ಆದ್ರೆ ಇಲ್ಲಿ ರೈಲ್ ಬಿಡ್ತಾರೆ.
ಅದೆಲ್ಲ ಸರಿ, ರೈಲಲ್ಲಿ ರೈಲ್ ಬಿಟ್ಟು ಪ್ರೀತಿ ಮಾಡ್ತೀನಿ ಅಂತ ಮೋಸ ಮಾಡಿ ಹೋದ್ರೆ ಏನು ಗತಿ?
ಅಲ್ಲರೀ, ರೈಲೇ ಬಿಟ್ಟವರು ಸುಖಾಸುಮ್ಮನೆ ರೈಲ್ ಬಿಡೋರ ಬಗ್ಗೆ ಒಂದು ಕಣ್ಣಿಟ್ಟಿರಲ್ವಾ!
ಅಂದಹಾಗೆ ಬೆಂಗಳೂರಲ್ಲೂ ಇಂಥದ್ದೊಂದು ರೈಲ್ ಬಿಟ್ರೆ ಹೇಗೆ ಅಂತ ಯೋಚಿಸ್ತಿದೀನಿ.
ಯಾವುದಕ್ಕೂ ಫೆಬ್ರವರಿ ಹದಿನಾಲ್ಕರ ತನಕ ನೀವು ಕಾಯಲೇಬೇಕು.

ಎಲ್ಲಾ ಇಸಕೊಂಡವಳಿಗೆ ಇದೊಂದು ಬೇಡವೆಂದ್ರೆ ಹೇಗೆ?





ಪ್ರಿಯ ಇವಳೇ!
ನನಗೇನು ಹೆಸರಿಲ್ಲವಾ ಅಂತ ಕೇಳಬೇಡ. ನಿನ್ನ ಹೆಸರು ಕರೆಯಲು ಮನಸ್ಸಾಗುತ್ತಿಲ್ಲ ಕಣೆ ಅಂದರೆ ಕೋಪಿಸಿಕೊಳ್ಳಬೇಡ.
ನೆನಪಿದೆಯಾ ನಿನಗೆ. ನಿನ್ನ ಹೆಸರೆಂದ್ರೆ ನನಗೆ ಅಷ್ಟಿಷ್ಟ. ಯಾವ ಹುಡುಗಿಯನ್ನೂ ಈ ಮೊದಲು ಪೂತರ್ಿ ಹೆಸರಿಡಿದು ಕರೆಯದ ಪಾಪಿ ನಾನು. ಕರೆಯಲಿ ಅಂತ ಆಸೆ ಪಡುತ್ತಿದ್ದವರ ಪಟ್ಟಿ ದೊಡ್ಡದಿದೆ ಅಂದ್ರೆ ಅಪಸವ್ಯ ಆದೀತು. ಅಂಥದರಲ್ಲಿ ನಿನ್ನನ್ನ ಪೂವರ್ಿ ಅಂತ ಕರೆಯುತ್ತಿದ್ದೆ. ನಿನ್ನದೋ ಅದನ್ನು ಶಾಟರ್್ ಮಾಡಿ ಕರೆಯೋ ಅಂತ ಪೀಡಣೆ. ಶಾಟರ್್ ಮಾಡೋದಕ್ಕೆ ಆಗೊಲ್ಲ ಅನ್ನುವುದು ನಿನಗೂ ಗೊತ್ತಿತ್ತು. ಆದರೂ ಹಾಗೆ ಕೇಳುವುದರಲ್ಲೇನೋ ನಿನಗೆ ಎಲ್ಲಿಲ್ಲದ ಖುಷಿ ಖುಷಿ.
ಜಸ್ಟ್ ಎಲ್ಲಾ ನೆನಪಾಗುತ್ತಿದೆ ಕಣೆ. ಹೇಗೆ ಹೇಳಲಿ ನಿನಗೆ ನನ್ನ ಎದೆಯ ಕದದ ಮೇಲಿನ ಮೊದಲ ಹೆಸರು ನೀನೆ ಅಂತ. ನೋಡ ನೋಡುತ್ತಲೇ ಅದ್ಯಾಗೆ ನೀನು ನನಗೆ ಎಲ್ಲಾ ಆಗಿಹೋದೆಯಲ್ಲ! ಪ್ರೀತಿಯಂದ್ರೆ ಹಾಗೇನೆ. ಅದು ಒಮ್ಮೆ ಬಂದು ಎದೆಯ ಅಂಗಳದಲ್ಲಿ ನಿಂತರೆ ಸಾಕು ಅಲ್ಲಿ ಸಾವಿರ ಗುಲಾಬಿಗಳ ಹೂ ಕಂಗೊಳಿಸುತ್ತದೆ. ಅದರ ಗಂಧ, ಘಮಲು, ನುಣುಪು, ವೈಯ್ಯಾರ ಎಲ್ಲಾ ನೀನೆ. ಇನ್ನೇನಿದೆ ನನಗೆ?! ನಿನ್ನ ಸನಿಹವೊಂದನ್ನು ಬಿಟ್ಟು. ನಿನ್ನ ನೆನಪಿಲ್ಲದ ದಿನವನ್ನು ನಾನು ಕನಸಲ್ಲೂ ಎಣಿಸಿಕೊಳ್ಳಲಾರೆ. ಹೀಗಿರುವಾಗ ಜಸ್ಟ್ ನೀನು ಮಾಡಿದ್ದು ಸರಿಗಿಲ್ಲ ಅಂತ ಒಂದೇ ಒಂದು ಮಾತು ಹೇಳಿದ್ರು ಮುಚ್ಚುಕೊಂಡು ತಿದ್ದಿಕೊಳ್ತಾ ಇದ್ದನಲ್ಲೆ! ಇಷ್ಟಕ್ಕೂ ಅಂತ ತಪ್ಪು ನಾನೇನು ಮಾಡಿದೆ ಹೇಳು! ನಿನ್ನ ಮೃದು ಮಧುರ ಕೆನ್ನೆಗೆ ಸಂಜೆ ಗತ್ತಲಿನಲ್ಲೊಂದು ಮುತ್ತು ಕೊಟ್ಟಿದ್ದು ತಪ್ಪಾ? ಬಿಡು ಬಿಡು. ಈ ಪ್ರಪಂಚದಲ್ಲಿ ಎಷ್ಟು ಜನ ಪ್ರೇಮಿಗಳು ಮುತ್ತು ಕೊಟ್ಟಿಲ್ಲ, ತೆಗೆದುಕೊಂಡಿಲ್ಲ. ಕೊಡುವುದು ಮತ್ತು ತೆಗೆದುಕೊಳ್ಳುವುದು ಪ್ರೇಮಿಗಳ ಅಲಿಖಿತ ರೂಲ್ಸ್. ಅಂತದರಲ್ಲಿ ಕೊಡು ಅಂತ ನಾನು ನಿನ್ನನ್ನಾವತ್ತಾದರೂ ಕೇಳಿದ್ದೆನಾ? ಪೀಡಿಸಿದ್ದೆನಾ? ಪಪ್ಪಿ ಕೊಡೆ ಅಂತ ಮುನಿಸಿಕೊಂಡೆನಾ? ಬಯಸಿ ಬಯಸಿ ನಾನೇ ಕೊಟ್ಟೆ, ತೆಗೊಂಡು ಸುಮ್ಮನಿರಬೇಕಿದ್ದವಳು ನೀನು, ದೊಡ್ಡ ರಂಪಾ ಮಾಡಿ ಹೊರಟುಹೋದೆಯಲ್ಲ.
ಮನಸ್ಸಿಗೆ ತುಂಬಾ ನೋವಾಗ್ತಿದೆ ಕಣೆ.
ಅವತ್ತು ನೀನು ಆಕಾಶ ಬಣ್ಣದ ಸೀರೆ ಹುಟ್ಟುಕೊಂಡು ಬಂದಿದ್ದೆಯಲ್ಲ ಅದರ ಮೇಲಿನ ಬಿಳಿ ಹೂಗಳು ಹೇಗಿವೆ? ಕೊಟ್ಟ ಟೈಟಾನ್ ವಾಚಿನ ಶೆಲ್ ವೀಕಾಗಿರಬೇಕು ನೋಡಿಕೋ! ಕಣ್ಣ ಬಣ್ಣದ ಚೂಡಿದಾರ ಹಳತಾಯಿತಾ? ಚಪ್ಪಲಿ ಮೇಲಿದ್ದ ಗೊಂಡೆ ಬಿದ್ದುಹೋಗಿರಬೇಕು! ಕೊಡಿಸಿದ್ದ ಹನ್ನೆರಡು ಡಜನ್ ಬಳೆಯಲ್ಲಿ ಉಳಿದವೆಷ್ಟೋ? ಕಡುಗೆಂಪಿನ ನೇಲ್ ಪಾಲಿಶ್ ಒಮ್ಮೆಯಾದರೂ ಹಚ್ಕೊಂಡ್ಯಾ? ಮುತ್ತಿನ ಮೂಗುತಿಯ ನತ್ತಿಗೆ ನಾನು ಕೇಳಿದೆ ಅಂತ ಹೇಳಿಬಿಡು. ಇದೆಲ್ಲ ಬಿಡು ಸಣ್ಣ ಸಣ್ಣ ಕನಸುಗಳು. ಆದ್ರೆ ನಾನು ನಡೆದರೂ ಪರವಾಗಿಲ.್ಲ ನನ್ನ ಹುಡುಗಿ ನಡೀಬಾರದು. ಅವಳ ಹಾಲು ಬಿಳುಪಿನ ಪಾದಕ್ಕೆ ನೋವಾದೀತು ಅಂತ ಸಾಲ ಮಾಡಿ ನಿನಗೊಂಡು ಸ್ಕೂಟಿ ಪೆಪ್ ಕೊಡಿಸಿದ್ದೆನಲ್ಲ. ಅದರ ಸಾಲವೆ ಇನ್ನೂ ತೀರಿಲ್ಲ ಕಣೆ. ಆಗಲೇ ಎದ್ದುಹೋಗಿಬಿಟ್ಟೆಯಲ್ಲ, ಜತೆಯಲ್ಲಿ ನೀನಿದ್ದರೆ ಆ ಸಾಲದ ಭಾದೆ ಅಷ್ಟಾಗಿ ಕಾಡುತ್ತಿರಲಿಲ್ಲ ಅಂತ ಹೇಳಿದರೆ ಮತ್ತೆ ತಪ್ಪಾದೀತೇನೋ!
ನಿಜ್ಜ ಹೇಳ್ಲ, ಇಷ್ಟೆಲ್ಲವನ್ನೂ ನೀನೇನು ಕೇಳಿದವಳಲ್ಲ ಬಿಡು. ನಾನೇ ಕೊಡಿಸಿದೆ. ನನ್ನ ಹುಡುಗಿ ಕೊಡುವವಳಲ್ಲ ಜಸ್ಟ್ ತೆಗೆದುಕೊಳ್ಳುವವಳು ಅಂತ ನಿನ್ನ ಪರಿಚಯವಾದ ಎರಡನೇ ಕ್ಷಣಕ್ಕೆ ಗೊತ್ತಾಗಿಹೋಗಿತ್ತು ನನಗೆ. ಹಾಗಂತಲೇ ಮುತ್ತು ಕೊಟ್ಟೆ. ಎಲ್ಲಾ ಇಸಕೊಂಡವಳಿಗೆ ಮುತ್ತೊಂದು ಬೇಡವೆಂದ್ರೆ ಯಾವ ನ್ಯಾಯ?
ಚಿಂತೆ ಅದಲ್ಲ. ನನಗೆ ಕೊಟ್ಟೇ ಅಭ್ಯಾಸ. ಕೊಡುವ ಸುಖ ತೆಗೆದುಕೊಳ್ಳುವುದರಲ್ಲಿ ಇರುವುದಿಲ್ಲ ಅಂತ ಯಾವನೋ ಇಡಿಯಟ್ ಹೇಳಿದ್ದನ್ನೇ ಅಕ್ಷರಶಃ ಪಾಲಿಸಿಕೊಂಡು ಬಂದವನು ನಾನು. ಆದ್ರೆ ಎಂದು ಬರುತ್ತೀಯ? ನಾನು ಕೊಟ್ಟ ಮುತ್ತು ಬೇಡಾದ್ರೆ ವಾಪಸ್ ಕೊಟ್ಟಿಬಿಡು! ಆದ್ರೆ ಸತಾಯಿಸಬೇಡ. ಇನ್ನು ಮುಂದೆ ನೀನು ಕೇಳದ ಹೊರತು ಒಂದೇ ಒಂದು ಮುತ್ತನ್ನೂ ನಾನು ದಯಪಾಲಿಸಲಾರೆ ಅಂತ ಆ ವ್ಯಾಲೆಂಟೈನ್ ಮೇಲೆ ಅಣೆ ಮಾಡಿ ಹೇಳುತ್ತಿದ್ದೇನೆ.
ಗೊತ್ತಾ, ಇನ್ನು ಎರಡು ರಾತ್ರಿ ಕಳೆದರೆ ಪ್ರೇಮಿಗಳ ಹಬ್ಬ. ಅವತ್ತಿಗೆ ನಮ್ಮ ಪ್ರೀತಿಗೆ ಒಂದು ವರ್ಷ. ಅದೇನು ಸುಮ್ಮನೆ ಬಂತಾ? ಕಾಡಿಬೇಡಿ, ಹಿಂದಿಂದೆ ಅಲೆದು ಹೈರಾಣಾಗಿ ಒಲಿಸಿಕೊಂಡ ಪ್ರೀತಿ ಕಣೆ ಅದು. ಪ್ರೀತಿಸುವುದರ ಮತ್ತು ಕಳೆದುಕೊಳ್ಳುವುದರ ವ್ಯಥೆ ನಿನಗೇನು ಗೊತ್ತು.
ಇಲ್ಲಿ ನೀರಿನಿಂದ ತೆಗೆದ ಮೀನಿನಂತಾಗಿದ್ದೇನೆ ನಾನು.
ವ್ಯಾಲೆಂಟೈನ್ಸ್ ಡೇ ಬೆಳಿಗ್ಗೆ ಏಳಕ್ಕೆ ಮೆಜೆಸ್ಟಿಕ್ ಬಸ್ ಸ್ಟಾಂಡಿನ ಆರನೇ ಪ್ಲಾಟ್ಫಾಮರ್ಿಗೆ ಬಂದುಬಿಡು.
ನೀ ಬಂದರೆ ಅದಕ್ಕಿಂತ ಖುಷಿ ನನಗೆ ಬೇರೇನಿದೆ.

Monday, February 2, 2009

ಪಾಕಿಸ್ತಾನಕ್ಕೊಂದು ಕವರ್


ಇದು ಇತ್ತೀಚೆಗೆ ನಾನು ಮಾಡಿದ ಕವರ್ ಪೇಜ್. ರವಿ ಬೆಳಗೆರೆಯವರ ನೀನಾ ಪಾಕಿಸ್ತಾನಾ?
ನಿಮಗೆ ಗೊತ್ತಿದೆ, ಪಾಕಿಸ್ತಾನ ಅಸಂಬದ್ಧಗಳ ನಾಡು. ಅಲ್ಲಿ ರಕ್ತಪಾತ, ಕೊಲೆ, ಬಾಂಬು, ಗನ್ನು, ಬ್ಯಾಟಲ್ಲು ವೆರಿ ಕಾಮನ್. ಮನುಷ್ಯರಿಗೆ ಬೆಲೆ ಇಲ್ಲ. ನೂರಾ ಐವತ್ತು ಡಾಲರ್ ಕೊಟ್ಟರೆ ಒಂದು ಎ ಕೆ 47 ಸಿಗುತ್ತದೆ. ಕಡಲೆ ಪುರಿ ಥರ ಬುಲ್ಲೆಟ್ಗಳು ರಸ್ತೆ ಬದಿಯಲ್ಲಿ ಮಾರಾಟವಾಗುತ್ತವೆ. ಕೊಲ್ಲುವುದಕ್ಕೆ ಅಂತಾನೆ ತಂಡಗಳಿವೆ. ಯಾರಿಗೂ ಗೊತ್ತಿಲ್ಲದ ಯಾವನೋ ಒಬ್ಬ ಮೈತುಂಬಾ ಬಾಂಬು ಕಟ್ಟಿಕೊಂಡು ಇನ್ನಾರಿಗಾಗೋ ಪ್ರಾಣ ತೆತ್ತುಬಿಡುತ್ತಾನೆ. ಹಾಗೆ ನೂರಾರು ಅಮಾಯಕರ ಪ್ರಾಣ ತೆಗೆಯುತ್ತಾನೆ. ಅದು ಅವನ ಪಾಲಿಗೆ ದೇವರ ಕೆಲಸ.
ಇಂಥ ವಿಚಿತ್ರ ನಾಡೂ ಉಂಟೆ ಅನಿಸುತ್ತದೆ ಪಾಕಿಸ್ತಾನವನ್ನು ನೋಡಿದಾಗ. ಅದರ ಇನ್ನೊಂದು ಕರಾಳ ಮುಖವನ್ನು ಪುಸ್ತಕದಲ್ಲಿ ನೋಡಬಹುದು.
ಹಾಗಾಗಿ ಕವರ್ ಪೇಜ್ ಗೆ ಈ ಚಿತ್ರ ಅಪ್ರಾಪ್ರಿಯೇಟ್ ಅನಿಸಿತು.
ಹೇಗಿದೆ?

Sunday, February 1, 2009

ರೋಸ್ ಅರಳಿದ ಸಮಯ



ವಿಧಿ ಕೆಲವೊಮ್ಮೆ ಏನೆಲ್ಲಾ ಮಾಡಿಬಿಡುತ್ತದೆ ಗೊತ್ತಾ?
ತಾಯ ಗರ್ಭದಿಂದ ಈ ಸುಂದರ ಜಗತ್ತಿಗೆ ಬಂದು ಬಿಡುತ್ತೇವೇನೋ ನಿಜ. ಆದ್ರೆ ಅದನ್ನ ನೋಡೋದಕ್ಕೆ ಕಣ್ಣೇ ಇರುವುದಿಲ್ಲ. ನಡೆಯಲು ಕಾಲೇ ಇರುವುದಿಲ್ಲ. ಮಾತಾಡಿದರೆ ಶಬ್ದಗಳೇ ಇರುವುದಿಲ್ಲ. ಹುಟ್ಟಿದ್ದಾದರೂ ಯಾಕೋ ಅನ್ನುವ ಅನಾಥಪ್ರಜ್ಞೆಯೊಂದು ಬದುಕಿನುದ್ದಕ್ಕೂ ಬಾಚಿ ತಬ್ಬಿಕೊಂಡೇ ಇರುತ್ತದೆ. ಇಂಥ ಎಷ್ಟೋ ಅಣ್ಣ ತಮ್ಮಂದಿರು, ಅಕ್ಕ ತಂಗಿಯರು ನಮ್ಮ ನಡುವೆಯೇ ಬದುಕೆಂಬ ಬಂಡಿಗೆ ಹೆಗಲು ಕೊಟ್ಟು ಹೇಗೋ ದೂಕುತ್ತಿರುತ್ತಾರೆ. ಅವರ ಬದುಕಿನ ಸಂಕಷ್ಟ ದೊಡ್ಡದು. ಕೈ ಹಿಡಿಯುವವರಿರುವುದಿಲ್ಲ, ಸಾಂತ್ವನ ಹೇಳುವವರಿರುವುದಿಲ್ಲ. ಬೇಡಿಕೊಳ್ಳೋಣವೆಂದ್ರೆ ಆ ದೇವರು ಮೊದಲೇ ಕೈ ಬಿಟ್ಟಿರುತ್ತಾನೆ!
ಫ್ರೆಂಡ್ಸ್ ಕಳೆದ ವಾರವಷ್ಟೇ ನಿಕ್ ಅನ್ನೋ ಹುಡುಗನ ಕಥೆ ಓದಿದ್ರಿ. ಆತನಿಗೆ ಎರಡೂ ಕೈ ಇಲ್ಲ. ಕಾಲೂ ಇಲ್ಲ. ಆದರೂ ಏನಾದ್ರೂ ಮಾಡಬೇಕು ಅಂತ ಹೊರಟು ಸಾಧನೆಯನ್ನು ಬಿಡದೆ ಒಲಿಸಿಕೊಂಡವ.
ಇದೂ ಅಂಥದೇ ಸ್ಟೋರಿ. ಹೇಳಬೇಕೆಂದ್ರೆ ಇವಳಿಗೆ ಅರ್ಧ ದೇಹ ಮಾತ್ರ ಇದೆ. ಇನ್ನರ್ಧ ಇಲ್ಲ. ಇವಳ ಹೆಸರು ರೋಸ್ಮೇರಿ ಸಿಗ್ಗಿನ್ಸ್. ಕೊಲೊರಾಡೋದವಳು. ಜೆನೆಟಿಕ್ ಡಿಸಾರ್ಡರ್ನಿಂದುಂಟಾದ ತೊಂದರೆಯಿಂದ ಅವಳ ನಿರುಪಯೋಗಿ ಕಾಲನ್ನು ಚಿಕ್ಕಂದಿನಲ್ಲೆ ತೆಗೆಯಲಾಗಿತ್ತು. ಅಲ್ಲಿಂದ ಶುರುವಾಯಿತು ನೋಡಿ ಅವಳ ಬದುಕಿನ ಹೋರಾಟ. ಹೇಗೆ ನೀನು ಈ ನೋವನ್ನ ಮೆಟ್ಟಿ ನಿಂತೆ ಅಂದ್ರೆೆ ರೋಸ್ ಹೇಳುವುದಿಷ್ಟು. ದಿಸ್ ಈಸ್ ಮೈ ರಿಯಾಲಿಟಿ. ದಿಸ್ ಈಸ್ ಮೈ ನಾರ್ಮಲ್. ನಾನು ನಿಮ್ಮೆಲ್ಲರ ತರಾನೆ ಏನು ಬೇಕಾದ್ರೂ ಮಾಡಬಲ್ಲೆ.
ಇಂತ ರೋಸ್ 1999ರಲ್ಲಿ ಡೇವಿಡ್ ಸಿಗ್ಗಿನ್ಸ್ನನ್ನ ಮದುವೆ ಅಗ್ತಾಳೆ. ಅದೂ ಕುತೂಹಲವೇ! ಡೇವ್ ಅವಳಿಗೆ ಪರಿಚಯವಾದದ್ದು ಫೋನ್ ಮುಖಾಂತರ. ತುಂಬಾ ದಿನ ಹಾಗೆ ಮಾತಾಡಿಕೊಂಡಿದ್ದ ರೋಸ್ ಒಂದಿನ ನಿನ್ನನ್ನ ನೋಡಬೇಕು ನನ್ನ ಆಫೀಸಿಗೆ ಬಾ ಅಂದುಬಿಡುತ್ತಾಳೆ. ಡೇವ್ ಹೋಗಿ ನೋಡಿದ್ರೆ ಅವನಿಗೆ ಅಂತ ಶಾಕ್ ಏನೂ ಆಗಲಿಲ್ಲ. ನನ್ನನ್ನ ಪರಿಪೂರ್ಣ ಮಹಿಳೆಯಂತೆ ನೋಡಿದ್ದು ಅವನು ಮಾತ್ರ ಅನ್ನುತ್ತಾಳೆ ರೋಸ್. ಇವಳು ಜಸ್ಡ್ ಎರಡೂವರೆ ಅಡಿ. ಆತ ಐದು ಅಡಿ ಹತ್ತು ಇಂಚು ಎತ್ತರ ಇದ್ದಾನೆ. ಪ್ರೀತಿ ಒಂದಿದ್ರೆ ಜೋಡಿ ಹೇಗಿದ್ದರೇನು ಅಲ್ವ! ಅಲ್ಲಿಗೆ ಅವಳ ಮಹತ್ತರ ಕನಸೊಂದು ನನಸಾಗಿತ್ತು.
ರೋಸ್ಳ ಬದುಕು ಅಷ್ಟು ಖುಷಿಯಾಗೇನೂ ಇರಲಿಲ್ಲ. ಈಗಲೂ. ಆದ್ರೆ ಅವಳು ಬಂದ ಕಷ್ಟಗಳನ್ನ ಎದುರಿಸಿದ ರೀತಿ ಇದೆಯಲ್ಲ ಗ್ರೇಟ್. ನೀವು ನಂಬಲಿಕ್ಕಿಲ್ಲ ಅವಳು ಗಭರ್ಿಣಿ ಅಂದಾಗ ಡಾಕ್ಟರೇ ಗಾಬರಿ ಬಿದ್ದಿದ್ದರು. ನೀನು ಅಥವಾ ಮಗು ಇಬ್ಬರಲ್ಲಿ ಒಬ್ಬರು ಮಾತ್ರ ಉಳಿಯೋದಕ್ಕೆ ಸಾಧ್ಯ. ಡಿಸೈಡ್ ಮಾಡು ಅಂದರಂತೆ. ಆದ್ರೆ ಇವಳು ನೋ ಪ್ರಾಬ್ಲೆಮ್ ಡಾಕ್ಟರ್. ನನಗೆ ಮಗು ಬೇಕು ಅಂದುಬಿಟ್ಟಳು. ಆಕೆ ಅದೆಂತಹ ನೋವು ತಿಂದಿರಬೇಕು. ಸಿಸೇರಿಯನ್ ಮಾಡಿ ಗಂಡು ಮಗು ಆಗಿದೆ ನೋಡು ಅಂತ ತೋರಿಸಿದರೆ ರೋಸ್ ಮೊದಲು ನೋಡಿದ್ದು ಮಗುವಿನ ಕೈಕಾಲುಗಳನ್ನ. ಎಲ್ಲಾ ಸರಿಯಾಗಿವೆ ಅನಿಸಿದ ಮೇಲೆ ಅವಳು ನಿಟ್ಟುಸಿರು ಬಿಟ್ಟಿದ್ದಂತೆ. ಸಂತೋಷ ಪಟ್ಟಿದ್ದಂತೆ. ಅವಳ ಬದುಕಿನಲ್ಲಿ ಅದು ಎಂದೂ ಮರೆಯಲಾಗದ ಕ್ಷಣ. ಆ ಮಗುವಿನ ಹೆಸರು ಲೂಕ್ ಸಿಗ್ಗಿನ್ಸ್. ಈಗ ಅವನು ಅಮ್ಮನಿಗಿಂತ ಎತ್ತರಕ್ಕೆ ಬೆಳೆದುಬಿಟ್ಟಿದ್ದಾನೆ.
ನಂಬಿ ರೋಸ್ ಎರಡನೇ ಬಾರಿ ಗರ್ಭವತಿಯಾದಳು. ಡಾಕ್ಟರು ಅಲ್ಲಮ್ಮ ಮೊದಲನೇ ಹೆರಿಗೇನೇ ಅಷ್ಟು ಕಷ್ಟ ಆಯ್ತು. ಮತ್ತೇಕೆ ರಿಸ್ಕ್ ತೆಗೋಳ್ತೀದೀಯ ಅಂದ್ರೆ, ನನಗೆ ಗೊತ್ತು ಡಾಕ್ಟರ್. ನಾನಿರುವ ಸ್ಥಿತಿಯಲ್ಲಿ ಬೇರೇ ಯಾರೇ ಇದ್ದರೂ ಆಕೆ ಗರ್ಭ ಧರಿಸಲು ಒಪ್ಪುತ್ತಿರಲಿಲ್ಲ. ಬಟ್ ನಾನು ಹಾಗಲ್ಲ. ಮೊದಲನೆಯದು ಮಿರಾಕಲ್ ಅಂದ್ರಿ. ಈಗ ಇನ್ನೊಂದು ಮಿರಕಲ್ ಜರುಗಲಿ ಬಿಡಿ ಅಂದಳಂತೆ. ಅದರ ಫಲ ಈಗ ರೋಸ್ಗೆ ಒಂದು ಮುದ್ದಾದ ಹೆಣ್ಣು ಮಗು ಇದೆ.
ರೋಸ್ಳ ಆತ್ಮಸ್ಥೈರ್ಯ ಎಂಥವರನ್ನೂ ದಂಗುಬಡಿಸುತ್ತದೆ. ಅವಳು ಎಲ್ಲಾ ಕೆಲಸಗಳನ್ನು ತಾನೇ ಮಾಡಿಕೊಳ್ಳುತ್ತಾಳೆ. ನಾನೂ ನಿಮ್ಮಂತೆಯೇ ನಾರ್ಮಲ್ ಆಗಿ ಎಲ್ಲಾ ಕೆಲಸ ಮಾಡುತ್ತೇನೆ. ಆದ್ರೆ ಚೂರು ಡಿಫರೆಂಟ್ ಆಗಿರುತ್ತೆ ಅಷ್ಟೆ ಅನ್ನೋದು ಅವಳ ಮಾತು. ಕಾರ್ ಓಡಿಸುತ್ತಾಳೆ. ಮಕ್ಕಳನ್ನ ತಿರುಗಾಟಕ್ಕೆ ಕರೆದೊಯ್ಯುತ್ತಾಳೆ. ಗಂಡನ ಜೊತೆ ಜಾಲಿ ರೈಡಿಂಗ್ ಹೋಗುತ್ತಾಳೆ. ಅವಳ ಬದುಕಲ್ಲಿ ಆಗಲ್ಲ ಅನ್ನುವುದು ಏನೂ ಇಲ್ಲ. ನನ್ನ ಗಂಡ ಡೇವ್ ಇದಾನಲ್ಲ. ಆತ ಚಿನ್ನದಂಥವ. ಆತನ ಸಪ್ಪೋಟರ್್ ಇಲ್ಲದಿದ್ರೆ ನಾನೆಲ್ಲಿರುತ್ತಿದ್ದೆ ಅನ್ನುವುದನ್ನು ಆಕೆ ಮರೆಯುವುದಿಲ್ಲ. ಗಂಡ ಮಾತ್ರವಲ್ಲ ಹೆತ್ತವರೂ ಇವಳನ್ನ ಬಗಲಿಗೆ ಹಾಕಿಕೊಂಡು ಸಾಕಿದರು. ನೀನು ಏನು ಬೇಕಾದ್ರೂ ಮಾಡು ಮಗಳೇ ಅಂದರು. ವಿಕಲಾಂಗರಿಗೆ ಒಂದು ಪುಟ್ಟ ಭರವಸೆ, ಒಂದು ಆತ್ಮಸ್ಥೈರ್ಯ, ಸಣ್ಣದೊಂದು ಹೋಪ್ ಅಪ್ಪ ಅಮ್ಮಂದಿರಲ್ಲದೇ ಬೇರೆ ಯಾರು ಕೊಡಲಿಕ್ಕೆ ಸಾಧ್ಯ, ಅಲ್ಲವೇ!
ಇದನ್ನೆಲ್ಲ ಯಾಕೆ ಬರೀತಿದೀನಿ ಅಂದ್ರೆ ನಮ್ಮ ನಡುವೆಯೂ ಅದೆಷ್ಟೋ ವಿಕಲಚೇತನ ಪ್ರತಿಭೆಗಳಿವೆ. ಅವರಿಗೆ ರೋಸ್ಳಂತವರು, ನಿಕ್ನಂಥವರು ಸ್ಫೂತರ್ಿಯಾಗಬೇಕು. ಸೋತು ಕೂರುವುದು ಮೈ ಮನಸ್ಸನ್ನ ಇನ್ನಷ್ಟು ಜಡ್ಡುಗಟ್ಟಿಸಿಬಿಡುತ್ತದೆ. ಆದ್ರೆ ಗೆಲುವಿನ ಹಾದಿ ಹಿಡಿದು ಎದ್ದು ನಿಲ್ಲುತ್ತಾರಲ್ಲ ಅಂಥವರಿಗೆ ಒಂದು ಸಣ್ಣ ಸುಖದ ಹಾದಿಯಾದರೂ ಗೋಚರಿಸದೇ ಇರುವುದಿಲ್ಲ.
ಪ್ರಯತ್ನ ಮಾಡಬೇಕಷ್ಟೆ.

ಕಾಲು ಬೆರಳಿಗಾಗಿ ನೆನಪಾದವಳು




ಮಲರ್ಿನ್ ಮನ್ರೋ ಕಾಲೊಂದರಲ್ಲಿ ಆರು ಬೆರಳಿದ್ವಾ?
ಇತ್ತು ಅನ್ನುವವರಿದ್ದಾರೆ. ಇಲ್ಲ ಅನ್ನುವವರೂ ಇದ್ದಾರೆ. ಇಲ್ಲ ಅನ್ನುವುದಕ್ಕೆ ಸಿಕ್ಕ ಒಂದು ಪುರಾವೆ ಇದು.
ಮಲರ್ಿನ್ ಮನ್ರೋ ಹುಟ್ಟಿದ್ದು ಜೂನ್ 1, 1926ರಲ್ಲಿ. ಹುಟ್ಟುವಾಗಲೂ ಅವಳಿಗೆ ಎರಡೂ ಕಾಲಲ್ಲಿ ಐದೈದೇ ಬೆರಳುಗಳಿದ್ದವು. 1962 ಆಗಸ್ಟ್ 5 ರಂದು ಸಾಯುವಾಗಲೂ ಅವಳ ಕಾಲಲ್ಲಿ ಐದೈದೇ ಬೆರಳಿದ್ದವಂತೆ. ಹೀಗಿದ್ದಾಗ ಈ ಸುದ್ದಿ ಸುಳ್ಳಲ್ವಾ ಅನ್ನುತ್ತದೆ ಒಂದು ಮೂಲ.

1946ಕ್ಕೆ ಸರಿಯಾಗಿ ಅವಳಿಗೆ ಇಪ್ಪತ್ತರ ತುಂಬು ಯೌವ್ವನ. ಅವಳಿನ್ನೂ ನೋಮರ್ಾ ಜೀನ್. ಮಲರ್ಿನ್ ಮನ್ರೋ ಆಗಿರಲಿಲ್ಲ. ಜೋಸೆಫ್ ಜಸ್ಗರ್ ಅನ್ನೋ ಫೋಟೋಗ್ರಾಫರ್ ಮಾಚರ್್ 18, 1946ರಂದು ನೋಮರ್ಾಳನ್ನ ಕರೆದುಕೊಂಡು ಫೋಟೋ ಶೂಟ್ಗೋಸ್ಕರ ಕ್ಯಾಲಿಫೋನರ್ಿಯಾದ ಝುಮಾ ಬೀಚ್ಗೆ ಹೋಗುತ್ತಾನೆ. ಆಗ ಅವನು ತೆಗೆದ ಒಂದು ಫೋಟೋದಲ್ಲಿ ಮಲರ್ಿನ್ಳ ಎಡ ಕಾಲಲ್ಲಿ ಆರುಬೆರಳು ಇದ್ದಂಗೆ ಕಾಣಿಸುತ್ತದೆ ಅಷ್ಟೆ.
ಆದ್ರೆ ಜೋಸೆಫ್ "ಖಿಜ ಃಡಿಣ ಠಜಿ ಒಚಿಡಿಟಥಿಟಿ: ಖಿಜ ಐಠಣ ಕಠಣಠರಡಿಚಿಠಿ ಠಜಿ ಓಠಡಿಟಚಿ ಎಜಚಿಟಿಜ " ಅನ್ನೋ ತನ್ನ ಪುಸ್ತಕದಲ್ಲಿ ಒಂದು ಸುಳ್ಳು ಹೇಳಿಬಿಡುತ್ತಾನೆ. ನೋಮರ್ಾ ಜೀನ್ ಎಡ ಕಾಲಿನಲ್ಲಿ ಆರು ಬೆರಳುಗಳಿದ್ದವು. ನಾನು ತೆಗೆದ ಫೋಟೋದಿಂದ ನಾನದನ್ನ ಪ್ರೂವ್ ಮಾಡಬಲ್ಲೆ ಅಂತ. ದುರಂತ ಅಂದ್ರೆ ರಿಪ್ಲೇಸ್ ಬಿಲೀವ್ ಇಟ್ ಆರ್ ನಾಟ್ ಪುಸ್ತಕದಲ್ಲೂ ಇದೂ ಹಾಗೇ ದಾಖಲಾಗಿದೆ.
ಹಾಗಾದರೆ ಜೋಸೆಫ್ ದುಡ್ಡಿಗಾಗಿ ಇಷ್ಟೆಲ್ಲ ಕಥೆ ಕಟ್ಟಿದನಾ?
ಗೊತ್ತಿಲ್ಲ.
ಮಲರ್ಿನ್ ಸತ್ತು ನಲವತ್ತಾರು ವರ್ಷವಾಯಿತು. ಇನ್ನೂ ಅವಳು ಒಂದಲ್ಲ ಒಂದು ಕಾರಣಕ್ಕೆ ನೆನಪಾಗುತ್ತಾಳೆ.
ಇವತ್ತು ಕಾಲು ಬೆರಳಿಗಾಗಿ ನೆನಪಾದಳು ಅಷ್ಟೆ.

Sunday, January 18, 2009

ಸ್ಲಮ್ ಹುಡುಗನೊಬ್ಬ ಮಿಲಿಯನೇರ್ ಆಗ್ತಾನಂದ್ರೆ!




ಸ್ಲಮ್ ಬಗ್ಗೆ ಬಾಲಿವುಡ್ನಲ್ಲಿ ಎಷ್ಟು ಫಿಲ್ಮ್ಸ್ ಬಂದಿಲ್ಲ. ಬಂದವೆಲ್ಲವೂ ಹೆಚ್ಚ ಕಡಿಮೆ ಅಂಡರ್ವಲ್ಡರ್್ಗೆ ಸಂಬಂಧಪಟ್ಟವೆ. ಅಲ್ಲಿ ಗನ್ ಮಾತಾಡುತ್ತವೆ. ಮನುಷ್ಯನ ಪ್ರೀತಿ ಅನ್ನೋದು ಮರೀಚಿಕೆಯಾಗುತ್ತದೆ. ಮುಂಬೈ ಜಗತ್ತಿನ ಖದರೇ ಅಂಥದು ಬಿಡಿ. ಅದರ ಒಡಲಾಳದಲ್ಲಿ ಅದೆಷ್ಟು ರಕ್ತ ಚೆಲ್ಲಿಲ್ಲ. ಎಷ್ಟು ಜನ ಡಾನ್ಗಳು ಅವಳ ಎದೆಯ ಕದಕ್ಕೆ ತಲೆ ಆನಿಸಿ ಸತ್ತಿಲ್ಲ. ಮುಂಬೈ ಆಳಬೇಕು ಅಂಥ ಬಂದವರೆಲ್ಲ ಅದರ ಒಡಲಲ್ಲೇ ಬೀದಿ ನಾಯಿಗಿಂತ ಕಡೆಯಾಗಿ ಸತ್ತುಹೋಗಿದ್ದಾರೆ. ಆದರೂ ಮುಂಬೈ ಯಾವಾಗಲೂ ಎಂದಿಗೂ ಜಗತ್ತಿನ ಪಾಲಿಗೆ ಒಂದು ವಿಚಿತ್ರ ಕನಲಿಕೆಯೇ! ಅಲ್ಲಿನ ಸ್ಲಮ್ ಬದುಕಿದೆಯಲ್ಲ ಅದು ಜಗತ್ತಿನ ಇತರೆ ಸ್ಲಮ್ಗಳಿಗಿಂತ ವಿಚಿತ್ರ.
ಸ್ಲಮ್ಡಾಗ್ ಮಿಲಿಯನೇರ್ ಅಂತ ಒಂದು ಚಿತ್ರ ಬಂದಿದೆ. ಈ ಚಿತ್ರದ ಕಥೆ ಕೂಡ ಬಿಚ್ಚಿಕೊಳ್ಳುವುದು ಅದೇ ಸ್ಲಮ್ನಲ್ಲೆ. ಆದ್ರೆ ಇಲ್ಲಿ ಗನ್ ಮಾತಾಡುವುದಕ್ಕಿಂತ ಮನುಷ್ಯತ್ವದ ಇನ್ನೊಂದು ಮಗ್ಗಲು ಮಾತಾಡುತ್ತಾ ಹೋಗುತ್ತದೆ. ಬದುಕು ಅನ್ನುವುದು ಸ್ಲಮ್ಮಿನ ಆಸುಪಾಸಿನಲ್ಲೆ ಚಾಚಿಕೊಂಡು ಮಲಗಿದ್ದಾಗ ಜಮಾಲ್ ಅನ್ನೋ ಹುಡುಗ ಕೌನ್ ಬನೇಗಾ ಕರೊಡ್ಪತಿಯಲ್ಲಿ ಭಾಗವಹಿಸಿ ಇದ್ದಕ್ಕಿದ್ದಂತೆ ಮಿಲಿಯನೇರ್ ಆಗಿಬಿಟ್ಟರೆ? ಆದ್ರೆ ಇನ್ನೊಂದೇ ಒಂದು ಕ್ವಶ್ಚನ್ ಬಾಕಿ ಇದೆ ಅನ್ನಿಸಿದಾಗ ಶೋ ಹೋಸ್ಟ್ ಮಾಡುತ್ತಿದ್ದ ಪ್ರೇಮ್ ಕುಮಾರ್(ಅನಿಲ್ಕಪೂರ್) ಗೆ ಇವನು ಚೀಟ್ ಮಾಡುತ್ತಿದ್ದಾನೆ ಅನ್ನಿಸಿಬಿಡುತ್ತದೆ. ಕೇವಲ ಸ್ಲಮ್ ಹುಡುಗನೊಬ್ಬ ಈ ಪರಿ ಎಲ್ಲಾ ಪ್ರಶ್ನೆಗಳಿಗೂ ಸರಿ ಉತ್ತರ ಕೊಡೋದು ಅಂದ್ರೆ ಹೇಗೆ ಸಾಧ್ಯ? ಆದ್ರೆ ಜಮಾಲ್ನ ಬದುಕು ಅಂತದ್ದೊಂದು ಅನುಭವವನ್ನ ಅವನಿಗೆ ಕಟ್ಟಿಕೊಟ್ಟಿರುತ್ತದೆ. ಇನ್ಸ್ಪೆಕ್ಟರ್ ಮಾಡುವ ಇಂಟರಾಗೇಷನ್ನಲ್ಲಿ ಜಮಾಲ್ ಅವನ ಬದುಕಿನ ಒಂದೊಂದೂ ಘಟನೆ ಹೇಗೆ ತಾನು ಹೇಳುವ ಪ್ರಶ್ನೆಗಳಿಗೆ ಸಾಥ್ ಕೊಟ್ಟವು ಅನ್ನುವುದನನ್ನು ಮನವರಿಕೆ ಮಾಡಿಕೊಡುತ್ತಾನೆ. ಕೊನೆಗೆ ಹುಡುಗ ಕೊನೆ ಪ್ರಶ್ನೆಗೆ ಉತ್ತರ ಹೇಳಲು ಹೋಗಿ ಕುಳಿತುಕೊಳ್ಳುತ್ತಾನೆ ಮತ್ತು ಆ ಪ್ರಶ್ನೆಗೆ ಉತ್ತರ ಹೇಳಿ ಮಿಲಿಯನೇರ್ ಆಗಿಬಿಡುತ್ತಾನೆ. ಇಡೀ ಮುಂಬೈ ಅವತ್ತು ಟಿವಿ ಮುಂದೆ ಕುಳಿತು ಈ ಜಮಾಲ್ನ ಚಮತ್ಕಾರವನ್ನ ನೋಡಿಬಿಡುತ್ತದೆ. ಸ್ಲಮ್ಮಿನ ಪಡ್ಡೆ ಹುಡುಗನೊಬ್ಬ ಮಿಲಿಯನೇರ್ ಆಗಿಬಿಡುವುದೆಂದ್ರೆ ಹೇಗೆ? ಅನ್ನುವುದೇ ಚಿತ್ರದ ತಿರುಳು.
ಚಿತ್ರ ನಿಂತಿರುವುದೇ ಸ್ಕ್ರೀನ್ಪ್ಲೇ ಮೇಲೆ. ಒಂದೇ ಒಂದು ದೃಶ್ಯ ವೇಸ್ಟ್ ಅನ್ನದಹಾಗೆ ಸೈಮನ್ ಚಿತ್ರಕತೆ ರಚಿಸಿದ್ದಾರೆ. ಸಲಿಮ್, ಜಮಾಲ್ ಮಲಿಕ್ ಮತ್ತ ಲತಿಕಾ ಮೂರು ಮೇನ್ ಪಾತ್ರಗಳು. ಮಾಮನ್ ಅನ್ನೋ ಪಾತ್ರ ಮೊದಲಿಗೆ ನೋಡಿದ್ರೆ ತುಂಬಾ ಸಾಫ್ಟ್ ಅನಿಸುತ್ತದೆ. ಮಕ್ಕಳಿಗೆ ಒಂದು ಬದುಕು ಕೊಟ್ಟನಲ್ಲ ಅನಿಸುತ್ತದೆ. ಆದ್ರೆ ಅವನು ಎಷ್ಟು ಕ್ರೂರಿ ಅಂದ್ರೆ ಮಕ್ಕಳ ಕಣ್ಣು ಕಿತ್ತು ಅವರನ್ನು ಭಿಕ್ಷಾಟನೆಗೆ ದೂಡುತ್ತಾನೆ. ತನ್ನ ಗೆಳೆಯ ಸಲೀಮನ ಕಣ್ಣು ಕೀಳಲು ಮಾಮನ್ ಪ್ಲಾನ್ ಕಂಡು ಅವನ ಮೇಲೆಯೇ ಸೀಮೆ ಎಣ್ಣೆ ಬುಡ್ಡಿ ಎಸೆದು ಸಲೀಮ್, ಜಮಾಲ್ ಲತಿಕಾ ಮೂವರೂ ತಪ್ಪಿಸಿಕೊಳ್ಳಲು ಯತ್ನಿಸುತ್ತಾರೆ. ಸಲೀಮ್, ಜಮಾಲ್ ಟ್ರೈನ್ ಹತ್ತಿದ್ರೆ ಲತಿಕಾ ಮತ್ತೆ ಅವರ ಕೈಗೆ ಸಿಕ್ಕಿಹಾಕಿಕೊಳ್ಳುತ್ತಾಳೆ. ಆಮೇಲೆ ಗೊತ್ತಾಗುವುದು ಅವಳು ಮುಂಬೈನ ವೇಶ್ಯಾವಾಟಿಕೆಯೊಂದರಲ್ಲಿ ಡ್ಯಾನ್ಸ್ ಮಾಡುತ್ತಿದ್ದಾಳೆ ಅಂತ. ಅಲ್ಲಿಗೆ ಹೋಗುವಷ್ಟರಲ್ಲಿ ಜಮಾಲ್ ಮತ್ತು ಸಲೀಮ್ಗೆ ಹದಿಹರೆಯದ ಪ್ರಾಯ. ಮಾಮನ್ನನ್ನು ಕೊಂದು ಲತಿಕಾಳನ್ನು ಕಾಪಾಡುತ್ತಾನೆ ಸಲೀಮ್. ಆದ್ರೆ ಹಾಗೆ ಬಂದ ಸಲೀಮ್ ಒಮ್ಮೆ ಹೇಳುತ್ತಾನೆ. ನಾನು ಇಲ್ಲಿ ಬಾಸ್. ನಾನು ಹೇಳಿದ ಹಾಗೆ ನೀನು ಕೇಳಬೇಕು. ಇಲ್ಲದಿದ್ರೆ ಗೆಟ್ಔಟ್ ಅಂತ ಜಮಾಲ್ಗೆ. ಅಲ್ಲಿಂದ ಹೋದ ಜಮಾಲ್ ಕಾಲ್ ಸೆಂಟರ್ನಲ್ಲಿ ಟೀ ಮಾರುತ್ತಾನೆ. ಇತ್ತ ಸಲೀಮ್ ಜಾವೆದ್ ಅನ್ನೋ ಕ್ರೈಮ್ ಲಾಡರ್್ ಜತೆ ಕೆಲಸ ಮಾಡುತ್ತಿರುತ್ತಾನೆ. ಅಲ್ಲೇ ಜಮಾಲ್ಗೆ ಸಲೀಮ್ ಎಲ್ಲಿದ್ದಾನೆ ಅಂತ ಗೊತ್ತಾಗುವುದು.
ಜಮಾಲ್ಗೆ ಲತಿಕಾ ಅಂದ್ರೆ ಅಷ್ಟಿಷ್ಟ. ಆದ್ರೆ ಅವಳು ಸಲೀಮ್ ಜೊತೆ ಇರುತ್ತಾಳೆ. ಅವನು ಈಗ ಬೆಳೆದು ಜಾವೆದ್ ಸಾಮ್ರಾಜ್ಯದಲ್ಲಿ ದೊಡ್ಡ ದಂಧೆ ಮಾಡುತ್ತಿರುತ್ತಾನೆ. ಏನು ಮಾಡುವುದಕ್ಕೂ ಹೇಸದವ. ಹೀಗಿರುವಾಗಲೇ ಜಮಾಲನ ಪ್ರೀತಿ ಸಲೀಮ್ಗೆ ಗೊತ್ತಾಗಿ ಹೋಗುತ್ತದೆ. ಇಲ್ಲಿಂದ ನೀನು ಹೊರಟು ಹೋಗು ಅಂತ ಕಾರಿನ ಕೀ ಕೊಟ್ಟು ಕಳಿಸುತ್ತಾನೆ. ಆಗಲೇ ಜಮಾಲ್ ಅಲ್ಲಿ ಕೊನೆ ಪ್ರಶ್ನೆಗೆ ಫೋನೋ ಫ್ರೆಂಡ್ ಆಪ್ಷನ್ ಬಳಸಲು ಕೇಳಿಕೊಳ್ಳುವುದು. ಫೋನ್ ಮಾಡಿದರೆ ಆ ಪೋನ್ ಲತಿಕಾ ಹತ್ತಿರ ಇರುತ್ತದೆ. ಟೀವಿ ನೋಡುತ್ತಿದ್ದ ಲತಿಕಾ ಕೂಡಲೇ ಕಾರಲ್ಲಿದ್ದ ಫೋನ್ ತೆಗೆದುಕೊಳ್ಳುತ್ತಾಳೆ. ಅವಳಿಗೋ ಫುಲ್ ಎಕ್ಸೈಟ್ಮೆಂಟು. ಅವನು ಸಿಕ್ಕಿದನಲ್ಲ ಅನ್ನುವ ಖುಷಿಯಲ್ಲೆ ನನಗೆ ಆನ್ಸರ್ ಗೊತ್ತಿಲ್ಲ ಅಂದುಬಿಡುತ್ತಾಳೆ. ಅಷ್ಟರಲ್ಲಾಗಲೇ ಜಾವೆದ್ಗೆ ನಿಜ ಏನು ಅಂತ ಗೊತ್ತಾಗಿ ಸಲೀಮ್ ಮೇಲೆ ಅಟ್ಯಾಕ್ ಮಾಡುತ್ತಾರೆ. ಆದ್ರೆ ಸಲೀಮ್ ಅವರನ್ನು ಕೊಂದು ತಾನೂ ಕೊಂದುಕೊಳ್ಳುತ್ತಾನೆ. ಅವನು ಸತ್ತ ಬಾತ್ ಟಬ್ನ ತುಂಬ ಹಣದ ರಾಶಿ ರಾಶಿ.
ಕೊನೆಗೆ ಜಮಾಲ್ ಮತ್ತು ಲತಿಕಾ ಒಂದಾಗುತ್ತಾರೆ.
ಸ್ಲಮ್ ಡಾಗ್ ಸ್ಟೋರಿ ಅನುಪ್ ಸ್ವರೂಪ್ ಅವರ ಕಾದಂಬರಿ ಕಿ & ಂ ನಿಂದ ಪ್ರೇರಿತವಾಗಿದ್ದು. ನಿದರ್ೇಶಕ ಡ್ಯಾನಿ ಬಾಯ್ಲ್. ರಚನೆ ಸೈಮನ್ ಬೀಫಾಯ್ ಅವರದ್ದು. ಎ ಆರ್ ರೆಹಮಾನ್ ಸಂಗೀತ ನೀಡಿದ್ದಾರೆ. ನಾಲ್ಕು ವಿಭಾಗಗಳಲ್ಲಿ -Best director, picture, screenplay and score-ಸ್ಲಮ್ಡಾಗ್ ಗೋಲ್ಡನ್ ಅವಾಡರ್್ ಬಾಚಿಕೊಂಡಿದೆ. ಹದಿನೈದು ಮಿಲಿಯನ್ ವೆಚ್ಚದಲ್ಲಿ ನಿಮರ್ಾಣಗೊಂಡಿರುವ ಈ ಚಿತ್ರದಲ್ಲಿ ಪಾತ್ರಗಳು ಮುಖ್ಯವಾಗುತ್ತವೆಯೇ ಹೊರತು ಅಲ್ಲಿ ನಟಿಸಿರುವವರಲ್ಲ. ಹಾಗಾಗೆ ಚಿತ್ರ ಗೆಲ್ಲುತ್ತದೆ. ಸ್ಲಮ್ ಮಕ್ಕಳ ಮನೋಲೋಕವನ್ನು ಡ್ಯಾನಿ ಬ್ಲಾಯ್ ಅಷ್ಟು ಮನೋಜ್ಞವಾಗಿ ಬಿಚ್ಚಿಡುತ್ತಾ ಹೋಗುತ್ತಾರೆ.
ಸಿನೆಮಾಟೋಗ್ರಫಿ ಸೂಪರ್. ರೆಹಮಾನ್ ಮ್ಯೂಸಿಕ್ ಫೆಂಟಾಸ್ಟಿಕ್. ನಿದರ್ೇಶನವಂತೂ ಎಲ್ಲೂ ಬೋರಾಗುವುದಿಲ್ಲ. ನೂರಾ ಇಪ್ಪತ್ತು ನಿಮಿಷಗಳ ಸ್ಲಮ್ ಡಾಗ್ ಈಗ ಆಸ್ಕರ್ ಅವಾಡರ್್ನ ಹೊಸ್ತಿಲಲ್ಲಿದೆ. ಈ ಬಾರಿ ಸಿಕ್ಕೇ ಸಿಗಬೇಕು ಅನ್ನುವುದು ಹಲವರ ಅಭಿಪ್ರಾಯ.
ಸಿಗಲಿ ಅನ್ನುವುದು ನಮ್ಮೆಲ್ಲರ ಆಶಯ ಕೂಡ.


ಮತ್ತೆ ಕನಸು ಕಾಣೋ ಸರದಿ
ಆಸ್ಕರ್ ಅನ್ನುವುದು ಭಾರತೀಯರ ಪಾಲಿಗೆ ಇನ್ನೂ ಗಗನ ಕುಸುಮವಾಗಿಯೇ ಉಳಿದಿದೆ. ಈ ಸಲ ಬಂದೇ ಬರುತ್ತೆ ಬಿಡಿ ಅನ್ನುವ ಆಸೆ ಇಟ್ಟುಕೊಂಡಾಗಲೆಲ್ಲ ನಿರಾಶೆ ಬಂದು ಆವರಿಸಿಕೊಂಡಿದೆ.
ಹಾಗಾದ್ರೆ ಇಂಡಿಯನ್ ಫಿಲ್ಮ್ಗಳು ಆಸ್ಕರ್ ಅವಾಡರ್್ ಪಡೆಯುವುದಕ್ಕೆ ಲಾಯಕ್ಕಿಲ್ಲವೇ? ಲಾಯಕ್ಕಿವೆ ಅಂತ ತೋರಿಸಲೆಂದೇ ಅಮೀರ್ಖಾನ್ ನಂತಹವರು, ದೀಪಾ ಮೆಹ್ತಾರಂತಹವರು, ಮೀರಾ ನಾಯರ್ ರಂತಹವರು ಪ್ರಯತ್ನ ಮಾಡುತ್ತಲೇ ಇದ್ದಾರೆ. ಈಗ ಮತ್ತೊಂದು ಕನಸು ಚಿಗುರೊಡೆದಿದೆ. ಆ ಕನಸಿನ ಹೆಸರು ಸ್ಲಮ್ಡಾಗ್ ಮಿಲಿಯನೇರ್!
ನೀವು ನಂಬಿಲಿಕ್ಕಿಲ್ಲ. ಸಿನೆಮಾ ಕ್ರೇಜ್ ಇದೆಯಲ್ಲ ಅದು ಭಾರತೀಯರಿಗಿರುವಷ್ಟು ಬೇರೆ ಯಾವ ದೇಶದವರಿಗೂ ಇಲ್ಲ. ಇಲ್ಲಿ ವರ್ಷಕ್ಕೆ ಸಾವಿರದಷ್ಟು ಫಿಲ್ಮ್ಗಳು ರಿಲೀಸ್ ಆಗುತ್ತವೆ. ಅದರಲ್ಲಿ ಆಸ್ಕರ್ಗೆ ಹೋಗುವಂತಹವು ಇಲ್ಲೇ ಇಲ್ಲ ಅನ್ನಬೇಕೇನೋ! 1957ರಲ್ಲಿ ಬಂದ ಮದರ್ ಇಂಡಿಯಾ ಮೊದಲಿಗೆ ಆಸ್ಕರ್ಗೆ ನಾಮಿನೇಟ್ ಆದಂತಹ ಚಿತ್ರ. ನಗರ್ಿಸ್ ಮತ್ತು ಸುನಿಲ್ ದತ್ ಅದ್ಭುತವಾಗಿ ಅಭಿನಯಿಸಿದ್ದರು. 1988ರಲ್ಲಿ ಮೀರಾ ನಾಯರ್ರ ಸಲಾಮ್ ಬಾಂಬೆ, 2001ರಲ್ಲಿ ಅಮೀರ್ಖಾನ್ನ ಲಗಾನ್, 2006ರಲ್ಲಿ ದೀಪಾ ಮೆಹ್ತಾರವರ ವಾಟರ್, ಮತ್ತೆ ಅಮೀರ್ ಖಾನ್ನ ರಂಗ್ದೇ ಬಸಂತಿ, ತಾರೇ ಜಮೀನ್ ಪರ್ ಆಸ್ಕರ್ಗೆ ನಾಮಿನೇಟ್ ಆದಂತಹ ಚಿತ್ರಗಳು. ಲಗಾನ್ ಭಾರೀ ನಿರೀಕ್ಷೆ ಮೂಡಿಸಿದರೂ ಕೊನೆ ಘಳಿಗೆಯಲ್ಲಿ ಪ್ರಶಸ್ತಿ ಕಣದಲ್ಲಿ ಬಿದ್ದುಹೋಯಿತು.

ಈಗ ಸ್ಲಮ್ ಡಾಗ್ಗೆ ನಾಲ್ಕು ಗೋಲ್ಡನ್ ಅವಾಡರ್್ ಬಂದಿದೆ. ಈ ಅವಾಡರ್ೂ ಭಾರತೀಯರ ಪಾಲಿಗೆ ಮೊದಮೊದಲನೆಯದು. ಚಿತ್ರವೂ ಅದ್ಭುತವಾಗಿ ಮೂಡಿ ಬಂದಿದೆ. ಸೆನ್ಸಿಬಲ್ ಸಬ್ಜೆಕ್ಟ್ ಕೂಡ. ರೆಹಮಾನ್ ಸಂಗೀತಕ್ಕೆ ಆಸ್ಕರ್ ಗ್ಯಾರಂಟಿ ಅಂತಲೇ ಬಾಲಿವುಡ್ನಲ್ಲಿ ಲೆಕ್ಕಾಚಾರ ನಡೆದಿದೆ. ಅಲ್ಲರೀ ಅಲ್ಜೀರಿಯಾ, ಬೋಸ್ನಿಯಾ, ಇರಾನ್ನಂತಹ ರಾಷ್ಟ್ರಗಳಿಗೆ ಆಸ್ಕರ್ ಸಿಕ್ಕಿದೆ ಅಂದ್ರೆ ನಾವು ಸೆನ್ಸಿಬಲ್ ಫಿಲ್ಮ್ಗಳನ್ನು ತೆಗೆಯುವುದರಲ್ಲಿ ಸೋಲುತ್ತಿದ್ದೇವೆ ಅನ್ನಿಸುತ್ತಿಲ್ಲವೇ? ರಾಜ್ ಕಪೂರ್, ದಿಲೀಪ್ ಕುಮಾರ್, ಅಮಿತಾಭ್ ಬಚ್ಚನ್, ಯಶ್ ಚೋಪ್ರಾ, ಸುಭಾಷ್ ಘಾಯ್, ಶಾರುಖ್ ಖಾನ್ ಎಂತೆಂಥಹ ನಟರಿದ್ದಾರೆ, ನಿದರ್ೇಶಕರಿದ್ದಾರೆ ನಮ್ಮಲ್ಲಿ. ಅವರಿಂದ ಒಂದೇ ಒಂದು ಆಸ್ಕರ್ ಅವಾಡರ್್ ನಮ್ಮ ಪಾಲಿಗೆ ತಂದು ಕೊಡಲಿಕ್ಕೆ ಆಗಲಿಲ್ಲ ಅಂದ್ರೆ ಏನರ್ಥ?
ಬಟ್ ಡೋಂಟ್ ವರಿ. ಈಗ ಸ್ಲಮ್ ಡಾಗ್ ಆಸ್ಕರ್ನ ಬಾಗಿಲು ಬಡಿಯುತ್ತಿದೆ. ಮತ್ತೆ ಕನಸು ಕಾಣೋ ಸರದಿ ಬಂದಿದೆ.
ಜಸ್ಟ್ ವೇಯ್ಟ್!


ಜಸ್ಟ್ ಥಿಂಕ್
ಸ್ಲಮ್ಡಾಗ್ ಮತ್ತು ದೇಶಪ್ರೇಮ ಅಂತೆಲ್ಲ ಕೆಲವರು ಮಾತಾಡುತ್ತಿದ್ದಾರೆ. ಅದು ಅವರವರ ಭಾವಕ್ಕೆ, ಪ್ರೇಮಕ್ಕೆ ಸಂಬಂಧಿಸಿದ್ದು. ಹೇಳುವುದಕ್ಕೆ ಎಲ್ಲರಿಗೂ ಸ್ವಾತಂತ್ರ್ಯವಿದೆ ಬಿಡಿ.
ಆದರೆ ರಿಯಾಲಿಟಿ ಅಂತ ಒಂದಿರುತ್ತದೆ. ನಾನಿರುವ ಸ್ಥಿತಿಯನ್ನಲ್ಲದೇ ನಾನು ಬೇರೇ ಏನನ್ನ ತೋರಿಸಲಿಕ್ಕೆ ಸಾಧ್ಯ? ಅದನ್ನು ತೋರಿಸಿದ್ರೆ ಭಾರತೀಯರಿಗೆ ಅವಮಾನ ಮಾಡಿದಿರಿ ಅನ್ನೋದು ಎಷ್ಟು ಸರಿ? ಹಾಗಂತ ಮುಂಬೈನಲ್ಲಿ ಸ್ಲಮ್ಗಳಿಲ್ಲವೇ? ಅಲ್ಲಿನ ನರಕ ಜೀವನವನ್ನು ನೋಡಿಕೊಂಡೂ ನಮ್ಮ ರಾಜಕೀಯ ನಾಯಕರು ಕಣ್ಣು ಮುಚ್ಚಿಕೊಂಡು ಕುಳಿತಿಲ್ಲವೇ? ಅವರಿಗೆ ಸ್ಲಮ್ ಅನ್ನುವುದು ಹಾಗೇ ಇರಬೇಕು. ಅಲ್ಲಿನ ಜನ ಇವರ ಹಲ್ಕಾ ಕೆಲಸಗಳಿಗೆ ಬಳಕೆಯಾಗಬೇಕು. ಅಲ್ಲಿನ ಮಕ್ಕಳು ಓದಬಾರದು. ಅಲ್ಲಿನ ಸುಂದರಿಯರು ಇವರ ಸಖ್ಯಕ್ಕೆ ಬೇಕು. ಅದಕ್ಕೆ ಅವರು ಸ್ಲಮ್ನ ಉದ್ಧಾರ ಮಾಡುವುದಿಲ್ಲ. ನಿಮಗೆ ಗೊತ್ತಿರಲಿ ಮುಂಬೈನ ಧಾರಾವಿ ಸ್ಲಮ್ ಏಷಿಯಾದಲ್ಲೇ ಅತ್ಯಂತ ದೊಡ್ಡ ಸ್ಲಮ್. ಅಲ್ಲಿ ನಡೆಯುವ ಅನೈತಿಕ ಚಟುವಟಿಕೆಗಳು ಒಂದಾ ಎರಡಾ? ಅದರಿಂದಲೇ ಆ ಸ್ಲಮ್ ಉಸಿರಾಡುತ್ತಿದೆ. ಅಂತ ಸ್ಲಮ್ನಿಂದ ಒಂದು ಹುಡುಗ ಕಾಂಪಿಟೇಷನ್ನಲ್ಲಿ ಭಾಗವಹಿಸಿ ಮಿಲಿಯನೇರ್ ಆಗೋ ಕಥೆಯಲ್ಲಿ ದೇಶಪ್ರೇಮ ಹುಡುಕಿದ್ರೆ ಏನನ್ನೋದು.
ಇವತ್ತಿನ ಫಿಲ್ಮ್ಗಳಲ್ಲಿ ಅಪಾಟಿ ಮಚ್ಚು, ಕೊಚ್ಚು, ಹೊಡೆದಾಟ, ಅಸಭ್ಯ ಮಾತುಗಳಿವೆಯಲ್ಲ, ಅದರಿಂದೆಲ್ಲ ಭಾರತದ ಘನತೆಗೆ ಕುತ್ತು ಬರೋದಿಲ್ವೆ?
ಜಸ್ಟ್ ಥಿಂಕ್.

ಅವಳ ಕನ್ಯತ್ವ ಹರಾಜಿಗಿದೆ!

ಹೌಹಾರಬೇಡಿ. ಇದೇನಪ್ಪ ಅಂತಾ?
ಬಟ್ ಅಂಥದ್ದೊಂದು ಘಟನೆ ಅಮೆರಿಕಾದ ಕ್ಯಾಲಿಫೋನರ್ಿಯಾದಲ್ಲಿ ಜರುಗಲಿದೆ. ಸ್ಯಾನ್ಡೀಗೋ ಪಟ್ಟಣದ ಜಸ್ಟ್ ಇಪ್ಪತ್ತೆರಡರ ಹರಯದ ನತಾಲಿ ಡೈಲನ್ ಅನ್ನೋ ಹೆಣ್ಣು ಮಗಳು ನನ್ನ ಕನ್ಯತ್ವ ಹರಾಜಿಗಿದೆ. ಯಾರಾದರೂ ಬಂದು ನಾನು ಕೇಳಿದಷ್ಟು ಅಷ್ಟು ಹಣ ಕೊಟ್ಟು ನನ್ನ ಜೊತೆ ಒಂದು ರಾತ್ರಿ ಮಲಗಬಹುದು ಅಂತ ಓಪನ್ ಆಗಿ ಹೇಳುತ್ತಿದ್ದಾಳೆ. ಅಂದ ಹಾಗೆ ಅವಳ ಕನ್ಯತ್ವದ ಬಿಡ್ ಎಷ್ಟು ಗೊತ್ತೆ? ಒನ್ ಮಿಲಿಯನ್ ಡಾಲರ್ಗೂ ಹೆಚ್ಚು.
ಆದ್ರೆ ಈ ಕನ್ಯಾಮಣಿ ಇನ್ನೂ ಕನ್ಯತ್ವ ಉಳಿಸಿಕೊಂಡಿದ್ದಾಳಾ, ಇಲ್ಲವಾ ? ಇಂಥ ಪ್ರಶ್ನೆ ಕೇಳುತ್ತೀರಾ ಅಂತಲೇ ಅವಳು ಮೆಡಿಕಲ್ ಟೆಸ್ಟ್ಗೆ ರೆಡಿಯಾಗಿ ನಿಂತಿದ್ದಾಳೆ. ನುರಿತ ಡಾಕ್ಟರ್ಗಳು ಆಕೆಯನ್ನ ಟೆಸ್ಟ್ ಮಾಡಿ ಅವಳು ವಜರ್ಿನ್ನಾ ಇಲ್ಲವಾ ಅಂತ ಸಟರ್ಿಫೈಡ್ ಮಾಡಲಿದ್ದಾರಂತೆ.
ಇಂಟರೆಸ್ಟಿಂಗ್ ಅಂದ್ರೆ, ಅವಳು ತನ್ನ ಕನ್ಯತನವನ್ನು ಹರಾಜು ಮಾಡುತ್ತಿರುವುದು ತನ್ನ ಹೆಚ್ಚಿನ ಓದಿಗಾಗಿ. ಇಡೀ ಜಗತ್ತು ಇವತ್ತು ನಿಂತಿರೋದು ಬಂಡವಾಳ ಶಾಹಿ ಮೇಲೆ ಸ್ವಾಮಿ. ನನಗೂ ಬಂಡವಾಳ ಬೇಕಾಗಿದೆ ನನ್ನ ಸ್ಟಡೀಸ್ ಮಾಡಲು. ಅದಕ್ಕಾಗಿ ನನ್ನ ಶೀಲವನ್ನೇ ಬಂಡವಾಳದ ಮೂಲವನ್ನಾಗಿ ಮಾಡಿಕೊಂಡರೆ ತಪ್ಪಾ? ಅನ್ನುವ ಲಾಜಿಕ್ ಆದ ಪ್ರಶ್ನೆ ಕೇಳುತ್ತಿದ್ದಾಳೆ. ಇದೆಲ್ಲ ಸರಿಗಿಲ್ಲ ಅನ್ನುವವರ ನಡುವೆಯೇ 'ಯಾವನೋ ಅಬ್ಬೇಪಾರಿಯೊಂದಿಗೆ ಮಲಗಿ ಸುಖಾ ಸುಮ್ಮನೆ ಎದ್ದು ಬರುವುದಕ್ಕಿಂತ ಇದೇ ಮೇಲು ಕಣೇ ಡೈಲನ್. ಡೂ ಇಟ್ ' ಅನ್ನುವವರೂ ಇದ್ದಾರೆ. ಅಂದಹಾಗೆ ಮೂನ್ಲೈಟ್ ಬನ್ನಿ ರಾಂಚ್ ಅನ್ನೋ ವೇಶ್ಯಾಗೃಹದ ಮೂಲಕ ಡೈಲನ್ ಹರಾಜಿಗೆ ಒಪ್ಪಿದ್ದಾಳೆ. ಅಲ್ಲಿ ಅವಳ ತಂಗಿಯೂ ವೇಶ್ಯೆಯಾಗಿದ್ದುಕೊಂಡು ಓದುತ್ತಿದ್ದಾಳಂತೆ. ಆ ವೇಶ್ಯಾಗೃಹಕ್ಕೆ ಪಕ್ಕಾ ಲೈಸೆನ್ಸ್ ಇದೆ.
ಹೀಗೆ ಕನ್ಯತ್ವ ಹರಾಜಿಗೆ ಇಡುತ್ತಿರುವುದು ಇದೇ ಮೊದಲೇನಲ್ಲ. 2007ರಲ್ಲಿ ಹದಿನೆಂಟು ವರ್ಷದ ಕ್ಯಾರಿಸ್ ಕೋಪ್ಸ್ಟೆಕ್ ಅನ್ನೋ ಬೆಡಗಿ 10,000 ಪೌಂಡ್ಗೆ ತನ್ನ ಕನ್ಯತ್ವವನ್ನ ಹರಾಜಿಗಿಟ್ಟಿದ್ದಳು. 2004ರಲ್ಲಿ ರೋಸೀ ರೀಡ್ ಅನ್ನೋ ಬ್ರಿಸ್ಟಾಲ್ ಯೂನಿವಸರ್ಿಟಿಯ ಲೆಸ್ಬಿಯನ್ ಸ್ಟೂಡೆಂಟ್ ಕೂಡ ತನ್ನ ಶೀಲದ ಬೆಲೆ 8,400 ಪೌಂಡ್ ಅಂದಿದ್ದಳು.
ಈಗ ಡೈಲನ್ ಸರದಿ.
ಆದ್ರೆ ಇದು ತಪ್ಪ್ಪಾ? ಸರಿಯಾ?
ಸರಿ ತಪ್ಪು ಅನ್ನುವುದು ಬೇರೆ. ಕೆಲವೊಮ್ಮೆ ಚಚರ್ೆಗಳು ಕೇವಲ ಚಚರ್ೆಗಳಾಗಿಯೇ ಉಳಿದುಬಿಡುತ್ತವೆಯೇ ವಿನಃ ಯಾವ ರೀತಿಯಲ್ಲೂ ಬದುಕಿಗೆ ಸಪ್ಪೋಟರ್್ ಆಗೊಲ್ಲ. ಬದುಕು ಅನ್ನುವುದು ಪಕ್ಕಾ ಪ್ರಾಕ್ಟಿಕಲ್ ಆದುದರಿಂದ ಅಲ್ಲಿ ಗಿಮಿಕ್ಗಳೆಲ್ಲ ಹಾಗೆ ಸುಮ್ಮನೆ ಅನ್ನಿಸಿಬಿಡುತ್ತವೆ. ಹಾಗಾದರೆ ಡೈಲನ್ ಮಾಡುತ್ತಿರುವುದು ಗಿಮಿಕ್ಕಾ? ಗೊತ್ತಿಲ್ಲ. ಆದ್ರೆ ಅವಳು ಇವತ್ತಿನ ಜಗತ್ತಿನ ಇನ್ನೊಂದು ಮುಖವನ್ನ ತೆರೆದು ತೋರಿಸಿಕೊಡಲು ಹೊರಟಿದ್ದಾಳೆ. ನನಗೆ ಹಣದ ಅವಶ್ಯಕತೆ ಇದೆ. ಅದಕ್ಕಾಗಿ ನನ್ನ ಕನ್ಯತ್ವ ಮಾರಿಕೊಂಡರೆ ತಪ್ಪೇನು ಅನ್ನುವುದು ಅವಳ ಲೆಕ್ಕಾಚಾರ!
ಮಡಿವಂತ ಭಾರತೀಯರ ಪಾಲಿಗೆ ಇದು ಖಂಡಿತವಾಗಿಯೂ ಒಪ್ಪಲ್ಲ. ಅಲ್ಲರೀ ಅವಳಿಗೇನು ತಲೆಗಿಲೆ ಕೆಟ್ಟಿದೆಯಾ? ಬೀದಿಯಲ್ಲಿ ನಿಂತು ನಾನು ಸೇಲ್ಗಿದ್ದೇನೆ ಅಂದ್ರೆ ಏನರ್ಥ? ಮರ್ಯಾದಸ್ಥ ಹೆಣ್ಣುಮಕ್ಕಳು ಮಾಡೋ ಅಂತ ಕೆಲಸವ ಇದು? ಅಂತೆಲ್ಲ ಬಂಬಡಾ ಹೊಡೆದಾರು. ಆದರೆ ಒಂದು ಹೊತ್ತಿನ ಹೊಟ್ಟೆ ಹೊರೆಯುವುದಕ್ಕಾಗಿ ಮೈಮಾರಿಕೊಳ್ಳುವವರು ಈ ಜಗತ್ತಿನಲ್ಲಿ ಎಷ್ಟಿಲ್ಲ. ಯಾರದೋ ಬಲವಂತಕ್ಕೆ ಶೀಲ ಕಳೆದುಕೊಂಡವರು, ಅತ್ಯಾಚಾರಕ್ಕೊಳಗಾದವರು, ಬ್ರಾಥಲ್ಗಳಗೆ ಗೊತ್ತಿಲ್ಲದೇ ಮಾರಾಟವಾದವರು ಪ್ರತಿ ಕ್ಷಣವನ್ನೂ ನೋವು, ಆತಂಕ, ಅವಮಾನದಿಂದಲೇ ಕಳೆಯುತ್ತಿದ್ದಾರೆ. ಹೆಣ್ಣುಮಕ್ಕಳು ಬೀದಿಗೆ ಬರಬಾರದು ಅನ್ನುವ ಬೃಹಸ್ಪತಿಗಳೇ ಕದ್ದು ಮುಚ್ಚಿ ಸೆಕ್ಸ್ ಅನುಭವಿಸೋಲ್ವೆ! ಇಂಥ ಬೃಹಸ್ಪತಿಗಳ ತೆವಲಿಗೆ ಒಳಗಾಗುವ ಆ ಹೆಣ್ಣುಮಕ್ಕಳಿಗೆ ಈ ಸಮಾಜ ನೀಡುವ ಸ್ಥಾನವಾದರೂ ಎಂಥದು? ಗಂಡು ಲಜ್ಜೆಗೆಟ್ಟವನಾಗಬಹುದು. ಆದ್ರೆ ಹೆಣ್ಣಿಗೆ ಮಾತ್ರ ಲೈನ್ ಆಫ್ ಕಂಟ್ರೋಲ್ ಇದೆ ಅಂದ್ರೆ ಯಾವ ನ್ಯಾಯ? ಹಾಗಾಗಿ ಡೈಲನ್ ಕನ್ಯತ್ವ ಮಾರಾಟಕ್ಕಿದೆ ಅಂದ್ರೆ ಅದೇನೂ ಅಸಹಜ ಅನ್ನಿಸೋಲ್ಲ.
ವೇಶ್ಯಾವೃತ್ತಿ ಅನ್ನುವುದು ಇಂದು ನಿನ್ನೆಯದಲ್ಲ ಬಿಡಿ. ಅದಕ್ಕೊಂದು ಪರಂಪರೆಯೇ ಇದೆ. ಇತಿಹಾಸವಿದೆ. ಅದನ್ನ ಕಾಲಕಾಲಕ್ಕೆ ನಮಗೇ ಗೊತ್ತಿಲ್ಲದ ಹಾಗೆ ಪೋಷಿಸಿ ಬೆಳೆಸಿದವರು ನಾವೇ ಅಲ್ಲವೇ! ಹಾಗಿದ್ದಾಗ ಕನ್ಯತನ ಅನ್ನೋ ಅಮೂಲ್ಯ ದೈಹಿಕ ಮಾನದಂಡವನ್ನ ಯಾಕೆ ಸುಮ್ಮನೆ ಕಳೆದುಕೊಳ್ಳಬೇಕು. ಅದಕ್ಕೆ ಬೆಲೆ ಉಂಟು ಅನ್ನೋದಾದರೆ ಅದು ಹೆಚ್ಚು ಬೆಲೆಗೆ ಹೋಗಲಿ ಅನ್ನುವುದು ಡೈಲನ್ ಲೆಕ್ಕಾಚಾರ. ನಾನು ಇಂಥವಳು ಅಂತ ಜಗತ್ತು ಬೇಕಾದ್ದು ಅಂದುಕೊಳ್ಳಲಿ. ಐ ಡೋಂಟ್ ಕೇರ್ ಅಂತಾಳೆ ಅವಳು.
ಇತ್ತೀಚೆಗೆ ಅಮೆರಿಕಾದ ಕಾಂಗ್ರೆಸ್ ಮುಂದೆ ಒಂದು ಅಪೀಲ್ ಇತ್ತು. ಅಲ್ಲಿನ ಪೋನರ್್ ಇಂಡಸ್ಟ್ರಿ(ಅಶ್ಲೀಲ ಫಿಲ್ಮ್ಗಳನ್ನು ತಯಾರಿಸುವವರು) ಈಗ ಸರಿಯಾಗಿ ನಡೆಯುತ್ತಿಲ್ಲವಂತೆ. ಆಥರ್ಿಕ ಕುಸಿತದ ಪರಿಣಾಮ ನಮ್ಮ ಮೇಲೂ ಆಗಿದೆ. ಅಲ್ಲಿನ ದಿವಾಳಿ ಆದ ಬ್ಯಾಂಕ್ಗಳನ್ನ ಉಳಿಸಿಕೊಳ್ಳಲು ಅಮೆರಿಕನ್ ಕಾಂಗ್ರೆಸ್ ಪ್ಯಾಕೇಜ್ ಘೋಷಿಸಿದ ಹಾಗೆ ನಮಗೂ ಪ್ಯಾಕೆಜ್ ಕೊಡಿ ಅನ್ನುವುದು ಅವರ ಡಿಮ್ಯಾಂಡ್. ಅದಕ್ಕೆ ಕಾಂಗ್ರೆಸ್ ಮೌನ ವಹಿಸಿದೆ. ಅಂದ್ರೆ ಸೆಕ್ಸ್ ವ್ಯವಹಾರ ಜಗತ್ತಿನಲ್ಲಿ ಅಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ. ಅದೊಂದು ಉದ್ಯೋಗ. ಅದಕ್ಕೆ ಬೇಕಾದ ಸವಲತ್ತುಗಳನ್ನ ಸರಕಾರ ಕೊಡಬೇಕು ಅನ್ನೋ ಕೂಗು ಅತ್ತಕಡೆಯಿಂದ ಆಗಾಗ ಕೇಳಿಬರುತ್ತಿದೆ. ಕೆಲವು ಪಾಶ್ಚಾತ್ಯ ದೇಶಗಳು ವೇಶ್ಯಾಗೃಹಗಳಿಗೆ ಲೈಸೆನ್ಸ್ ನೀಡುತ್ತಿವೆ.
ವಿಷಯ ಅದಲ್ಲ.
ಡೈಲನ್ ಸುಮಾರು 2.5 ಮಿಲಿಯನ್ಗೆ ಹರಾಜಾಗಬಹುದು ಅನ್ನುವ ಲೆಕ್ಕಾಚಾರ ನಡೆದಿದೆ. ಹಾಗೆ ಅಷ್ಟು ದುಡ್ಡುಕೊಟ್ಟು ಅವಳೊಂದಿಗೆ ಒಂದು ರಾತ್ರಿ ಕಳೆಯೋ ಭೂಪ ಎಲ್ಲಿದ್ದಾನೋ?
ಜಸ್ಟ್ ವೇಯ್ಟ್,
ನ್ಯೂಸ್ ಗೊತ್ತಾದ್ರೆ ಇದೇ ಅಂಕಣದಲ್ಲಿ ಬರೀತೀನಿ.

Friday, January 16, 2009

ನೀವೂ ನೋಡಬೇಕು ಅನ್ನೋದು ನನ್ನ ಆಸೆ



ಇದು ಇತ್ತೀಚೆಗೆ ನಾನು ಮಾಡಿದ ಇನ್ವಿಟೇಷನ್ ಕಾಡರ್್. ಸುಚಿತ್ರ ಫಿಲ್ಮ್ ಸೊಸೈಟಿಯವರು
ಬೆಂಗಳೂರು ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಯೋಜಿಸಿದ್ದಾರಲ್ಲ ಅದಕ್ಕೆ. ವಿಜಯಮ್ಮ, ಸುಬ್ಬರಾವ್ ಸರ್ ಎಲ್ಲರಿಗೂ ಬಹಳಾನೇ ಇಷ್ಟ ಆಯ್ತು. ನೋಡಿದವರೂ ತುಂಬಾ ಇಷ್ಟಪಟ್ಟರು ಅಂತ ವಿಜಯಮ್ಮ ಹೇಳ್ತಿದ್ರು. ಇದೇ ಸಂದರ್ಭದಲ್ಲಿ ಅವರಿಗೆ ಒಂದು ಮೆಮೆಂಟೋ ಡಿಸೈನ್ ಕೂಡ ಮಾಡಿಕೊಟ್ಟೆ. ಅದೂ ಡಿಫರೆಂಟ್ ಆಗಿದೆ. ಬಟ್ ನಾನು ಅಂದುಕೊಂಡ ಫಿನಿಷಿಂಗ್ ಅದರಲ್ಲಿ ಬರಲಿಲ್ಲ ಅನ್ನುವುದನ್ನ ಬಿಟ್ರೆ ಓಕೆ. ನೋಡಿ ಖುಷಿಯಾಯ್ತು. ಅವತ್ತು ಜನವರಿ 15 ಸಂಜೆ ಹೊತ್ನಲ್ಲಿ ಚೌಡಯ್ಯ ಮೆಮೋರಿಯಲ್ ಹಾಲ್ ತುಂಬಾ ಅವೇ ಇನ್ವಿಟೇಷನ್ ಸರಿದಾಡುತ್ತಿದ್ವು.
ಅದನ್ನ ನೀವೂ ನೋಡಬೇಕು ಅನ್ನೋದು ನನ್ನ ಆಸೆ.
ಹೇಗಿದೆ ಹೇಳಿ

Wednesday, December 24, 2008

ಗೊತ್ತಾ ... ಸತ್ತುಹೋಗೋ ಅಷ್ಟು ನಿನ್ನ ಪ್ರೀತಿಸ್ತಿದೀನಿ ಕಣೇ...




ಹಾಯ್ ಕಣೇ
ಬೆಣ್ಣೆ ಬಣ್ಣದ ಕಾಲವಳೇ.
ಹೇಗೆ ಶುರುಮಾಡಬೇಕೋ ತೋಚುತ್ತಿಲ್ಲ. ಹೋದ ವರ್ಷವೆಲ್ಲ ನನ್ನನ್ನ ಪ್ರೀತಿಸೋ ಅಂತ ನೀನು ಬೆನ್ನು ಬಿದ್ದಿದ್ದೆ. ನೆನಪಿದೆಯಾ... ಐಯಾಮ್ ಇನ್ ಲವ್ ವಿಥ್ ಯೂ ಅಂತ ಬೋಡರ್ು ಹಿಡಿದುಕೊಂಡು ಒಂದಿನ ರೂಮಿನ ತನಕ ಬಂದುಬಿಟ್ಟಿದ್ಯಲ್ಲ! ನನಗೋ ನನ್ನ ಮನಸ್ಸಿನಲ್ಲಿರುವವಳು ನೀನಲ್ಲ ಕಣೇ ಅಂತ ಹೇಗೆ ಹೇಳಲಿ ಅನ್ನುವುದು ತೋಚದೆ ಪೆಕರು ಪೆಕರಾಗಿ ನಿಂತಿದ್ದೆ. ನೀನು ಅತ್ತೆ, ಗೋಗರದೆ, ಬೆನ್ನಿಗೆ ಗುದ್ದು ಮಾಡಿ ಪ್ಲೀಸ್ ಕಣೋ ನನಗೇನು ಕಡಿಮೆಯಾಗಿದೆ ಹೇಳು? ನಾನು ಚೆನ್ನಾಗಿಲ್ವಾ? ಓದಿಲ್ವಾ? ಅಥವಾ ನಿನ್ನ ಟೇಸ್ಟ್ಗೆ ಒಗ್ಗೊಲ್ವಾ? ಹೈಟೂ ನಿನಗಂತ ಎರಡಿಂಚು ಕಮ್ಮಿ ಇದೀನಿ ಅಷ್ಟೆ. ನಿನಗೆ ಬೇಕಂದ್ರೆ ಚೂರು ದಪ್ಪ ಆಗ್ತೀನಿ. ಸತ್ಯ ಹೇಳ್ತೀನಿ ಕೇಳು, ನೀನು ನನ್ನನ್ನ ಪ್ರೀತಿ ಮಾಡ್ತೀನಿ ಅಂತ ಹೇಳು. ಅಲ್ಲಿ ನನ್ನದೂ ಅಂತ ಏನೂ ಇರೋಲ್ಲ. ಎಲ್ಲಾ ನಿನ್ನ ಆಣತಿಯಂತೆಯೇ ನಡೆಯುತ್ತದೆ. ನಿನ್ನ ಟೇಸ್ಟ್ ನಾನೂ ಕಲಿತುಕೊಳ್ಳುತ್ತೇನೆ. ನಿನ್ನ ಬೈಗುಳ, ನಿನ್ನ ಹುಚ್ಚಾಟ, ನಿನ್ನ ಅಸಹ್ಯ ಮೌನ ಸಹಿಸಿಕೊಳ್ಳುತ್ತೇನೆ. ನಿನ್ನ ದಿನಕ್ಕೊಂದು ಫಿಲ್ಮ್ ನೋಡೋ ಹುಚ್ಚಿಗೆ ನಾನೂ ಬಲಿಯಾಗುತ್ತೇನೆ, ಆದ್ರೆ ಅದೊಂದನ್ನು ಬಿಟ್ಟು. ನಿಮಿಷಕ್ಕೆ ಹದಿನೆಂಟು ಸಲ ಎಳೆಯುತ್ತೀಯಲ್ಲ ಸಿಗರೇಟು ಅದು. ಇಲ್ಲ ಅನ್ನಬೇಡ, ನನಗೆ ನಿನ್ನ ಮುಖ ನೋಡದೇ ಇರೋದಕ್ಕೆ ಆಗ್ತಾ ಇಲ್ಲ ಕಣೋ. ನೀನು ಹೇಗೇ ಇದ್ದರೂ, ಏನೇ ಕೊರತೆ ಇದ್ದರೂ ಸಹಿಸಿಕೊಂಡು ಜೀವನ ಮಾಡ್ತೀನಿ ಅಂತೆಲ್ಲ ಅವಲತ್ತುಕೊಂಡಿದ್ದೆಯಲ್ಲ ಸೌಪಣರ್ಿಕಾ, ಕೇಳು ಈಗೀಗ ನಿನ್ನ ಮೇಲೆ ಮನಸ್ಸಾಗಿದೆ ಕಣೆ.
ನಾವ್ ಐ ಯಾಮ್ ಇನ್ ಲವ್ ವಿಥ್ ಯು.
ನಿಂಗೆ ಗೊತ್ತಾ, ಬಡ್ಡೀ ಮಗಂದು ಈ ಪ್ರೀತೀನೆ ಹಾಗೆ. ಯಾರೋ ನಿನ್ನನ್ನ ಪ್ರೀತಿಸ್ತಿದೀನಿ ಅಂದಾಗ ಇವಳಿಗೆ ಮಾಡೋದಕ್ಕೆ ಕೆಲಸ ಇಲ್ಲ ಅನಿಸಿಬಿಡುತ್ತೆ. ಅದೇ ಅವಳು ದೂರ ಆದಾಗ ಛೇ ಅವಳನ್ನ ತುಂಬಾ ಮಿಸ್ ಮಾಡ್ಕೋತಿದೀನಿ ಅನ್ನಿಸಿಬಿಡುತ್ತೆ. ರಿಯಲಿ ಐ ಮಿಸ್ ಯೂ ಕಣೆ. ಮನಸ್ಸು ನೀನಿಲ್ಲದೆ ಬಿಕೋ ಅಂತಿದೆ. ನೀನು ಬಿಸಾಕಿ ಹೋದ ಆ ಪ್ರೀತಿಯ ಬೋರ್ಡನ್ನ ಹುಡುಕಿ ಎತ್ತಿಟ್ಟುಕೊಂಡಿದ್ದೇನೆ. ಅವತ್ತೇಕೋ ಸುಮ್ಮನೆ ಕುಳಿತವನಿಗೆ ನೀನು ಯಾವ ಪರಿ ಕಾಡಿಬಿಟ್ಟೆ ಅಂದ್ರೆ ಸತ್ತು ಹೋಗೋ ಅಷ್ಟು ನಿನ್ನನ್ನ ಆಗಲೇ ನೋಡಬೇಕು ಅನಿಸಿಬಿಡ್ತ್ತು. ನಿನ್ನ ಹಾಸ್ಟೆಲ್ ಹತ್ರ ಹೋದ್ರೆ ಅವಳು ಊರಿಗೋಗಿ ತಿಂಗಳಾಯ್ತು ಅಂದ್ರು. ಯಾವತ್ತೂ ಅಳದವನು ಅಲ್ಲೇ ಒಂಟಿ ಕಲ್ಲಿನ ಮೇಲೆ ಕುಳಿತು ಅತ್ತುಬಿಟ್ಟೆ ಗೊತ್ತಾ! ಕಲ್ಲಿಗೂ ಕನಿಕರ ಬಂತೆನೋ. ಗೊತ್ತಿಲ್ಲ. ನನಗೆ ಗೊತ್ತು ನಿನಗೆ ಸಿಟ್ಟು ಬಂದಿದೆ ಅಂತ. ಆದರೇನು ಮಾಡಲಿ ಮನಸ್ಸು ನೀನೇ ಬೇಕು ಅಂತ ಹಟ ಹಿಡಿದಿರುವಾಗ. ಅವಾಗೆಲ್ಲ ನಿನ್ನ ಮುಖ ನೋಡಲಿಕ್ಕೂ ನನಗೆ ಬೇಜಾರಾಗುತ್ತಿತ್ತು ನಿಜ್ಜ, ಈಗ ಅದೇ ಮುಖದ ತಲಾಶೆಯಲ್ಲಿದ್ದೇನೆ. ನಿನ್ನ ನಗು ನೋಡಬೇಕೆನಿಸಿದೆ, ಮಾತು ಕೇಳಬೇಕೆನಿಸಿದೆ, ಮೌನಕ್ಕೆ ಸಾಥಿಯಾಗಬೇಕೆನಿಸಿದೆ, ನಿನ್ನ ಕಣ್ಣಲ್ಲಿ ಕಣ್ಣಿಟ್ಟು ನಿನ್ನಿಷ್ಟದ ಹಾಡನ್ನ ನನ್ನೆದೆಯೊಳಗೆ ಗುನುಗಿಕೊಳ್ಳಬೇಕೆನಿಸಿದೆ. ಎಲ್ಲಿಹೋದೆ ಸೌಪಣರ್ಿಕಾ?
ನಿಜ್ಜ ಹೇಳು ಅಷ್ಟು ಹೇಟ್ ಮಾಡ್ತೀಯ ನನ್ನ?
ಹೊಸ ವರ್ಷದ ಬೆಳ್ಳಂಬೆಳಿಗ್ಗೆ ನಿನಗೆ ಐ ಲವ್ ಯೂ ಅಂತ ಹೇಳಲಿಕ್ಕೆ ಕಾದು ಕುಳಿತಿದೀನಿ. ಎದೆಯಲ್ಲಿ ಅದೆಂಥದೋ ಪುಳಕವಿದೆ. ಆಸೆ ಇದೆ. ಅದಮ್ಯ ಉತ್ಸಾಹವಿದೆ. ಮೂರು ಜನ್ಮಕ್ಕಾಗುವಷ್ಟು ಪ್ರೀತಿ ಇದೆ. ಜೊತೆಗೆ ಭಯವೂ ಇದೆ. ಅವತ್ತು ಕೂತು ಮಾತಾಡಿಕೊಳ್ಳೋದೆ ಬೇಡ. ಜಸ್ಟ್ ಸಿಗು ಸಾಕು. ತಾಳಿಕಟ್ಟಿಬಿಡ್ತೀನಿ. ಅವತ್ತಿಂದ ನೀನು ಸಿಫರ್್ ನನ್ನವಳು. ಪಟ್ಟದ ರಾಣಿ ಅಂತಾರಲ್ಲ ಹಾಗೆ ನೋಡಿಕೊಳ್ತೀನಿ . ನಿನ್ನ ರವಿಕೆಗೆ ಹುಕ್ ಹಾಕುವುದರಿಂದ ಹಿಡಿದು ಮುಡಿಗೆ ಮಲ್ಲಿಗೆ ಮುಡಿಸುವುದರ ತನಕ ಜವಾಬ್ದಾರಿ ನನ್ನದು. ತಪ್ಪು ನನ್ನಿಂದಾಗಿದೆ ನಿಜ್ಜ. ಹಾಗಂತ ಕಾಡಬೇಡ, ಸತಾಯಿಸಬೇಡ, ಕೊಲ್ಲಬೇಡ. ಜಸ್ಟ್ ಕ್ಷಮಿಸಿಬಿಡೆ ನನ್ನ.
ಒಂದನೇ ತಾರೀಖು ಬೆಳಿಗ್ಗೆ ಲಾಲ್ ಬಾಗ್ನ ಎಡ ತಿರುವಿನಲ್ಲಿರುವ ಪುಟ್ಟ ಹೂವಿನ ಗಿಡದ ಹತ್ತಿರ ಕಾಯುತ್ತಾ ನಿಂತಿರುತ್ತೇನೆ. ಅವತ್ತಿಂದ ಇಬ್ಬರೂ ಬದುಕೋದಾದರೆ ಒಟ್ಟಿಗೆ ಸತ್ತರೂ ಒಟ್ಟಿಗೆ.
ಬರ್ತೀಯಲ್ಲ ...
ಬಾರದಿದ್ದರೆ ನಾ ಬದುಕೊಲ್ಲ ಅನ್ನೋದು ನಿನಗೆ ಗೊತ್ತಿರಲಿ.

Sunday, December 21, 2008

ಗುಡ್ morning ಲಾಲ್ಬಾಗ್











ಒನ್ಸ್ ಎಗೇನ್ ಲಾಲ್ಬಾಗ್ನ ಕದ ತಟ್ಟಿ ಬಂದಿದ್ದೇನೆ. ಅದೂ ಬೆಳ್ಳಂಬೆಳಿಗ್ಗೇನೆ!
ಅದೇಕೋ ಗೊತ್ತಿಲ್ಲ ಈ ಲಾಲ್ಬಾಗ್ಗೂ ನನಗೂ ಒಂಥರಾ ಬಿಟ್ಟೂ ಬಿಡದ ಸಂಬಂಧ. ನಾನು ಬೆಂಗಳೂರಿಗೆ ಕಾಲಿಟ್ಟ ಗಳಿಗೆಯಿಂದಲೂ ಅದರ ಹೊಸ್ತಿಲು ತುಳಿಯುತ್ತಲೇ ಬಂದಿದ್ದೇನೆ. ಅದರ ಅಂಗಳದಲ್ಲಿ ಒಬ್ಬಂಟಿಯಾಗಿ ಅಲೆದಾಡಿದ್ದೇನೆ. ಅವಳ ಮಾತಿಗೆ ಕಿವಿ ಕೊಟ್ಟು ಸುಮ್ಮನೇ ಮೌನಕ್ಕೆ ಬಿದ್ದವನಂತೆ ನಡೆದಿದ್ದೇನೆ. ಸಂಜೆಗಳಿಗೆ ಸಾಕ್ಷಿಯಾಗಿದ್ದೇನೆ. ಲಾಲ್ ಬಾಗ್ ನನ್ನ ಭಾನುವಾರದ ಪ್ರೀತಿಯ ಡೆಸ್ಟಿನೇಷನ್.
ಇಂಥ ತಾಣಕ್ಕೆ ಭಾನುವಾರ ಬೆಳಿಗ್ಗೆ ಐದುಕಾಲಿಗೆಲ್ಲ ತಲಪಿಬಿಟ್ಟಿದ್ದೆ. ಇನ್ನೂ ಮಸುಕು ಮಸುಕು ಕತ್ತಲು. ಇಡೀ ಲಾಲ್ ಬಾಗ್ ಫೇರ್ ಅಂಡ್ ಲವ್ಲಿ ಹಚ್ಚಿಕೊಂಡ ಹುಡುಗಿ ಅದರ ಮೇಲೆ ತುಸು ಜಾಸ್ತೀನೆ ಪಾಂಡ್ಸ್ ಪೌಡರ್ ಹಚ್ಚಿಕೊಳ್ತಾಳಲ್ಲ ಹಂಗಿತ್ತು. ಎದುರಿಗಿದ್ದರೂ ಯಾರೂ ಕಾಣರು. ಥಂಡ ಥಂಡ ಕೂಲ್ ಕೂಲ್. ಸುಂಯ್ ಅನ್ನುವ ಗಾಳಿ. ಅರೆ ಲಾಲ್ ಬಾಗ್ ಎಂಬ ಬ್ಯೂಟಿ ಬೆಳಿಗ್ಗೆ ಬೆಳಿಗ್ಗೆ ಇಷ್ಟು ಚಂದಕ್ಕೆ ಕಾಣಿಸುತ್ತಾಳಾ? ನೋಡೇ ಇರಲಿಲ್ಲವಲ್ಲ ಅನ್ನಿಸಿಬಿಟ್ಟಿತು. ಎಷ್ಟೋ ಸಲ ನಾನು ಗೆಳೆಯರು ಸೂರ್ಯ ಹುಟ್ಟುವ ಮೊದಲೇ ಅಲ್ಲಿಗೆ ಹೋಗಿದ್ದಿದೆ. ಆದ್ರೆ ಇವತ್ಯಾಕೋ ಲಾಲ್ಬಾಗ್ ಥರ ಥರ ಹೊಸ ಥರ...
ಸುಮ್ಮನೆ ಕೆಮೆರಾ ಹಿಡಿದುಕೊಂಡು ಸುತ್ತಿಬಿಟ್ಟೆ. ಎಂಥದೋ ಖುಷಿ. ಗಂಟೆ ಆರಾಯ್ತು, ಏಳಾಯ್ತು, ಎಂಟಾಯ್ತು ಸೂರ್ಯನ ದರ್ಶನವೇ ಇಲ್ಲ. ಅರೆ ಎಲ್ಲಿ ಹೋದ ಈ ಬಿಸ್ಸಿ ಬಿಸ್ಸಿ ಸೂರ್ಯ?
ಜಾಗಿಂಗ್ಗೆ ಬಂದವರು ಫ್ರೆಶ್ ಉಸಿರಿಗಾಗಿ ಏದುಸಿರು ಬಿಡುತ್ತಾ ಓಡುತ್ತಿದ್ರು, ಕೆಲವರು ಅಲ್ಲೇ ಮರದ ಅಡಿಯಲ್ಲಿ ತಪಸ್ಸಿಗೆ ಕುಳಿತಂತೆ ಏಕಾಗ್ರಚಿತ್ತದಿಂದ ಕುಳಿತಿದ್ರು, ಮಕ್ಕಳು ಮೀನು ಗುಳಂ ಮಾಡುತ್ತಿದ್ದ ಪೆಲಿಕಾನ್ ಪಕ್ಷಿಗಳನ್ನು ಕಂಡು ಹುರ್ರೇ ಅಂತಿದ್ವು, ಸೊಂಟದ ಕಿವಿಗೆ ಐಪಾಡ್ ಸಿಕ್ಕಿಸಿಕೊಂಡು ಕ್ಯಾಟ್ವಾಕ್ ಪ್ರಾಕ್ಟೀಸ್ ಮಾಡುತ್ತಿದ್ದಂತಿದ್ದ ಲಲನೆಯರು, ತಿಂದೂ ತಿಂದೂ ಮೈ ಬೆಳೆಸಿಕೊಂಡು ಅದನ್ನ ಕರಗಿಸಿಲು ಕಷ್ಟ ಪಡುತ್ತಿದ್ದವರು, ದಪ್ಪ ಆಗಿಬಿಡುತ್ತಿನೇನೋ ಅನ್ನುವ ಆತಂಕ್ಕಕೆ ಬಿದ್ದು ಇನ್ನೂ ನಾಲ್ಕು ಹೆಜ್ಜೆ ಹೆಚ್ಚಿಗೆ ಓಡೋಣ ಅಂತ ಓಡುತ್ತಿದ್ದ ಹುಡುಗರು... ಪಕ್ಷಿ ಹುಡುಕುತ್ತ ಕೆಮೆರಾ ಕಣ್ಣಿಗೆ ಕಣ್ಣು ಕೀಲಿಸಿ ಕುಳಿತಿದ್ದ ಫೋಟೋಗ್ರಾಫರ್ಗಳು, ಯಾವ ಕಡೆಯಿಂದ ನೋಡಿದರೂ ಲಾಲ್ ಬಾಗ್ ಮಾಯಾಲೋಕದಂತಿತ್ತು. ಮಂಜು ಮುಸುಕಿದ ಮುಂಜಾವಿನಲ್ಲಿ ಲಾಲ್ ಬಾಗ್ ಎಂಬ ಸ್ನಿಗ್ಧ ಸುಂದರಿಗೆ ಜಸ್ಟ್ ಮನ ಸೋತುಬಿಟ್ಟಿದ್ದೆ.
ಒಂಬತ್ತರ ತನಕ ಅಲ್ಲೇ ಸುತ್ತಾಡಿದ್ರು ಸೂರ್ಯ ಬರುವ ಸೂಚನೆಗಳೇ ಇರಲಿಲ್ಲ. ಭಯೋತ್ಪಾದನೆ ವಿರುದ್ಧ ಒಂದು ಸಣ್ಣ ತಂಡ ಘೋಷಣೆ ಕೂಗುತ್ತಾ ಸಾಗುತ್ತಿತ್ತು. ಪಕದಲ್ಲೇ ಕಿವಿಗಿಂಪಾದ ಸಂಗೀತ. ಜೈ ಭಾರತ ಜನನಿಯ ತನುಜಾತೆ ಜಯಹೇ ಕನರ್ಾಟಕ ಮಾತೆ... ಗುಲಾಬಿ ಪಾಕರ್್ಗೆ ಹೋದ್ರೆ ಅಲ್ಲಿ ಗುಲಾಬಿ ಗಿಡಗಳು ಇನ್ನೂ ಕಸಿ ಮಾಡಿಸಿಕೊಂಡು ಕುಳಿತಿದ್ದವು. ಯಾರೋ ಒಬ್ಬರು ಪುಣ್ಯಾತ್ಮರು ಚೀಲದ ತುಂಬ ಸಕ್ಕರೆ,ರವೆ, ಅಕ್ಕಿ ತುಂಬಿಕೊಂಡು ಇರುವೆಗಳಿಗೆ, ಪಾರಿವಾಳಗಳಿಗೆ ಹಾಕುತ್ತಾ ಸಾಗುತ್ತಿದ್ದರು. ಬದುಕನ್ನು ಸಾರ್ಥಕ್ಯಗೊಳಿಸಿಕೊಳ್ಳಲಿಕ್ಕೆ ಎಷ್ಟೊಂದು ಮಾರ್ಗಗಳು ಅಲ್ಲವೇ! ಎದುರಿಗೆ ಸಿಕ್ಕ ಹುಡುಗಿ ಯಾಕೋ ನೋಡಿ ನಕ್ಕಳು. ಪದೇ ಪದೇ ತಿರುಗಿ ತಿರುಗಿ ನೋಡುತ್ತಿದ್ದಳು. ಅವಳನ್ನು ಎಲ್ಲಿಯಾದರೂ ನೋಡಿದ್ದೇನಾ? ಅಥವಾ ಅವಳು ನನ್ನನ್ನ ನೋಡಿದ್ದಳಾ? ಗೊತ್ತಿಲ್ಲ.
ಹೊಟ್ಟೆ ಚುರುಗುಟ್ಟುತ್ತಿತ್ತು. ಅಲ್ಲಿಂದ ವಿದ್ಯಾಥರ್ಿ ಭವನಕ್ಕೆ ಹೋಗಿ ದೋಸೆ ತಿಂದು ಮನೆಗೆ ಹೋದ್ರೆ ಫುಲ್ ನಿದ್ರೆ.
ಮಧ್ಯಾಹ್ನ ಎದ್ದವನ ಮನದ ತುಂಬ ಮುಂಜಾವಿನದೇ ಫ್ರೆಶ್ನೆಸ್.
ಬಿಡುವಿದ್ರೆ ಡಿಸೆಂಬರ್ ಮುಗಿಯೋ ಮುನ್ನ ಬೆಳಿಗ್ಗೆ ಎದ್ದು ಒಂದಿನ ಲಾಲ್ಬಾಗ್ ಕದ ತಟ್ಟಿಬನ್ನಿ.
ಅದರ ಮಜಾನೇ ಬೇರೆ.

Friday, December 19, 2008

ಗಿಫ್ಟ್ ಏನ್ ಕೊಡ್ತೀರಾ ಅಂದ್ರೆ...




ತುಂಬಾ ದಿನ ಆದಮೇಲೆ ಒಂದಿನ ರಸ್ತೆಯಲ್ಲಿ ನೀವು ನನ್ನನ್ನ ಅಚಾನಕ್ಕಾಗಿ ಭೇಟಿ ಆಗ್ತೀರ. ಉಭಯಕಲಸೋಪರಿ ಆದಮೇಲೆ ಇವತ್ತು ನನ್ನ ಬತರ್್ಡೇ ಅಂತ ಅದ್ಯಾಗೋ ನಿಮಗೆ ಗೊತ್ತಾಗಿಬಿಡುತ್ತೆ. ಆದ್ರೆ ನನಗೆ ಗಿಫ್ಟ್ ಅಂತ ಕೊಡಲಿಕ್ಕೇ ನಿಮ್ಮತ್ರ ಏನೇನೇನೂ ಇರೋಲ್ಲ. ಅಂತ ಸಮಯದಲ್ಲಿ ಏನು ಗಿಫ್ಟ್ ಕೊಡ್ತೀರಾ?
ಈ ಪ್ರಶ್ನೆಗೆ ರಿಪ್ಲೈ ಮಸ್ಟ್ ಅಂತ ಒಂದಿಷ್ಟು ಸ್ನೇಹಿತರಿಗೆ ಕಳುಹಿಸಿದೆ.
ಅವರು ಕೊಟ್ಟ ಉತ್ತರಗಳಿವು.

ಚುಪ್ಪಿ: ಪೊರಕೆ. ನಿಮ್ಮ ಲೈಫ್ನಲ್ಲಿರೋ ಕಸಾನೆಲ್ಲ ಗುಡಿಸಿ ಹೊರ ಹಾಕಿ ಅನ್ನೋ ಸ್ಲೋಗನ್ ಜೊತೆ.
ಕಮೆಂಟ್: ನಿಮ್ಮತ್ರ ಏನೇನೂ ಇಲ್ಲ ಅಂದಮೇಲೆ ಪೊರಕೆ ಎಲ್ಲಿಂದ ಬರಬೇಕು. ಪೊರಕೆ ಅವಸಿಕೊಂಡೇನಾದ್ರೂ ಹೋಲ್ಸೇಲ್ ಆಗಿ ಸಿಟಿ ಕ್ಲೀನ್ ಮಾಡೋದಕ್ಕೆ ಹೊರಟಿದ್ರಾ!

ಕಲಾ: ನನ್ನ ಕಣ್ಣ ರೆಪ್ಪೆಯ ಕೂದಲನ್ನು ಕೊಡುವೆ ಗೆಳೆಯ. ನೀನು ಬಯಸಿದ್ದು ಅದನ್ನು ಗಾಳಿಗೆ ತೂರಿದಾಗ ಸಿಗಲಿ ಎಂದು ಹಾರೈಸುವೆ.
ಕಮೆಂಟ್: ನಿಮ್ಮ ಐಡಿಯಾ ಏನೋ ಸೂಪರ್ರ್! ಆದ್ರೆ ಇರೋದೆರಡು ರೆಪ್ಪೆ ಕೂದಲು ಕಿತ್ತುಕೊಂಡ್ರೆ ಸೇವಿಂಗ್ ಮಾಡಿಸಿದ ಕೋತಿ ಥರ ಕಾಣಿಸಲ್ವಾ? ಥಿಂಕ್ ಟ್ವೈಸ್!

ಮಣಿಕಾಂತ್: ನೂರಾರು ಹಾರೈಕೆ ನಿಮಗೆ ಎಂಬ ಹರಕೆಯ ಬಿಟ್ಟಿ ಮಾತು.
ಕಮೆಂಟ್: ರೀ ಮಿನಿಕಾಂತ್ ಅದರಲ್ಲೂ ಕಂಜೂಸಾ? ಬಿಟ್ಟಿ ಅಂತಿದೀರಾ ಬೇರೆ...ನೂರಾರೇ ಏಕೆ. ಸಾವಿರಾರು ಅಂತಾದರೂ ಅನ್ರೀ!

ಕುಮಾರ ಸ್ವಾಮಿ: ಏನೂ ಕೊಡೋಲ್ಲ ಜಸ್ಟ್ ವಿಷಸ್ ಅಷ್ಟೇ!
ಕಮೆಂಟ್: ನೀವು ಕೊಡೊಲ್ಲ ಅಂತ ಗೊತ್ತು ಬಿಡ್ರೀ ನಟರೇ. ನಿಮ್ಮನ್ನ ನೋಡುದ್ರೆ ಯಾವ ಕಡೇ ಇಂದಾನೂ ಕೊಡೋ ಸೂಚನೆಗಳೇ ಇಲ್ಲ. ಹೇಳೋದರಲ್ಲೂ ಎಂಥ ನೇರವಂತಿಕೆ ನಿಮ್ಮದು. ಮೆಚ್ಚಿದೆ ಮೆಚ್ಚಿದೆ.

ಸುಬ್ಬು: ಮೊದಲೇ ಹೇಳಬಾರದಿತ್ತೇನೋ ಜೇಬ್ನಲ್ಲಿ ತಾಜ್ ಮಹಲ್ಲೆ ಇಟ್ಕಂಬತ್ತಿದ್ದೆ!
ಕಮೆಂಟ್: ಜೇಬಿದೆಯಾ ಅಂತ ನೋಡ್ಕೋ. ಇದ್ರೂ ತೂತಿರಬಹುದು. ತಾಜ್ ಮಹಲ್ ಇರಲಿ ನಿನ್ನ ಅಂಗಡೀಲಿರೋ ಒಂದು ಲಾಲಿ ಪಪ್ಪನ್ನ ಯಾರಿಗಾದ್ರೂ ದಾನ ಮಾಡಿದಿಯೇನೊ ಬ್ರದರ್!

ರವಿರಾಜ್: ನಿಮ್ಮ ಹುಟ್ಟಿದಬ್ಬ ನೆನಪಿಸಿಕೊಳ್ಳೋದೇ ನನಗೊಂದು ವಿಶೇಷ ಬಿಡಿ. ಯಾಕೆಂದ್ರೆ ನಾನು ಆಬ್ಸೆಂಟ್ ಮೈಂಡೆಡ್.
ಕಮೆಂಟ್: ಹೋಗಲಿ ಬಿಡಿ ರವಿರಾಜ್ ನಿಮ್ಮನ್ನ ನೆನಪಿಸಿಕೊಂಡ್ರೇ ಸಖತ್ ದುಃಖ ಆಗುತ್ತೆ. ಯಾವುದಕ್ಕೂ ಒಳ್ಳೇ ಕಡೆ ತೋರಿಸಿಕಳಿ.

Thursday, December 11, 2008

ಎದೆಯ ಬಟ್ಟಲು ಒಡೆದ ಶಬ್ದ ಕೇಳುತಿದೆಯೆನಗೆ



...'ಯಾರದೋ ಕೈಯಿಂದ ಜಾಮು ಬಿದ್ದಿರಬೇಕು... ಎದೆಯ ಬಟ್ಟಲು ಒಡೆದ ಶಬ್ದ ಕೇಳುತಿದೆಯೆನಗೆ ಹಾಗಂತ ಬರೆಯುತ್ತಾನೆ ಫಿರಾಖ್ ಗೋರಖ್ಪುರಿ. ಭಗ್ನ ಹೃದಯವೊಂದರ ಚಿತ್ರಣವನ್ನು ಇದಕ್ಕಿಂತ ಚೆನ್ನಾಗಿ ಕಟ್ಟಿಕೊಡಲು ಸಾಧ್ಯವೇ? ಉಫ್ ....... ನಾನಂತೂ ಫಿದಾ ಆಗೋಗಿಬಿಟ್ಟೆ. ನಿಮಗೆ ಗೊತ್ತಿದೆ, ಈ ಪ್ರೀತಿಗೂ ಮದ್ಯಕ್ಕೂ ಅದೆಂಥದೋ ಸಂಬಂಧವಿದೆ. ಅದೂ ಅಮಲೇ ಇದೂ ಅಮಲೇ! ಹೇಳಬೇಕೆಂದ್ರೆ ಪ್ರೀತಿ ಮದ್ಯಕ್ಕಿಂತ ಅಮಲಮಲು. ಪ್ರೀತಿಯಲ್ಲಿ ಸೋತವನು ಮದ್ಯಕ್ಕೆ ದಾಸನಾಗುತ್ತಾನೆ. ಮದ್ಯಕ್ಕೆ ದಾಸನಾದವನು ಬದುಕನ್ನೇ ಗಂಟುಕಟ್ಟಿ ಗಟಾರಕ್ಕೆ ಎಸೆದುಬಿಡುತ್ತಾನೆ. ಅಲ್ಲಿ ನೋ ಮುಜುಗರ, ನೋ ಹೋಪ್ಸ್, ನೋ ಲೈಫ್. ಪ್ರೀತಿ ಎದೆಯೊಳಗಿನ ದಾವಾಗ್ನಿ. ಯಾವ ಪ್ರೀತಿ ತನ್ನ ಬದುಕನ್ನು ಬಂಗಾರಮಾಡಬಲ್ಲದು ಅಂದುಕೊಂಡಿದ್ದನೋ ಅದೇ ಪ್ರೀತಿ ಅವನ ಬದುಕನ್ನ ಮುಕ್ಕಳಿಸಿ ಎಸೆದುಬಿಡುತ್ತದೆ. ಇನ್ನೆಲ್ಲಿ ಪ್ರೀತಿ?
ಕವಿ ಶಾಂತರಸ ಅವರು ಸೊಗಸಾದ, ಮನತಬ್ಬುವ ಇಂಥ ಎಷ್ಟೋ ದ್ವಿಪದಿಗಳನ್ನ ಉದರ್ುವಿನಿಂದ ಕನ್ನಡಕ್ಕೆ ತಂದಿದ್ದಾರೆ. ಉದರ್ುಕಾವ್ಯದಲ್ಲಿ ಮದ್ಯ ಮತ್ತು ಮದಿರೆ ಅನ್ನುವ ಹೆಸರಿನಲ್ಲಿ.
ಮೊನ್ನೆ ಶಶಿಕಲಾ ವೀರಯ್ಯಸ್ವಾಮಿಯವರು ತಂದುಕೊಟ್ಟು ಓದಿ ನೋಡಿ ನಿಮಗಿಷ್ಟ ಆಗುತ್ತೆ ಅಂದ್ರು. ಓದಿದೆ. ನೀವು ನೆನಪಾದೀರಿ. ಅದಕ್ಕೇ ಕೆಲವನ್ನ ಇಲ್ಲಿ ಕೊಡುತ್ತಿದ್ದೇನೆ.



ನಿನ್ನ ಕೇಶಗಳ ನೆರಳಲ್ಲಿ ಕೆಲ ನಿಮಿಷ ಕಳೆದವಗೆ
ಬೆಳುದಿಂಗಳಿಂದಲೂ ಹಿಂಸೆಯಾಗುವುದವಗೆ
- ನಾಷಾದ್
ಜೀವನವು ಏನೆಂದು ನಾನು ಕೇಳಿದೆನು
ಕೈ ಜಾರಿ ಬಿದ್ದು ಜಾಮು ಒಡೆದುಹೋಯ್ತು
- ಜಗನ್ನಾಥ ಆಜಾದ್
ಯಾರದೋ ಕೈಯಿಂದ ಜಾಮು ಬಿದ್ದಿರಬೇಕು
ಎದೆಯ ಬಟ್ಟಲು ಒಡೆದ ಶಬ್ದ ಕೇಳುತಿದೆಯೆನಗೆ
- ಫಿರಾಖ್ ಗೋರಖ್ಪುರಿ
ನೂರು ನೋವುಗಳನ್ನು ಹಿಚುಕಿ ಹಿಂಡಿದರೆ
ಒಂದೇ ಒಂದು ಹನಿ ಮದ್ಯವಾಗುವುದು
-ಸಾಹಿರ್ ಹೊಷಿಯಾರ್ ಪೂರಿ
ಯಾರು ಎಬ್ಬಿಸಬೇಕು ಉದ್ಯಾನದಂಗಳದ ಮೊಗ್ಗುಗಳನು
ಮಲಗಿಹುದು ನಿನ್ನ ಕೇಶಗಳ ನೆರಳಲ್ಲಿ ಮುಂಜಾವಿನೆಲರು
-ಕೈಫ್ ಅಹಮದ್ ಸಿದ್ದೀಖಿ
ಏನಾದರೂ ಸಿಗಲಿ ಈ ಮಧುರ ತುಟಿಯಿಂದ
ವಿಷ ಕುಡಿವ ಆದೇಶವಾದರೂ ಸರಿಯೆ
-ಆಜರ್ೂ ಲಖ್ನವಿ
ಹೊಳೆವ ಕೆನ್ನೆಯ ಮುಂದೆ ಸಮೆಯಿಟ್ಟು ಹೇಳುವರು:
ಯಾವ ಕಡೆ ಹೋಗುವುದೋ ಪತಂಗ ನೋಡೋಣ
-ದಾಗ್
ಎಷ್ಟು ಎದೆಗಳ ದೀಪ ನಂದಿಸಿ ನಿನ್ನ ನೋಟ
ಚುಕ್ಕೆ ಬಳಗಕೆ ಬೆಳಕನೀವುದು ತಿಳಿಯದಲ್ಲ
-ಆನಂದನರಾಯನ ಮುಲ್ಲಾ
ನೀಡು ಒಪ್ಪಿಗೆ ನಿನ್ನ ಕೆನ್ನೆಗಳ ನನ್ನೆದೆಗೆ ಅಪ್ಪಿಕೊಳ್ಳಲು
ಕಾವು ಕೊಡುವೆನೀ ಕೆಂಡಗಳಿಂದೆನ್ನ ಎದೆಯ ಗಾಯಗಳಿಗೆ
-ಖಿಜಲ್ ಬಾಷ್

Tuesday, December 9, 2008

ನಮ್ಮ ಮನೆಗೆ ಒಬ್ಬ ಪೊಲಿಟಿಷಿಯನ್ ಬರೋದಕ್ಕಿಂತ ಒಂದು ನಾಯಿ ಬಂದ್ರೆ ಒಳ್ಳೇದು



ಮನಸ್ಸು ದುಃಖಕ್ಕೆ ಬಿದ್ದಿದೆ.
ಅತ್ತ ಮುಂಬೈನ ನೂರಾರು ಸೋದರ ಸೋದರಿಯರು ಜೀವ ಕಳೆದುಕೊಂಡಿದ್ದಾರೆ. ನೂರಾರು ಸ್ನೇಹಿತರು ಗಾಯಗೊಂಡಿದ್ದಾರೆ. ತಾಜ್ ಹೋಟೆಲ್ಗಂಟಿದ ರಕ್ತದ ಕಲೆ ಆರುವುದಕ್ಕೆ ಎಷ್ಟುಕಾಲ ಬೇಕೋ! ಅಗೈನ್ ಉಗ್ರವಾದಿಗಳ ಕೊಲ್ಲುವ ಆಟ ಮುಂದುವರೆದಿದೆ. ಇಡೀ ಮುಂಬೈ ನಗರವೂ ಸೇರಿದಂತೆ ದೇಶಕ್ಕೆ ದೇಶವೇ ಪ್ರತಿ ಕ್ಷಣವನ್ನೂ ಆತಂಕ, ಭಯದಿಂದಲೇ ಎದುರುನೋಡುತ್ತಿದೆ. ಏನಾಗಿದೆ ಈ ದೇಶಕ್ಕೆ?
ಫ್ರೆಂಡ್ಸ್ ನೀವೇ ಹೇಳಿ, ಎಷ್ಟು ದಿನ ಅಂತ ಹೀಗೆ ಸಾವಿಗೆ ತಲೆ ಒಡ್ಡುತ್ತಲೇ ಬದುಕುವುದು? ಬದುಕಲಾಗದಷ್ಟು ಈ ಸಮಾಜ ಕ್ರೂರವಾಗುತ್ತಿದೆಯಾ? ಮನುಷ್ಯ ಮನುಷ್ಯನನ್ನ ಕೊಲ್ಲುವುದೇ ಉದ್ದೇಶವಾಗಿಬಿಟ್ಟರೆ ಜೀವಿಸುವ ಹಕ್ಕಾದರೂ ಉಳಿದೀತು ಎಲ್ಲಿ?
ಇವತ್ತು ಮುಂಬೈ, ನಾಳೆ ಬೆಂಗಳೂರು, ನಾಳಿದ್ದು ಗುಜರಾತ್, ಅದರ ನಾಳೆ ಇನ್ನಾವುದೋ? ಕೊಲ್ಲುವವರು ಬಂದು ನಿರಾತಂಕವಾಗಿ ಕೊಂದು ಹೋಗುತ್ತಿದ್ದಾರೆ. ಪ್ರತಿ ಸಲ ಕೊಂದಾಗಲೂ ನಮ್ಮ ಪುಢಾರಿಗಳದ್ದು ಅದೇ ನರ ಸತ್ತ ಹೇಳಿಕೆ. 'ನಾವು ಎಂಥ ಸ್ಥಿತಿಯನ್ನೂ ಎದುರಿಸಲು ಸಿದ್ಧ' ಅನ್ನುವುದು. ಘನವೆತ್ತ ಪುಢಾರಿಗಳೇ ನಿಮಗೆ ಮನುಷ್ಯತ್ವ ಅನ್ನುವುದೇನಾದರೂ ಇದೆಯಾ? ಒಂದು ಕೋಲು ಕೊಟ್ಟು ದೇಶ ಕಾಯಿರಿ ಅಂದ್ರೆ ಹೇಗೆ ಸಾಧ್ಯ ಅಂತೇನಾದ್ರೂ ಯೋಚಿಸಿದ್ದೀರಾ? ನಿಮಗೆ ಟೆರ್ರರಿಸ್ಟ್ ಹತ್ರ ಎಂತೆಂಥ ವೆಪೆನ್ಸ್ ಇದೆ ಅಂತೇನಾದ್ರೂ ಗೊತ್ತಾ? ಇವತ್ತು ಟೆರ್ರರಿಸ್ಟ್ಗೆ ಎದೆ ಒಡ್ಡಿ ನಿಂತು ಕಾದಾಡಲು ನಮ್ಮ ಪೊಲೀಸರ ಹತ್ರ ಒಂದು ಬುಲ್ಲೆಟ್ ಪ್ರೋಫ್ ಜಾಕೆಟ್ ಇಲ್ಲ. ಆಧುನಿಕವಾದ ವೆಪೆನ್ಸ್ ಎಷ್ಟು ಜನ ಪೊಲೀಸರ ಕೈಲಿದೆ? ನಮಗಿಂತ ಆತಂಕವಾದಿಗಳು ಟೆಕ್ನಾಲಜಿಯಲ್ಲಿ ಸೌಂಡ್ ಇರಬಾರದು ಅನ್ನುವ ಸಣ್ಣದೊಂದು ತಂತ್ರ ನಿಮಗೆ ಗೊತ್ತಿಲ್ಲ ಅಂದ್ರೆ ಹೇಗೆ? ಒಂದೇ ಒಂದು ಕ್ಷಣ ಯೋಚಿಸಿ. ನೀವು ಲೂಟಿ ಮಾಡುವ ಹಣದಲ್ಲಿ ಇಂಥ ಎಷ್ಟು ಒಳ್ಳೆ ಕೆಲಸ ಮಾಡಬಹುದಿತ್ತು. ಎಷ್ಟು ಒಳ್ಳೆ ಬು.ಪ್ರೂ. ಜಾಕೆಟ್ ಕೊಡಿಸಬಹುದಿತ್ತು, ಶೂ ಕೊಡಿಸಬಹುದಿತ್ತು, ಗನ್ ಕೊಡಿಸಬಹುದಿತ್ತು. ದೇಶಕ್ಕಾಗಿ ಹುತಾತ್ಮರಾದವರ ಕುಟುಂಬಕ್ಕೆ ಎಂಥ ಕಂಫಟರ್್ ಕೊಡಬಹುದಿತ್ತು. ಅದೆಲ್ಲ ನಿಮಗೆ ಎಲ್ಲಿ ಹೊಳೆಯಬೇಕು! ನಿಮಗೆ ಮಾತ್ರ ಟೈಟ್ ಸೆಕ್ಯೂರಿಟಿ ಬೇಕು. ಜನಸಾಮಾನ್ಯರು ಸಾಯಲಿ ಅಂದ್ರೆ ಈ ದೇಶ ನಿಮ್ಮನ್ನ ಯಾವತ್ತೂ ಕ್ಷಮಿಸುವುದಿಲ್ಲ, ತಿಳಿದುಕೊಳ್ಳಿ.
ಮಗನನ್ನೋ, ಮಗಳನ್ನೋ, ಅಪ್ಪನನ್ನೋ, ಅಮ್ಮನನ್ನೋ ಕಳೆದುಕೊಂಡವರ ನೋವು ನಿಮಗೆಲ್ಲಿ ಅರ್ಥ ಆಗಬೇಕು. ಅದಕ್ಕೂ ರಾಜಕೀಯ ಬೆರೆಸುತ್ತೀರಿ. ಇತ್ತ ಮಗನ ಸಾವಿನ ದುಃಖ ಭರಿಸಲಾಗದೇ ಕುಳಿತ ಅಪ್ಪನ ಮುಂದೆ ಸಿಎಮ್ ಬಂದಾಗ ಯಾಕೆ ಬಂದೆ ಅಂತ ಕೇಳಿದ್ದೇ ತಪ್ಪಾಗಿಹೋಯಿತಾ? ಅಷ್ಟಕ್ಕು ಆತ ಬಂದದ್ದಾರೂ ಯಾಕೆ? ಮೀಡಿಯಾದವರು ತರಾಟೆಗೆ ತೆಗೆದುಕೊಂಡಿದ್ದಕ್ಕೆ ಅಲ್ಲವೇ! ಅದೂ ಒಂದು ರಾಜಕೀಯ ಗಿಮಿಕ್ಕೇ! ಅದನ್ನೆ ಆತ ನಿನ್ನ ಮನೆಗೆ ಯಾವ ನಾಯಿ ಬಂದೀತು ಅಂದ್ರೆ ಏನರ್ಥ. ಒಂದು ಜವಾಬ್ದಾರಿಯುತ ಸ್ಥಾನದಲ್ಲಿ ಕುಳಿತ ವ್ಯಕ್ತಿಯೊಬ್ಬ ಆಡುವ ಮಾತೇ ಅದು. ನೀವು ಜವಾಬ್ದಾರಿಯುತವಾಗಿ ನಡೆದುಕೊಂಡಿದ್ದರೇ ಆ ಮಾತೇ ಬರುತ್ತಿರಲಿಲ್ಲ ಅಲ್ವಾ ಸಿಎಮ್ ಸಾಹೇಬರೇ! ಒಬ್ಬ ಬೆಳೆದ ಮಗನನ್ನು ಕಳೆದುಕೊಂಡ ದುಃಖ ಒಮ್ಮೆ ಭರಿಸಿ ನೋಡಿ ಗೊತ್ತಾಗುತ್ತೆ. ಆ ಸಂಕಟ ಎಂಥದು ಅಂತ. ದೇಶ ಕಾಯಿರಿ ಅಂತ ಹೇಳುತ್ತೀರಿಯೇ ಹೊರತು ಹಾಗೆ ಕಾಯುವಾಗ ಎದುರಾಳಿಗಳ ದಾಳಿಗೆ ಸಿಕ್ಕು ಸತ್ತರೇ ಅವರ ಕುಟುಂಬಕ್ಕೆ ಆಸರೆಯಾಗಿ ನಿಲ್ಲುವವರಾರು? ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡ ಆ ಸಂಸಾರಕ್ಕೆ ಯಾರು ದಿಕ್ಕು? ನಿಮಗೇನು ನಿಮ್ಮ ಮಕ್ಕಳನ್ನು ಆಕ್ಸ್ಫಡರ್್ನಲ್ಲೇ ಓದಿಸುತ್ತೀರಿ, ಅವರಿಗೆ ಬೇಕಾದ ಸೆಕ್ಯೂರಿಟಿ ಕೊಡಿಸುತ್ತೀರಿ. ನಿಮಗೇನು ಧಾಡಿ? ಇರುವ ಎನ್ಎಸ್ಜಿ ಪಡೆ ನಿಮ್ಮಂತ ದುರುಳರನ್ನು ಕಾಯುವುದಕ್ಕೆ ಬಳಕೆಯಾಗುತ್ತಿದೆಯಲ್ಲ ಅದಕ್ಕಿಂತ ದುದರ್ೈವದ ಸಂಗತಿ ಈ ದೇಶಕ್ಕೆ ಬೇರೇನಿದೆ! ಅವತ್ತು ಅಂತದ್ದೊಂದು ಪಡೆ ಇಲ್ಲದಿದ್ದರೇ ದೇಶದ ಗೌರವವಾದರೂ ಎಲ್ಲಿರುತ್ತಿತ್ತು ಬಲ್ಲಿರಾ? ನಿಮ್ಮ ಆತ್ಮಸಾಕ್ಷಿಯಾಗಿ ಹೇಳಿ, ನೀವು ಮಾಡುವ ಕೆಲಸ ನಿಮ್ಗೆ ತೃಪ್ತಿ ತಂದಿದೆಯಾ? ಈ ದೇಶಕ್ಕೋಸ್ಕರ ಏನಾದ್ರೂ ಒಳ್ಳೇದು ಮಾಡಿದ್ದೀರಾ? ನಮ್ಮ ಹಣವನ್ನ ಲೂಟಿ ಹೊಡೆಯುತ್ತೀರಿ. ಮೆರೆಯುತ್ತೀರಿ, ನಾವೇನು ನಿಮ್ಮನ್ನು ನಿಮ್ಮನ್ನ ಉದ್ಧಾರ ಮಾಡಿಕೊಳ್ಳಲಿಕ್ಕೆ ಅಂತ ಆರಿಸಿ ಕಳಿಸಿದ್ದೀವಾ?
ಯಾವುದಕ್ಕೆ ರಾಜಕೀಯ ಮಾಡಬೇಕು, ಯಾವುದಕ್ಕೆ ಮಾಡಬಾರದು ಅನ್ನುವ ಪರಿಜ್ಞಾನ ಇಲ್ಲದವರೇ ಇವತ್ತು ನಮ್ಮನ್ನಾಳುತ್ತಿರುವಾಗ ಟೆರ್ರರಿಸ್ಟ್ಗಳಿಗೆ ಅದಕ್ಕಿಂತ ಇನ್ನೇನು ಬೇಕು. ನಿಜಕ್ಕೂ ನಮಗೆ ಆತಂಕವಿರುವುದು ಟೆರ್ರರಿಸ್ಟ್ಗಳಿಂದಲ್ಲ ನಮ್ಮ ಪುಢಾರಿಗಳಿಂದಲೇ! ಟೆರ್ರರಿಸ್ಟ್ಗಳಿಗೆ ಜನರನ್ನು ಕೊಲ್ಲುವುದು ಈಸಿ ಅನಿಸಿಬಿಟ್ಟಿದೆ. ಕೊಂದ ಮೇಲೆ ಎಸ್ಕೇಪ್ ಆಗುವುದು ಅವರಿಗೆ ಕರಗತ. ಅಥವಾ ಅರೆಸ್ಟ್ ಆದರೂ ಇನ್ನೊಂದು ಅಟ್ಯಾಕ್ ಮಾಡಿ ಇವರನ್ನು ಬಿಡಿಸಿಕೊಂಡು ಹೋಗಲು ಅವರ ಪಡೆ ಸನ್ನದ್ಧವಾಗಿದೆ. ಅಂದ್ರೆ ನಮ್ಮನ್ನಾಳುವವರು ರೂಪಿಸುವ ಕಾನೂನುಗಳಿಗೆ, ನಾಟಕಗಳಿಗೆ ಅವರು ಕ್ಯಾರೆ ಅಂತ ಕೂಡ ಅನ್ನುತ್ತಿಲ್ಲ.
ಅಲ್ಲರೀ ಟೆರ್ರರಿಸ್ಟ್ ಯಾವನೇ ಆಗಿರಲಿ ಅವನು ಮನುಕುಲದ ವಿರೋಧಿ. ಅಂತಹವನನ್ನು ಹಿಡಿದು ತಂದು ಎನ್ಕ್ವೈರಿ ಮಾಡುವುದಾದರೂ ಎಂಥದು? ವರ್ಷಗಟ್ಟಲೆ ಅವನನ್ನ ಇಟ್ಟುಕೊಂಡು ವಿಚಾರಿಸಲು ಅವನಲ್ಲಿ ಏನು ಉಳಿದಿದೆ? ತಪ್ಪು ಮಾಡಿರುವುದು ಸಾಬೀತಾಗಿದೆ. ಹಿಡಿದು ಎಲ್ಲರೆದುರೇ ನೇತುಹಾಕಿ.ಅವರು ನಮ್ಮ ಇನ್ನೂರು ಜನ ಸೋದರ ಸೋದರಿಯರನ್ನು ಕೊಲ್ಲುತ್ತಾರೆ ಹೌದಾ? ಹಾಗಾದ್ರೆ ನಮಗೆ ಅವರು ಎಂಟತ್ತು ಮಂದಿಯನ್ನು ಕೊಲ್ಲಲ್ಲು ಹಾಗುವುದಿಲ್ಲ ಅಂದ್ರೆ ಹೇಗೇ? ಹಾಗಂತ ಕೊಲೆಗೆ ಕೊಲೆಯೇ ಪರಿಹಾರವಲ್ಲ ಒಪ್ಪಿಕೊಳ್ಳೋಣ. ಆದ್ರೆ ಕೊಲ್ಲುವವರನ್ನ ಹೀಗೆ ರಾಜಕೀಯದವರು ಪೋಷಿಸುತ್ತಾ ಬಂದ್ರೆ ದೇಶ ಸುಭದ್ರವಾಗಿರಲು ಎಲ್ಲಿ ಸಾಧ್ಯ?
ಗೇಟ್ವೇ ಆಫ್ ಇಂಡಿಯಾ ಮುಂದೆ ಮಡುವುಗಟ್ಟಿದ ದುಃಖದ ನಡುವೆಯೇ ಒಬ್ಬ ತನ್ನ ಫ್ಲಕಾಡರ್್ನಲ್ಲಿ ಹೀಗೆ ಬರೆದಿದ್ದ. ನಮ್ಮ ಮನೆಗೆ ಒಬ್ಬ ಪೊಲಿಟಿಷಿಯನ್ ಬರೋದಕ್ಕಿಂತ ಒಂದು ನಾಯಿ ಬಂದ್ರೆ ಒಳ್ಳೇದು ಅಂತ. ಇದರರ್ಥವಾದರೇ ಚೆನ್ನ.
ನಿಜಕ್ಕು ಈ ದೇಶದ ಜನಸಾಮಾನ್ಯ ರೋಸತ್ತುಹೋಗಿದ್ದಾನೆ. ಒಂದು ದೇಶದ ಪ್ರಜೆಗೆ ನೆಮ್ಮದಿಯಾಗಿ ಬದುಕುವಂತಹ ವಾತಾವರಣ ಕಲ್ಪಿಸಿಕೊಡದಿದ್ರೆ ಆ ದೇಶದ ಪುಢಾರಿಗಳೇನು ಕತ್ತೆಕಾಯಲಿಕ್ಕೆ ಇದ್ದಾರಾ?
ಜನರ ತಾಳ್ಮೆಯನ್ನ ಮತ್ತೆ ಮತ್ತೆ ಪರೀಕ್ಷಿಸಲು ಹೋಗಬೇಡಿ. ಜಗತ್ತಿನಲ್ಲಿ ಎಲ್ಲದಕ್ಕೂ ಒಂದು ಫುಲ್ಸ್ಟಾಪ್ ಇದೆ. ಅದು ನಿಮಗೂ ಅನ್ವಯಿಸುತ್ತೆ.
ಮೈಂಡ್ ಇಟ್.

Thursday, November 27, 2008

ಅವರಿಗೊಂದು ಹ್ಯಾಟ್ಸಾಫ್ ಹೇಳುತ್ತಾ...

ಹಂಪಿ ಒಂಥರಾ ಕಾಡುವ ಸಾಮ್ರಾಜ್ಯ.
ಎಷ್ಟರ ಮಟ್ಟಿಗೆ ಅಂದ್ರೆ, ಆ ಗುಂಗಿನಿಂದ ಹೊರಬರಲು ಬಹುಶಃ ತಿಂಗಳುಗಳೇ ಬೇಕೇನೋ! ಅಷ್ಟು ಕಾಡುತ್ತದೆ. ಅವತ್ತಿನ ಅವರ ಸಮೃದ್ಧ ಬದುಕನ್ನ ಕಲ್ಪಿಸಿಕೊಂಡರೇ ಗ್ರೇಟ್ ಅನಿಸುತ್ತೆ. ಒಂದು ಸಾಮ್ರಾಜ್ಯದ ರಿಚ್ನೆಸ್, ಅಭಿರುಚಿ, ಸಾಮಥ್ರ್ಯ, ಬುದ್ಧಿವಂತಿಕೆ ಎಲ್ಲವೂ ಕಣ್ಣಿಗೆ ಕಟ್ಟಿದಂತೆ ಭಾಸವಾಗುತ್ತದೆ. ನನಗೆ ಪ್ರತಿ ಬಾರಿ ಹೋದಾಗಲೂ ಕಾಡುವುದು ಅಲ್ಲಿನ ವಿಜಯ ವಿಠ್ಠಲ ದೇವಾಲಯದ ಕಲ್ಲಿನ ಕಂಬಗಳಿಂದ ಹೊಮ್ಮುವ ಸಂಗೀತ, ಅದರ ಹಿಂದಿರುವ ತಂತ್ರಜ್ಞಾನ. ಅವರ ಕಲಾನೈಪುಣ್ಯಕ್ಕೆ, ಕಲಾಪೋಷಣೆಗೆ, ತಂತ್ರಜ್ಞಾನಕ್ಕೆ ನನ್ನದೊಂದು ಹ್ಯಾಟ್ಸಾಫ್ ಹೇಳಲೇಬೇಕು.
ಇಲ್ಲಿ ಲೋಟಸ್ ಮಹಲ್ ಅಂತ ಒಂದಿದೆ. ಅದು ಯಾವಾಗಲೂ ತಂಪಾಗಿರುವಂತಹ ವ್ಯವಸ್ಥೆ ಆಗಲೇ ಇತ್ತಂತೆ. ಅಂದ್ರೆ ಅದನ್ನ ತಂಪಾಗಿರಿಸಲು ಕೊಳವೆಗಳ ಮೂಲಕ ನೀರನ್ನು ಚಾವಣಿಯಲ್ಲಿ ಹರಿಸುತ್ತಿದ್ದರು. ಅಲ್ಲರೀ 14 ನೇ ಶತಮಾನದಲ್ಲೇ ಅಂಥದ್ದೊಂದು ತಂತ್ರಜ್ಞಾನವನ್ನ ಅವರು ರೂಢಿಸಿಕೊಂಡಿದ್ರು ಅಂದ್ರೆ ಅದು ಸಾಮಾನ್ಯಾನಾ? ಅವರ ಮುಂದೆ ನಮ್ಮ ಇವತ್ತಿನ ತಂತ್ರಜ್ಞಾನ ನಥಿಂಗ್ ಅನ್ನಿಸಿಬಿಡುತ್ತೆ. ಅಷ್ಟು ಚಂದನೆಯ ಕಲ್ಲಿನ ರಥ ಸೃಷ್ಟಿಸಲು ಅದೆಷ್ಟು ಶಿಲಿಗಳು ಬೆವರು ಸುರಿಸಿದ್ದರೋ? ಅವರ ತಾಳ್ಮೆ ಎಂಥದೋ? ಆ ವಿರೂಪಾಕ್ಷನೇ ಬಲ್ಲ. ಮೊಗಲರ ದಾಳಿಗೆ ಒಳಗಾಗಿ ಮುಕ್ಕಾಗದಿದ್ದರೆ ಹಂಪಿ ತನ್ನ ಒಡಲಲ್ಲಿ ಅದಿನ್ನೆಂತಹ ಸರ್ವಶ್ರೇಷ್ಠ ಕಲಾಕೃತಿಗಳನ್ನ ಬಚ್ಚಿಟ್ಟುಕೊಂಡಿರುತಿತ್ತೋ, ಅಲ್ವ!
ಇಂಥ ಹಂಪಿ ತುಂಬಾ ಕಿತ್ತು ತಿನ್ನುವವರೇ ತುಂಬಿಕೊಂಡಿದ್ದಾರೆ. ಹಂಪಿ ಬಗ್ಗೆ ನಿಮಗೊಬ್ಬ ಗೈಡ್ ಬೇಕು ಅಂದ್ರೆ ನೀವು ಸಾವಿರಗಟ್ಟಲೇ ಹಣ ಕೊಡಬೇಕು. ಅದೂ ಅವನು ಅದರಲ್ಲಿ ಪ್ರವೀಣನೇ ಅಂದ್ರೆ ನೋ ನೋ. ಅವನು ಹೇಳಿದ್ದನ್ನು ಕೇಳಿಸಿಕೊಂಡು ಸುಮ್ಮನಾಗಬೇಕು. ಕ್ರಾಸ್ ಕ್ವಶ್ಚನ್ ಕೇಳಿದ್ರೆ ಆ ಟಾಪಿಕ್ ಬಿಟ್ಟು ಬೇರೆಲ್ಲ ಹೇಳುತ್ತಾನೆ. ವಿದೇಶಿ ಪ್ರವಾಸಿಗರು ಸಿಕ್ಕರಂತೂ ಅವರನ್ನು ಕಿತ್ತು ತಿನ್ನುವ ಪಡೆಗಳೇ ಇಲ್ಲಿವೆ. ಛದ್ಮವೇಷದಾರಿಗಳಿಂದ ಹಿಡಿದು ಅವರನ್ನು ಓಲೈಸಿ ಹಣ ಕಿತ್ತುಕೊಳ್ಳಲು ಹವಣಿಸುವ ಪಡೆಗಳಿವೆ. ಸಕರ್ಾರ ಕೂಡ ಅಂಥ ಕೇರ್ ತಗೊಂಡಿಲ್ಲ ಅನಿಸುತ್ತೆ. ಅಲ್ಲಿ ಸೆಕ್ಯೂರಿಟಿ ಕೋಣೆ ಅಂತ ಒಂದಿದೆ. ಅದು ತೆಂಗಿನ ಗರಿಯಿಂದ ಮಾಡಿದ್ದು. ಅದರಲ್ಲಿ ಒಬ್ಬ ಪ್ರೈವೇಟ್ ಸೆಕ್ಯೂರಿಟ ಗಾಡರ್್ ತೂಗಡಿಸುತ್ತಾ ಕೂತಿರುತ್ತಾನೆ. ಇಂಥ ಸೆಕ್ಯೂರಿಟಿ ಇಟ್ಟುಕೊಂಡು ಯಾವ ಟೆರ್ರರಿಸ್ಟ್ಗಳನ್ನ ತಡೆಯಲು ಸಾಧ್ಯ?
ಹಾಗೆ ನೋಡಿದ್ರೆ ಹಂಪಿಯನ್ನು ಇನ್ನೂ ಅಚ್ಚುಕಟ್ಟಾಗಿ ಸಂರಕ್ಷಿಸಬಹುದಿತ್ತು. ಬರುವ ಪ್ರವಾಸಿಗರಿಗೊಂದು ಕಮ್ಫಟರ್್ ಕೊಡಬಹುದಿತ್ತು. ಅವೆರಡೂ ಆಗಿಲ್ಲ ಅಲ್ಲಿ ಬಿಡಿ.
ಹಾಗಿದ್ರೂ ಹಂಪಿ ನೋಡಲೇಬೇಕು. ಅಲ್ಲಿನ ಗತ ವೈಭವವನ್ನ ಕಣ್ತುಂಬಿಕೊಳ್ಳಲೇಬೇಕು. ಅದಕ್ಕಾದ್ರೂ ಒಮ್ಮೆ ಹೋಗಿ ಬನ್ನಿ.

Wednesday, November 26, 2008

ಜರ್ನಿ ಟು ಹಂಪಿ












ಅವತ್ತು ಶುಕ್ರವಾರ. ಸಮಯ ರಾತ್ರಿ ಹತ್ತೂವರೆ.
ಹನ್ನೊಂದು ಜನರ ಪುಂಡ ಪಡೆಯನ್ನು ತುಂಬಿಕೊಂಡ ಹಂಪಿ ಎಕ್ಸ್ಪ್ರೆಸ್ ಹೊಸಪೇಟೆಯೆಡೆಗೆ ಶಿಳ್ಳೆ ಹಾಕುತ್ತಾ ಸಾಗಿತ್ತು. ನಮ್ಮ ಮೈಮನದ ತುಂಬೆಲ್ಲ ಜೋಷ್ ಜೋಷ್ ಮತ್ತು ಸಿಫರ್್ ಜೋಷ್. ಬೆನ್ನಿಗಿದ್ದ ಬ್ಯಾಗುಗಳನ್ನು ಒಗೆದು ಎಲ್ಲರಂತೆ ಬತರ್್ ಹತ್ತಿ ಮಲಗಿ ಗೊರಕೆ ಹೊಡೆಯಲಿಲ್ಲ. ರಾತ್ರಿ ಒಂದರ ತನಕ ಹರಟೆ, ಜೋಕು, ಅಂತ್ಯಾಕ್ಷರಿ ಎಲ್ಲಾ ನಿರಾತಂಕವಾಗಿ ಸಾಗಿತ್ತು. ಯಾರೋ ರಿಟೈಡರ್್ ಆಫೀಸರ್ ಒಬ್ಬರು ನಮ್ಮ ನಡುವೆ ತಗಲಿಹಾಕಿಕೊಂಡ್ರು. ತೋಳಗಳ ನಡುವೆ ಕುರಿ ತಗಲಿಬಿದ್ದಂಗಾಗಿತ್ತು ಅವರ ಸ್ಥಿತಿ. ಅವರೇನೂ ಕಡಿಮೆ ಇಲ್ಲ ಬಿಡಿ. ಮಾತು ಅಂದ್ರೆ ಸಾಕು ಸೇರಿಗೆ ಸವ್ವಾ ಸೇರು ಅಂತಾರಲ್ಲ ಅಂಥವರು. ಕೊನೆಗೆ ನಮ್ಮ ಚೀಕಲಾ, ಸರ್ ಮಲಗಿ ನೀವು. ವಯಸ್ಸಾಗಿದೆ. ಜಾಸ್ತಿ ಮಾತಾಡಿದ್ರೆ ಹೃದಯ ಬೇರೆ ನಿಮಗೆ ಇರೋದ್ರಿಂದ ತೊಂದ್ರೆ ಆದೀತು ಅಂತ ಮಲಗಿಸಿದಳು. ಅವರು ಆಗಲೂ ನೀವೆಲ್ಲ ಜರ್ನಲಿಸ್ಟ್ ಅಂದ್ರಲ್ಲ ಪಗಾರ ಜೋರೈತೇನು ಅಂದ್ರು. ಭಾಳ ಕೊಡ್ತೇವಿ ಅಂದ್ರು. ನಾವೇ ಸ್ವಲ್ಪ ಕಡಿಮೆ ಇಸಿಕೊಂತಾ ಇದೀವಿ ಅಂದ್ವಿ. ಅಷ್ಟರಲ್ಲಿ ಯಾರೋ ಪ್ರಶ್ನೆ ಹಾಕಿದ್ರು. ಸರ್ ಈ ರವಿ ಅಜ್ಜೀಪುರಗೆ ವಯಸ್ಸೆಷ್ಟು ಗೊತ್ತಾ ಅಂತ. ಅವರು ಬಹಳ ಏನಿಲ್ಲ ಬಿಡ್ರಿ ಮೂವತ್ತು ಇರಬಹುದು ಅಂದ್ರು. ಸರ್ ನನಗೆ ಅಂತ ಚುಪ್ಪಿ. ಸರ್ ನನಗೆ ಅಂತ ಸುಮಾ, ಕೋಲಾ. ಎಲ್ಲಾ ಕಿತ್ಕೊಂಡು ತಿನ್ನೋದಕ್ಕೆ ಶುರುಮಾಡಿದ್ರು. ಕೊನೆಗೆ ಸರ್ ನಿಮಗೆ ಅಂದ್ವಿ. ರಿಟೈಡರ್್ ಆಯ್ತಲ್ಲ ಅಂತ ಮುಖದ ತುಂಬಾ ಬೆಡ್ಶಿಟ್ ಎಳೆದುಕೊಂಡು ಮಲಗಿದ್ರು. ಮಲಗುವಾಗ ಲಗ್ಗೇಜ್ ಜೋಪಾನ ಅಂತ ಹೇಳೋದನ್ನ ಅವರು ಮರೆಯಲಿಲ್ಲ. ಹಾಗಂದ ನಿಮಿಷಕ್ಕೆ ಅವರದು ಒಂದು ಫುಲ್ ಗೊರಕೆ.
ಬೆಳಿಗ್ಗೆ ನಾನು ಕಣ್ಣುಬಿಟ್ಟಾಗ ಅವರು ಆಗಲೇ ಇಳಿದುಹೋಗಿದ್ರು.
ಹೊಸಪೇಟೆಯ ಶಾನುಭಾಗ ಲಾಡ್ಜ್ನಲ್ಲಿ ನಮ್ ವಾಸ್ತವ್ಯ. ಚೆನ್ನಾಗಿ ಮಿಂದು, ತಿಂದು ಹಂಪಿಕಡೆ ನಡೆದವು. ಅವತ್ತು ಶನಿವಾರ ಪೂತರ್ಿ ಹಂಪಿಯ ನೆಲದಲ್ಲಿ ನಮ್ಮ ಹೆಜ್ಜೆಗಳು ಹರಿದಾಡಿದ್ದವು. ಈ ಮೊದಲೂ ನಾನೂ ಹಂಪಿಗೆ ಎರಡುಮೂರು ಸಲ ಹೋಗಿದ್ದಿದೆ. ಪ್ರತಿ ಸಲ ಹೋದಾಗಲೂ ಅದು ಹೊಸದೇ ಅನಿಸುತ್ತೆ. ಅರೆ ಈ ಕಲ್ಲು ಇಲ್ಲಿತ್ತಾ ಅನಿಸಿಬಿಡುತ್ತೆ. ಹಂಪಿ ತುಂಬಾ ಹರಡಿಕೊಂಡಿರುವ ಕಲ್ಲುಗಳನ್ನು ನೋಡಿದ್ರೆ ಅದೆಲ್ಲ ಒಂದೊಂದು ದೇಗುಲವೇನೋ ಅನ್ನುವಂತೆ ಭಾಸವಾಗುತ್ತೆ. ಅಷ್ಟರಮಟ್ಟಿಗೆ ಹಂಪಿ ದ ಗ್ರೇಟ್ ಹೆರಿಟೇಜ್ ಸೆಂಟರ್. ಕಡಲೆಕಾಳು ಗಣಪ, ಸಾಸಿವೆಕಾಳು ಗಣಪದಿಂದ ಹಿಡಿದು, ರಾಣಿಯರ ಸ್ನಾನಗೃಹ, ಲೋಟಸ್ ಮಹಲ್, ಮಹಾನವಮಿ ದಿಬ್ಬ, ಪುಷ್ಕರಣಿ. ಅರೆಬರೆ ಅರಮನೆಗಳ ಅವಶೇಷ, ವೀಕ್ಷಣಾ ಗೋಪುರ, ಗಜಶಾಲೆ, ವಜ್ರ ವೈಢೂರ್ಯವನ್ನ ಮಾರುತ್ತಿದ್ದರೆನ್ನಲಾದ ಬೀದಿ, ಕಲ್ಲಿನ ರಥ, ಓಹ್ ಒಂದಾ ಎರಡಾ. ಹಂಪಿಯ ವೈಭವವೇ ಅಂಥದು ಬಿಡಿ. ಅದನ್ನು ಕಣ್ತುಂಬಿಕೊಳ್ಳುವ ಅನುಭವವೇ ಬೇರೆ. ಆದ್ರೆ ಅಷ್ಟು ಮೆರೆದಿದ್ದ ಒಂದು ಸಾಮ್ರಾಜ್ಯ ಹೇಗೆ ಕಾಲನ ಕಾಲಬುಡದಲ್ಲಿ ಮಂಡಿಯೂರಿಕೊಂಡು ಬಿದ್ದೋಗಿದೆ ಅಲ್ವ! ಇನ್ನು ನಾವ್ಯಾವ ಲೆಕ್ಕ!
ನಮ್ಮ ಕುಮಾರಸ್ವಾಮಿ ಮಹಾನವಮಿ ದಿಬ್ಬದ ಮೇಲೆ ರಾಜಗಾಂಭೀರ್ಯದಲ್ಲಿ ಕುಳಿತು ಯಾರಲ್ಲಿ ನರ್ತಕಿಯನ್ನು ಬರಹೇಳು ಅಂದಿದ್ದು ಅದನ್ನು ಕೇಳಿಸಿಕೊಂಡ ಚೀಕಲಾ ಅಪ್ಪಣೆ ಪ್ರಭು ಅಂದಿದ್ದು, ಮಂತ್ರಿಯಾಗಿ ರವಿರಾಜ್ ಗಲಗಲಿ ಪಕ್ಕದಲ್ಲೆ ಆಸೀನನಾಗಿದ್ದು, ಅದೆಲ್ಲಿಂದಲೋ ದಂಡೆತ್ತಿ ಬಂದ ಶೂರನಂತೆ ಶ್ಯಾಮ್ ಬಂದು ಮಹಾರಾಜರೇ ನೀವು ಬಂದ ರೂಟ್ ಸರಿಗಿಲ್ಲ ಅಂತ ಅಬ್ಬರಿಸಿದ್ದು, ್ಲ ಕಣ್ಣಿಗೆ ಇಪ್ಪತ್ತು ರೂಪಾಯಿನ ಕನ್ನಡಕ ಹಾಕಿಕೊಂಡು ಏಯ್ ಫೊಟೋ ತೆಗಿಯೇ ಚುಪ್ಪಿ ಅಂತ ಸುಮ ಅಬ್ಬರಿಸಿದ್ದು ಎಲ್ಲಾ ಸೂಪರ್. ನನಗೆ ಅಲ್ಲಿ ಸೋಜಿಗವೆನಿಸಿದ್ದು ಕೇವಲ ಬೇಸ್ಮೆಂಟ್ ಮಾತ್ರ ಉಳಿದಿರುವ ಅರಮನೆಯ ಅವಶéೇಷಗಳು. ಅದನ್ನೆಲ್ಲ ಮರದಲ್ಲಿ ಕಟ್ಟಿದ್ದರು. ಹಾಗಾಗಿ ಎಲ್ಲಾ ನಾಶವಾಗಿ ಈಗ ಕೇವಲ ಪಳೆಯುಳಿಕೆ ಮಾತ್ರ ಉಳಿದಿದೆ ಅಂದ ನಮ್ಮ ಗೈಡ್. ಈಗೈಡ್ದು ಒಂದು ಕಥೆ. ಸುಮ್ಮನೆ ಅವನು ಹೇಳಿದ್ದನ್ನೆಲ್ಲ ನಾವು ಕೇಳಿಸಿಕೊಳ್ಳಬೇಕು ಅಷ್ಟೆ. ಮಧ್ಯ ಬಾಯಿ ಹಾಕಬಾರದು. ಆದ್ರೂ ನಮ್ಮ ಗಲಗಲಿ ಬಿಡುತ್ತಿರಲಿಲ್ಲ. ಛಲ ಬಿಡದ ತ್ರಿವಕ್ರಮನಂತೆ ಅದ್ಯಾಕೆ ಹಿಂಗೆ ಇದ್ಯಾಕೆ ಹಿಂಗೆ ಅಂತ ಕೇಳುತ್ತಲೇ ಇದ್ದರು. ನಮ್ಮ ಇಡೀ ಟೀಮಿಗೆ ಹುರುಪು ತುಂಬಿದ್ದು ಸಾಧು ಮಗ. ಅವನು ಒಂದುಕ್ಷಣಕ್ಕೂ ಅತ್ತದ್ದು ನಾನು ನೋಡಿಲ್ಲ. ಮರಿ ಸೂಪರ್ಮ್ಯಾನ್ ಥರ ಎಲ್ಲೆಂದರಲ್ಲಿ ಸೊಂಯ್ ಟಪಕ್ ಅಂತ ನುಗ್ಗುತ್ತಲೇ ಇದ್ದ.
ಹಂಪಿಗೆ ಎಂಟ್ರಿ ಆದ ಕೂಡಲೇ ಒಂದಷ್ಟು ಸ್ವಾಮೀಜಿಗಳು ಎದುರಿಗೆ ಸಿಕ್ಕರು. ಅವರು ನಿಜಕ್ಕೂ ಸ್ವಾಮೀಜಿಗಳಾ ಅಂತ ನೋಡಿದ್ರೆ ಜಸ್ಟ್ ವೇಷದಾರಿಗಳು ಅಷ್ಟೆ. ವಿದೇಶಿಯರನ್ನ ನೋಡಿದ ತಕ್ಷಣ ಆಶೀವರ್ಾದ ಮಾಡುವ ಭಂಗಿಯಲ್ಲಿ ಸಾಲಾಗಿ ನಿಂತುಕೊಂಡುಬಿಡೋರು. ವಿದೇಶಿಯರಿಗೂ ಇವರು ನಮ್ಮನ್ನ ಬಕ್ರ ಮಾಡುತ್ತಾರೆ ಅಂತ ಗೊತ್ತಾಗಿದೆಯಾದ್ದರಿಂದ ಅವರು ಕ್ಯಾರೆ ಅಂತ ಕೂಡ ನೋಡುತ್ತಿರಲಿಲ್ಲ. ನಾನು ಸುಮಾ ಚುಪ್ಪಿ ಒಟ್ಟಿಗೆ ಹೋಗುತ್ತಿದ್ದದ್ದನ್ನು ನೋಡಿ ಒಬ್ಬಾಕೆ ಸರ್ರ ಬಾಳೆ ಹಣ್ಣು ತಗೋರಿ. ಆನೆಗೆ ಹಾಕಿ ಅಂದಳು. ನಮ್ಮಲ್ಲೇ ಎರಡು ಆನೆಗಳಿವೆ ಬೇಡ ಅಂದೆ ನಾನು. ಕೊನೆಗೆ ಒಂದು ಲಿಂಬು ಸೋಡಾ ಕುಡಿದು ಜಾಗ ಖಾಲಿ ಮಾಡಿದ್ವಿ. ಚೌಕಾಸಿ ಮಾಡಿ ಬ್ಯಾಗ್ ತೊಗೊಂಡ್ವಿ. ಆ ದಟ್ಟ ಬಣ್ಣದ ಬ್ಯಾಗಿನ ಮೇಲೆಲ್ಲ ಪುಟ್ಟ ಪುಟ್ಟ ಕನ್ನಡಿಗಳ ಮಿಣುಕು.
ಅವತ್ತು ರಾತ್ರಿ ಕುಮಾರ ಕಂಠೀರವ ಮತ್ತು ನಮ್ಮ ರೋಹಿತನ ಹುಟ್ಟಿದ ಹಬ್ಬ. ಇನ್ನುಮೇಲಾದ್ರೂ ಸ್ನಾನ ಮಾಡಿ, ದಿನಕ್ಕೊಮ್ಮೆ ಬಟ್ಟೆಬದಲಾಯಿಸಿ, ಬ್ರಷ್ ಬೇಡ ಕಲ್ಲಿನಿಂದಲೇ ಮೈ ತಿಕ್ಕಿಕೊಳ್ಳಿ. ಆಗಲಾದ್ರೂ ಚೂರು ಕೆಂಪಾಗಿ ಅಂತ ಅವರಿಗೆ ಗೈಡ್ ಮಾಡಿದ್ವಿ. ಗೆಳತಿಯರೆಲ್ಲ ಖುಷಿಗೆ ಕ್ಯಾಟ್ವಾಕ್ ಮಾಡಿ ಎಂಜಾಯ್ ಮಾಡಿದ್ರು. ಜಡ್ಜ್ ಆಗಿದ್ದ ನಾನು ಕೊನೆಗೆ ಯಾರಿಗೂ ಮಿಸ್ ಹೊಸಪೇಟ್ ಅಂತ ಕಿರೀಟ ತೊಡಿಸದೆ ಎಸ್ಕೇಪ್ ಆಗಿಬಿಟ್ಟೆ. ಕುಮಾರಂಗೆ, ರೋಹಿತ್ಗೆ ಮುಖಕ್ಕೆಲ್ಲ ಯರ್ರಾಬಿರ್ರೀ ಕ್ರೀಮ್ ಹಚ್ಚಿದ್ವಿ, ಚೀಕಲಾ ಭಾಷಣ ಮಾಡಿದ್ಲು, ಚುಪ್ಪಿ ಫೋಟೋ ತೆಗೆದ್ಲು. ಆಮೇಲೆ ಗಿಫ್ಟ್ ಕೊಡುವ ಸಮಾರಂಭ. ಶಟರ್್ ಒಂದನ್ನ ಗಿಫ್ಟ್ ಅಂತ ಕೊಟ್ಟಿದ್ರು. ಅದನ್ನ ಬೆಳಿಗ್ಗೆ ಎದ್ದ ಕುಮಾರ ಹಾಕ್ಕೋಳ್ಳ ಅಂದ. ಹಾಕ್ಕೋ ಮಾರಾಯ ನಿನಗೇ ಕೊಟ್ಟಿರೋದು ಅಂದೆ. ಹಾಕಿಕೊಂಡು ನಿಂತ. ಸೇಮ್ ಬ್ಲೌಸ್ ಇದ್ದಂಗಿತ್ತು. ಇದನ್ನ ಯಾರಿಗಾದ್ರೂ ಮಕ್ಕಳಿಗೆ ದಾನ ಅಂತ ಮಾಡಿಬಿಡುತ್ತೀನಿ ಬಾಸ್ ಅಂತ ಅವಾಗಲೇ ಅವನು ಪ್ರತಿಜ್ಞೆ ಮಾಡಿದ್ದು.
ಉಫ್ ... ಇಷ್ಟಾಯಿತಲ್ಲ ಗದಗಿಗೆ ಹೋಗೋಣ ಅಂತ ರೈಲ್ವೆ ಸ್ಟೇಷನ್ಗೋದ್ರೆ ನಮ್ಮ ಸಾಧು ಸೇವಿಂಗ್ ಮಾಡಿಸ್ಕೊಂಡು ಬರ್ತೀನಿ ಅಂತ ಹೋದೋರು ಪತ್ತೇನೆ ಇಲ್ಲ. ಸೋ ಟ್ರೈನ್ ಮಿಸ್. ಆಮೇಲೆ ನಾವು ಅವರ ಮೇಲೆ ಹದ್ದಿನ ಕಣ್ಣಿಟ್ಟಿದ್ವಿ. ಮತ್ತೆಲ್ಲಾದ್ರೂ ಕಟಿಂಗ್ ಅಂತ ಹೊರಟೋದ್ರೆ ಏನು ಮಾಡೋದು? ಸರಿ ಗದಗ ಟ್ರೈನ್ ಬಂತು. ಎಲ್ಲಾ ಹತ್ತೋದಕ್ಕೆ ಅಂತ ಹೋದ್ವಿ. ಆದ್ರೆ ಯಾರೂ ಹತ್ತಲಿಲ್ಲ. ಹತ್ತಿದವರು ಗಲಗಲಿ ಮಾತ್ರ. ನಾವೆಲ್ಲ ಅಲ್ಲೇ ರೈಲ್ವೇಸ್ಟೇಷನ್ನಲ್ಲಿ ಗಡದ್ದಾಗಿ ಇಡ್ಲಿ ವಡೆ ತಿಂದು ಇನ್ನೊಂದು ಟ್ರೈನ್ ಹತ್ತಿದ್ವಿ.
ಗದಗಿಗೆ ಹೋಗಿ ಅಲ್ಲಿ ಶಿರಹಟ್ಟಿ ತಲಪಿದ್ರೆ ನಮ್ಮ ಸಂಗಮೇಶ ಮೆಣಸಿನಕಾಯಿಯ ಮದುವೆ. ನಿಜ್ಜ ಹೇಳಬೇಕು ಅಂದ್ರೆ ಈ ಮದುವೆಗೆ ಅಂತಾನೆ ನಾವು ಬಂದಿದ್ದು. ಅವರು ನೋಡಿದ್ರೆ ತಲೆಗೆ ಕಿರೀಟ ಹಾಕ್ಕೊಂಡು ನಿಂತಿದ್ರು. ಎಲ್ಲರೂ ವಿಷ್ ಮಾಡಿ ಉಪ್ಪಿಟ್ಟು, ಅವಲಕ್ಕಿ ತಿಂದು ಮುಖಗಿಕ ತೊಳೆದು ರಿಸಪ್ಷನ್ಗೆ ಅಂತ ಹೋದ್ರೆ ಫುಲ್ ಹಾಡು.
ಚಿತ್ರಾನ್ನ ಚಿತ್ರಾನ್ನ ಚಿತ್ರ ಚಿತ್ರ ಚಿತ್ರಾನ್ನ ಚಿತ್ರಾನ್ನ
ನಾನಂತೂ ಬಿದ್ದು ಬಿದ್ದು ನಕ್ಕೆ. ಬೇರೆ ಯಾರ್ಯಾರು ನಕ್ಕರೋ ಗೊತ್ತಾಗಲಿಲ್ಲ.
ನಮ್ಮ ಚುಪ್ಪಿ ಕೈಯಲ್ಲಿದ್ದ ಕ್ಯಾಮೆರಾ ನೋಡಿ ಪುಟ್ಟ ಪುಟ್ಟ ಹುಡುಗ್ರು ನಂದೂ ಒಂದು ಪೋಟೋ ತೆಗಿತಾಳೇನೋ ಚೆಲುವೆ ಅಂತ ಚೇರನ್ನೆಲ್ಲ ತಲೆ ಮೇಲೆ ಹೊತ್ಕೊಂಡು ಕುಣಿದ್ವು. ಪಲ್ಟಿ ಹೊಡೆದ್ವು, ಟಪ್ಪಾಂಗುಚ್ಚಿ ಸ್ಟೆಪ್ ಹಾಕಿದ್ವು, ಕುಮಾರ ತಡಕೊಳಾಕೆ ಆಯ್ತಾ ಇಲ್ಲ ಬಾಸ್ ಎರಡೇ ಎರಡು ಸ್ಟೆಪ್ ಹಾಕ್ಲಾ ಅಂದ. ಬೇಡ ಸುಮ್ನಿರೋ ಇದು ಮದ್ವೆ ಸಮಾರಂಭ. ಎಲ್ಲರೂ ಓಡಿಹೋದ್ರೆ ಏನು ಗತಿ ಅಂದೆ. ಪಕ್ಕದಲ್ಲಿ ಕುಳಿತಿದ್ದ ಚೀಕಲಾ ಕಿಸಕ್ಕನೆ ನಕ್ಕಳು.
ಆಮೇಲೆ ಅಲ್ಲಿಂದ ಹೊರಟು ಹುಬ್ಬಳ್ಳಿ ಸೇರಿ ಅಲ್ಲಿ ಗಿರಮಿಟ್ಟ್ ತಿಂದ್ವಿ. ಅದೆಂಥದೂ ಜ್ಯೂಸ್ ಕುಡಿಸಿದ್ರು. ನಮ್ಮ ಕುಮಾರ ಅದನ್ನು ಕುಡಿದು ಕುಡಿದವನ ಥರ ಆ್ಯಕ್ಟ್ ಮಾಡಿ ಹೆಂಗೆ ಪರವಾಗಿಲ್ಲವಾ ಬಾಸ್ ಅಂದ. ಆಮೇಲೆ ಊಟ. ಮತ್ತೆ ಟ್ರೈನ್ಗೆ ಗಾಳ. ಆದ್ರೆ ನಮ್ಮದು ವೇಯಿಟಿಂಗ್ ಲಿಸ್ಟ್ನಿಂದ ಆಚೆ ಬರಲೇ ಇಲ್ಲ. ಇದ್ಯಾಕೋ ಸರಿಗಿಲ್ಲ ಅಂತ ಟ್ರೈನ್ ಕ್ಯಾನ್ಸಲ್ ಮಾಡಿಸಿ ಬಸ್ ಹತ್ತಿ ಬೆಂಗಳೂರು ತಲಪಿದ್ವಿ.
ಆಮೇಲೆ ಎಲ್ಲರದೂ ಅವರವರ ಪಾಡು. ಬದುಕು ಒನ್ಸ್ ಎಗೇನ್ ಬಿಸಿ ಆಗಿದೆ.
ಲಾಸ್ಟ್ ನೆನಪು: ಟ್ರಿಪ್ಗೆ ಬಂದು ಎರ್ರಾಬಿರ್ರೀ ಎಂಜಾಯ್ ಮಾಡಿದ, ಎಂಜಾಯೇ ಮಾಡದ ಎಲ್ಲರಿಗೂ ನನ್ನ ಥ್ಯಾಂಕ್ಸ್.
ಅಂದಹಾಗೆ ಮುಂದಿನ ಟ್ರಿಪ್ ಎಲ್ಲಿಗೆ?

>>> ನಮ್ಮ ಕೆಟ್ಟ ಮುಖಗಳ ಜೊತೆಗೆ ಈ ಸುಂದರವಾದ ಫೋಟೋಗಳನ್ನೆಲ್ಲಾ ತೆಗೆದಿದ್ದು ಸುಪ್ರಭಾ.

Thursday, November 13, 2008

ಕೆಪ್ಪ ಅನ್ನೋ ಮೇಸ್ಟ್ರು ಮತ್ತು ಸೀನಿಯರ್ಸ್- ಸ್ಕೂಲ್ ಪುರಾಣ 2

ನಮಗೊಬ್ಬ ಮೇಸ್ಟ್ರು ಇದ್ದರು. ದಪ್ಪಕ್ಕೆ, ಕುಳ್ಳಕ್ಕೆ. ಥೇಟ್ ಗುಜ್ಜಾರ್ ಕಾಟರ್ೂನ್ ಥರ ಅಂತಿಟ್ಟುಕೊಳ್ಳಿ. ಜೀವಶಾಸ್ತ್ರ ತಗೋಳೋರು. ನಾವೆಲ್ಲ ಒಂದಿಷ್ಟು ಜನ ಜೀವಶಾಸ್ತ್ರವನ್ನ ಜೀವ ಹಿಂಡೋಶಾಸ್ತ್ರ ಅಂತಲೇ ಭಾವಿಸಿದ್ದ ಕಾಲ ಅದು. ಗಣಿತ, ವಿಜ್ಞಾನ ಅಂದ್ರೆ ಅದೆಂಥದೋ ಭಯ ನಮಗೆ.
ಈ ಮೇಸ್ಟ್ರನ್ನ ನಮ್ಮ ಸೀನಿಯರ್ಸ್ ಕೆಪ್ಪ ಅಂತ ಕರೀತಿದ್ರು. ಕೆಪ್ಪ ಅಂದ್ರೆ ಒಂದರ್ಥದಲ್ಲಿ ಕಿವುಡ ಅಂತಲೂ ಆಗುತ್ತೆ. ಆದ್ರೆ ಆ ಮಾಸ್ತರಿಗೆ ಕಿವಿ ಚೆನ್ನಾಗೆ ಕೇಳಿಸ್ತಿತ್ತು. ಕೆಪ್ಪ ಅಂತ ಕರೆದು ಕರೆದು ಅವರ ಒರಿಜಿನಲ್ ಹೆಸರೇ ನಮಗೆ ಮರೆತುಹೋಗಿತ್ತು. ನಡೆದು ಹೋಗುತ್ತಿದ್ದವರ ಎದುರಾಎದುರಿಗೆ ನಿಂತು ಏನೋ ಕೆಪ್ಪ ಅಂತ ಕರೆದುಬಿಡೋದಕ್ಕೂ ಧಮ್ಮು ಬೇಕು ಬಿಡಿ. ಆಗತಾನೆ ಹಳ್ಳಿಯಿಂದ ಗುಳೇ ಎದ್ದುಬಂದಿದ್ದ ನಮಗೆ ಇದೆಲ್ಲ ಆಶ್ಚರ್ಯ, ದಿಗ್ಭ್ರಮೆ ಹುಟ್ಟಿಸುತ್ತಿತ್ತು. ಮೇಸ್ಟ್ರು ಅಂದ್ರೆ ದೇವರ ಸಮಾನ ಅನ್ನೋ ನಮ್ಮ ನಂಬಿಕೆಗೆ ಕ್ಷಣ ಮಾತ್ರದಲ್ಲಿ ಎಳ್ಳುನೀರು ಬಿಟ್ಟವರು ನಮ್ಮ ಸೀನಿಯರ್ಗಳು. ಅವರಿಗೆ ಮಾಸ್ತರು ಅಂದ್ರೆ ಏನೇನೇನೂ ಅಲ್ಲ. ಮೊದಲೇ ಹೇಳಿದಂಗೆ ಹೊಡೆಯೋದಕ್ಕೆ ಬಂದ್ರೆ ಕೋಲು ಕಿತ್ತಿಕೊಳ್ಳೋದು, ಕ್ಲಾಸಿನಲ್ಲೇ ಪಟಾಕಿ ಹೊಡೆಯೋದು, ಬುಧವಾರ ಶನಿವಾರ ಆದ್ರೆ ವೈಟ್ ಅಂಡ್ ವೈಟ್ ಹಾಕ್ಕೋಬೇಕಲ್ಲ ಅವತ್ತು ಬಿಳಿ ಪಂಚೆ ಬಿಳಿ ಶಟರ್್ ಹಾಕ್ಕೊಂಡು ಬರೋದು, ಪ್ರೇಯರ್ ಮಾಡಬೇಕಾದ್ರೆ ಎಲ್ಲರೂ ಮುಗಿಸಿದ್ರೆ ಒಬ್ಬ ಮಾತ್ರ ಹಾಡುತ್ತಲೇ ಇರೋದು... ಒಂದಾ ಎರಡಾ ಕಿತಾಪತಿ. ನನಗಂತೂ ನೋಡಿ ನೋಡಿ ಗಾಬರಿಯಾಗುತಿತ್ತು. ಹಳ್ಳಿಯಿಂದ ಬಂದವನು ನೋಡಿ. ಅಲ್ಲಿ ಸೀನಿಯರ್ಗಳಂತೂ ಕಡಿದರೆ ನಾಲ್ಕು ಊರಿಗೆ ಊಟಹಾಕಬಹುದು ಹಂಗಿದ್ರು. ಜೊತೆಗೆ ಒಬ್ಬೊಬ್ಬರದೂ ಒಂದೊಂದು ಗ್ಯಾಂಗ್. ನೋಡಿದ್ರೆ ಸಾಕು ಯಾಕೋ ಗುರಾಯಿಸ್ತೀಯ ಅಂತ ಒದೆ ಬೀಳುತ್ತಿತ್ತು. ಅಂಥದರಲ್ಲಿ ನಾನೋ ನರಪೇತಲ ನಾರಾಯಣನಂತಿದ್ದವ. ಮೈಯಲ್ಲಿ ಮಾಂಸವೇ ಇರಲಿಲ್ಲ. ಇನ್ನು ಧೈರ್ಯ ಎಲ್ಲಿಂದ ಬರಬೇಕು.
ಇಂತಿಪ್ಪ ಕೆಪ್ಪನ ಮೇಲೆ ನಡೆಯುತ್ತಿದ್ದ ಆಕ್ರಮಣಗಳು ಒಂದೆರಡಲ್ಲ. ಅವರು ಬರಲಿ ಹೋಗಲಿ ಕೂರಲಿ ಸದಾ ಏನಾದರೊಂದು ಕಿತಾಪತಿ ಮಾಡೋದಕ್ಕೆ ಅಂತಾನೆ ಕಾಯ್ದುಕೊಂಡು ಒಂದು ಪಡೆ ನಿಂತಿರುತ್ತಿತ್ತು.
ಬೆಳಿಗ್ಗೆ ಸ್ಕೂಲ್ ಶುರುವಾಗುವ ವೇಳೆಗೆ ಅವರು ತಮ್ಮ ಪುಟ್ಟ ಬೈಕ್ನಲ್ಲಿ ಬಂದಿಳಿಯೋರು. ಅದೆಂಥದೋ ಮಾಡೆಲ್ ಬೈಕ್ ಅದು. ಎತ್ತರವೂ ಇಲ್ಲ, ಉದ್ದಾನೂ ಇಲ್ಲ. ನೋಡೋದಕ್ಕೆ ಚೆನ್ನಾಗೂ ಇರಲಿಲ್ಲ. ಆ ಥರದ ಬೈಕ್ ಅದೊಂದೇ ನಾನು ನೋಡಿದ್ದು. ಅದರ ಸ್ಪೀಡ್ ಹೇಗೆಂದ್ರೆ ನಾವೆಲ್ಲ ಚೂರು ಚೂರೇ ಜೋರಾಗಿ ನಡೆಕೊಂಡು ಹೋದ್ರೆ ಹೆಂಗಿರುತ್ತೋ ಹಂಗೆ.
ಅಂತ ಬೈಕಲ್ಲಿ ಅವರು ಬುಡುಬುಡು ಅಂತ ಬಂದು ಇನ್ನೇನು ಗೇಟ್ ಒಳಗೆ ನುಗ್ಗಬೇಕು ಆಗಲೇ ಅವಿತುಕೊಂಡು ನಿಂತಿದ್ದ ಪುಂಡರು ಕೆಪ್ಪ ಅವರ ತಲೆಮೇಲೆ ಫಟ್ ಅಂತ ಹೊಡೆದುಬಿಡೋರು. ಹಿಂದಿನಿಂದಲೆ ಕೆಪ್ಪ ಅನ್ನೋ ಒಕ್ಕೊರಲ ಕೂಗು. ಅವರು ಯಾವೊನೋ ಅವನು ಅಂತ ಇಳಿದು ನಿಂತರೆ ಎಲ್ಲಾ ಪರಾರಿ.
ಎಷ್ಟೋ ಸಲ ಕ್ರಿಕೆಟ್ ಆಡುತ್ತಿದ್ದಾಗ ಅವರು ಬರ್ತಾರೆ ಅಂದ್ರೆ ಅವರು ಬರುವ ಕಡೆಗೆ ಬ್ಯಾಟ್ ಬೀಸೋರು. ಬಾಲ್ ಎಸೆಯೋ ನೆಪದಲ್ಲಿ ಅವರ ಬೆನ್ನಿಗೆ ಹೊಡೆಯೋದು ನಡೀತಾ ಇತ್ತು. ಅವರು ಸ್ಟಾಫ್ ರೂಮಿನಲ್ಲಿ ಕೂತಿದ್ರೆ ಕಿಟಕಿಯಲ್ಲಿ ಹೋಗಿ ಕೆಪ್ಪ ಅಂತ ಕಿರುಚಿಬಿಡೋರು. ಪಾಪ ಅವರಿಗೆ ಎಂಥ ಮುಜುಗರ ಆಗುತ್ತಿತ್ತೋ ಏನೋ! ಕ್ಲಾಸಿಗೆ ಬಂದಾಗಲೆಲ್ಲ ಗರಮ್ ಆಗೇ ಇರುತ್ತಿದ್ದರು.
ಒಂದ್ಸಲ ಅವರಿಗೆ ರೋಸಿಹೋಗಿತ್ತು ಅನಿಸುತ್ತೆ. ಯಾರ್ಯಾರು ತಲೆ ಮೇಲೆ ಹೊಡೀತಾರೆ, ಕೆಪ್ಪ ಅಂತ ಕೂಗ್ತಾರೆ ಅವರ ಹೆಸರನ್ನೆಲ್ಲ ಪಟ್ಟಿ ಮಾಡಿ ಹೆಡ್ ಮೇಡಮ್ಗೆ ಕೊಟ್ಟುಬಿಟ್ಟರು. ನಿಮ್ಮ ಅಪ್ಪ-ಅಮ್ಮನ್ನ ಕರ್ಕೊಂಡು ಬನ್ನಿ ಇಲ್ಲ ಅಂದ್ರೆ ಎಕ್ಸಾಮ್ಗೆ ಕೂರ್ಸೊಲ್ಲ ಅಂತ ಅವರು ರೋಫ್ ಹಾಕಿ ಕಳಿಸಿಬಿಟ್ಟರು.
ಈ ಸೀನಿಯರ್ರುಗಳೆಲ್ಲ ಸೇರಿ ತಪ್ಪಾಯ್ತು. ಇನ್ನುಮೇಲೆ ಹಿಂಗಿಂಗೆಲ್ಲ ಮಾಡೋಲ್ಲ ಅಂತ ಬರೆದುಕೊಟ್ರು. ಹೆಡ್ ಮೇಡಮ್ಗೆ ಸಿಟ್ಟು ಬಂತು. ಹಿಂಗ್ ಮಾಡೊಲ್ಲ ಅಂದ್ರೆ ಬೇರೆ ಥರ ಮಾಡ್ತೀರ ಈಡಿಯಟ್ಸ್. ಒದ್ದು ಪೊಲೀಸ್ ಸ್ಟೇಷನ್ಗೆ ಹಾಕಿಸ್ ಬಿಡ್ತೀನಿ. ಮೇಸ್ಟ್ರು ಅಂದ್ರೆ ಏನಂದುಕೊಂಡಿದೀರೋ ಮುಠ್ಠಾಳರಾ! ಅಂತೆಲ್ಲ ಕೂಗಾಡಿದ್ರು.
ಇವರು ಅಪ್ಪ ಅಮ್ಮನ್ನ ಕರೆಸಿ ಅವರೂ ಇನ್ನು ಮೇಲೆ ನಮ್ಮ ಮಕ್ಕಳು ಹೀಗೆಲ್ಲ ಮಾಡೋಲ್ಲ ಅಂತ ಬರೆದುಕೊಟ್ಟ ಮೇಲೆ ಕ್ಲಾಸಿಗೆ ಸೇರಿಸಿಕೊಂಡಿದ್ದರು.
ಅದಾಗಿ ಒಂದು ವಾರವಾಗಿತ್ತು ಅನಿಸುತ್ತೆ. ಯಥಾಪ್ರಕಾರ ಆ ಮೇಸ್ಟ್ರು ಸ್ಕೂಲಿನ ಗೇಟ್ ಬಳಿ ಬಂದು ಬೈಕ್ ತಿರುಗಿಸಿದ್ದಾರೆ. ಅದೇ ಕೆಪ್ಪ ಅನ್ನೋ ಒಕ್ಕೊರಲ ದನಿ.
ಯಾರೋ ಅವನು ಈಡಿಯಟ್ ಅಂತ ತಿರುಗಿನೋಡಿದ್ರೆ ಹೊಚ್ಚ ಹೊಸ ಗುಂಪು.
ಜೂನಿಯರ್ಸ್ದು.

Saturday, November 8, 2008

ಬಬ್ಬಲ್ಗಮ್ಮು, ಪ್ಯಾಂಟು ಮತ್ತು ಜಿಪ್ ಹಾಕದ ಗೊರಿಲ್ಲಾ ಮಾಸ್ತರ್...

ನನಗೆ ಹಿಂದಿನಿಂದಲೂ ಒಂದು ಅಭ್ಯಾಸವಿತ್ತು.
ಎಗ್ಗಾಮಗ್ಗಾ ಚ್ಯೂಯಿಂಗ್ಗಮ್ ಅಗಿಯುವುದು. ಅದನ್ನ ಇತ್ತೀಚೆಗೆ ಇಲ್ಲವೇ ಇಲ್ಲ ಅನ್ನುವಷ್ಟು ಕಡಿಮೆ ಮಾಡಿಕೊಂಡಿದ್ದೇನೆ ಬಿಡಿ.
ಇದು ಎಂಟತ್ತು ವರ್ಷಗಳ ಹಿಂದಿನ ಮಾತು. ಆಗೆಲ್ಲ ಚ್ಯೂಯಿಂಗ್ಗಮ್ ತಿನ್ನುವ ಆಸೆಯ ಜೊತೆಜೊತೆಗೆ ಒಂದು ಥರದ ಭಯವೂ ಇತ್ತು. ಅದಕ್ಕೆ ಕಾರಣ ಚ್ಯೂಯಿಂಗ್ಗಮ್ ಅಗಿಯುವಾಗ ಅದನ್ನೇನಾದ್ರೂ ಅಕಸ್ಮಾತ್ ನುಂಗಿಬಿಟ್ಟರೆ ಸತ್ತೇಹೋಗುತ್ತಾರೆ ಅನ್ನುವುದು. ನಾವೆಲ್ಲ ಯಾವ ಪರಿ ಹೆದರಿದ್ದೆವು ಅಂದ್ರೆ ನಾನಂತೂ ಕೆಲ ಕಾಲ ಚ್ಯೂಯಿಂಗ್ಗಮ್ ತಿನ್ನುವುದನ್ನೇ ಬಿಟ್ಟುಬಿಟ್ಟಿದ್ದೆ. ಮನೆಯಲ್ಲಿ ಚ್ಯೂಯಿಂಗ್ಗಮ್ ಕಂಡ್ರೆ ಸಾಕು ಹಾವು ಮೆಟ್ಟಿದಂಗಾಡ್ತಿದ್ರು. ಇದು ಇನ್ನೂ ಎಷ್ಟು ಎಕ್ಸ್ಟ್ರೀಮ್ ಹಂತಕ್ಕೆ ಹೋಯ್ತು ಅಂದ್ರೆ ಯಾರೋ ಒಬ್ಬ ಹುಡುಗ ಚ್ಯೂಯಿಂಗ್ಮ್ ತಿಂದು ಸತ್ತೇ ಹೋದನಂತೆ. ಚ್ಯೂಯಿಂಗ್ಗಮ್ನ ಬ್ಯಾನ್ ಮಾಡ್ತಾರಂತೆ ಅನ್ನುವ ಸುದ್ದಿ ಹರಡಿ ನಮ್ಮೆಲ್ಲರ ಜಂಗಾಬಲವೇ ಉಡುಗಿಹೋಗಿತ್ತು. ಅವತ್ತಿಂದ ಬಾಯಿಗೆ ಚ್ಯೂಯಿಂಗ್ಗಮ್ ಬಿದ್ರೆ ಸಾಕು ಎಲ್ಲಿ ನುಂಗಿಬಿಡುತ್ತೇನೋ ಅನ್ನುವ ಭಯ ಫೋಬಿಯಾ ಥರ ಇನ್ನಿಲ್ಲದೆ ಕಾಡತೊಡಗಿದ್ದು ಮಾತ್ರ ಸುಳ್ಳಲ್ಲ.
ಇಂಥ ಚ್ಯೂಯಿಂಗ್ಗಮ್ ನನ್ನದೊಂದು ಹೊಚ್ಚ ಹೊಸ ಪ್ಯಾಂಟನ್ನು ಹಾಳು ಮಾಡಿತ್ತು. ತೀರಾ ಮೊಲದ ಬಿಳುಪಿನದ್ದು ಅದು. ಅದನ್ನು ಎಷ್ಟು ಪ್ರೀತಿಯಿಂದ ಹೊಲಿಸಿಕೊಂಡಿದ್ದೆ ಅಂದ್ರೆ ಎಲ್ಲಿ ಹಾಕಿಕೊಂಡ್ರೆ ಕೊಳೆ ಆಗುತ್ತೋ ಅಂತ ಹೆಚ್ಚಾಗಿ ಹಾಕಿಕೊಳ್ತಾನೆ ಇರಲಿಲ್ಲ. ಮನೆಯಲ್ಲಿ ಹಾಕ್ಕೊಂಡುಹೋಗೋ. ಅದನ್ನೇನು ಹೊಲಿಸಿ ಇಟ್ಕೊಂಡು ಪೂಜೆ ಮಾಡ್ತೀಯ ಅಂತ ಸಣ್ಣಗೆ ಗದರಿದ್ದೂ ಉಂಟು.
ಇರಲಿ. ನಮ್ಮ ಕ್ಲಾಸ್ ಒಂಥರ ಪುಂಡರ ಸಂತೆ. ಏನೋ ತರಲೆ ಮಾಡ್ತೀಯ ಅಂತ ಹೊಡೆಯಲು ಹೋದ್ರೆ ಪಿಲ್ಟು ಅನ್ನುವ ಫ್ರೆಂಡ್ ಒಬ್ಬ ಮಾಸ್ತರನ ಕೈಲಿದ್ದ ಕೋಲನ್ನೇ ಬಿಗಿಯಾಗಿ ಕಿತ್ತುಕೊಂಡು ಅಬ್ಬರಿಸಿದ್ದ. ಹೊಡಿ ನೋಡ್ತೀನಿ ಅಂತ. ಅವನಿಗೆ ಅಷ್ಟು ಪೊಗರು ಹೇಗೆ ಬಂದಿತ್ತು ಅಂದ್ರೆ ಅವನು ಅಣ್ಣ ಆಗಲೇ ರೌಡಿ ಅಂತ ಹೆಸರು ಮಾಡಿದ್ದ. ಅವನೂ ಅದೇ ಸ್ಕೂಲ್ನ ಸೀನಿಯರ್ ಸ್ಟೂಡೆಂಟ್. ಅವನದೋ ಇನ್ನೂ ಅದ್ವಾನ. ಶನಿವಾರ ಬಿಳಿ ಡ್ರೆಸ್ ಹಾಕ್ಕೊಂಡು ಹೋಗೋದು ಕಂಪಲ್ಸರಿ ತಾನೆ. ಆದ್ರೆ ಈ ಮಹಾನುಭಾವ ಒಂದಿನ ಬಿಳಿ ಪಂಚೆ ಶಟರ್ು ಹಾಕ್ಕೊಂಡು ಬಂದು ಪ್ರೇಯರ್ನಲ್ಲಿ ನಿಂತಿದ್ದ. ನೋಡಿದ ಟೀಚರ್ರು ಏನಯ್ಯಾ ಇದು ಅಪದ್ಧ ಅಂದ್ರೆ, ಸರ್ ನಿಮಗೆ ಏನು ಬೇಕು. ಬಿಳಿ ಬಟ್ಟೆ ತಾನೆ ಅಂತ ದಬಾಯಿಸಿದ್ದ. ಅವತ್ತಿಡೀ ಅವನನ್ನ ಊರ ಬಾಗಿಲಿಗೆ ಕಾವಲು ನಿಲ್ಲಿಸಿದಂತೆ ಕ್ಲಾಸಿನ ಹೊರಗೆ ಬಿಸಿಲಿನಲ್ಲಿ ನಿಲಿಸಿದ್ದರು.
ಅಂತ ಶುದ್ಧಾನುಶುದ್ಧ ತರಲೆಗಳ ಕೈಗೆ ಸಿಕ್ಕು ನಾನೂ ನಜ್ಜುಗುಜ್ಜಾಗಿದ್ದೆ. ಒಂದಾ ಎರಡಾ ಚೇಷ್ಟೆ. ಕೂರುವಾಗ ಕೆಳಕ್ಕೆ ಪೆನ್ ಇಡುವುದು, ಬಬ್ಬಲ್ಗಮ್ ಅಂಟಿಸುವುದು, ಇಂಕ್ ಪೆನ್ನಿಂದ ಇಂಕ್ ಹಾರಿಸುವುದು ಇತ್ಯಾದಿಗಳೆಲ್ಲ ಒಂಥರ ಎಂಟಟರ್ೈನ್ ಮೆಂಟ್ ಥರ ಆಗಿಬಿಟ್ಟಿತ್ತು. ಎಕ್ಸ್ಟ್ರಾ ಕರಿಕಲರ್ ಆ್ಯಕ್ಟಿವಿಟೀಸ್ ಅನ್ನಿ ಬೇಕಾದ್ರೆ. ಇಂಥ ತರಲೆಗಳು ಒಂದಿನ ಮಾಡಬಾರದ ಕೆಲಸ ಮಾಡಿಬಿಟ್ಟಿದ್ದರು. ನನ್ನ ಹೊಸ ಪ್ಯಾಂಟ್ ಹಾಕಿಕೊಂಡು ಹೋದನಲ್ಲ ಆ ದಿನ ಕೂತು ಏಳುವಷ್ಟರಲ್ಲಿ ಬಬ್ಬಲ್ಗಮ್ ಅಂಟಿಸಿಬಿಟ್ಟಿದ್ದರು. ಏಳಲು ಹೋದ್ರೆ ಡೆಸ್ಕ್ಗೂ ನನ್ನ ಹಿಂಬದಿಗೂ ನಡುವೆ ಬಬ್ಬಲ್ಗಮ್ನ ಅಂಟು ಅಂಟು. ನಿಜಕ್ಕೂ ನನ್ನ ಕಣ್ಣಲ್ಲಿ ನೀರಿತ್ತು. ಕಣ್ಣೆದುರೇ ನನ್ನ ಕನಸಿನ ಪ್ಯಾಂಟನ್ನು ಈ ಸ್ಥಿತಿಗೆ ತಂದವರನ್ನು ಸುಮ್ಮನೆ ಬಿಡಬಾರದು ಅಂತ ಹಲಬುತ್ತಿದ್ದೆ. ಆದ್ರೆ ಅವಾಗ ನಾನು ಒಣಗಿದ ಅಂಚಿಕಡ್ಡಿಯಂತಿದ್ದವ. ಹೇಗೆ ತೂಕ ಹಾಕಿದರೂ ಐವತ್ತು ಕೇಜಿ ತೂಗುತ್ತಿರಲಿಲ್ಲ. ನನ್ನನ್ನು ಯಾರು ಕೇರ್ ಮಾಡಿಯಾರು? ಮನೆಗೋಗಿ ಅವ್ವನ ಹತ್ತಿರ ಚೆನ್ನಾಗಿ ತಿಕ್ಕಿಸಿದೆ. ಆದ್ರೂ ಅದು ಹೋಗಲೇ ಇಲ್ಲ. ಕೊನೆಗೆ ಉಜ್ಜೀ ಉಜ್ಜೀ ಪ್ಯಾಂಟಿನ ಹಿಂಬದಿಯಲ್ಲಿ ಸಣ್ಣಗೆ ಇಲಿ ಕೊರೆದಂತಹ ತೂತು ಕಾಣಿಸತೊಡಗಿತು. ತೂತು ಕಂಡ ಮೇಲೆ ಹಾಕಿಕೊಳ್ಳುವುದು ಎಂತು. ಅದನ್ನು ಮೂಲೆಗೆಸೆದದ್ದಾಯಿತು.
ಇನ್ನೊಂದೇ ಒಂದು ಇನ್ಸಿಡೆಂಟ್ ಹೇಳಲೇ ಬೇಕು ನಿಮಗೆ. ನಮ್ಮಲ್ಲಿ ಒಬ್ಬರು ಪೀಟಿ ಮಾಸ್ತರು ಇದ್ದರು. ಅವರ ಹೆಸರೇನೋ ನೆನಪಾಗುತ್ತಿಲ್ಲ. ಆದ್ರೆ ನಮ್ಮ ಶಾಲೆಯಲ್ಲಿ ಅವರಿಗೆ ಗೊರಿಲ್ಲಾ ಅಂತ ಕರೀತಿದ್ರು. ದೈತ್ಯ ದೇಹಿ. ಯಾವಾಗಲೂ ಹಾಕುತ್ತಿದ್ದದ್ದು ಗ್ರೇ ಕಲರ್ ಸಫಾರಿ ಮಾತ್ರ. ಅದನ್ನ ಬಿಟ್ಟು ಅವರು ಬೇರೆ ಬಟ್ಟೆ ಹಾಕಿದ್ದು ನಾ ಕಾಣೆ. ಆಗಲೇ ರಿಟೈಡರ್್ಮೆಂಟ್ ವಯಸ್ಸು. ಅವರು ರೂಮಿನಲ್ಲಿ ಕೂತಿದ್ರೆ ಈ ಹುಡುಗರು ಕಿಟಕಿಯಲ್ಲಿ ಹೋಗಿ ಗೊರಿಲ್ಲಾ ಅಂತ ಕಿರುಚಿಬಿಡ್ತಿದ್ರು. ಪಾಪ ಆವಯ್ಯಾ ತಬ್ಬಿಬ್ಬು. ಇಂಥ ಗೊರಿಲ್ಲಾ ಒಂದಿನ ಒಂದು ಎಡವಟ್ಟು ಮಾಡಿಕೊಂಡಿತ್ತು.
ಅವತ್ತು ಎಲ್ಲಾ ಪ್ರೇಯರ್ಗೆ ಅಂತ ನಿಂತಿದ್ದರು. ಸಾಮಾನ್ಯವಾಗಿ ಮಾಸ್ತರರೆಲ್ಲ ನಮಗಿಂತ ಎತ್ತರದ ಒಂದು ಸ್ಟೇಜ್ಮೇಲೆ ನಿಂತುಕೊಳ್ಳುತ್ತಿದ್ರು,. ಅವತ್ತೂ ಹಾಗೆ ನಿಂತಿದ್ರು. ಪೀಟಿ ಮಾಸ್ತರಲ್ವ ಗೊರಿಲ್ಲಾ ಯಾವಾಗಲೂ ಮುಂದೇನೆ ನಿಂತಿರೋದು. ಇನ್ನೇನು ರಾಷ್ಟ್ರಗೀತ್ ಶುರುಕರ್ ಅನ್ನಬೇಕು. ಯಾರೋ ಒಬ್ಬ ನಮ್ಮ ನಡುವಿನಿಂದಲೇ ಸಾರ್ ನೀವು ಪ್ಯಾಂಟ್ಗೆ ಜಿಪ್ಪೆ ಹಾಕಿಲ್ಲ ಅಂತ ಕಿರುಚಿಬಿಟ್ಟ.
ಪಾಪ ಗೊರಿಲ್ಲಾ ಮುಖ ಇಷ್ಟು ಚಿಕ್ಕದಾಯಿತು. ತಕ್ಷಣ ಸರಿ ಮಾಡಿಕೊಂಡರು. ನಮಗೆಲ್ಲ ನಗುವೋ ನಗು. ಉಳಿದ ಮೇಸ್ಟ್ರುಗಳಿಗೂ ಏನುಮಾಡಬೇಕೋ ಅಂತ ತೋಚದೆ ತಕ್ಷಣ ನಮ್ಮನ್ನೆಲ್ಲ ಗದರಿಸಿ ಪ್ರೇಯರ್ ಮಾಡಿಸಿದ್ರು.
ಇಂಥವು ಎಷ್ಟೋ!
ಮತ್ತೊಮ್ಮೆ ಬರೆದೇನು.