Saturday, April 19, 2008

ಪ್ರೀತಿಗೊಂದು ಕಾರಣ ಕೊಡೋ?


ಅವರಿಬ್ಬರೂ ಪ್ರಾಣ ಹೋಗುವಷ್ಟು ಪ್ರೀತಿಸುತ್ತಿದ್ದರು. ನಿನಗೆ ನಾನು ನನಗೆ ನೀನು ಅನ್ನುತ್ತಾರಲ್ಲಾ ಹಾಗೆ. ಆದರೆ ಅದ್ಯಾಕೋ ಗೊತ್ತಿಲ್ಲ, ಒಂದಿನ ಹುಡುಗಿ ಮೀರಾಳಿಗೆ ತನ್ನ ಹುಡುಗ ಪ್ರೀತಂ ನನ್ನನ್ನು ಪ್ರೀತಿಸುತ್ತಿರುವುದಕ್ಕೆ ಕಾರಣ ತಿಳಿದುಕೊಳ್ಳಬೇಕೆನ್ನುವ ಹಪಾಹಪಿ ಕಾಡುತ್ತದೆ. ಎದುರಿಗೆ ಕುಳಿತವನ ಕೈ ಹಿಡಿದು ಕೇಳುತ್ತಾಳೆ.

ಹೇಳು ಪ್ರೀತಂ why do you like me? why do you love me?

ಪ್ರೀತಮ್ ಏಕ್ದಮ್ ಕಂಗಾಲು.

ಇಷ್ಟು ದಿನ ಇಲ್ಲದ ಈ ಅನುಮಾನ ಇವಳಿಗ್ಯಾಕಪ್ಪ ಈಗ ಬಂತು ಅಂದುಕೊಳ್ಳುತ್ತಾನೆ.

"ನಿನ್ನನ್ನು ಪ್ರೀತಿಸುತ್ತಿರುವುದಕ್ಕೆ, ಇಷ್ಟ ಆಗಿರೋದಕ್ಕೆ ಕಾರಣಗಳಿಲ್ಲ ಕಣೆ, But I really like u. ನಿನ್ನನ್ನು ನಾನು ಸತ್ತು ಹೋಗುವಷ್ಟು ಪ್ರೀತಿಸುತ್ತೇನೆ ಅಂತ ಹೇಗೆ ಹೇಳಲಿ...?

" " ನನ್ನನ್ನು ಪ್ರೀತಿಸುತ್ತಿರುವುದಕ್ಕೆ ನಿನಗೊಂದು ಕಾರಣ ಹೇಳಲು ಗೊತ್ತಿಲ್ಲ. ಅದು ಹ್ಯಾಗೆ ಹೇಳ್ತೀಯ... ನೀನಂದ್ರೆ ನನಗೆ ಇಷ್ಟ ಅಂತ? ಶುದ್ಧ ಬೊಗಳೆ ನಿಂದು ಹೋಗೋ " ಕಣ್ಣೀರಿಡುತ್ತಾಳೆ ಮೀರಾ." ನೀನು ನನಗೆ ಕಾರಣ ಹೇಳಲೇ ಬೇಕು ಕಣೋ. ಯಾಕೇಂದ್ರೆ ನನ್ನ ಗೆಳತಿಯರಿಗೆಲ್ಲ ಅವರ ಬಾಯ್ ಫ್ರೆಂಡ್ಸ್ ಕಾರಣ ಹೇಳಿದ್ದಾರೆ. ನೀನೂ ಹೇಳು? ಪ್ರೀತ್ಸೋದಕ್ಕೆ ಒಂದು ಕಾರಣ ಹೇಳೋ ತಾಕತ್ತು ನಿನಗಿಲ್ವಾ? " ಮೀರಾ ಒಂದೇ ಸಮನೆ ಕನವರಿಸುತ್ತಾಳೆ.

ಪ್ರೀತಮ್ ತಡವರಿಸುತ್ತಾನೆ.

ಏನು ಹೇಳಲಿ ಇವಳಿಗೆ? ಹೇಳಿದ್ದು ಇಷ್ಟ ಆಗದೇ ನನ್ನನ್ನು ತಿರಸ್ಕರಿಸಿಬಿಟ್ಟರೆ? ಓ ದೇವರೆ, ಇವಳಗೆ ಇಂಥ ಕಾರಣ ಹುಡುಕುವ ಹುಚ್ಚು ಯಾಕಾದರೂ ಬಂತಪ್ಪಾ?ಮೀರಾಳ ಕೈಹಿಡಿದು ಕೇಳುತ್ತಾನೆ.

"ಹೇಳಲೇಬೇಕಾ?

""ಹ್ಞೂಂ" ಅನ್ನುತ್ತಾಳೆ ಮೀರಾ.

ಪ್ರೀತಂ ಒಲ್ಲದ ಮನಸ್ಸಿನಿಂದ ಅವಳನ್ನೇ ಒಮ್ಮೆ ದಿಟ್ಟಿಸಿನೋಡಿ ಹೇಳುತ್ತಾನೆ.

" ನಿನ್ನನ್ನ ನಾನು ಯಾಕೆ ಪ್ರೀತಿಸ್ತೀನಿ ಅಂದ್ರೆ,U are beautiful!ನೀನ್ನ ವಾಯ್ಸ್ ತುಂಬಾ ಸ್ವೀಟಾಗಿದೆ.ನೀನು ತುಂಬಾ ಕೇರಿಂಗ್ ನೇಚರ್ ಇರೋ ಹುಡುಗಿ.ನಿನ್ನ ನಗು ಇದೆಯಲ್ಲ ಅದು ಈಗ ತಾನೆ ಅರಳಿದ ಹೂವಿನಷ್ಟು ಫ್ರೆಷ್ ಆಗಿದೆ.ಮಾತು, ಮಾತಾಡ್ತೀಯಲ್ಲ ಅದೊಂಥರ ಜೇನಿನಲ್ಲಿ ಅದ್ದಿ ಅದ್ದಿ ತೆಗೆದಂಗಿರುತ್ತೆ.ಇಷ್ಟು ಹೇಳಿದ್ದೇ ತಡ ಮೀರಾ ನೀಲಾಕಾಶದಲ್ಲಿ ನೆಗೆದು ಹಾರಿದಳು. ಅವಳ ಮನದಲ್ಲಿ ಒಟ್ಟಿಗೆ ನೂರು ಹೂ ಅರಳಿದ ಸಂಭ್ರಮ.

***

ಪ್ರೀತಿ ಹೀಗೇ ಮುಂದುವರೀತು. ಪ್ರೀತಂ ತನ್ನನ್ನು ಯಾಕೆ ಅಷ್ಟೊಂದು ಪ್ರೀತಿಸುತ್ತಿದ್ದಾನೆ ಅನ್ನುವುದಕ್ಕೆ ಮೀರಾಳಿಗೆ ರೀಸನ್ ಸಿಕ್ಕಿತ್ತಲ್ಲ, ಅದನ್ನೇ ತನ್ನೆಲ್ಲ ಗೆಳತಿಯರ ಹತ್ತಿರ ಹೇಳಿಕೊಂಡು ಓಡಾಡಿದಳು. ಪ್ರೀತಂ ಅಂದ್ರೆ ಮೀರಾಳಿಗೆ ಕೇವಲ ಪ್ರೀತಿ ಮಾತ್ರವಲ್ಲ... ಅವನೇ ಬದುಕು... ಅವನೇ ಉಸಿರು... ಅವನೇ ಅವಳ ನಾಡಿ ಮಿಡಿತ... ಅವನೇ ಅವಳ ಎಲ್ಲಾ!ಆದರೆ ವಿಧಿ ಬಿಡಬೇಕಲ್ಲ.ಎಂದಿನಂತೆ ಮೀರಾ ಅವತ್ತು ತನ್ನ ಸ್ಕೂಟಿಯಲ್ಲಿ ಕಾಲೇಜಿಗೆ ಹೋಗಬೇಕಾದ್ರೆ, ಎದುರಿನಿಂದ ಬಂದ ಕಾರಿನವ ಹೊಡೆದುಕೊಂಡು ಹೋಗಿದ್ದ. ಮೀರಾಳದು ಅನ್ಕಾನ್ಷಿಯಸ್ ಲೆವೆಲ್. ಸುದ್ದಿ ಕೇಳಿ ಓಡೋಡಿ ಬಂದ ಪ್ರೀತಮ್ಗೆ ದಿಕ್ಕೇ ತೋಚದಂತಾಗುತ್ತದೆ. ಎಷ್ಟು ಚೆಂದಕ್ಕಿದ್ದ ಹುಡುಗಿಯನ್ನ ಹೀಗೆ ಮಾತೇ ಇಲ್ಲದಂಗೆ ಮಾಡಿಬಿಟ್ಟಲ್ಲ ದೇವರೆ. ನೀನು ಇಷ್ಟೊಂದು ಕ್ರೂರಿ ಅಂತ ನನಗೆ ಇದುವರೆಗೂ ಗೊತ್ತಿರಲಿಲ್ಲ... ಐ ಹೇಟ್ ಯು... ಐ ಹೇಟ್ ಯು ಹಲಬುತ್ತಾನೆ.ಮೀರಾ ತನ್ನ ಪ್ರೀತಿಗೆ ಕಾರಣ ಕೇಳಿದ್ದು ನೆನಪಾಗಿ ಪ್ರೀತಂ ಮನಸ್ಸು ಅಯ್ಯೋ ಅಂತ ರೋದಿಸುತ್ತದೆ.ತಕ್ಷಣ ಅಲ್ಲಿದ್ದ ಒಂದು ಪೇಪರ್ನಲ್ಲಿ ಏನನ್ನೋ ಬರೆದು ಅವಳ ಪಕ್ಕಕ್ಕಿಟ್ಟು ಹೋಗುತ್ತ್ತಾನೆ.ಮೀರಾಳಿಗೆ ಎಚ್ಚರ ಬಂದಾದ ಮೇಲೆ ಪಕ್ಕಕ್ಕೆ ತಿರುಗಿದರೆ ಅಲ್ಲೊಂದು ಪುಟ್ಟ ಲೆಟರು.ಕುತೂಹಲದಿಂದ ಹಿಡಿದೆತ್ತಿ ಓದುತ್ತಾಳೆ..... ಡಾಲರ್ಿಂಗ್ ಅವತ್ತು ಪ್ರೀತಿಗೆ ಕಾರಣ ಕೇಳಿದೆ ಅಲ್ವಾ!ಈಗ ನೋಡು ನಿನ್ನನ್ನು ಪ್ರೀತಿಸಲಿಕ್ಕೆ ಕಾರಣಗಳೇ ಇಲ್ಲ.ಯಾಕೆಂದರೆ,ನೀನಗೀಗ ಜೇನಿನಲ್ಲಿ ಅದ್ದಿ ತೆಗೆದಂಗೆ ಮಾತನಾಡಲು ಆಗುತ್ತಿಲ್ಲ. ಮುಖ ಒಣಗಿ ಹೋದ ಹೂವಿನಂತಿದೆ.ನಿನಗೆ ನನ್ನ ಬಗ್ಗೆ ಒಂದು ಪ್ರೀತಿ ಇತ್ತಲ್ಲ, ಕೇರ್ ಇತ್ತಲ್ಲ ಅದು ಈಗ ನಿನ್ನಿಂದ ಕೊಡಲು ಸಾಧ್ಯವೇ?ನಿನ್ನ ಆ ನಗು, ಎಲ್ಲಿ ಹೋಯ್ತೆ ಅದು?ನಿಜ್ಜ ಹೇಳ್ಲ, ಪ್ರೀತಿಗೆ ಯಾವತ್ತೂ ಕಾರಣ ಬೇಕಿಲ್ಲ!ಯಾಕೆಂದ್ರೆ ನಾನು ಈಗಲೂ ನಿನ್ನನ್ನು ಅಷ್ಟು ಪ್ರೀತಿಸುತ್ತೇನೆ.ಸ್ಟಿಲ್ ಐ ಲವ್ ಯುಮೊದಲಿಗೆ ಯಾರೋ ಎದೆಯಾಳದಲ್ಲಿ ಕುಳಿತು ಒಮ್ಮೆಲೇ ನೂರು ಡೈನಮೇಟ್ ಸಿಡಿಸಿದ ಹಾಗಾಯಿತು. ಮರುಕ್ಷಣ ನಿರಾಳ.

***

ಅವತ್ತು ಸಂಜೆ ಪ್ರೀತಮ್ ಬಂದ. ಮೀರಾ ಇನ್ನೂ ನಿದ್ರೆಯಲ್ಲಿದ್ದಳು. ಪಕ್ಕದಲ್ಲಿ ಕುಳಿತವನಗೆ ಕಾಣಿಸಿದ್ದು ಅವಳ ಕೈಯಲ್ಲಿ ತಾನು ಬರೆದಿಟ್ಟು ಹೋಗಿದ್ದ ಪತ್ರ. ಎದೆಗವಚಿಕೊಂಡು ಮಲಗಿದ್ದಳು.ಯಾಕೋ ಅವಳ ಪಕ್ಕದಲ್ಲಿ ಕುಳಿತ ಕ್ಷಣ ಕಣ್ಣು ಒದ್ದೆಯಾಗತೊಡಗಿತು. ಅವಳ ತಲೆ ಸವರಿದ. ಇವನ ಕಣ್ಣ ಕೊನೆಯಿಂದ ಇಳಿದ ಹನಿಯೊಂದು ಅವಳ ಕೆನ್ನೆ ಮೇಲೆ ಜಾರಿ ಬಿದ್ದು ಮೆಲ್ಲಗೆ ಕಣ್ಣು ತೆರೆದಳು.

"ಪ್ರಿತಂ......."

ಮೀರಾಳ ಕೈ ಪ್ರೀತಂನ ಕೈ ತಡಕಿತು.

ಪ್ರೀತಮ್ ಮೆಲ್ಲಗೆ ಅವಳ ಕೈ ಅದುಮಿದ.

ಎಲ್ಲಾ ಅರ್ಥವಾದವಳಂತೆ ಅವಳ ಮುಖದಲ್ಲೊಂದು ತೆಳು ಮಂದಹಾಸ.

***

ಈಗ ಹೇಳಿ ಪ್ರೀತಿಸಲು ಕಾರಣ ಬೇಕಾ?

Friday, April 18, 2008

ಒಂದು ಮಜಬೂತಾದ ಕತೆ ಹಿಡಿದುಕೊಂಡು ಕುಳಿತ ...

ಯಾಕೋ ಗೊತ್ತಿಲ್ಲ ಒಂದು ಫಿಲ್ಮ್ ತೆಗೀಬೇಕು ಅನ್ನೋ ಆಸೆ ಇತ್ತೀಚೆಗೆ ಬಲವಾಗಿ ಕಾಡತೊಡಗಿದೆ. ಅದ್ಭುತವಾದೊಂದು ಕಥೆ ರೆಡಿ ಮಾಡಿಟ್ಟುಕೊಂಡಿದ್ದೇನೆ. ಅದು ಎಂಥ ಕತೆ ಎಂದ್ರೆ ಅದನ್ನು ಗೆಳೆಯನಿಗೆ ಮೊನ್ನೆ ಕೂರಿಸಿಕೊಂಡು ಹೇಳುತ್ತಾ ಹೋದೆ. ಅದನ್ನು ನಾನು ಹೇಳಿ ಮುಗಿಸೋ ಅಷ್ಟರಲ್ಲಿ ಅವನು ತುಂಬಾ ಭಾವುಕನಾಗಿದ್ದ. ಆ ಕಥೆಯ ಹಂದರವೇ ಹಾಗಿದೆ. ಸಣ್ಣ ಸಣ್ಣ ಮನುಷ್ಯ ಸಂಬಂಧಗಳನ್ನು ಕಟ್ಟಿಕೊಡುವ ಪ್ರಯತ್ನ ಅದು.
ಕಮಷರ್ಿಯಲ್ ಆಗಿ ಎಲ್ಲ ವರ್ಗದವರಿಗೂ ಇಷ್ಟವಾಗುವ ಮಜಬೂತಾದ ಕತೆ ಅದು.ನನಗೆ ಟೆಕ್ನಿಕಲ್ ಸೈಡ್ ಗೊತ್ತಿಲ್ಲದಿರಬಹುದು. ಆದ್ರೆ ಒಂದು ಫಿಲ್ಮ್ ಹೇಗಿರಬೇಕು ಅನ್ನೋದನ್ನ ಅದ್ಭುತವಾಗಿ ವéಿಷುವಲೈಸ್ ಮಾಡೋ ಅಷ್ಟು ಕಲ್ಪನೆ ನನಗಿದೆ. ಒಮ್ಮೊಮ್ಮೆ ಈ ಎಲ್ಲ ಕೆಲಸ ಬಿಟ್ಟು ಫಿಲ್ಮ್ ದಾರಿ ಹಿಡಿದುಬಿಡೋಣವೇ ಅನ್ನಿಸುತ್ತೆ. ಹಾಗಂದುಕೊಂಡ ಮರುಕ್ಷಣವೇ ಹಾಗೆಲ್ಲ ಮಾಡಿಗೀಡಿಯೇ ಮಗನೇ ಅಂತ ಮನಸ್ಸು ಕೈ ಹಿಡಿದು ಜಗ್ಗುತ್ತೆ.ಹಾಗೆ ನೋಡಿದರೆ ಈ ಫಿಲ್ಮ್ ಹುಚ್ಚು ನನಗೆ ಹೊಸದೇನಲ್ಲ. ನನ್ನ ಕಾಲೇಜಿನ ದಿನಗಳಲ್ಲಿಯೇ ನನಗೆ ಅಂಥದ್ದೊಂದು ಹುಚ್ಚು ತೀವ್ರವಾಗಿತ್ತು. ಗೆಳೆಯರೆಲ್ಲ ಸೇರಿ ಸಾರ್ ಇವನು ಫಿಲ್ಮ್ ಡೈರೆಕ್ಡ್ ಮಾಡಬೇಕಂತೆ...ಇನ್ಸ್ಟಿಟ್ಯೂಟ್ಗೆ ಸೇರಿಸಿಕೊಳ್ಳಿ ಸಾರ್ ಅಂತ ನಂಜರಾಜೇ ಅರಸ್ಗೆ ದುಂಬಾಲು ಬೀಳುತ್ತಿದ್ದರು. ಅವರು ಆಗತಾನೆ ಮೈಸೂರು ಯೂನಿವಸರ್ಿಟಿಯಲ್ಲಿ ಆರಂಭವಾಗಿದ್ದ ಫಿಲ್ಮ್ ಇನ್ಸ್ಟಿಟ್ಯೂಟ್ನ ಛೀಫ್ ಆಗಿದ್ದರು. ಅದಕ್ಕೆ ಅವರು ಎಷ್ಟು ಎಕರೆ ಜಮೀನು ಇಟ್ಟಿದ್ದೀಯಯ್ಯ ...ಮಾರಿಬಿಟ್ಟು ಬಾ ನಿನ್ನನ್ನೇ ಹೀರೋ ಮಾಡ್ತೀನಿ... ಅಂತ ರೇಗಿಸ್ತಿದ್ದರು. ಒಮ್ಮೆ ಅವರು ಒಂದು ಫಿಲ್ಮ್ ಶುರು ಮಾಡಿದ್ದು ನೆನಪಿದೆ. ಹೆಸರು ಮರೆತುಹೋಗಿದೆ. ಕುಕ್ಕರಹಳ್ಳಿ ಕೆರೆಯ ಮೇಲೆ ಕುಳಿತಿದ್ದ ನನ್ನನ್ನು ಅವರ ಮನೆಗೆ ಕರೆದುಕೊಂಡು ಹೋಗಿ ಆವರ ಫಿಲ್ಮ್ನ ಎಲ್ಲಾ ಹಾಡುಗಳನ್ನು ಕೇಳಿಸಿದ್ದರು. ಹಂಸಲೇಖ ಕಾಸ್ಟ್ಲೀ ಕಣಯ್ಯಾ ಅದಕ್ಕೆ ಬೇರೊಬ್ಬನ ಹತ್ತಿರ ಮಾಡಿಸಿದ್ದೀನಿ ಅಂದಿದ್ದರು. ನಿಜಕ್ಕೂ ಆ ಹಾಡುಗಳು ತುಂಬಾ ಚೆನ್ನಾಗಿದ್ದವು. ಅದಾದ ಮೇಲೆ ನಾನೂ ಬೆಂಗಳೂರಿನ ಸೆರಗು ಹಿಡಿದು ಬಂದುಬಿಟ್ಟೆ. ಅವರ ಆ ಫಿಲ್ಮ್ ಏನಾಯಿತೋ ಗೊತ್ತೇ ಆಗಲಿಲ್ಲ.ಬೆಂಗಳೂರಿಗೆ ಬಂದು ಪತ್ರಿಕೋದ್ಯಮದ ದಾರಿ ಹಿಡಿದ ಮೇಲೆ ಟೈಮ್ ಅನ್ನೋದು ಹುರಕ್ಕೊಂಡು ಮುಕ್ಕತೊಡಗಿತು. ಅದರ ಗುಂಗಿನಲ್ಲೇ ಮುಳುಗಿಹೋದೆ. ಈಗ ಮತ್ತೆ ಫಿಲ್ಮ್ರಂಗಕ್ಕಿಳಿಯುವ ಆಸೆ ಗರಿಕೆದರಿ ಕೂತಿದೆ.
ಆ ಕ್ಷಣ ಎಂದೋ ಯಾವತ್ತೋ . ಗೊತ್ತಿಲ್ಲ.

Thursday, April 17, 2008

...ಇದು ಕಸಮ್

ತುಂಬಾ ದಿವಸದಿಂದ ನೀವು ಬ್ಲಾಗ್ನಲ್ಲಿ ಏನೂ ಬರೆದಿಲ್ಲ.ಈ ಹುಚ್ಚಾಟಕ್ಕೇಕೆ ಬ್ಲಾಗ್ ಶುರು ಮಾಡಬೇಕಿತ್ತು ಅಂತ ಗೆಳೆಯರು ಕೊರಳ ಪಟ್ಟಿ ಹಿಡಿದುಕೊಂಡು ಕೇಳುತ್ತಿದ್ದಾರೆ. ಏನು ಉತ್ತರಿಸಲಿ?
ಅಷ್ಟೊಂದು ಕೆಲಸ ಹಚ್ಚಿಕೊಂಡುಬಿಟ್ಟಿದ್ದೇನೆ. ದಿನಕ್ಕೆ ಹದಿಮೂರು ಹದಿನಾಲ್ಕೋ ಗಂಟೆ ದುಡಿಯುವುದು ನನಗೆ ಮೊದಲಿನಿಂದಲೂ ಅಭ್ಯಾಸವಾಗಿ ಹೋಗಿದೆ. ಕೆಲಸಕ್ಕೆ ಅಂತ ನಾನು ಯಾವತ್ತೂ ಹಿಂಜರಿದವನಲ್ಲ... ಹೇಳಬೇಕೆಂದ್ರೆ ಕೆಲಸ ಇಲ್ಲದೆ ಸುಮ್ನೆ ಕೂರುವುದು ಅಂದ್ರೆ ನನಗೆ ಪರಮ ಬೋರಿನ ಕೆಲಸ. ಅದಕ್ಕಿಂತ ಬೇಜಾರಿನ ಸಂಗತಿ ಇನ್ನೊಂದಿಲ್ಲ. ಹಾಗಾಗಿ ಖಾಲಿ ಅನಸಿದಾಗಲೆಲ್ಲ ನಾನೇ ಏನಾದ್ರೂ ಕೆಲಸ ಸೃಷ್ಟಿಸಿಕೊಂಡುಬಿಡುತ್ತೇನೆ. ಅದರಿಂದ ಸಿಗುವ ಖುಷಿ ಇದೆಯಲ್ಲ ಅದು ಎಲ್ಲಕ್ಕಿಂತ ಮಿಗಿಲು.ಈ ನಡುವೆ ಒಂದು ಹೊಸ ವಿಷಯ ಅಂದ್ರೆ ಕಾರು ತಗೊಂಡಿದ್ದು. ತುಂಬಾ ದಿನದಿಂದ ಆ ಬಯಕೆ ಇತ್ತು. ತಗೊಳ್ಳುವುದಾದ್ರೆ ಅದು ಕಾರೇ ಅಂತ ನಾನು ಯಾವಾಗಲೋ ಡಿಸೈಡ್ ಮಾಡಿಬಿಟ್ಟಿದ್ದೆ. ಈಗ ಆ ಕನಸು ಕೈ ಗೂಡಿದೆ. ಒಂಥರ ಹ್ಯಾಪಿ. ಆದ್ರೆ ಬಡ್ಡೀ ಮಗಂದು ಡ್ರೈವಿಂಗು ಇದೆಯಲ್ಲ ಅದು ಮಾತ್ರ ಬೆಂಗಳೂರಿನಲ್ಲಿ ನರಕವೇ! ಸುಮ್ಮನೆ ಆರಾಮಾಗಿ ಫ್ರೆಂಡ್ ಕಾರಿನಲ್ಲಿ ಕುಳಿತು ಹರಟೆ ಕೊಚ್ಚುತ್ತಾ ಹೋಗುತ್ತಿದ್ದವನು ಗಾಡಿ ತಗೊಂಡು ರಸ್ತೆಗಿಳಿದ ಮೇಲೆ ಗೊತ್ತಾಗಿದ್ದು, ಅದರ ಕಷ್ಟ ಏನೂ ಅಂತ. ಮೊನ್ನೆ ರಿಂಗ್ ರೋಡಿನ ದಿಬ್ಬವೊಂದರಲ್ಲಿ ಗಾಡಿ ಇದ್ದಕ್ಕಿದ್ದಂತೆ ಆಫ್ ಆಗಿ ಹೋಯಿತು. ಎಂಥ ಫಜೀತಿ ಅಂದ್ರೆ ಹಿಂದೆ ಇದ್ದವರೆಲ್ಲ ಹಾರ್ನ್ ಊದಿದ್ದೇ ಊದಿದ್ದು. ಟ್ರಾಫಿಕ್ ಪೊಲೀಸ್ ಬಂದು ಕಲಿಯೋದಿದ್ದರೆ ಮೈದಾನಕ್ಕೋಗಿ ಕಲೀರ್ರಿ... ರಸ್ತೆಗ್ಯಾಕ್ ಬಂದು ಪ್ರಾಣ ಹಿಂಡ್ತೀರಿ ಅಂತ ಉಗಿದು ಹೋದ. ಅವತ್ತು ನಿಜಕ್ಕೂ ನಾನು ನರ್ವಸ್ ಆಗಿಬಿಟ್ಟಿದ್ದೆ.ಆದ್ರೆ ಈ ಫ್ರೆಂಡ್ಸ್ ಇದಾರಲ್ಲ ಇವರ ಕಿತಾಪತಿ ಒಂದೊಂದಲ್ಲ. ಕಾರ್ ತಗೋ ಅಂತಿದ್ದವರೇ ಈಗ ಬನ್ರೋ ಕೂರ್ರೀ ಅಂದ್ರೆ ನಾವು ಬರೊಲ್ಲಪ್ಪ ಅಂತ ಕೈ ಎತ್ತುತ್ತಿದ್ದಾರೆ. ಇರೋದೊಂದೇ ಜೀವ ಅದನ್ನೂ ನಿನ್ನ ಕೈಲಿ ಕೊಟ್ಟು ಕಳಕೊಳ್ಳೋಕೆ ನಮಗೇನು ಹುಚ್ಚಾ ಅನ್ನೋ ಥರಾನೆ ಎಲ್ಲರೂ ಮಾತಾಡ್ತಿದಾರೆ. ಇದೆಲ್ಲ ಎಷ್ಟು ದಿನ ಅಂತ ನಾನೂ ಸುಮ್ಮನಿದ್ದುಬಿಟ್ಟಿದ್ದೇನೆ.ಈ ನಡುವೆ ನನ್ನ ಮೊದಲ ಕಥಾ ಸಂಕಲನ ಸಿದ್ಧಗೊಳ್ಳುತ್ತಿದೆ. ತುಂಬಾ ಪಾಪ್ಯುಲರ್ ಆಗಿದ್ದ ಅಂಕಣ ಇನ್ಬಾಕ್ಸ್. ಅದನ್ನು ಕೂಡ ಪುಟ್ಟ ಪುಸ್ತಕ ಮಾಡಬೇಕೆಂದುಕೊಂಡಿದ್ದೇನೆ. ಏನೇ ಅದರೂ ಈ ವರ್ಷ ನನ್ನದೂ ಅಂತ ಒಂದಿಷ್ಟು ಪುಸ್ತಕ ಬರಲೇ ಬೇಕು ಅಂದುಕೊಂಡಿದ್ದೇನೆ.ಅದರ ಬಿಡುಗಡೆಗೆ ನೀವಿಲ್ಲದೇ ಹೋದ್ರೆ ಆದೀತೆ. ಖಂಡಿತಾ ಕರೀತೀನಿ ಬಿಡಿ. ಹಾಗೆ ನದಿಪ್ರೀತಿ ಇನ್ನು ಸಣ್ಣದಾಗಿಯಾದರು ಹರಿಯುತ್ತದೆ
... ಇದು ಕಸಮ್.

Tuesday, March 4, 2008

ಕವರ್ ಪೇಜಸ್ಸೂ...........................................




ಹಾಯ್ ಫ್ರೆಂಡ್ಸ್

ಇವು ಇತ್ತೀಚೆಗೆ ನಾನು ಮಾಡಿದ ಕವರ್ ಪೇಜೆಸ್ಸೂ. ಖಾಸ್ಬಾತ್ ಮತ್ತು ಚಲಂ ರವಿ ಬೆಳಗೆರೆಯವರಿಗೆ ಮಾಡಿಕೊಟ್ಟದ್ದು.

ಸಂಕುಲ ಮೂವರು ಪರಸರ ತಜ್ಞರ ಅಭಿನಂದನಾ ಗ್ರಂಥ.

ನನಗೇನೋ ಮೂರು ಇಷ್ಟ. ನಿಮಗೇ?

Sunday, February 24, 2008

ಲಾಲ್ ಬಾಗ್ ನಲ್ಲಿ ಸೆರೆ ಸಿಕ್ಕ surya






ತುಂಬಾ ಸಲ ಎಲ್ಲಿಗಾದ್ರೂ ಹೋಗಬೇಕೆಂದಾಗ ನಂಗೊಂದು ಪ್ರೀಪ್ಲಾನ್ ಅಂತಾನೆ ಇರೊಲ್ಲ. ಹೇಳ್ದೆ ಕೇಳ್ದೆ ಅವಾಗಿಂದವಾಗಲೇ ಹೊರಟುಬಿಡ್ತೀನಿ. ಮೊನ್ನೆ ಭಾನುವಾರ ಕೂಡ ಹಾಗೆ ಆಯ್ತು. ಪತ್ರಕರ್ತ ಗೆಳೆಯ ಗಾಣಧಾಳು ಶ್ರೀಕಂಠ ಬೆಳಿಗ್ಗೆ ನಾಲ್ಕೂವರೆ ಗಂಟೆಗೆ ಫೋನ್ ಮಾಡಿದ್ರು. ನಾನು ಏನಯ್ಯ ಇದು ಬೆಳಿಗ್ಗೆ ಬೆಳಿಗ್ಗೇನೆ ಅಂದ್ರೆ, ಬೇಗ ರೆಡಿಯಾಗಿ ಲಾಲ್ಬಾಗ್ಗೆ ಹೋಗೋಣ ಅಂತ ಖ್ಯಾತೆ ತೆಗೆದ್ರು. ನನಗೋ ಬಾಚಿ ತಬ್ಬಿಕೊಂಡ ನಿದ್ರೆ. ರೀ ಗಾಣಧಾಳು ಅವರೇ ಇಷ್ಟು ಬೇಗ ನಾನು ಬರೋಲ್ಲ. ನೀವು ಹೋಗಿಬನ್ನಿ ಅಂದ ನನ್ನ ಉತ್ತರಕ್ಕೂ ಕಾಯದೆ ಇನ್ನರ್ಧ ಗಂಟೇಲಿ ಬರ್ತೀನಿ ರೆಡಿಯಾಗಿರಿ. ನನಗೆ ನೋ ಸಬೂಬು ಅಂತ ಹೇಳಿ ಫೋನ್ ಕುಕ್ಕಿದ್ರು. ಹಾಗೆ ಕುಕ್ಕಿದ ಅರ್ಧ ಗಂಟೇಗೆ ನನ್ನ ಮನೇಲಿದ್ರು.ಬೀದಿಗಿಳಿದ್ರೆ ಬೆಂಗಳೂರಿನ ರಸ್ತೆಗಳ ತುಂಬಾ ಆಗಲೇ ಎರಡು, ಮೂರು, ನಾಲ್ಕು ಚಕ್ರಗಳು ಪೈಪೋಟಿಗಿಳಿದಿದ್ವು ಲಾಲ್ಬಾಗ್ನ ಹೊಸ್ತಿಲು ತುಳಿದಿಲ್ಲ ಆಗಲೇ ನಮಗೂ ಮೊದಲೇ ಪಕ್ಷಿಪ್ರಿಯ ಗೆಳೆಯ ನವೀನ್ ಮತ್ತು ಪತ್ರಕರ್ತ ಪ್ರಕಾಶ್ ಹೆಬ್ಬಾರ್ ಕೆಮೆರಾ, ಬೈನಾಕ್ಯುಲರ್ ಭುಜಕ್ಕೆ ತಗಲಿಸಿಕೊಂಡು ನಿಂತಿದ್ದಾರೆ.ವಾಟ್ ಅ ಸರ್ಪರೈಸ್ ಅಂತ ಅಂದುಕೊಂಡ್ವಿ.ಕೆಲವೊಮ್ಮೆ ಅನಿರೀಕ್ಷಿತವಾಗಿ ಹೀಗೆ ಗೆಳೆಯರು ಸಿಕ್ಕಾಗ ಎಂಥ ಖುಷಿ ಆಗುತ್ತೆ ಗೊತ್ತಾ!ಸುತ್ತಾಟ ಶುರುವಾಯಿತು. ರೀ ಗಾಣಧಾಳ ಇಲ್ಲಿ ವಾಕಿಂಗ್ ಮಾಡೋದಕ್ಕೆ ಬರ್ತಾರಲ್ಲ ಅವರಲ್ಲಿ ತುಂಬಾ ಜನ ಚೆನ್ನಾಗಿ ವಾಕಿಂಗ್ ಮಾಡ್ತಾರೆ ನಿಜ್ಜ. ಆಮೇಲೆ ಅಲ್ಲೇ ಪಕ್ಕದಲ್ಲಿರೋ ಎಂಟಿಆರ್ಗೋಗಿ ಚೆನ್ನಾಗಿ ತಿಂದು ಹೊಗ್ತಾರೆ ಕಣ್ರಿ. ಸಣ್ಣ ಆಗು ಅಂದ್ರೆ ಎಲ್ಲಿ ಆಗ್ತಾರೆ? ಅಂದೆ. ಅವರು ಹೌದೌದು ಅಂತ ತಲೆಯಾಡಿಸಿ ಅಲ್ಲೇನೋ ಕಾಣಿಸ್ತು ಅಂತ ಚಂಗನೆ ಜಿಗಿದು ಕೆರೆಯ ಪಕ್ಕದ ಬುಷ್ ಕಡೆ ಓಡಿದ್ರು.ಏನ್ರಿ ಅಂತ ನಾನೂ ಕುತೂಹಲದಿಂದ ಹೋದ್ರೆ, ಇಲ್ಲೊಂದು ಹಕ್ಕಿ ಹೋಯ್ತು ಕಣ್ರಿ ಅಂದ್ರು. ಕರ್ಮಕಾಂಡ... ನೀನ್ಯಾವತ್ತೂ ಹಕ್ಕೀನೆ ನೋಡಿಲ್ವಾ? ಅಂದುಕೊಂಡವನೆ ನಾನು ನನ್ನ ಸೋನಿ(ಕೆಮೆರಾ) ಇಬ್ಬರೂ ಅತ್ತ ಹೊರಟ್ವಿ.ಹಾಗೆ ಹೋಗ್ತಾ, ಕಣ್ಣಿಗೆ ಬಿದ್ದದ್ದನ್ನೆಲ್ಲ ಕ್ಲಿಕ್ಕಿಸುತ್ತಾ ಹೋದೆ. ಬೆಳಗಿನ ಬದುಕು ಎಂಥ ಫ್ರೆಷ್ ಆಗಿರುತ್ತಲ್ಲ ಅನಿಸ್ತು.ಜನ ವಿವಿಧ ಭಂಗಿಯಲ್ಲಿ ನಿಂತು ಕುಂತು ಓಡಿ ಕಸರತ್ತು ನಡೆಸ್ತಿದ್ರು. ಕೆಲವರು ಸುಮ್ಮನೆ ಗರಬಡಿದವರಂತೆ ಓಡ್ತಾ ಇದ್ರು. ಇನ್ನೂ ಕೆಲವರು ಇನ್ನಾತಕ್ಕೋ ಹುಡುಕ್ತಾ ಇದ್ರು. ಕಾಯ್ತಾ ಇದ್ರು. ಕೆಲವರಿಗೆ ಮನೇಲಿ ಎಂಥ ಕಾಟವೋ ಗೊತ್ತಿಲ್ಲ ಕಲ್ಲುಬೆಂಚಿನ ಮೇಲೆ ಕುಳಿತೆ ಗೊರಕೆ ಹೊಡೀತಿದ್ರು.ನಾನು ಮಾತ್ರ ಸೂರ್ಯ ಇನ್ನೂ ಯಾಕೆ ಹುಟ್ಟಿಲ್ಲ ಅಂತ ಚಡಪಡಿಸ್ತಾ ಇದ್ದೆ.ಅವನ ಮೊದಲ ಕಿರಣ ಭೂಮಿಗೆ ಬಿತ್ತೋ ಇಲ್ವೋ ಬಾಚಿ ಹಿಡಿದುಕೊಳ್ಳುವವನಂತೆ ಲಾಲ್ ಬಾಗ್ನ ದೊಡ್ಡ ಬಂಡೆಯ ಆ ಕಡೆ ಇರುವ ಈಚಲು ಮರದ ಕಡೆಗೆ ಓಡಿದೆ. ಗಾಣಧಾಳು ನೀವೇನ್ರಿ ಸೂರ್ಯನ್ನೇ ನೋಡಿಲ್ವಾ ಅಂತ ಗೊಣಗಿಕೊಂಡ್ರು.ಹುಟ್ಟಿದಾಗಿನಿಂದ ಸೂರ್ಯನ್ನ ನೋಡ್ತಾನೆ ಇದೀನಿ. ಆದ್ರೂ ನನಗೆ ಈ ಸೂರ್ಯ ಪ್ರತಿ ಸಲ ನೋಡಿದಾಗಲೂ ಹೊಸಬಾನೆ. ಹೊಸ ಥರಾನೆ.

ಈ ನಡುವೆ ಗೆಳೆಯ ನವೀನ್ ಮತ್ತು ಪ್ರಕಾಶ್ ಹೆಬ್ಬಾರ್ ಎಲ್ಲಿ ಕಳೆದು ಹೊದ್ರೋ ಗೊತ್ತಾಗಲೇ ಇಲ್ಲ.

ಅಲ್ಲಿ ಸಿಕ್ಕಿದ ಸೂರ್ಯನನ್ನ ಸೆರೆ ಹಿಡಿದು ತಂದು ನಿಮ್ಮ ಮುಂದೆ ಇಡುತ್ತಿದ್ದೇನೆ.

ಕಣ್ತುಂಬಿಕೊಳ್ಳಿ.

Friday, February 22, 2008

ಮೀರ್ವಾಲಾದ ಅಂಧಕಾರದಲ್ಲೊಂದು ಬೆಳಕಿನ ಕಿರಣ


Iam just the first drop of water in this village, but then the rains will come. And many drops of rains make a big river.
- Mukhtar Mai


ಮನುಷ್ಯ ಇಷ್ಟೊಂದು ಕ್ರೂರಿ ಆಗಿಬಿಟ್ನಾ?

ಹಾಗಂತ ತುಂಬಾ ಸಲ ಯೋಚಿಸಿದ್ದೇನೆ. ಇಲ್ಲ ಅನ್ನುವುದಕ್ಕೆ ಸಿಕ್ಕ ಪುರಾವೆಗಳಿಗಿಂತ ಹೌದು ಅನ್ನುವುದಕ್ಕೆ ಸಿಕ್ಕ ಪುರಾವೆಗಳೇ ಜಾಸ್ತಿ ಆನಿಸ್ತಿದೆ. ಅದರಲ್ಲೂ ಪಾಕಿಸ್ತಾನದಂತಹ ಒಂದು ಅರಾಜಕ ರಾಷ್ಟ್ರದಲ್ಲಿ ಜೀವಕ್ಕೆ ಬೆಲೆಯಾದರೂ ಎಲ್ಲಿದ್ದೀತು? ಅಲ್ಲಿ ಕೊಲೆಗೆ ಕಾರಣಗಳೇ ಬೇಕಿಲ್ಲ. ಪ್ರೀತಿ ಅನ್ನೋದು ಬಾಂಬಿನ ಒಳಸುಳಿಗಳಲ್ಲಿ, ಬಂದೂಕಿನ ಟ್ರಿಗ್ಗರ್ಗಳಲ್ಲಿ, ಕಟ್ಟಾ ಮುಲ್ಲಾಗಳ ಅಬ್ಬರದಲ್ಲಿ ಇನ್ನಿಲ್ಲದಂತೆ ಕಳೆದುಹೋಗಿದೆ. ಪಾಕಿಸ್ತಾನಕ್ಕೆ ಬುದ್ಧಿ ಬರುವುದಿಲ್ಲ!ಆದರೆ ಇಂತಹ ನಾಡಿನಲ್ಲಿರುವ ಹೆಣ್ಣುಮಕ್ಕಳ ಪಾಡಾದರೂ ಎಂಥದು?ಅದು ತಿಳೀಬೇಕಾದ್ರೆ ಮುಕ್ತಾರ್ ಮಾಯಿ ಅನ್ನೋ ಹೆಣ್ಣುಮಗಳ ಕಣ್ಣೀರಿನ ಕಥೆ ಕೇಳಲೇಬೇಕು.
ಆಕೆ ಮುಕ್ತಾರ್ ಮಾಯಿ

ಅದು ದಕ್ಷಿಣ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿನ ಒಂದು ಊರು. ಹೆಸರು ಮೀರ್ವಾಲಾ. ಅಲ್ಲಿನ ಕಡುಬಡತನದ ಕುಟುಂಬದವಳೇ ಈ ಮಾಯಿ. ಅವಳ ಮನೆಯಲ್ಲೇಕೆ ಇಡೀ ಊರಿನಲ್ಲೇ ಹಾಸಿ ಹೊದ್ದುಕೊಳ್ಳುವಷ್ಟು ಬಡತನವಿತ್ತು, ಹಸಿವಿತ್ತು, ಅರಾಜಕತೆಯಿತ್ತು, ಅನಕ್ಷರತೆಯೂ ಇತ್ತು. ಎಲ್ಲಕ್ಕಿಂತ ಹೆಚ್ಚಾಗಿದ್ದದ್ದೆಂದರೆ ದಿನಕ್ಕೆ ಐದು ಸಲ ನಮಾಜ್ ಮಾಡುವ ಅಲ್ಲಿನ ಕಟ್ಟಾ ಮುಸ್ಲಿಂ ಸಂಪ್ರದಾಯವಾದಿಗಳ ಅಮಾನುಷ ಕಟ್ಟುಪಾಡುಗಳು. ನಿಜ ಹೇಳಬೇಕೆಂದರೆ, ಅಲ್ಲಿನ ಯಾವ ಹೆಣ್ಣೂ ಬುಕರ್ಾ ಧರಿಸದೆ ಹೊರಗೆ ಬರುವಂತಿರಲಿಲ್ಲ. ಗಂಡಸರ ಜೊತೆ ತಿರುಗಾಡುವಂತಿರಲಿಲ್ಲ. ಇಂಥ ನೆಲದಲ್ಲಿ ಜನ್ಮ ತಾಳಿದ ಮಾಯಿಗೆ ಇನ್ನೂ ಹದಿನೆಂಟು ತುಂಬುವ ಮೊದಲೇ ಮದುವೆ ಮಾಡಲಾಯ್ತು. ಪ್ರೀತಿ ಇಲ್ಲದೆ ಮೇಲೆ ಗಂಡನೊಟ್ಟಿಗಾದರೂ ಸರಿ ಬಾಳ್ವೆ ಮಾಡುವುದು ಹೇಗೆ? ಮದುವೆಯಾಗಿ ಒಂದು ವರ್ಷದೊಳಗೇ ಅದಕ್ಕೇ ತಲಾಕ್ ಸಿಕ್ತು. ಮಾಯಿಗೂ ಗಂಡನ ಜೊತೆ ಬದುಕು ಮಾಡುವುದು ಕಷ್ಟ ಎನಿಸಿತ್ತು. ಹೊರಬಂದಳು. ಆದ್ರೆ ಪಾಕಿಸ್ತಾನದ ಹಳ್ಳಿಗಾಡುಗಳಲ್ಲಿ ಡಿವೋಸರ್್ ಪ್ರಕರಣಗಳು ಕಡಿಮೆ. ಯಾಕೆಂದ್ರೆ, ಹಾಗೆ ಡಿವೋಸರ್್ ತೆಗೆದುಕೊಂಡು ಬಂದ ಹೆಣ್ಣುಮಕ್ಕಳನ್ನು ಹಳ್ಳಿಗಳಲ್ಲಿ ತೀರಾ ನಿಕೃಷ್ಟವಾಗಿ ಕಾಣಲಾಗುತ್ತದೆ. ಆದ್ರೆ ಮಾಯಿ ಅವಕ್ಕೆಲ್ಲ ಹೆದರಲಿಲ್ಲ. ಒಂದಿನ ಬಂದು ತನ್ನ ಮೀರ್ವಾಲಾದ ಮಣ್ಣಿನ ಜೋಪಡಿಯಲ್ಲಿ ಕುಳಿತುಬಿಟ್ಟಳು.ಹಾಗೆ ಕುಳಿತವಳ ಮನಸ್ಸಿಗೆ ಬಂದದ್ದು ಹೇಗಾದ್ರೂ ಮಾಡಿ ನನ್ನ ಕಾಲ ಮೇಲೆ ನಾನು ನಿಂತುಕೊಳ್ಳಬೇಕಲ್ಲ ಅನ್ನುವುದು. ಎಂಬ್ರಾಯಿಡರಿ ಕಲಿತಳು, ಮಕ್ಕಳಿಗೆ ಕುರಾನ್ ಹೇಳಿಕೊಟ್ಟಳು, ಬದುಕು ಹೇಗೋ ಸಾಗುತ್ತಿತ್ತು. ಸಕಲ ನೋವಿನ ನಡುವೆಯೇ!

ಅದೊಂದು ಕರಾಳ ರಾತ್ರಿ

ಆದ್ರೆ ಅಲ್ಲಿನ ಜನ ಹಾಗೆಲ್ಲ ನಿರುಮ್ಮಳವಾಗಿ ಬದುಕಲು ಬಿಡುವುದಿಲ್ಲ. ಮೇಲ್ವರ್ಗ ಕೆಳವರ್ಗದ ನಡುವಿನ ಬೆಂಕಿ ನಮ್ಮಂತ ಅಭಿವೃದ್ಧಿಶೀಲ(?) ರಾಷ್ಟ್ರಗಳನ್ನು ಶಾಂತಿಯಿಂದ ಬದುಕಲು ಬಿಟ್ಟಿಲ್ಲ. ಬಿಡುವುದೂ ಇಲ್ಲವೇನೋ?ಮೀರ್ವಾಲಾ ಕೂಡ ಇದಕ್ಕೆ ಹೊರತಲ್ಲ. ಅಲ್ಲಿನ ಮೇಲ್ವರ್ಗದ ಮಾಸ್ತೋಯಿಸ್ಗಳು ಮಾಯಿಯ ತಮ್ಮ, ತಮ್ಮ ಜನಾಂಗದ ಹೆಣ್ಣುಮಕ್ಕಳೊಂದಿಗಿದ್ದ ಅನ್ನುವ ಒಂದೇ ಕಾರಣಕ್ಕೆ ಚೆನ್ನಾಗಿ ತಳಿಸಿದ್ದರು. ಅಲ್ಲದೆ ಅದಕ್ಕೆ ಕ್ಷಮೆ ಎಂಬಂತೆ ಮಾಯಿ ನಮ್ಮ ತೃಷೆ ತೀರಿಸಬೇಕು ಅನ್ನುವ ಇಚ್ಛೆಯನ್ನೂ ವ್ಯಕ್ತಪಡಿಸಿದ್ದರು. ಅಲ್ಲಿ ಮೇಲ್ವರ್ಗದವರದೇ ಕೊನೆಯ ಮಾತು, ಕೊನೆಯ ಅಸ್ತ್ರ. ಮಾಯಿ ಇದ್ಯಾವ ನ್ಯಾಯ ಎನ್ನುವಷ್ಟರಲ್ಲಿ ಅವಳ ತಂದೆ ಮತ್ತು ಚಿಕ್ಕಪ್ಪನನ್ನು ಹೊರಗಾಕಿ ಮಾಯಿಯ ಮೇಲೆ ಇಡೀ ರಾತ್ರಿ ಅತ್ಯಾಚಾರ ಎಸಗಿದ್ದರು. ಹೊರಗಡೆ ಆರ್ತನಾದ. ಒಳಗೂ ಮಾಯಿಯದು. ಆದರೆ ಮೇಲ್ವರ್ಗದವರ ಅಟ್ಟಹಾಸದ ನಡುವೆ ಅದು ಯಾರ ಕಿವಿಗೂ ಬೀಳಲೇ ಇಲ್ಲ. ಬಿದ್ದಿದ್ದರೂ ಯಾರೂ ಆ ಬಗ್ಗೆ ಸೊಲ್ಲೆತ್ತುವಂತಿರಲಿಲ್ಲ. ಪೊಲೀಸರಿಗೆ ದೂರು ಕೊಡುವ ಹಾಗಿರಲಿಲ್ಲ. ಯಾರೊಟ್ಟಿಗೂ ಹೇಳಿಕೊಳ್ಳುವಂತೆಯೂ ಇರಲಿಲ್ಲ. ಉಳಿದದ್ದು ಒಂದು ನಿಟ್ಟುಸಿರು ಮತ್ತು ಅಖಂಡ ನೋವು ಅಷ್ಟೆ. ಅದು ಅವರ ದಬ್ಬಾಳಿಕೆ, ಬಂದೂಕಿನ ಸುಳಿಯ ನಡುವೆ.

ನಾನು ಬದುಕಿರಬಾರದು!

ಇಷ್ಟಾದ ಮೇಲೆ ಮಾಯಿಗೆ ಬದುಕುವ ಆಸೆಯೇ ಇಲ್ಲದಾಗಿ ಹೋಯಿತು. "ಇನ್ನು ನಾನು ಬದುಕಿರುವುದರಲ್ಲಿ ಅರ್ಥ ಇಲ್ಲ. ಸಾಯುವುದೇ ಸರಿ" ಅಂತ ತೊಟ್ಟು ನೀರನ್ನೂ ಮುಟ್ಟದೆ ಸಾವಿಗಾಗಿ ಹಂಬಲಿಸಿದಳು. ಆದರೆ ಆ ಕಟ್ಟುಪಾಡುಗಳ ನಡುವೆಯೂ ಮಾಯಿಯ ಅಪ್ಪ ಅಮ್ಮ ಇವಳಲ್ಲಿ ಧೈರ್ಯ ತುಂಬಿದರು. ಆ ಕಡೆ ಮೇಲ್ವರ್ಗದ ಮಾಸ್ತೋಯಿಸ್ಗಳು ಮಾತ್ರ ಧಮಕಿ ಹಾಕುತ್ತಲೇ ಇದ್ದರು.ಆದರೆ ಇಂಥ ಕ್ರೌರ್ಯವೇ ತುಂಬಿಕೊಂಡ ನೆಲದಲ್ಲೂ ಎಲ್ಲೋ ಒಂದು ಕಡೆ ಸಣ್ಣದೊಂದು ಮಾನವೀಯತೆಯ ಅಂತರ್ಜಲವೂ ಇರುತ್ತದೆ. ಇಲ್ಲದಿದ್ದರೆ ಈ ಜಗತ್ತಿನಲ್ಲಿ ಬದುಕಿರಲು ಸಾಧ್ಯವಿತ್ತೆ? ಅಲ್ಲಿನ ಲೋಕಲ್ ಮುಲ್ಲಾ ಒಂದಿನ ಸಭೆಯಲ್ಲಿ ಮಾಯಿ ಮೇಲೆ ನಡೆದ ಅತ್ಯಾಚಾರವನ್ನು ಖಂಡಿಸಿ ಮಾತಾಡಿದ. ಇದು ನಮ್ಮ ಊರಿಗೇ ಕಳಂಕ ಎಂದ. ಪೊಲೀಸರೇನು ಕತ್ತೆ ಕಾಯ್ತಾ ಇದಾರಾ ಅಂತ ತರಾಟೆಗೆ ತೆಗೆದುಕೊಂಡ. ಆದರೆ ಪೊಲೀಸರೇನು ಮಾಡಿಯಾರು? ಕಂಪ್ಲೆಂಟ್ ಕೊಟ್ಟರೆ ತಾನೆ ಅಪರಾಧಿಗಳನ್ನು ಬಂಧಿಸಲು ಸಾಧ್ಯ. ಕಂಪ್ಲೆಂಟ್ ಕೊಡಲು ಅಲ್ಲಿ ಧೈರ್ಯವಾದರೂ ಯಾರಿಗಿತ್ತು?ಆದರೆ ಇಂಥದ್ದೊಂದು ಸಣ್ಣ ಸಪ್ಪೋಟರ್್ ಮುಕ್ತರ್ ಮಾಯಿಗೆ ಸಾಕಿತ್ತು. ಅದಾಗಲೇ ಅವಳೊಂದು ನಿಧರ್ಾರಕ್ಕೆ ಬಂದಂತಿತ್ತು. ತನ್ನ ಮೇಲೆ ವಿನಾಕಾರಣ ಅತ್ಯಾಚಾರವೆಸಗಿದವರಿಗೆ ಸರಿಯಾದ ಶಿಕ್ಷೆಯಾಗಬೇಕೆನ್ನುವುದು ಅವಳ ಹಂಬಲವಾಗಿತ್ತು. ಮನೆಯವರು ಹೆದರಿ ಬೇಡ ಮಗಳೇ ಅಂದ್ರು. ಆದ್ರೆ ಮಾಯಿ ಬಿಡಲಿಲ್ಲ. ತನ್ನ ನೋವು, ಅಪಮಾನ ಎಲ್ಲವನ್ನೂ ನುಂಗಿಕೊಂಡೇ ಪೊಲೀಸ್ ಸ್ಟೇಷನ್ ಹತ್ತಿ ತನ್ನ ಮೇಲೆ ನಡೆದ ದೌರ್ಜನ್ಯವನ್ನು ಬಿಚ್ಚಿಟ್ಟಳು. ತನಗೆ ನ್ಯಾಯ ಕೊಡಿಸಿ ಅಂತ ಅಂಗಲಾಚಿದಳು. ಸುದ್ದಿ ದೊಡ್ಡ ಸುದ್ದಿಯಾಯಿತು. ಮಹಿಳಾ ಸಂಘಟನೆಗಳು, ಮಾನವತಾವಾದಿಗಳು ಮಾಯಿಯ ಬೆಂಬಲಕ್ಕೆ ನಿಂತರು. ನೋಡ ನೋಡುತ್ತಲೇ ಮುಕ್ತರ್ ಮಾಯಿ ಎಲ್ಲಾ ನೊಂದವರ ದನಿಯಾಗಿಹೋದಳು. ಊರು ಎರಡು ಭಾಗವಾಗಿ ಹೋಯ್ತು. ನೀನು ಕಂಪ್ಲೆಂಟ್ ಕೊಟ್ಟಿದ್ದು ಮಹಾಪರಾಧ ಎನ್ನುವಂತೆ ಮಾತಾಡಿದರು ಅರ್ಧ ಊರಿನವರು. ನನ್ನ ಮೇಲೆ ನಡೆದ ದೌರ್ಜನ್ಯ ಮಹಾಪರಾಧವಲ್ಲವಾ? ಅಂತ ಕೇಳಿದ್ರೆ ಅವರಲ್ಲಿ ಉತ್ತರವಿರಲಿಲ್ಲ.ಕೊನೆಗೂ ಅತ್ಯಾಚಾರಿಗಳ ಬಂಧನವಾಯ್ತು. ಅವರಿಗೆ ಮರಣದಂಡನೆಯೂ ವಿಧಿಸ್ತು ಕೋಟರ್ು. ಆದ್ರೆ ಅವರು ಲಾಹೋರ್ ಹೈಕೋಟರ್ಿಗೆ ನಾವು ತಪ್ಪು ಮಾಡಿಲ್ಲ ಅಂತ ಮೊರೆ ಹೋದ್ರು. ಕೋಟರ್ಿಗೆ ಅದೇನನ್ನಿಸಿತೋ ಅವರನ್ನೆಲ್ಲ ಬಿಡುಗಡೆ ಮಾಡಿಬಿಡ್ತು. ಮಾಯಿ ಧೃತಿಗೆಡಲಿಲ್ಲ. ತನ್ನ ಬೆಂಬಲರೊಂದಿಗೆ ಮತ್ತೆ ಹೋರಾಟದ ಕಣ್ಕಿಕ್ಕ್ಕಿಳಿದಳು. ಎಚ್ಚೆತ್ತ ಕೋಟರ್ು ಮತ್ತೆ ಬಂಧನದ ಆಜ್ಞೆ ಹೊರಡಿಸಿತು.

ನೋವಿನಲ್ಲೂ ಅರಳಿದ ಕನಸು

ಈ ನಡುವೆ ಸಕರ್ಾರ ಮುಕ್ತಾರ್ ಮಾಯಿಗೆಂದು ಪರಿಹಾರವಾಗಿ ಐದು ಲಕ್ಷ ರುಗಳ ಚೆಕ್ ಕೊಡಲು ಬಂದಿತು. ಅದುವರೆಗೂ ಮಾಯಿ ಅಷ್ಟು ಹಣ ಕೇಳಿರಲೇ ಇಲ್ಲವೇನೋ! ಇನ್ನು ಚೆಕ್ ನೋಡುವುದೆಲ್ಲಿ ಬಂತು? ಆದ್ರೆ ಮಾಯಿಯ ನಿಧರ್ಾರ ಅಚಲವಾಗಿತ್ತು. ನನಗೆ ಈ ಹಣ ಬೇಡ. ಅದರ ಬದಲು ಅದೇ ಹಣವನ್ನ ತನ್ನ ಊರಿನ ಮಕ್ಕಳಿಗೆ ವಿದ್ಯಾಭ್ಯಾಸ ನೀಡಲು ಬಳಸುತ್ತೇನೆ. ನಾನೊಂದು ಸ್ಕೂಲ್ ಸ್ಥಾಪಿಸಬೇಕಿದೆ. ನನಗೆ ಸಹಕಾರ ಕೊಡಿ ಅಂದಳು. ಹಾಗೇ ಮಾಡಿದಳು ಕೂಡ. ಮೊದ ಮೊದಲು ಮಾಯಿ ಶಾಲೆ ಸ್ಥಾಪಿಸುತ್ತೇನೆ ಎಂದಾಗ ಊರಿನ ಜನ ನಗಾಡಿದ್ದರು, ಕುಹಕವಾಡಿದ್ದರು. ಆದರೆ ಮಾಯಿ ಸೋಲಲಿಲ್ಲ. ಊರಿನಲ್ಲೊಂದು ಶಾಲೆ ಸ್ಥಾಪಿಸಿದಳು. ಶಾಲೆಗೆ ಮಕ್ಕಳನ್ನು ಕಳುಹಿಸಲು ಹಿಂಜರಿಯುತ್ತಿದ್ದವರನ್ನು ಮನವೊಲಿಸಿ ಮಕ್ಕಳನ್ನು ಶಾಲೆಗೆ ಕರೆತಂದಳು. ಈಗ ಮಾಯಿಯ ಶಾಲೆ ವಿಸ್ತಾರ ಪಡೆದುಕೊಳ್ಳುತ್ತಿದೆ. ಅವಳ ಬೆಂಬಲಕ್ಕೆ ಜಗತ್ತಿನ ಎಲ್ಲಾ ಮಾನವೀಯ ಕೈಗಳೂ ಕೈ ಜೊಡಿಸುತ್ತಿವೆ.ಮೀರ್ ವಾಲಾದ ಅಂಧಕಾರದಲ್ಲೊಂದು ಬೆಳಕಿನ ಕಿರಣ ಪ್ರಜ್ವಲಿಸುತ್ತಿದೆ. ಪಾಕಿಸ್ತ್ತಾನದ ನೊಂದ, ಬಸವಳಿದ, ದೌರ್ಜನ್ಯಕ್ಕೊಳಗಾದ ಹೆಣ್ಣುಮಕ್ಕಳು ಮುಕ್ತಾರ್ ಮಾಯಿಯ ಮಡಿಲಿಗೆ ಬಂದು ಬೀಳುತ್ತಿದ್ದಾರೆ. ಮಾಯಿಯೂ ಮಕ್ಕಳ ನಡುವೆ ಕುಳಿತು ಮಗುವಾಗಿ ಅಕ್ಷರ ಕಲಿಯುತ್ತಿದ್ದಾಳೆ. ಮಾಯಿಯ ಕೈ ಈಗ ಒಂಟಿಯಲ್ಲ. ಅವಳಿಗೆ ಸಾಥ್ ನೀಡಲು ಸಾವಿರ ಸಾವಿರ ಕೈಗಳಿವೆ. ಒಂದು ನಿಮರ್ಾನುಷ ನೆಲದಿಂದ, ರಕ್ತಸಿಕ್ತ ಕೈಗಳ ನಡುವಿನಿಂದ, ನಿಭರ್ಾವುಕ ಮನಸ್ಸುಗಳ ನಡುವಿನಿಂದ ಎದ್ದು ಹೋರಾಟದ ಹಾದಿ ಹಿಡಿದಳಲ್ಲ ಈ ಮುಕ್ತಾರ್ ಮಾಯಿ ....ಅವಳಿಗೊಂದು ಹ್ಯಾಟ್ಸಾಫ್ ಹೇಳಲೇಬೇಕು.ಅವಳ ಹೋರಾಟ ನಿರಂತರವಾಗಿರಲಿ.

***

ಯಾಕೋ ಇದಿಷ್ಟೂ ನಿಮ್ಮ ಜೊತೆ ಹಂಚಿಕೊಳ್ಳಬೇಕೆನಿಸಿತು.ಮುಕ್ತರ್ ಮಾಯಿಯಂಥ ಹೆಣ್ಣುಮಕ್ಕಳು ನಮ್ಮ ನಡುವೆಯೂ ಇದಾರೆ. ಈ ಸಮಾಜ ಕೊಡುವ ಅಪಮಾನವನ್ನ ಅವರು ಒಂದು ಸಣ್ಣ ಸದ್ದೂ ಇಲ್ಲದೇ ನುಂಗಿಕೊಂಡಿದ್ದಾರೆ. ಯಾಕೆಂದರೆ ,ಯಾವ ಸಮಾಜ ತಪ್ಪಿತಸ್ಥರನ್ನು ಶಿಕ್ಷಿಸಬೇಕಿತ್ತೋ ಅದೇ ಸಮಾಜ ಕೊಲೆಗಡುಕರನ್ನ, ಅತ್ಯಾಚಾರಿಗಳನ್ನ ರಕ್ಷಿಸುತ್ತಿದೆ. ನೊಂದವರ ನಿಟ್ಟುಸಿರು ಯಾರಿಗೂ ಗೊತ್ತಿಲ್ಲದಂತೆ ಕರಗಿಹೋಗುತ್ತಿದೆ. ಎಲ್ಲಿಯವರೆಗೂ ನಾವು ನ್ಯಾಯಕ್ಕಾಗಿ ಸೆಟೆದು ನಿಲ್ಲುವುದಿಲ್ಲವೋ ಅಲ್ಲಿಯವರೆಗೂ ದೌರ್ಜನ್ಯ ಎಸಗುತ್ತಲೇ ಇರುತ್ತಾರೆ. ನಿಮ್ಮ ಕೈ ಗಟ್ಟಿಯಾಗಿರಲಿ... ಹಾಗೇ ಮನಸ್ಸೂ.ಮುಕ್ತ್ತಾರ್ ಮಾಯಿಯ ಹೋರಾಟದ ಹಾದಿ ನಿಮ್ಮವರೆಗೂ ವಿಸ್ತರಿಸಲಿ.

Thursday, February 21, 2008

ರವಿ ಗೆರೆ





ಗೊತ್ತಿಲ್ಲ ಹೇಗಿದೆಯೋ?

ನಿನ್ನೆ ಸಂಜೆ ಸದಾನಂದ್ ಆಫೀಸಿನಲ್ಲಿ ಕುಳಿತಿದ್ದವನ ಕ್ಐಗೆ ಕಂಪ್ಯೂಟರ್ ಸಿಕ್ಕಿತು. ಅದರಲ್ಲಿ ಫೋಟೋಶಾಪ್ ಇತ್ತು. ಸುಮ್ಮನೆ ಗೀಚುತ್ತಾ ಹೋದೆ.

ಇಷ್ಟವಾಗಿದ್ದರೆ ಹೇಳಿ.

Wednesday, February 13, 2008

ಗೊತ್ತಿರಲಿ, ಪ್ರೀತಿ ಯಾವತ್ತೂ ಚಟವಾಗಬಾರದು..

"Tell me whom you love and I will tell you who you are." - Houssaye
ಯಾರನ್ನು ಪ್ರೀತಿಸುತ್ತೀಯ ಅಂತ ಹೇಳು ನೀನು ಎಂಥವನು ಅಂತ ಹೇಳುತ್ತೇನೆ ಅನ್ನೋ ಅರ್ಥ ಬರುವಂಥ ಈ ಮಾತುಗಳನ್ನು ಹೇಳಿದವನು ಫ್ರೆಂಚ್ ಕಾದಂಬರಿಕಾರ, ಕವಿ ಆಸರ್ೆನ್ ಹುಸ್ಸೇ. ಎಷ್ಟು ನಿಜ್ಜ ಅನ್ನಿಸಿಬಿಡ್ತು ಗೊತ್ತಾ?
ಯಾಕೇಂದ್ರೆ, ಕೆಲವೊಮ್ಮೆ ಪ್ರೀತಿಯ ಹೆಸರಿನಲ್ಲಿ ಅಪಾತ್ರರನ್ನೆಲ್ಲ ಎಳೆದುತಂದು ಎದೆಯ ಅಂಗಳದಲ್ಲಿ ಕುಳ್ಳಿರಿಸಿಕೊಂಡು ಬಿಡುತ್ತೇವೆ. ಅವರು ನಮಗೆ ಯೋಗ್ಯರಾ, ತಕ್ಕುದಾದವರಾ ಅಂತ ಒಮ್ಮೆ ಕೂಡ ಯೋಚಿಸುವುದಿಲ್ಲ. ಅಂತ ಅಪಾತ್ರರನ್ನೇ ಬಗಲಲ್ಲಿಟ್ಟುಕೊಂಡು ತಿರುಗುತ್ತೇವೆ, ಗಂಟೆ ಗಟ್ಟಲೆ ಮಾತಾಡುತ್ತೇವೆ, ಹರಟುತ್ತೇವೆ, ತೋಳ ತೆಕ್ಕೆಯಲ್ಲಿ ವಿಹರಿಸುತ್ತೇವೆ. ನನಗೆ ಈ ಪ್ರೀತಿ ಒಗ್ಗೊಲ್ಲ ಅಂತ ಗೊತ್ತಾಗುವ ತನಕ ಈ ಪಯಣ ಹಾಗೇ ಮುಂದುವರೆಯುತ್ತದೆ.ಒಮ್ಮೆ ಗೊತ್ತಾಯಿತು ಅಂತಿಟ್ಟುಕೊಳ್ಳಿ, ಅಲ್ಲಿಗೆ ಪ್ರೀತಿ ಮಕ್ಕಾಡೆ ಮಲಗಿತು ಅಂತಲೇ ಅರ್ಥ. ಆದರೆ ಹಾಗೆ ಮಲಗಿದ ಪ್ರೀತಿಯನ್ನೂ ಎಬ್ಬಿಸಿ ಕೈ ಹಿಡಿದು ಕರೆದುಕೊಂಡು ಹೋಗುವವರೂ ಇದ್ದಾರೆ. ಅಂಥ ಪ್ರೀತಿ ಎಲ್ಲಿತನಕ ಹೋಗಿ ನಿಲ್ಲುತ್ತದೋ ಹೇಳಬರುವುದಿಲ್ಲ.
ನನ್ನ ಗೆಳೆಯ ಒಬ್ಬನಿದ್ದ ಮೈಸೂರಿನಲ್ಲಿ ; ಹರೀಶ ಅಂತ. ಅವನಿಗೆ ಊರ ತುಂಬಾ ಸಖಿಯರು. ಹೋದಲ್ಲಿ ಬಂದಲ್ಲಿ ಅವನಿಗೆ ಒಬ್ಬೊಬ್ಬಳು ಸಿಕ್ಕಿ ಬೀಳುತ್ತಿದ್ದರು. ಹಾಗೆ ಹುಡುಗಿಯರು ಸಿಕ್ಕಿ ಹಾಕಿಕೊಳ್ಳುತ್ತಿದ್ದುದಕ್ಕೆ ಅವನ ಗಿಲೀಟಿನ ಮಾತೂ ಹುಡುಗಿಯರ ದಡ್ಡತನವೂ ಕಾರಣವಾಗಿತ್ತು ಅನ್ನೋದು ನನ್ನ ಅನಿಸಿಕೆ. ಹೀಗೆ ಹೇಳಿದಾಗೆಲ್ಲ, ನೀನು ವಿನಾಕಾರಣ ನನ್ನ ಪ್ರೇಮ ಸಂಗತಿಗಳಿಗೆ ತಲೆ ಹಾಕಬೇಡ ಅಂತ ಆತ ತಾಕೀತು ಮಾಡಿದ್ದ. ನಾನೋ ನನ್ನ ಕಣ್ಣಿಗೆ ಬಿದ್ದ ಅವನ ಹುಡುಗಿಯರಿಗೆಲ್ಲ ಅವನು ಇಂತಿಂಥವನು ಕಣ್ರೆ ಅಂತ ಹೇಳಿದ್ರೆ ಅವರು ನನ್ನನ್ನೇ ಅನುಮಾನದಿಂದ ನೋಡುತ್ತಿದ್ದರು. ಆದರೆ ಕಾಲ ಎಲ್ಲದಕ್ಕೂ ಒಂದು ಫುಲ್ಸ್ಟಾಪ್ ಇಡದೇ ಬಿಡುವುದಿಲ್ಲವಂತೆ. ಸತ್ಯ ಎಂದಾದರೂ ಒಮ್ಮೆ ಜಗತ್ತಿಗೆ ತೀಳಿಯಲೇ ಬೇಕು. ಹಾಗೆಯೇ ಹರೀಶನ ಪ್ರೀತಿಯ ಸತ್ಯ ಒಂದಿನ ಹುಡುಗಿಯರಿಗೆ ಗೊತ್ತಾಗಿಹೋಯಿತು.
ಆದ್ರೆ ಅಷ್ಟು ಹೊತ್ತಿಗೆ ಹರೀಶ ಆ ಹುಡುಗಿಯರ ಒಟ್ಟಿಗೆ ಬಹು ದೂರ ಸಾಗಿಬಿಟ್ಟಿದ್ದ. ಯಾಕೆ ಹೇಳಿದೆನೆಂದ್ರೆ, ಇಲ್ಲಿ ಹರೀಶ ಒಬ್ಬ ಟೈಲರ್ ಆಗಿದ್ದ. ಅವನಿಗೆ ಹಲವು ಹುಡುಗಿಯರನ್ನು ಪ್ರೀತಿಸುವುದೊಂದು ಚಟವಾಗಿತ್ತು. ಗೊತ್ತಿರಲಿ, ಪ್ರೀತಿ ಯಾವತ್ತೂ ಚಟವಾಗಬಾರದು ; ಡ್ರಗ್ಸ್ನಂತೆ, ಹೆಂಡದಂತೆ, ಸೆಕ್ಸ್ನಂತೆ. ಕೊನೆಗೆ ದರಿದ್ರ ಕೆರೆತದಂತೆಯೂ. ಆ ಕ್ಷಣಕ್ಕೆ ಕೆರೆತ ಖುಷಿ ಕೊಟ್ಟರೂ ಅದರಿಂದ ಉಂಟಾಗುವ ಗಾಯ ಮಾತ್ರ ಅಳಿಸಿಹೋಗಲಾರದೇನೋ!
ಇಂತಹ ಚಟಾಗ್ರೇಸರನ ಪ್ರೀತಿಗೆ ಮರುಳಾಗುವ ಮೊದಲು ಈ ಹುಡುಗಿಯರು ಒಮ್ಮೆ ಅವನ ಬ್ಯಾಕ್ಗ್ರೌಂಡ್ ನೋಡಬಹುದಿತ್ತಲ್ಲ? ಕೇವಲ ಒಂದು ಕಣ್ಣೋಟಕ್ಕೆ, ನಗುವಿಗೆ, ಚಂದಕ್ಕೆ ಮತ್ತು ಇನ್ಯಾತಕ್ಕೋ ಪ್ರೀತಿಗೆ ಬಿದ್ದು ಬಿಡುವ ಕಾತರದಲ್ಲಿ ಇಡೀ ಬದುಕನ್ನ ಅವನ/ಅವಳ ಕೈ ಗೆ ಕೊಡುವುದು ಎಷ್ಟು ಸರಿ?ಎಷ್ಟೋ ಜನ ಪ್ರೀತಿಯನ್ನ ಕೇವಲ ಕಾಮದ ಕಾಲುದಾರಿ ಅಂತಂದುಕೊಂಡಿದ್ದಾರೆ. ಅಂತವರಿಗೆ ಪ್ಲಟೋನಿಕ್ ಪ್ರೀತಿಯ ಅರ್ಥ ಗೊತ್ತಾಗುವುದಾದರೂ ಹೇಗೆ?
ಬಹುಶಃ ಹುಸ್ಸೇ ಪ್ರೀತಿಯ ಹುನ್ನಾರಗಳನ್ನೆಲ್ಲ ಹಿನ್ನೆಲೆಯಲ್ಲಿಟ್ಟುಕೊಂಡೇ ಮೇಲಿನ ಮಾತು ಹೇಳಿರಬೇಕು. ...................................ಯಾಕೋ ಇದನ್ನೆಲ್ಲ ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿತು.
ಒಪ್ಪಿಸಿಕೊಳ್ಳಿ.

Monday, February 11, 2008

ಹೀಗೊಂದು ಕಥೆ : ಇಬ್ಬನಿ

ಅದು ಹೊಳೆ ದಂಡೆ.
ಕಾಲು ಇಳಿ ಬಿಟ್ಟುಕೊಂಡು ಕುಳಿತ ಇಬ್ಬನಿಯ ಕಣ್ಣಲ್ಲಿ ಕೇವಲ ಆಕಾಶ್.ನಿನ್ನೆಯಷ್ಟೇ ಕೆನೆ ಹಳದಿ ಬಣ್ಣದ ಚೂಡಿ ಕೊಡಿಸಿ... ಅದರ ಮೇಲಿನ ಬಿಳಿ ಹೂಗಳನ್ನ ಎಣಿಸುತ್ತಾ ಕುಳಿತಿದ್ದ."ಯಾಕೋ ಹೂ ಎಣಿಸ್ತಿದೀಯಾ?" ಅಂದಿದ್ದಕ್ಕೆ... "ಅವನ್ನೆಲ್ಲ ಎಣಿಸಿ, ಅಷ್ಟೇ ಹೂ ತಂದು ನಿನ್ನ ಮುಡಿಗೇರಿಸಬೇಕು ಅನ್ನೋ ಆಸೆ" ಅಂತ ನಗಾಡಿದ್ದ."ಲೂಸ್" ಅಂತ ಬೈದು ಸಣ್ಣಗೆ ಅವನ ಕೆನ್ನೆ ಗಿಂಡಿದ್ದಳು.ಇವನು ಹಾಗೆ ಗಿಂಡಿಸಿಕೊಳ್ಳುವುದಕ್ಕೇ ಹಾಗೆ ಎಣಿಸಿದ್ದು ಅಂತ ಅವಳಿಗೂ ಗೊತ್ತಿತ್ತು.
ಗಿಂಡುವ ಮತ್ತು ಗಿಂಡಿಸಿಕೊಳ್ಳುವ ಆಸೆ...ಇಬ್ಬರಿಗೂ ಇದ್ದದ್ದರಿಂದ ತರ್ಲೆ ಮಾಡಿದಾಗಲೆಲ್ಲ ಯಾಕೆ ಅಂತ ಮಾತ್ರ ಇಬ್ಬರೂ ಕೇಳುತ್ತಿರಲಿಲ್ಲ. ಸಿಟ್ಟಾಗುತ್ತಿರಲಿಲ್ಲ.
ಇವತ್ತೂ ಅವನು ಏನಾದ್ರು ತರ್ಲೆ ಮಾಡ್ತಾನೆ ಅಂತಲೇ ಇಬ್ಬನಿಗೆ ಗೊತ್ತಿತ್ತು. ನಾನು ಗಿಂಡ್ತೀನಿ ಅಂತಲೂ ಗೊತ್ತಿದ್ದರಿಂದ ಒಳಗೊಳಗೇ ಖುಷಿ ಅನುಭವಿಸುತ್ತಾ ಹೊಳೆ ದಂಡೆಯ ಅಂಚಿನಲ್ಲಿ ಕುಳಿತು ಜುಳು ಜುಳು ಹರಿವ ನೀರಿನಲ್ಲಿ ಕಾಲು ಬಿಸಾಕಿ ಕುಳಿತಿದ್ದಳು.
ನದಿಗೆ ಯಾರ ಕಾಲಾದರೇನು? ಇವಳ ಹಾಲುಬಿಳುಪಿನ ಕಾಲಿಗೆ ಒತ್ತಿಕೊಂಡು ಹರಿಯತೊಡಗಿತು.
ಹಿಂದಿನಿಂದ ಮೆಲ್ಲಗೆ ಬಂದ ಆಕಾಶ್ ಇಬ್ಬನಿಯ ಕಣ್ಣು ಮುಚ್ಚಿದ.
"ಲೂಸ್ ಗೊತ್ತು ಬಿಡೋ" ಅಂದಳು.
ಅವನು ಬಿಡಲಿಲ್ಲ."ಬಿಡ್ತೀಯೋ ಇಲ್ವೋ.. . . ಲೂಸ್! ಅಂತ ಒಮ್ಮೆ ಕೈ ಜಾಡಿಸಿ ಮಾಡ್ತೀನಿ ಇರು ಎಂದು ತಿರುಗಿದಳು. ಅಷ್ಟೆ!ಆಕಾಶ್ ತಪ್ಪಿಸಿಕೊಳ್ಳುವ ಭರದಲ್ಲಿ ಹಿಂದಕ್ಕೆ ಜಿಗಿದ.
ಆದರೆ ಮುಂದಕ್ಕೆ ಮುಗ್ಗರಿಸಿ ಬಿದ್ದ.
ಬಿದ್ದವನನ್ನು ಹೊಳೆ ಬಗಲಲ್ಲಿ ಹಾಕಿಕೊಂಡು ಗೊತ್ತಿಲ್ಲದಂತೆ ಸುಮ್ಮನೆ ಹರಿಯತೊಡಗಿತು.
ಇಬ್ಬನಿ ನಿಂತಲ್ಲೇ ಕಂಪಿಸಿದಳು. ಮಾತು ಸತ್ತು ಕಣ್ಣ ತುಂಬ ಹುಚ್ಚುಕೋಡಿ ನೀರು.
"ಆಕಾಶ್... ನಾನೂ ಬರ್ತೀದೀನಿ..." ಕಿರುಚಿದಳು.
ಅಷ್ಟರಲ್ಲಿ, ಪಕ್ಕದಲ್ಲೇ ಲವ್ ಅಂಡ್ ಅಫೇರ್ಸ್ ಪುಸ್ತಕ ಓದುತ್ತ ಮಲಗಿದ್ದ ಗಂಡ ಯಾಕೋ ಬ್ಲಡೀ ಬಿಚ್ಚ್ ಅಂತ ಬೈದು ಪುಸ್ತಕ ಒಗೆದ.

ನೀನಿಲ್ಲದೇ ನಾನು ಇನ್ಕಂಪ್ಲೀಟ್ ಕಣೆ

ಹಾಯ್ ಫ್ರೆಂಡ್ಸ್

ಒನ್ಸ್ ಅಗೈನ್ ಬರುತ್ತಿರುವ ಪ್ರೇಮಿಗಳ ದಿನಾಚರಣೆಗೆ ಎಲ್ಲಾ ಪ್ರೇಮಿಗಳೂ ಕಾತರದಿಂದ ಕಾಯುತ್ತಿದ್ದಾರೆ. ಏನು ಕೊಡಬೇಕು? ಹೇಗೆಲ್ಲ ಮಾತಾಡಬೇಕು? ಹೇಗೆ ಅವಳಿಗೆ ಇಷ್ಟ ಆಗುವ ಥರ ನಡೆದುಕೊಳ್ಳಬೇಕು? ಐ ಲವ್ ಯು ಅಂತ ಹೇಳುವುದಾದರೂ ಹೇಗೆ? ಒಪ್ಪಿಕೊಳ್ಳುತ್ತಾಳಾ/ನಾ ಇಲ್ಲವಾ? ದೇವರೇ ನನ್ನ ಪ್ರೀತಿ ಅಂಕುರಿಸಲಿ ಅನ್ನುವ ರಿಹರ್ಸಲ್ಲೇ ಮನದ ತುಂಬಾ! ಅಲ್ಲಿ ತವಕವಿದೆ, ಪುಳಕವಿದೆ, ಮನದ ತುಂಬಾ ಚೆಲ್ಲಿಕೊಂಡ ಅವಳ/ಅವನ ಗುಂಗೇ ಇದೆ.
ಅಂತಹ ಒಂದು ಗುಂಗಿನ ಸಹಜ ಪ್ರೀತಿಗೆ ನನ್ನ ಸಲಾಮ್.
ಪ್ರೀತಿ ಮಟ್ಟಿಗೆ ಎಷ್ಟು ಬರೆದರೂ ಮುಗಿಯೊಲ್ಲ ಅನ್ನೋದು ನಿಮಗೆ ಗೊತ್ತಿದೆ. ಅದೊಂದು ಮಾತ್ರವೇ ಮೊಗೆದಷ್ಟೂ ಸಿಗಬಲ್ಲಂಥದು. ಅಂತ ಪ್ರೀತಿಯ ಬಗ್ಗೆ ಬರೆದ ಒಂದಿಷ್ಟು ಪ್ರೀತಿಯ ಹನಿಗಳನ್ನು ನದಿಗೆ ಚೆಲ್ಲಿದ್ದೇನೆ.
ಅದೂ ಪ್ರೀತಿಯಿಂದ ಒಪ್ಪಿಸಿಕೊಳ್ಳಿ.

ಹ್ಯಾಪಿ ವ್ಯಾಲೆಂಟೈನ್ಸ್ ಡೇ.




***
ನೀನು
ಪುಸ್ತಕದ ಒಳಗೆ ಇಟ್ಟುಕೊಂಡ
ಅಪ್ಪಚ್ಚಿಯಾದ ಹೂ ಥರ.
ಅದರಲ್ಲಿ ಸುಗಂಧ ಇರುವುದಿಲ್ಲ ನಿಜ
ಆದರೆ ನೋಡಿದಾಗಲೆಲ್ಲ
ನಾ ನಿನಗೆ ನೆನಪಾಗೋದು ಮಾತ್ರ
ಖರೆ

***
ನಿಜ್ಜ ಹೇಳ್ಲ
ಆ ನಕ್ಷತ್ರಗಳಲ್ಲಿ
ಒಂದೇ ಒಂದೂ
ನಿನ್ನದೊಂದು ಕಣ್ಣಿಗೆ
ಸಮವಲ್ಲ ಬಿಡು

***
ದೇವರು
ನೀನಿನ್ನು ಇಪ್ಪತ್ನಾಲ್ಕು ಗಂಟೆ ಅಷ್ಟೇ
ಬದುಕಿರ್ತೀಯ ಅಂದ್ರೆ
ಅದರಲ್ಲಿ ಇಪ್ಪತ್ಮೂರು ಗಂಟೆ
ನಿಂಜೊತೇನೆ ಇರ್ತೀನಿ
ಇನ್ನೊಂದ್ ಗಂಟೇಲಿ
ನಾನು ಸತ್ತ ಮೇಲೆ ನಿನ್ನ ಬಗ್ಗೆ
ಕೇರ್
ತಗಳೋರನ್ನ ಹುಡುಕ್ತೀನಿ

***
ಗೆಳತಿ
ನಿನ್ನ ಕಣ್ಣಲ್ಲಿ ಹುಟ್ಟಿ
ಕೆನ್ನೆ ಮೇಲಿಳಿದು
ಅಧರದಲ್ಲಿ ಲೀನವಾಗುತ್ತಲ್ಲ
ಕಂಬನಿ
ನನಗೆ ಅದಾಗುವಾಸೆ

***
ನನಗೊಂದಾಸೆ
ನಿನ್ನ ಎದೆಗೊರಗಿಕೊಂಡೇ
ಸಾಯಬೇಕೆನ್ನುವುದು

***
ನಾನು
ನಿನ್ನೆದೆಯೊಳಗಿನ
ಕೊಳದಲ್ಲಿ
ತೇಲುವ
ಪುಟ್ಟ ಹಾಯಿ ದೋಣಿ

***
ನೀನು
ನನ್ನೊಳಗಿದ್ದಾಗ
ನಾನು ನಿನ್ನೊಳಗಿರಬೇಕು ತಾನೆ
ಅದೇ..... ಆಗುತ್ತಿಲ್ಲ!

***
ಮೊಬೈಲು
ಮೇಲು
ಎಸ್ಸೆಮ್ಮೆಸ್ಸು
ಎಲ್ಲಾ ಬೋರಾಗಿದೆ
ಸಂಜೆ ಸಿಕ್ತೀಯ
ಒಂದೆರಡು
ಮಾತಾಡೋಣ
ಕೈ ಕೈ ಹಿಡಿದು

***
ಎಲ್ಲಾ ಹೂಗಳೂ
ರೋಸ್ನಂತಲ್ಲ
ಎಲ್ಲಾ ಮರಗಳೂ ನೆರಳು ನೀಡೋಲ್ಲ
ಎಲ್ಲರನ್ನೂ ಪ್ರೀತಿಸೋಕ್ಕಾಗೊಲ್ಲ
ನಿಜ್ಜ ಹೇಳ್ಲ
ನಿನ್ನ ನೋಡಿದ್ ಮೇಲೆ
ಯಾಕೋ ಜೀವ ಬೇರೇನನ್ನೂ ಬಯಸ್ತಿಲ್ಲ
ಮನಸ್ಸು ಚಂಡಿ ಹಿಡಿದಿದೆ
ನೀನೇ ಬೇಕಂಥ
ಪ್ಲೀಸ್ ಒಮ್ಮೆ ಸಿಗೆ!

***
ಹೇಗೆಬರಲೀ ಹೇಳು
ನಿನ್ನಲ್ಲಿಗೆ
ಈ ಉರಿ ಬಿಸಿಲಲ್ಲಿ
ಕೈಯಲ್ಲಿರುವ
ಐಸ್ಕ್ರೀಮ್
ಕರಗಿ ಹೋಗುವ ಮುನ್ನ...

***
ಸುಧಾರಣೆ ಆಗು ಅಂತೀಯಲ್ಲ
ನಿನ್ನ ಪ್ರೀತಿಸಲಿಕ್ಕೆಶುರು ಮಾಡಿದ್ದು
ಸುಧಾರಣೆ ಅಲ್ವೇನು?

***
ಸುಮ್ಮನೆ ನಿಂತಿದ್ದು
ಸುಮ್ಮನೆ ಕುಳಿತದ್ದು
ಒಮ್ಮೆಲೇ ಮಾತು ಹೊರಟು
ಇಬ್ಬರೂ ನಕ್ಕಿದ್ದು
ಈಗ ಕೂಡ
ಸುಮ್ಮನೆ ಕುಳಿತಾಗ
ಸುಮ್ಮನೆ ನಿಂತಾಗ
ಒಮ್ಮೆಲೇ ಮಾತು ಹೊರಟು
.........................ಈ ಕ್ಷಣ
ನೀನು
ಎದುರಿಗಿಲ್ಲವಾಗಿ
ಕಾಡುತ್ತಿದೆ ನೆನಪು
.............................
ಇಲ್ಲಿ ನನಗೆ ಹೀಗೆ
ಅಲ್ಲಿ ನಿನಗೆ ಹೇಗೆ?

***
ಪ್ರಿಯೆ
ಬರೀ ಊಟ, ತಿಂಡಿ
ಕಾರು, ಬಂಗ್ಲೆ
ಇಷ್ಟಕ್ಕೇ ನಾ ಬದುಕಿಲ್ಲ
ನೀನು ಸಿಕ್ತೀಯೇನೋ ಅಂತ
ಜೀವ ಜೀಕುತ್ತಿದೆ
ಒಮ್ಮೆ ಬಂದು ಹೋಗು
ಒಂದು ಜೀವ ಉಳಿಸಿದಕೀತರ್ಿಗೆ
ನೀನು ಪಾತ್ರಳಾಗ್ತೀಯ
ನಿನ್ನ ಕೊನೆ ಬಾರಿ ನೋಡಿದ ಕೀತರ್ಿಗೆ
ನಾನು ಪಾತ್ರನಾಗ್ತೀನಿ

***
ನೀನು ನನ್ನ ಕಣ್ಣ ನೋಟ
ತುಟಿಯಲ್ಲರಳಿದ ನಗು
ಮೊಗದ ಸಿರಿ
ಮನದ ಭಾವ
ನೀನಿಲ್ಲದೇ ನಾನು
ಇನ್ಕಂಪ್ಲೀಟ್

***
ಕದ್ದಿದ್ದು
ಒಂದೇ ಆದರೂ
ಅದಕ್ಕಾಗಿ ನನಗೆ ಖುಷಿ ಇದೆ
ಹೆಮ್ಮೆ ಇದೆ
ಯಾಕೆಂದ್ರೆ
ಅದು ನಿನ್ನ ಹೃದಯ

***
ಒಂದೇ ಒಂದು
ಗುಲಾಬಿ ಕೇಳ್ದೆ
ಇಡೀ ತೋಟಾನೆ ಕೊಟ್ಟ
ಹನಿ ನೀರು ಕೇಳಿದ್ರೆ
ಇಟ್ಕೋ ಅಂತ
ಸಮುದ್ರಾನೆ ಕೊಟ್ಟ
ಏಂಜೆಲ್ ಕಳಿಸು ಅಂದ್ರೆ
ನಿನ್ನನ್ನು ಕಳುಹಿಸಿದ
ಅವನಿಗೊಂದು ಥ್ಯಾಂಕ್ಸ್

***
ಹೇಗೆ ಗೊತ್ತಾಗಬೇಕು
ನಿನಗೆ ನನ್ನ ಪ್ರೀತಿ
ನಾನು ಮನಸ್ಸು ಬಿಚ್ಚುವ ಮೊದಲೇ
ನೀನು
ಮನದ ಬಾಗಿಲು ಮುಚ್ಚಿ
ಎದ್ದು ಹೋದೆಯಲ್ಲ!

Monday, February 4, 2008

ಅವತ್ತು ನೀನು ನನ್ನ ಪಕ್ಕದಲ್ಲಿರಬೇಕಿತ್ತು ಅನಿಸುತ್ತಿದೆ

ಗೆಳತಿ ಭಾಗ್ಯ
ಸುಮಾರು ಇಪ್ಪತ್ತು ವರ್ಷಗಳ ನಂತರ ನಿನ್ನ ಹೆಸರಿಗೊಂದು ಪತ್ರ ಬರೆಯುತ್ತಿದ್ದೇನೆ. ಹೇಗಿದ್ದೀಯ ಅಂತ ಗೊತ್ತಿಲ್ಲ, ಎಲ್ಲಿರುವೆ ಅಂತ ಗೊತ್ತಿಲ್ಲ. ನಿನ್ನ ಕೆಂಪು ಬಣ್ಣದ ಲಂಗದ ಫ್ರಿಲ್ಲಿನ ಮೇಲೆ ನಾನು ಚೆಲ್ಲಿದ್ದ ತಿಳಿ ಸಾಂಬಾರಿನ ಘಮ ಇನ್ನೂ ಇದೆಯೋ ಗೊತ್ತಿಲ್ಲ. ಹಾಗಿದ್ದೂ ಈ ಪತ್ರ ಬರೆಯುತ್ತಿದ್ದೇನೆ. ಕೇವಲ ನಿನ್ನದೊಂದು ಹೆಸರಿಟ್ಟುಕೊಂಡು. ಒಪ್ಪಿಸಿಕೋ!
ನೆನಪಿದೆಯಾ... ನೀನು ನನ್ನ ಹನ್ನೆರಡನೇ ಹುಟ್ಟಿದ್ದಬ್ಬಕ್ಕೆ ಕೊಟ್ಟ ಗ್ರೀಟಿಂಗ್ ಕಾಡರ್್. ಅದಕ್ಕೆ ಪ್ರತಿಯಾಗಿ ನಾನು ನಿನಗೆ ಕೊಟ್ಟಿದ್ದು ಕೈ ತುಂಬ ಸಕ್ಕರೆ. ಆಗ ಸ್ವೀಟ್ ಅಂತ ನಮಗೆ ಗೊತ್ತಿದ್ದದ್ದು ಎರಡೇ ಕಣೆ. ಒಂದು ಸಕ್ಕರೆ ಇನ್ನೊಂದು ಬೆಲ್ಲ. ಸಾಮಾನ್ಯವಾಗಿ ಹುಟ್ಟಿದ್ದಬ್ಬಕ್ಕೆ, ಪಾಸಾಗಿದ್ದಕ್ಕೆಲ್ಲ ಸಕ್ಕರೆ ಹಂಚುತ್ತಿದ್ದದ್ದು ರೂಢಿ. ನಾನು ಕೊಟ್ಟ ಸಕ್ಕರೆಯನ್ನ ನೀನು ಯಾವ ಪರಿ ಮುಕ್ಕಿದೆ ಎಂದ್ರೆ ಪಕ್ಕದಲ್ಲಿದ್ದವರೆಲ್ಲ ಬಿದ್ದು ಬಿದ್ದು ನಕ್ಕಿದ್ರು. ನನಗೋ ಒಳಗೊಳಗೆ ಖುಷಿ. ಯಾಕೇಂದ್ರೆ ನನಗೆ ಗ್ರೀಟಿಂಗೂ ಅಂತ ಕೊಟ್ಟ ಹುಡುಗಿಯರಲ್ಲಿ ನೀನೆ ಮೊದಲನೆಯವಳು ಕಣೆ. ನನ್ನಾಣೆ ಅದು ಇಷ್ಟೂ ವರ್ಷಗಳ ತನಕ ನನ್ನ ಕಬ್ಬಿಣದ ಪೆಟ್ಟಿಗೆಯಲ್ಲೇ ಇತ್ತು. ಹೋದ ವರ್ಷ ಅಮ್ಮ ಟ್ರಂಕ್ ಕ್ಲೀನ್ ಮಾಡುತ್ತೇನೆ ಅಂತ ಹಟ ಹಿಡಿದು ಹೊರಟು ಅಲ್ಲಿದ್ದದ್ದನ್ನೆಲ್ಲ ಒಲೆಗೆ ಹಾಕಿದ್ದಳು.
ನಿಜ್ಜ ಹೇಳ್ಲ, ಅವತ್ತೆಲ್ಲ ನನಗೆ ಊಟ ಸೇರಲಿಲ್ಲ, ನಿದ್ರೆ ಹತ್ತಲಿಲ್ಲ.ಕೇವಲ ನಿನ್ನದೇ ನೆನಪು... ಮನದಲ್ಲಿ...
ಇಡೀ ಕ್ಲಾಸಿನಲ್ಲಿ ನಾನೇ ಎಲ್ಲರಿಗಿಂತ ಮೊದಲು ಅನ್ನುವುದು ನಿನಗೊಂದು ಹೆಮ್ಮೆಯಾಗಿತ್ತು ಅಲ್ವಾ. ನಿಜ ಹೇಳಬೇಕೆಂದ್ರೆ ನೀನು ನನಗಿಂತ ಜಾಣೆ. ಆದರೆ ನನಗೋಸ್ಕರ ಯಾವಾಗಲೂ ಎರಡು ಮಾಕ್ಸರ್್ ಕಡಿಮೇನೆ ತೆಗೀತಿದ್ದೆ. ನನಗೆ ಗೊತ್ತಿತ್ತು ನೀನು ನನ್ನನ್ನ ಎಷ್ಟು ಇಷ್ಟ ಪಡುತ್ತಿದ್ದೆ ಅಂತ. ಆದರೆ ನೀನು ಎಂದೂ ಹೇಳಿಕೊಂಡವಳಲ್ಲ. ನಿನ್ನ ಕಣ್ಣುಗಳು ಮಾತ್ರ ನನಗೆ ಎಲ್ಲವನ್ನೂ ಹೇಳುತ್ತಿದ್ದವು.
ಒಂದು ಸಾರಿ ಕೋಟೆ ಬಯಲಿನ ಬಾವಿ ಕಟ್ಟೆ ಹತ್ತಿರ ಮಗ್ಗಲಾಗಿದ್ದ ಉರುಟುರುಟು ಕಲ್ಲಿನ ಮೇಲೆ ನಾವಿಬ್ಬರು ಕುಳಿತು ಆಡಿದ ಮಾತು ನೆನಪಿದೆಯಾ? ರವಿ ನೀನಂದ್ರೆ ನನಗೆ ಅಷ್ಟಿಷ್ಟ ಅಂದಿದ್ದೆ. ನಾನೋ ಪೆಕರು ಪೆಕರಾಗಿ ದೇವರಾಣೆಗೂ ಅಂದಿದ್ದೆ. ಆಮೇಲೆ ಮಗ್ಗಲಾಗಿದ್ದ ಕಲ್ಲಿನ ಮೇಲಿರುವ ಬರಹಗಳನ್ನು ಓದಿದವರ ತಲೆ ನೂರು ಹೋಳಾಗುತ್ತದಂತೆ ಅಂತ ಇಬ್ಬರೂ ಟಾಪ್ ಸೀಕ್ರೆಟ್ ಥರ ಮಾತಾಡಿಕೊಂಡಿದ್ದೆವು. ತೆಗೆದು ನೋಡೋಣ ಅಂದದ್ದಕ್ಕೆ ಬೇಡಪ್ಪ ಅಂತ ಆತಂಕದಿಂದ ನನ್ನ ಕೈ ಹಿಡಿದುಕೊಂಡಿದ್ದೆ. ಅಲ್ಲ ಕಣೆ ಪೆದ್ದಿ ಅಷ್ಟು ದೊಡ್ಡ ಕಲ್ಲನ್ನು ನಾನು ಎತ್ತುವುದಿರಲಿ ಚೂರು ಸರಿಸುವುದಕ್ಕಾದರೂ ಆಗುತ್ತಿತ್ತೇನೆ?
ಇವತ್ಯಾಕೋ ನೀನು ನೆನಪಾದೆ.
ಇನ್ನು ಕೇವಲ ಹತ್ತು ದಿನಕ್ಕೆಲ್ಲ ಜಗತ್ತಿನ ಪ್ರೇಮಿಗಳಿಗೆಲ್ಲ ಹಬ್ಬ ಬರುತ್ತದೆ.
ಅವತ್ತು ನೀನು ನನ್ನ ಪಕ್ಕದಲ್ಲಿರಬೇಕಿತ್ತು ಅನಿಸುತ್ತಿದೆ ಕಣೆ.
ಎಲ್ಲಿರುವೆ ಹೇಳು?

ಸಾವಿನ ಮನೆಯಲ್ಲಿ ಕುಳಿತವನ ಸೂತಕದ ಮಾತು

ಸಾವು ಇಷ್ಟೊಂದು ಭರಿಸಲಾಗದ ದುಃಖ ತಂದಿಟ್ಟುಬಿಡುತ್ತದಾ?
ಸಾವಿನ ಮನೆಯಲ್ಲಿ ಕುಳಿತವನಿಗೆ ನಿಜಕ್ಕೂ ಹಾಗನ್ನಿಸಿಬಿಡ್ತು. ಮೊನ್ನೆಯಷ್ಟೇ ನನ್ನ ಮಾವನ ಸಾವಿಗೆ ಹೋಗಿ ಬರುವ ತನಕ ನನಗೂ ಸಾವು ಅಷ್ಟು ಕಾಡಿರಲಿಲ್ಲ. ಸಾವಿನ ಸೂತಕ ಎಬ್ಬಿಸುವ ಮೌನ, ಆರ್ತನಾದ, ಅಳು, ಯಾಕೋ ಮನಸ್ಸನ್ನು ಇನ್ನಿಲ್ಲದಂತೆ ಕಾಡಿಬಿಡ್ತು. ಇಡೀ ರಾತ್ರಿ ಜೀವವಿಲ್ಲದ ಒಂದು ದೇಹವನ್ನು ಎದುರಿಗಿಟ್ಟುಕೊಂಡು ಅವರ ಬದುಕನ್ನ ಮತ್ತೆ ಮತ್ತೆ ದುಃಖದ ಪರಿಧಿಗೆ ತಂದುಕೊಳ್ಳುವುದಿದೆಯಲ್ಲ ಅದು ನಿಜಕ್ಕೂ ಕಷ್ಟ. ಅಲ್ಲಿ ದುಃಖದ ಪಸೆ ಆರುವುದೇ ಇಲ್ಲ. ದುಃಖ ದುಃಖವನ್ನ ಇನ್ನಷ್ಟು, ಮತ್ತಷ್ಟು ಹೆಚ್ಚಿಸುವ ಪರಿಯನ್ನ ಸಾವಿನ ಮನೆಯಲ್ಲಿ ಮಾತ್ರ ನೋಡಲು ಸಾಧ್ಯವೇನೋ!. ಗೊತ್ತಿಲ್ಲದ ಹಾಗೇ ಎಂಥ ಕಲ್ಲು ಹೃದಯದವರನ್ನೂ ತನ್ನ ಒಳಕ್ಕೆ ಸೆಳೆದುಕೊಂಡು ಬಿಡುವ ತಾಕತ್ತು ಮಾತ್ರ ದುಃಖಕ್ಕಿದೆ.
ನಾನು ಚಿಕ್ಕವನಿದ್ದಾಗ ನನ್ನ ಪಕ್ಕದ ಮನೆಯಲ್ಲಿದ್ದ ಒಬ್ಬರು ತೀರಿಕೊಂಡಿದ್ದರು. ಬೆಳಿಗ್ಗೆ ನಗುನಗುತ್ತಾ ಮಾತಾಡಿಸಿಕೊಂಡು ಹೋಗಿದ್ದವನು ಸಂಜೆ ಶಾಲೆ ಮುಗಿಸಿ ಬರುವ ಹೊತ್ತಿಗೆ ವಿಷ ಕುಡಿದು ಹೆಣವಾಗಿದ್ದರು. ನನಗೆ ತುಂಬಾ ಆತ್ಮೀಯವಾಗಿದ್ದ ಅವರು ತೀರಿಕೊಂಡರು ಅಂದಾಗ ನನಗೆ ಅದನ್ನು ಭರಿಸಲಾಗಲಿಲ್ಲವೋ. ಭಯವೋ ಅಂತೂ ಯಾಕೋ ಅವರ ಹೆಣ ನೋಡಲೂ ನನ್ನ ಮನಸ್ಸು ಒಪ್ಪಲಿಲ್ಲ. ಎಲ್ಲಿ ಹೆಣ ನನ್ನ ಕಣ್ಣಿಗೆ ಕಂಡುಬಿಡುತ್ತೋ ಅಂತ ಗೋಡೆಯ ಪಕ್ಕದಲ್ಲೇ ತೆವಳಿಕೊಂಡು ಮನೆಗೆ ಹೋಗಿದ್ದೆ. ಅವರ ಬಂಧುಬಳಗದ ರೋದನ ನನ್ನಲ್ಲಿ ಸಾವಿನ ಭಗೆಗಿದ್ದ ಭಯವನ್ನು ಮತ್ತಷ್ಟು ಹೆಚ್ಚಿಸಿತ್ತೆ, ಗೊತ್ತಿಲ್ಲ. ಯಾಕೆಂದರೆ ಆ ವಯಸ್ಸು ನಿಜಕ್ಕೂ ಸಾವಿಗೆ ಹೆದರುವಂಥದೇ!
ತುಂಬಾ ಚಿಕ್ಕ ವಯಸ್ಸಿನಲ್ಲಾದರೆ ಸಾವು ಏನೇನೂ ಅನಿಸುವುದಿಲ್ಲ. ನಾನಿನ್ನೂ ಚಿಕ್ಕವನಿದ್ದಾಗಲೇ ನನ್ನ ಅಜ್ಜಿ ತೀರಿಕೊಂಡಿದ್ದರು. ಆಗ ನಾನು ನನ್ನ ಅವ್ವನ ಸೀರೆಯ ಚುಂಗು ಹಿಡಿದು ಹಸಿವು ಅಂತ ಗೋಳಾಡುತ್ತಿದ್ದದು ಇನ್ನೂ ನೆನಪು. ಆದರೆ ಬೆಳೆಯುತ್ತಾ ಹೋದಂತೆ ಸಾವು ಒಂದು ಅನೂಹ್ಯ ಭಯವನ್ನು ನಮಗೆ ಗೊತ್ತಿಲ್ಲದೇ ತುಂಬಿಬಿಡುವುದಂತೂ ನಿಜ.
ಮರಳಿ ಬರಲಾಗದ ಊರಿಗೆ ಹೋದವರು ಎಷ್ಟು ಕಾಲ ನಮ್ಮ ಮನೆ-ಮನಗಳಲ್ಲಿ ಉಳಿದಾರು? ನೋಡ ನೋಡುತ್ತಲೇ ಅವರದ್ದೊಂದು ಸಣ್ಣ ನೆನೆಪೂ ಇಲ್ಲದವರಂತೆ ನಾವು ನಮ್ಮ ಬದುಕಿನ ಜಂಝಡಗಳಲ್ಲಿ ಮುಳುಗಿ ಹೋಗುತ್ತೇವೆ. ದುಃಖ ಎದೆಯ ತಿದಿಗಳಲ್ಲಿ ಇಂಗಿಹೋಗುತ್ತದೆ.
ಆದ್ರೆ ಸಾವು?
ನಮಗೆ ಗೊತ್ತಿಲ್ಲದಂತೇ ಅದು ಇನ್ನಾರಿಗೋ ಗಾಳ ಹಾಕುತ್ತಿರುತ್ತದೆ.

Saturday, January 26, 2008

ನನ್ನ ಇಂಗ್ಲಿಷ್ ಎಕ್ಕುಡಿಸಿದವ

ನಾನು ಪಿಯುಸಿ ಮಾಡುವಾಗ ಒಬ್ಬರು ಅಧ್ಯಾಪಕರಿದ್ದರು.
ಇಂಗ್ಲಿಷ್ ತಗೋಳೋರು. ಪಾಠಾನೆ ಮಾಡ್ತಿರಲಿಲ್ಲ. ಕ್ಲಾಸಿಗೆ ಬಂದು ಐದು ನಿಮಿಷ ಕೂತಿರೋರು. ನೋಡಿ ಒಬ್ಬೊಬ್ಬರಾಗಿ ಕ್ಲಾಸಿಂದ ಎದ್ದು ಹೋಗಿ. ಪ್ರಿನ್ಸಿಪಲ್ ಕೇಳಿದ್ರೆ ಪೋರ್ಷನ್ ಕಂಪ್ಲೀಟ್ ಮಾಡಿದಾರೆ ಅಂತ ಹೇಳಿ, ಆಯ್ತ. ನಾನು ನಿಮಗೆ ಎಕ್ಸಾಮ್ನಲ್ಲಿ ಫುಲ್ ಮಾಕ್ಸರ್್ ಕೊಡಿಸ್ತೀನಿ ಅನ್ನೋರು. ನಮಗೆ ಎದೆಯ ಒಳಗೆ ಢವಢವ. ಎಲ್ಲಿ ಫೇಲ್ಗೀಲ್ ಮಾಡಿಬಿಡ್ತಾನಪ್ಪ ಈ ಕಳ್ಳ ಅನಿಸೋದು.ಎಷ್ಟೋ ಹುಡುಗರು ಕ್ಲಾಸ್ ಬಿಟ್ರೆ ಸಾಕು ಅಂಥ ಕಾಯ್ತಾ ಇದ್ದರಲ್ಲ ಅಂಥವರಿಗೆ ಖುಷಿಯೋ ಖುಷಿ. ಬಿಟ್ಟ ತಕ್ಷಣ ಸಿನೆಮಾ ಹಾಲ್ನಲ್ಲೋ, ಅಡ್ಡಾದಲ್ಲೋ ಕೂತು ಕಾಲ ಕಳೀತಿದ್ರು. ಹುಡುಗೀರು ಮಾತ್ರ ಹಿಡೀ ಶಾಪ ಹಾಕ್ತಿದ್ರು.
ಒಂದಿನ, ಸಾರ್ ನೀವು ಹಿಂಗ್ ಮಾಡಿದ್ರೆ ನಮ್ಮ ಗತಿ ಏನು? ಅಂತ ಒಬ್ಬಳು ಹುಡುಗಿ ಕೇಳಿಯೇಬಿಟ್ಲು.ತಗಳಪ್ಪ ಅವಯ್ಯ ಸಕ್ಕತ್ ಗರಮ್.
ವಿಷಯ ಏನಪ್ಪ ಅಂದ್ರೆ, ಪ್ರಿನ್ಸಿಪಲ್ಗೂ ಈವಯ್ಯನಿಗೂ ಆಗ್ತಿರಲಿಲ್ಲ. ಆ ಸೇಡನ್ನ ನಮಗೆ ಪಾಠ ಹೇಳಿಕೊಳ್ಳದೇ ಇರುವ ಮುಖಾಂತರ ತೀರಿಸಿಕೊಳ್ಳುತ್ತಿದ್ದನಂತೆ. ಉರಿಯಾಕಿಲ್ವಾ ಹೇಳಿ?
ಈಗಲೂ ನನಗೆ ಆ ಮೇಸ್ಟ್ರು ನೆನಪಿಗೆ ಬಂದ್ರೆ ಸಕ್ಕತ್ ಕೋಪ ಬರುತ್ತೆ.
ಯಾಕೆಂದ್ರೆ, ನನ್ನ ಇಂಗ್ಲಿಷ್ ಎಕ್ಕುಟ್ಟೋಗೋದಕ್ಕೆ ಕಾರಣಕರ್ತರಾದವರಲ್ಲಿ ಅವರೂ ಒಬ್ರು.

ಕತೆ: ನಿನ್ನ ಆಸೆ... ನನ್ನ ಪ್ರೀತಿ.

ಸ್ವೆಟರ್ ಅಂದ್ರೆ ಅದು ಅನಿಸುತ್ತೆ.
ಕಡುಗೆಂಪು ಬಣ್ಣಕ್ಕಿತ್ತು.
ಬಡ್ಡೀಮಗಂದು ಎಷ್ಟು ಚೆನ್ನಾಗಿತ್ತು ಅಂದ್ರೆ, ನಾನು ಈ ಮೊದಲು ಆ ಥರದ್ದನ್ನು ಎಲ್ಲೂ ನೋಡಿಯೇ ಇರಲಿಲ್ಲ. ಮನಸ್ಸು ಪಕಪಕ ಕುಣಿಯತೊಡಗಿತು. ತಗೋ ತಗೋ ಅಂತ ಪೀಡಿಸಿತು. ಆದರೆ ದುಡ್ಡೆಲ್ಲಿದೆ? ಮೊದಲು ಸ್ವೆಟರ್ ನೋಡಿ ಖುಷಿಯಾದೆ ಆಮೇಲೆ ಬೆಲೆ ನೋಡಿ ಬೇಜಾರು ಮಾಡಿಕೊಂಡೆ.
ಒಂದು ಸಂಜೆ ಸೂರ್ಯ ಇಳಿಯುವಾಗ ಅವಳಿಗೆ ಹೇಳಿದೆ. ಆ ಸ್ವೆಟರ್ ಎಷ್ಟು ಚೆನ್ನಾಗಿದೆ ಗೊತ್ತಾ?ಹೌದಾ? ಎಷ್ಟು? ಕಣ್ಣರಳಿಸಿದಳು.ಬಾ ತೋರಿಸುತ್ತೇನೆ ಅಂತ ಕೈ ಹಿಡಿದು ಕರೆದೋಯ್ದು ತೋರಿಸಿದೆ. ಅವಳ ಕಣ್ಣಿನ ತುಂಬಾನೂ ಕೆಂಪು ಸ್ವೆಟರಿನದೇ ಬಿಂಬ. ನನ್ನನ್ನೊಮ್ಮೆ ನೋಡಿ ನಿನಗದು ಒಪ್ಪುತ್ತೆ ಕಣೋ ತಗೋ ಅಂದಳು.ಆದರೆ ದುಡ್ಡೆಲ್ಲಿದೆ?ಆಸೆ ನಿಲ್ಲಲಿಲ್ಲ. ಹೇಗಾದರೂ ಮಾಡಿ ಆ ಸ್ವೆಟರ್ ತಗೊಂಡು, ಹಾಕ್ಕೊಂಡು ಅವಳ ಮುಂದೆ ನಿಂತು ಹೇಗಿದೆ ಅಂತ ಕೇಳಬೇಕು. ಅವಳು ಹತ್ತಿರ ಬಂದು ನೈಸ್ ಸೆಲೆಕ್ಷನ್ ಅನ್ನಬೇಕು. ಆಗ ನನ್ನ ಮನಸ್ಸು ಆಕಾಶದಲ್ಲಿ ಜುಮ್ಮಂತ ತೇಲಬೇಕು... ಆಸೆಗೊಂದು ಆಸೆ ಅಂದರೆ ಇದೇ ಇರಬೇಕು!
ಈ ಆಸೆಗಾಗಿ ನಾನು ಒಂದು ತಿಂಗಳು ಹಣ ಕೂಡಿಡುತ್ತಾ ಹೋದೆ. ಮಧ್ಯೆ ಮಧ್ಯೆ ಅಂಗಡಿಗೆ ಹೋಗಿ ನೋಡಿಕೊಂಡೂ ಬರುತ್ತಿದ್ದೆ, ಯಾರಾದರೂ ತೆಗೆದುಕೊಂಡು ಹೋಗಿಬಿಟ್ಟರೇನು ಅಂತ.ಆದರೆ ಅದು ನನಗೋಸ್ಕರಾನೆ ಇದ್ದಂತೆ ಅಲ್ಲೊಂದು ಕಡುಗಪ್ಪು ಹ್ಯಾಂಗರಿನಲ್ಲಿ ನೇತಾಡುತ್ತಿತ್ತು.ಕೊನೆಗೂ ಆ ದಿನ ಬಂತು.ಜೇಬಲ್ಲಿ ಹಣ ಇಟ್ಟುಕೊಂಡು, ಅವಳ ಕೈ ಹಿಡಿದುಕೊಂಡು ಓಡಿಹೋಗಿ ನೋಡಿದರೆ ಎಲ್ಲಿದೆ ಸ್ವೆಟರ್?ಯಾರೋ ಒಬ್ಬರು ಈಗ ಅರ್ಧ ಗಂಟೆ ಮೊದಲು ತೆಗೆದುಕೊಂಡು ಹೋದ್ರೂ ಅಂದ ಅಂಗಡಿಯವ.ನನ್ನ ಆಸೆ ಅಲ್ಲೇ ನೆಗೆದುಬಿತ್ತು. ಇವಳು ಅಲ್ಲೇ ಅತ್ತುಬಿಟ್ಟಳು.ಕೈ ಹಿಡಿದು ಮೆಲ್ಲಗೆ ಅದುಮಿ ಸಾಂತ್ವನ ಹೇಳಿದಳು. ನಿರಾಶೆಗೊಳ್ಳಬೇಡ ಕಣೋ? ನಾನಿದೀನಿ.
ಅದಾಗಿ ಒಂದು ತಿಂಗಳಾಗಿತ್ತು. ನಾನು ಕ್ರಮೇಣ ಆ ಸ್ವೆಟರ್ರೂ ಮರೆತೂ ಬಿಟ್ಟಿದ್ದೆ. ಆದ್ರೆ ಇವಳು ಮಾತ್ರ ನನ್ನನ್ನು ಅಷ್ಟಾಗಿ ಈಗ ಭೇಟಿ ಆಗುತ್ತಿರಲಿಲ್ಲ. ಯಾಕೆ ಅಂದ್ರೆ ಸಿಕ್ಕಾಬಟ್ಟೆ ಕೆಲಸ ಅಂದಿದ್ದಳು. ರಾತ್ರಿಯೆಲ್ಲ ನಿದಿರೆ ಎಲ್ಲ ಅಂತ ಕನವರಿಸಿದ್ದಳು.
ಇದೆಲ್ಲ ಆಗಿ ಒಂದು ತಿಂಗಳಾಗಿತ್ತು ಅನಿಸುತ್ತೆ...ಒಂದಿನ ಬಂದವಳೆ ನನ್ನ ಕೈಗೊಂದು ತಿಳಿ ನೀಲಿ ಬಣ್ಣದ ರಿಬ್ಬನ್ ಕಟ್ಟಿದ್ದ ಪುಟ್ಟ ಗಿಫ್ಟ್ ಪ್ಯಾಕ್ ಇಟ್ಟಳು.
ಏನೇ ಇದು?
ನಿನ್ನ ಆಸೆ... ನನ್ನ ಪ್ರೀತಿ.
ಒಡೆದು ನೋಡಿದೆ.
ಒಳಗೆ ಅದೇ ಕೆಂಪು ಕೆಂಪಿನ ಸ್ವೆಟರ್ ಮುದುಡಿಕೊಂಡು ಕುಳಿತಿತ್ತು.
ಎಲ್ಲಿತ್ತೇ?
ಸುಮ್ಮನೆ ನಕ್ಕಳು.

Thursday, January 24, 2008

ನನ್ನದೇನಿದ್ದರೂ ಸಣ್ಣ ಕನಸುಗಳ ಸಾಮ್ರಾಜ್ಯ

ನಾನು ಈ ಬ್ಲಾಗ್ನಲ್ಲಿ ತುಂಬಾ ಗಹನವಾದ ವಿಷಯವನ್ನ ತೆಗೆದುಕೊಂಡು ಚಿಂತಿಸುವ ಕೆಲಸ ಮಾಡೊಲ್ಲ. ಅದನ್ನೆಲ್ಲ ತುಂಬಾ ತಿಳಿದುಕೊಂಡವರು, ಬುದ್ಧಿ ಜೀವಿಗಳು ಮಾಡಿಯಾರು, ನನ್ನದೇನಿದ್ದರೂ ಕೈಗೆ ನಿಲುಕುವ ಪುಟ್ಟ ಪುಟ್ಟ ಕನಸುಗಳದೇ ಸಾಮ್ರಾಜ್ಯ. ಇಂಥ ಪುಟ್ಟ ಪುಟ್ಟ ಕನಸುಗಳೇ ನಮ್ಮನ್ನು ಬದುಕಿಡೀ ಕೈ ಹಿಡಿದು ನಡೆಸಬಲ್ಲವು.
ಹೇಳಬೇಕೆಂದರೆ, ಎಲ್ಲರ ಬದುಕೂ ಒಂದು ಪುಟ್ಟ ಕನಸಿನಿಂದಲೇ ಆರಂಭವಾಗೋದು.ಅದರಲ್ಲಿ ಮೊದಲ ಕನಸು ಅಮ್ಮ. ಈ ಜಗತ್ತಿಗೆ ಬಂದ ಮೊದಲ ಕ್ಷಣ ಅವಳಪ್ಪುಗೆ ಸಿಗುತ್ತಲ್ಲ ಅದೇ ಮಗುವಿನ ಮೊದಲ ಕನಸು. ಅಲ್ಲಿಂದ ಶುರುವಾಗುವ ಕನಸು ಕೊನೆಗೆ ಬಂದು ನಿಂತುಕೊಳ್ಳುವುದು ಬಾಯಿಗೆ ಹನಿ ನೀರು ಹಾಕಿ ಅನ್ನೋ ಕೊನೆ ಕನಸಿಗೆ.ನಿಜ್ಜ ಹೇಳ್ಲ... ಇಂಥ ಪುಟ್ಟ ಕನಸುಗಳೇ ನಮ್ಮನ್ನು ಜೀವಂತವಾಗಿಡೋದು. ಗೆಳೆಯ ಬತರ್್ಡೇಗೊಂದು ವಿಷ್ ಮಾಡಲಿ ಅಂತ ಮನಸು ಕಾತರಿಸುತ್ತದೆ... ಗಂಡ ಒಂದು ಸೀರೆ ಕೊಡಿಸಲಿ ಅನ್ನುವ ಕನಸು ಹಬ್ಬ ಇನ್ನೂ ಮೂರು ವಾರ ಇದೆ ಅನ್ನುವಾಗಲೇ ಎದ್ದು ಕುಳಿತುಬಿಡುತ್ತದೆ, ಪುಟ್ಟ ಹುಡುಗ ಮಮ್ಮಿ ನನಗೆ ಆ ಹೊಸ ಆಟದ ಕಾರ್ ಕೊಡಿಸು ಅಂತ ಕೈ ಹಿಡಿದು ಜಗ್ಗುತ್ತಾನೆ, ಈ ವ್ಯಾಲೆಂಟೈನ್ಸ್ ಡೇ ಗಾದರೂ ಅವನಿಗೆ ಐ ಲವ್ ಯು ಅಂತ ಹೇಳಲೇಬೇಕು ಎಂದು ಮನಸ್ಸು ಪತರಗುಟ್ಟುತ್ತದೆ, ಮಗ ಒಳ್ಳೆ ಮಾಕರ್್ ತರಲಿ, ಮಗಳಿಗೊಂದು ಗುಡ್ ಗುಡ್ ಅನ್ನುವಂತಹ ಹುಡುಗ ಸಿಗಲಿ..... ಒಂದೇ ಎರಡೇ ಈ ಲಿಟ್ಟಲ್ ಲಿಟ್ಟಲ್ ಕನಸುಗಳ ಸಾಮ್ರಾಜ್ಯ. ಅವುಗಳನ್ನು ಒಂದೊಂದೇ ಹೆಕ್ಕಿ ತೆಗೆದು ಜತನದಿಂದ ಈಡೇರಿಸಿಕೊಂಡು ಹೋದರೂ ಸಾಕು ಬದುಕು ಹಸನಾಗುತ್ತದೆ. ಆದರೆ ನಾವೇನು ಮಾಡುತ್ತೇವೆ ಗೊತ್ತಲ್ಲ.... ಏಕ್ದಮ್ ಬಿಲ್ ಗೇಟ್ಸ್ ಆಗಬೇಕು, ಅಂಬಾನಿ ಆಗಬೇಕು ಅಂತೆಲ್ಲ ಕನಸು ಕಾಣುತ್ತೇವೆ. ಅಂಥ ದೊಡ್ಡ ದೊಡ್ಡ ಕನಸುಗಳ ಎಡೆಯಲ್ಲಿ ಸಣ್ಣ ಸಣ್ಣ ಕನಸುಗಳು ಸದ್ದಿಲ್ಲದೆ ಸಿಕ್ಕಿ ಕಮರಿಹೋಗುವುದು ಗೊತ್ತಾಗುವುದೇ ಇಲ್ಲ.ನಮಗೆ ಅಂತ ದೊಡ್ಡ ಕನಸುಗಳು ಬೇಡ. ಸಣ್ಣವೇ ಇರಲಿ.
ಅವನ್ನೇ ಮೆಟ್ಟಿಲನ್ನಾಗಿ ಮಾಡಿಕೊಂಡು ದೊಡ್ಡದರ ಕಡೆಗೆ ಸಾಗೋಣ.
ನನ್ನ ಬ್ಲಾಗ್ ಅಂತ ಸಣ್ಣ ಸಣ್ಣ ಕನಸುಗಳ ಗೂಡು.
ಅಲ್ಲಿ ನಾನಿರುತ್ತೀನಿ.... ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನೀವಿರುತ್ತೀರಿ.
ಇನ್ನು ಸಣ್ಣ ಕನಸುಗಳಿಗೆ ಬರವಿಲ್ಲ ಬಿಡಿ.

Monday, January 21, 2008

ಅವಳ ಎರಡು ಪ್ರಶ್ನೆಗೆ ಉತ್ತರ

ಅವಳು ನಿಜಕ್ಕೂ ಅಳುತ್ತಿದ್ದಳು.
ನನ್ನ ಎದುರಿಗೆ ಅವಳು....ಅವಳ ಎದುರಿಗೆ ನಾನು ಕುಳಿತಿದ್ದೆ.
ಇಬ್ಬರೂ ಎಷ್ಟು ಹೊತ್ತು ಕುಳಿತಿದ್ದೆವೋ ಗೊತ್ತಿಲ್ಲ. ಆಡಿದ್ದು ಮಾತ್ರ ಎರಡೇ ಮಾತು. ಅದೂ ಅವಳೇ ಆಡಿದ್ದು.
ಒಂದು.
ನೀನು ನನ್ನನ್ನು ಕೈ ಬಿಡೊಲ್ಲ ತಾನೇ?
ಇನ್ನೊಂದು.
ನಾನು ಸತ್ತರೆ ನೀನೂ ಸಾಯ್ತೀಯ?
ಎರಡಕ್ಕೂ ನನ್ನಲ್ಲಿ ಉತ್ತರ ಇಲ್ಲವೆಂದೇನಲ್ಲ, ಆದರೆ ಅವಳಿಗೆ ಹೇಗೆ ಹೇಳಬೇಕೋ ಎನ್ನುವುದು ತಿಳಿಯದೇ, ಪೆಕರುಪೆಕರಾಗಿ ಪ್ರಶ್ನೆ ಕೇಳ್ತೀಯಲ್ಲೇ. ತಲೆಗಿಲೆ ಕೆಟ್ಟಿದೆಯಾ ನಿಂಗೆ ಅಂತ ಗದರಿದ್ದೆ. ಆದರೆ ಅವಳ ಮುಸಿಮುಸಿ ಅಳು ಮಾತ್ರ ನಿಲ್ಲಲಿಲ್ಲ. ಅವೆರಡು ಪ್ರಶ್ನೆಯನ್ನೇ ರಿವೈಂಡ್ ಮಾಡಿ ಮಾಡಿ ನೂರು ಸಲ ಕೇಳಿದ್ದಳು.
ಇಷ್ಟಕ್ಕೂ ಆದದ್ದಾದರೂ ಏನು?
ಇವತ್ತು ಅವಳ birthday. ನನಗೆ ಆಫೀಸಿನಲ್ಲಿ ಮಣ ಕೆಲಸ. ರಜೆ ಹಾಕು ಇಬ್ಬರೂ ನಂದಿಬೆಟ್ಟಕ್ಕೆ ಹೋಗೋಣ ಅಂತ application ಹಾಕಿದ್ದಳು; ವಾರದಿಂದಲೇ! ನಾನೇನಾದರೂ ರಜೆ ಕೇಳಿದ್ದರೆ ಪೆಡಂಭೂತದಂತಿರುವ ಬಾಸ್ ಬೋಳೀಮಗನೆ ಗೆಟ್ಲಾಸ್ಟ್ ಅಂತ ಉಗಿದು ಅಟ್ಟುತ್ತಿದ್ದದ್ದಂತೂ ಗ್ಯಾರಂಟಿ. ಈ ಗಡಿಬಿಡಿಯಲ್ಲಿ ಅವಳಿಗೊಂದೂ ವಿಷ್ಷೂ ಮಾಡದೆ ಕುಳಿತುಬಿಟ್ಟಿದ್ದೆ. ಮಧ್ಯೆ ಒಮ್ಮೆ ಫೋನ್ ಮಾಡಿದ್ದಳು. ನನಗೆ ಇವತ್ತೇ ನನ್ನ ಪ್ರಾಜೆಕ್ಟ್ ಕಂಪ್ಲೀಟ್ ಮಾಡಬೇಕಿತ್ತು. ಇನ್ನು ಇವಳೊಟ್ಟಿಗೆ ಮಾತಾಡುವುದೆಲ್ಲಿ?ಸಂಜೆ ಸಿಗೋಣ ಕಣೆ ಅಂತ ಎಸ್ಸೆಮ್ಮೆಸ್ ಮಾಡಿದ್ದೆ. ಈಗ ನೋಡಿದರೆ ಎರಡು ಪ್ರಶ್ನೆ ಹಿಡಿದು ಧುಮ್ಮಂತ ಕುಳಿತಿದ್ದಾಳೆ.ನಿಮಗೆ ಗೊತ್ತಿಲ್ಲ, ನಾನು ಅವಳನ್ನು ಪ್ರಾಣ ಹೋಗುವಷ್ಟು ಪ್ರೀತಿಸುತ್ತೇನೆ. ಅವಳೂ ನನ್ನನ್ನು ಪ್ರೀತಿಸುತ್ತಾಳೆ. ಆದ್ರೆ ಎಷ್ಟು ಅಂತ ಮಾತ್ರ ಗೊತ್ತಿಲ್ಲ.

***
ಯಾಕೋ ಅವಳು ಅಳು ನಿಲ್ಲಿಸುವುದಿಲ್ಲ ಅನಿಸಿತು. ಅವಳ ಗಲ್ಲ ಹಿಡಿದು ನಿನ್ನ ಎರಡೂ ಪ್ರಶ್ನೆಗೆ ಉತ್ತರ ಹೇಳ್ತೀನಿ ಕೇಳು ಕಣೆ ಅಂದೆ.
ತಿರುಗಿ ಕುಳಿತಳು.
ಒಂದು.
ಬಿಡುವುದಕ್ಕೆ ನಾನು ನಿನ್ನ ಕೈ ಹಿಡಿದುಕೊಂಡಿದ್ದರೇ ತಾನೆ? ನೀನು ನನ್ನ ಕೈಲಿಲ್ಲ ಕಣೆ, ಹೃದಯದಲ್ಲಿದೀಯ.
ಎರಡು.
ನಿನಗಿಂತ ಮೊದಲೇ ನಾನು ಸಾಯುತ್ತೇನೆ. ಯಾಕೆಂದರೆ ಡಾಕ್ಟರು ನನಗೆ ಇನ್ನು ಎರಡು ತಿಂಗಳು ಮಾತ್ರ ಬದುಕುತ್ತೀಯ ಅಂತ ಹೇಳಿದ್ದಾರೆ.
ಬಿಕಾಸ್ ಆಫ್ ಬ್ಲಡ್ ಕ್ಯಾನ್ಸರ್.
ಹಾಗಂತ ಅವಳ ಕೈ ಹಿಡಿದುಕೊಂಡೆ.
ಅವಳ ಕಣ್ಣಲ್ಲಿದ್ದದ್ದು ಎಂಥ ಭಾವವೋ ಆ ಕ್ಷಣಕ್ಕೆ ನನಗೆ ಗೊತ್ತಾಗಲಿಲ್ಲ.

ಅವನ "ಅವಳು" ಮಾತ್ರ ನನಗೆ ಇನ್ನೂ ಮಿಲಿಯನ್ ಡಾಲರ್ ಪ್ರಶ್ನೆಯೇ?

ಮೊನ್ನೆಯಷ್ಟೇ ಹಾಸನಕ್ಕೆ ಹೋಗಿದ್ದೆ.

ಅಲ್ಲಿನ ಬಸ್ ಸ್ಟಾಂಡಿನಲ್ಲಿ ರಾತ್ರಿ ಎರಡಕ್ಕೆ ಇಳಿದವನಿಗೆ ಯಾಕೋ ಕ್ಷಣ ಕೂರಬೇಕೆನಿಸಿತು. ಲಗ್ಗೇಜನ್ನು ಪಕ್ಕಕ್ಕೆ ಒಗೆದು ಅಲ್ಲೇ ಒಂದು ಕಲ್ಲು ಬೆಂಚಿನ ಮೇಲೆ ಕುಳಿತೆ. ಕ್ಷಣ ಕೂಡ ಆಗಿಲ್ಲ... ಎಲ್ಲಿ ಇಲ್ಲೇ ನಿದ್ರೆ ಮಾಡಿಬಿಡುತ್ತೇನೋ ಅನ್ನುವ ಭಯ ಕಾಡತೊಡಗಿತು. ಕಣ್ಣುಗಳಲ್ಲಿ ಜೋಂಪು ಬೇರೆ. ಸರಿಯಾಗಿ ನಿದ್ರೆ ಮಾಡಿಯೇ ಮೂರು ದಿನವಾಗಿತ್ತು. ಇನ್ನು ಕೂರುವುದು ಸರಿಯಿಲ್ಲ ಅಂತ ಎದ್ದು ಆಟೋ ಹಿಡಿಯೋಣ ಅಂತ ಹೊರಟೆ.

"ಅಷ್ಟರಲ್ಲಿ ಸಾರ್ ನಿಮ್ಮ ಲಗ್ಗೇಜ್ ತಗೊಳ್ಲಾ?" ಅಂತ ಯಾರೋ ಕೇಳಿದಂಗಾಯ್ತು. ತಿರುಗಿ ನೋಡಿದರೆ... ಇನ್ನೂ ಮೂವತ್ತರ ಆಸುಪಾಸಿನ ಯುವಕ. ಬಟ್ಟೆ ಎಲ್ಲಾ ಕೊಳಕಾಗಿದ್ದವು. "ಏನು ಬೇಡಪ್ಪ... ನಾನೇ ತೆಗೆದುಕೊಂಡು ಹೋಗ್ತೇನೆ!"ಅಂದೆ. ಆದರೆ ಅವನು ನನ್ನನ್ನು ಬಿಡುವ ಹಾಗೆ ಕಾಣಲಿಲ್ಲ. "ಸಾರ್ ಹಾಗನ್ನಬೇಡಿ. ನೀವು ಕೊಡುವ ಐದೋ ಹತ್ತೋ ರುಪಾಯಿಯಿಂದ ನನ್ನ ಹೊಟ್ಟೆ ಪಾಡು ತುಂಬಬೇಕು. ನಿಮ್ಮ ಕೈಯಲ್ಲಿ ಇದನ್ನು ಹೊರಲು ಆಗೊಲ್ಲ ಅಂತಲ್ಲ. ಆದ್ರೆ ನಾವೂ ಬದುಕಬೇಕಲ್ಲ. ತಗಳ್ತೀನ್ ಬಿಡಿ ಸಾರ್..." ಅಂದವನೆ ನನ್ನ ಮಾತಿಗೂ ಕಾಯದೆ ಲಗ್ಗೇಜನ್ನ ತೆಗೆದುಕೊಂಡು ಮುಂದೆ ಮುಂದೆ ನಡೆದ.

ನನ್ನ ಮನದಲ್ಲಿ ಎಂಥವನೋ ಏನೋ ಅನ್ನುವ ಅಳುಕು ಬೇರೆ!ಇನ್ನು ಮಾತಾಡಿ ಪ್ರಯೋಜನವಿಲ್ಲ ಅನಿಸಿತು. ಜೊತೆಗೆ ಅವನು ಹೇಳಿದ ಮಾತೂ ಸತ್ಯವೆನಿಸಿತು.ನೂರು-ಸಾವಿರ ರುಪಾಯಿಗಳನ್ನ ಎಲ್ಲೋ ಒಮ್ಮೊಮ್ಮೆ ಅನವಶ್ಯಕವಾಗಿ ಕಳೆದುಬಿಡುತ್ತೇವೆ. ಇಲ್ಲಿ ನಿಮ್ಮ ಬ್ಯಾಗ್ ತೆಗೆದುಕೊಳ್ಳುತ್ತೇನೆ ಅನ್ನುವ ವ್ಯಕ್ತಿಗೆ ಹತ್ತು ರುಪಾಯಿ ಕೊಡಲು ಹಿಂದೆ ಮುಂದೆ ನೋಡುತ್ತೇವಲ್ಲ ಇದು ಸರಿಯಿಲ್ಲ ಅನಿಸಿತು.ಲಗ್ಗೇಜನ್ನ ರಸ್ತೆ ಪಕ್ಕ ಇಟ್ಟು ನಿಂತವನ ಕಣ್ಣಲ್ಲಿ ಎಂಥದೋ ನಿಭರ್ಾವುಕತೆಯಿತ್ತು."ಯಾವೂರು?" ಕೇಳಿದೆ."ಇದೇ ಊರು ಸಾರ್. ಹಾಸನವೇ!" "ಯಾಕೆ ಎಲ್ಲೂ ಕೆಲಸಕ್ಕೆ ಟ್ರೈ ಮಾಡಲಿಲ್ವಾ?""ನಮ್ಮಂತೋರಿಗೆ ಎಲ್ಲಿ ಕೆಲಸ ಕೊಡ್ತಾರೆ ಬಿಡಿ . ಅದೂ ಅಲ್ದೆ ನಾನು ಓದಲೂ ಇಲ್ಲ. ಅಪ್ಪ ಸಿಕ್ಕಾಬಟ್ಟೆ ಕುಡೀತಾನೆ. ಅಮ್ಮಾನು ಅಲ್ಲಿ ಇಲ್ಲಿ ಕೂಲಿ ಮಾಡ್ತಾಳೆ. ಹೊಟ್ಟೆ ಪಾಡು ಹೇಗೋ ನಡೀತಾ ಇದೆ. ಇವತ್ತು ಈ ಊರು ನಾಳೆ ಇನ್ಯಾವ ಊರೋ? ಆದ್ರೆ ಅವಳು ಮಾತ್ರ ಹಾಗೆ ಕೈ ಕೊಟ್ಟುಬಿಟ್ಟು ಹೋಗಬಾರದಿತ್ತು? ............ನೀವು ಬೆಂಗಳೂರವ್ರ...?" ನಾನು ಹೂಂ ಅನ್ನುವ ಮೊದಲೇ "ನನಗೂ ಬೆಂಗಳೂರಿಗೆ ಬರಬೇಕು ಅನ್ನೋ ಆಸೆ ಇದೆ, ಆದರೆ ಅಲ್ಲಿ ಬಂದು ಏನು ಮಾಡಲಿ ಅನ್ನೋದೇ ಗೊತ್ತಿಲ್ಲ. ಅದೂ ಅಲ್ದೆ ಅಲ್ಲಿ ನಮ್ಮಂತೋರಿಗೆಲ್ಲ ಜಾಗ ಇದೆಯಾ? ನೀವು ಏನು ಕೆಲ್ಸ ಮಾಡ್ತೀರಾ ? ಅಂದ.

"ನಾನು ಪತ್ರಕರ್ತ."

"ಒಳ್ಳೆ ಸಂಬಳ ಇರಬೇಕು ಅಲ್ವಾ ಬಾಸ್?" ಅಂದ.

ನಾನು ಸುಮ್ಮನೆ ನಕ್ಕೆ.

ಯಾಕೋ ಅವಳು ಅಂದನಲ್ಲ ಅದೇನೆಂದು ಕೇಳಬೇಕೆನಿಸಿತು. ಮನಸ್ಸು ಕೆಲವೊಮ್ಮೆ ಹೆಣ್ಣಿನ ಬಗ್ಗೆ ಇನ್ನಿಲ್ಲದ ಕುತೂಹಲ ಹುಟ್ಟಿಸಿಕೊಂಡು ಬಿಡುತ್ತೆ ಅಲ್ವ!

"ಅವಳೂ ಅಂದಲ್ಲ ಯಾರದು?" "ನನ್ನ ಹೆಂಡ್ತೀ? ಚೆನ್ನಾಗೆ ಇದ್ಲು ಬಾಸ್. ನನ್ನನ್ನ ಕಂಡರೆ ಅವಳಿಗೆ ಸಕ್ಕತ್ ಪ್ರೀತೀನೂ ಇತ್ತು. ಆದ್ರೆ ಒಂದಿನ ಹೇಳದೆ ಕೇಳದೆ ಯಾರದೋ ಜೊತೆ ಹೊರಟೋದ್ಲು ಸಾರ್. ಎಲ್ಲಿಗೋದ್ಲು, ಬದುಕಿದಾಳಾ ಸತ್ತಿದಾಳಾ ಅಂತಾನೂ ಗೊತ್ತಿಲ್ಲ"."ಓಹೋ" ಅಂದವನೆ "ಯಾಕೆ ನೀನು ಚೆನ್ನಾಗಿ ನೋಡಕೊಳ್ತಾ ಇರಲಿಲ್ವಾ?" ಅಂದೆ."ಸಾರ್ ಚಿನ್ನ ಚಿನ್ನ ನೋಡ್ಕೊಳೋ ಅಂಗೆ ನೋಡ್ಕತಾ ಇದ್ದೆ. ಎಷ್ಟೋ ಸಾರಿ ನಾನು ಅವಳಿಗೆಂದೇ ಹೆಚ್ಚು ಹೊತ್ತು ಕೆಲಸ ಮಾಡಿ ಅವಳಿಗೇನೇನು ಬೇಕೋ ಎಲ್ಲಾನು ತೆಗೊಂಡು ಹೋಗ್ತಿದ್ದೆ. ಆದ್ರೂ ಹೋಗಬಿಟ್ಲು. ಮನಸ್ಸು ಯಾಕೋ ಅವಳಿಲ್ದೆ....... ಪತರಗುಟ್ಟತಾ ಇದೆ..."

ಯಾಕೋ ಇನ್ನು ಹೆಚ್ಚಿಗೆ ಮಾತಾಡುವುದು ಬೇಡ ಅನಿಸಿತು.ಅವನ ಕೈಗೆ ಇಪ್ಪತ್ತು ರುಪಾಯಿ ಇಟ್ಟೆ."ಬಾಸ್ ಇಲ್ಲಿಂದಿಲ್ಗೆ ಇಷ್ಟೊಂದು ಯಾಕೆ. ಬೇಡ ತಗೊಳಿ. ಐದು ರುಪಾಯಿ ಕೊಡಿ ಸಾಕು" ಅಂತ ಹಿಂದಿರುಗಿಸಲು ಬಂದ. "ನಾನು ಪರವಾಗಿಲ್ಲ ಇಟ್ಕೋ" ಅಂದಿದ್ದಕ್ಕೆ"ಇವತ್ತು ನಿಮ್ಮ ಹೆಸರು ಹೇಳ್ಕಂಡು ಒಂದು ಬಿರಿಯಾನಿ ತಿಂದುಬಿಡ್ತೀನಿ ಬಿಡಿ" ಅಂತ ನಕ್ಕ.

ನಾನೂ ನಕ್ಕೆ. ಅಷ್ಟರಲ್ಲಿ ಆಟೋ ಬಂದಿದ್ದರಿಂದ ತಕ್ಷಣ ಆಟೋ ಹತ್ತಿ ಕುಳಿತೆ.

ಅವನು ಬಿರಿಯಾನಿ ತಿಂದನಾ... ಇಲ್ಲವಾ ಗೊತ್ತಿಲ್ಲ.

ಆದರೆ ಅವನ "ಅವಳು" ಮಾತ್ರ ನನಗೆ ಇನ್ನೂ ಮಿಲಿಯನ್ ಡಾಲರ್ ಪ್ರಶ್ನೆಯೇ?

Sunday, January 20, 2008

ನಿಮ್ಮ ಮೊಬೈಲ್ನಲ್ಲಿ ಐಸಿಇ ಅನ್ನೋ ಹೆಸರಿರಲಿ..

ನೀವು ಮೊಬೈಲ್ ಬಳಸ್ತಾ ಇದೀರಾ?
ಹಾಗಾದ್ರೆ ಒಂದು ವಿಷಯ ನೀವು ತಿಳಿದುಕೊಳ್ಳಲೇ ಬೇಕು.ಸಾಮಾನ್ಯವಾಗಿ ಹೊರಗಡೆ ಹೋದ ಸಮಯದಲ್ಲಿ ಯಾರಿಗಾದ್ರೂ ಏನಾದ್ರೂ ಹೆಚ್ಚು ಕಡಿಮೆ ಆಗಿ ಅವರ ಸಂಬಂಧಪಟ್ಟವರಿಗೆ ಸುದ್ದಿ ಮುಟ್ಟಿಸಬೇಕೆಂದಾಗ ಆ ವ್ಯಕ್ತಿಯ ಪರ್ಸನಲ್ ಡೀಟೈಲ್ಸ್ ಸಹಕಾರಿಯಾಗುತ್ತೆ ಅಲ್ವ!. ಅದರಲ್ಲಿ ಬಹು ಮುಖ್ಯವಾದದ್ದು ಫೋನ್ ನಂಬರ್ಸ್ ಅನ್ನೋದು ನಿಮಗೆ ಗೊತ್ತಿದೆ. ಆದರೆ ಈಗೇನಾಗಿದೆ ಅಂದರೆ ಮೊಬೈಲ್ ಬಂದ ಮೇಲೆ ನೂರಾರು ಹೆಸರನ್ನ ಫೀಡ್ ಮಾಡಿ ಇಟ್ಟಿರುತ್ತೇವೆ. ಅದರಲ್ಲಿರೋ ನಂಬರ್ರುಗಳಲ್ಲಿ ಯಾರಿಗೆ ಮಾಡಿದ್ರೆ ಬೇಗ ಸುದ್ದಿ ತಲುಪುತ್ತೆ ಅನ್ನೋದು ತುಂಬಾ ಕಷ್ಟ. ಆಪತ್ಕಾಲದಲ್ಲಿ ಅಷ್ಟೆಲ್ಲ ನಂಬರಿಗೂ ಟ್ರೈ ಮಾಡ್ತಾ ಕೂರುವುದಕ್ಕಾಗುವುದಿಲ್ಲವಲ್ಲ, ಅದಕ್ಕೆ ಒಂದು ಸಿಂಪಲ್ ಮೆಥೆಡ್ ಫಾಲೋ ಮಾಡಿ.ಏನಪ್ಪ ಅಂದ್ರೆ, ನಿಮ್ಮ ಮೊಬೈಲ್ನಲ್ಲಿ ಐಸಿಇ (Incase of emergency) ಅನ್ನೋ ಹೆಸರಲ್ಲಿ ನಿಮಗೆ ಆಪ್ತರಾಗಿರುವವರ ಹೆಸರನ್ನು ಸೇವ್ ಮಾಡಿ ಇಡಿ. ಏನಾದ್ರೂ ತೊಂದರೆ ಆದಾಗ( ಆಗದೇ ಇರಲಿ ಅನ್ನೋದು ನಮ್ಮ ಹಾರೈಕೆ) ತಕ್ಷಣಕ್ಕೆ ನಾವಿರುವ ಸ್ಥಿತಿಯ ಬಗ್ಗೆ ಸಂಬಂಧಪಟ್ಟವರಿಗೆ ತಿಳಿಸಲು ಸಹಾಯವಾಗುತ್ತೆ. ತುಂಬಾ ಜನ ಇದ್ದಾಗ ಐಸಿಯು 1, 2, 3 ಅಂತ ಬೇಕಾದ್ರೆ ಸೇವ್ ಮಾಡ್ತಾ ಹೋಗಿ. ನೋ ಪ್ರಾಬ್ಲಮ್. ಮನೆಯಿಂದ ಆಚೆ ಹೋದ್ರೆ ಮತ್ತೆ ಮನೆ ತಲಪುತ್ತೀವಿ ಅನ್ನೋ ಗ್ಯಾರಂಟಿಯೇ ಇಲ್ಲ ಈಗ. ಇಂಥ ಸಂದರ್ಭದಲ್ಲಿ ಐಸಿಇ ನಂಬರ್ರು ಖಂಡಿತಾ ನಮ್ಮ ನೆರವಿಗೆ ಬರುತ್ತೆ.

ನನಗ್ಯಾಕೋ ಹೌದಲ್ಲ ಅನಿಸ್ತು.

ನಿಮಗೂ ಹಾಗನ್ನಿಸಿದರೆ ನಿಮ್ಮ ಮೊಬೈಲ್ನಲ್ಲೊಂದು ಐಸಿಇ ಹೆಸರಿರಲಿ...

ಹೂಗಳು ಬೆಳಕು ಕಾಣುವ ಮೊದಲೇ ಹೋಗಿಬಿಟ್ರಲ್ಲ ಸಾರ್

ಹೇಗೆ ಹೇಳಬೇಕೋ ಗೊತ್ತಾಗುತ್ತಿಲ್ಲ.

ತೇಜಸ್ವಿ ಹೋದ್ರು, ರಾಮ್ದಾಸ್ ಹೋದ್ರು. ಅವರು ಬಿಟ್ಟು ಹೋದ ದುಃಖದ ಛಾಯೆ ಇನ್ನೂ ಮನದಲ್ಲಿ ಆರಿಲ್ಲ. ಆಗಲೇ ನೀವೂ ಅವರನ್ನು ಹಿಂಬಾಲಿಸಿದವರಂತೆೆ ಸುಮ್ಮನೆ ಎದ್ದು ಹೊರಟುಬಿಟ್ಟಿದೀರಿ. ಯಾಕೆ ಸರ್, ನಿಮಗೇನು ಅಷ್ಟೊಂದು ಅವಸರವಿತ್ತೆ? ಅಥವಾ ಈ ಜಗತ್ತೇ ಏನಾದರೂ ಬೇಸರವಾಯ್ತೇ?

ನಿಜ ಹೇಳ್ಲ ಸರ್, ನಾನು ನಿಮ್ಮನ್ನು ಮೊದಲ ಬಾರಿ ನೋಡಿದ್ದು ನವಕನರ್ಾಟಕದಲ್ಲಿ. ಆಗಿನ್ನೂ ನಾನು ಪತ್ರ್ರಿಕೋದ್ಯಮದ ಖದರಿಗೆ ಹೊಂದಿಕೊಳ್ಳುತ್ತಿದ.್ದೆ ಹೊಸತು ಪತ್ರಿಕೆ ಆಗ ತಾನೆ ಶುರುವಾಗಿತ್ತು. ಅದರಲ್ಲಿ ನನ್ನ ಮೊದಲ ಕವನ ಪ್ರಕಟವಾದಾಗ ಎಂಥ ಖುಷಿಯಾಗಿತ್ತು ಗೊತ್ತಾ? ಅದನ್ನು ಸೆಲೆಕ್ಟ್ ಮಾಡಿದ್ದು ನೀವೇ ಅನ್ನೋದು ನನ್ನ ಅನಿಸಿಕೆ! ಆಮೇಲೆ ಎಷ್ಟೊಂದು ಬಾರಿ ಸಿಕ್ಕಿದಿರಿ. ಸಿಕ್ಕಾಗಲೆಲ್ಲ ಪ್ರೀತಿಯಿಂದ ಮಾತನಾಡಿಸುತ್ತಿದ್ರಿ. ಚೆನ್ನಾಗಿ ಓದಿ ಅಂತಿದ್ರಿ. ಬರೀರಿ ಅಂತಿದ್ರಿ. ಇನ್ನಾರು ಸಾರ್ ನಮಗೆ ಅಂತ ಮಾರ್ಗದರ್ಶನ ಕೊಡೋರು? ಪ್ರೀತಿಯಿಂದ ಮಾತನಾಡಿಸೋರು?ಅವತ್ತು ನೀವು ನನ್ನನ್ನು ನವಕನರ್ಾಟಕದ ಪಡಸಾಲೆಯಲ್ಲಿ ಕೂರಿಸಿಕೊಂಡು ನನ್ನ ನೂರಾರು ಕವನಗಳನ್ನು ತಿರುವಿ ಹಾಕುತ್ತಿದ್ದರೆ ನಾನು ನಿಜಕ್ಕೂ ಎಕ್ಸೈಟ್ ಆಗಿಹೋಗಿದ್ದೆ. ನಾನೊಂದು ಕವನ ಸಂಕಲನ ತರಬೇಕೆಂದಿದ್ದೇನೆ. ಬೆಳಕು ಕಾಣದ ಹೂಗಳು ಅಂತ. ಅದಕ್ಕೆ ನೀವೇ ಮುನ್ನುಡಿ ಬರೆಯಬೇಕು. ಪ್ಲೀಸ್ ಸರ್ ಇಲ್ಲ ಅನ್ನಬೇಡಿ ಅಂದಿದ್ದೆ. ನೀವೂ ಆಯ್ತು. ಬರಕೊಡ್ತೀನಿ, ಆದರೆ ಅಜರ್ೆಂಟ್ ಮಾಡಬೇಡಿ ಅಂತ ತೆಗೆದುಕೊಂಡು ಹೋದ್ರಿ. ಹೋದವ್ರು ಮುನ್ನುಡಿ ಕೊಡೋ ಅಷ್ಟರಲ್ಲಿ ಬರೋಬ್ಬರಿ ಎರಡು ವರ್ಷ ಆಗೋಗಿತ್ತು. ಆದ್ರೆ ಒಂದಿನ ಇದ್ದಕ್ಕಿದ್ದಂತೆ ಅದೇ ಥಣ್ಣನೆ ನಡಿಗೆಯಲ್ಲಿ ಬಂದು ನನ್ನ ಕೈಯಲ್ಲಿ ಮುನ್ನುಡಿ ಇಟ್ರಿ. ನಾನು ಅದನ್ನು ಪರಮ ಕುತೂಹಲದಿಂದ ಏನು ಬರೆದಿರಬಹುದೆಂದು ಓದಿದರೆಅದರಲ್ಲಿದ್ದದ್ದು ನಿಮ್ಮ ನಿಷ್ಕಲ್ಮಶ ಪ್ರೀತಿ ಮತ್ತು ಮೆಚ್ಚುಗೆ ಮಾತ್ರ.ಅದಿನ್ನೂ ನನ್ನಲ್ಲಿ ಹಾಗೇ ಇದೆ. ಅದು ಬರೆದುಕೊಟ್ಟೂ ನೀವು ಎರಡು ವರ್ಷದ ಮೇಲಾಗಿಹೋಯಿತು. ಬೆಳಕು ಕಾಣದ ಹೂಗಳು ಇನ್ನೂ ಬೆಳಕು ಕಂಡಿಲ್ಲ. ಇತ್ತೀಚೆಗೇ ಗೆಳೆಯರ ಹತ್ತಿರ ರವಿ ಅಜ್ಜೀಪುರಗೆ ಮುನ್ನುಡಿ ಬರೆದುಕೊಟ್ಟಿದ್ದೆ. ಅವರ ಕವನ ಸಂಕಲನ ಹೊರಬಂತೋ ಇಲ್ಲವೋ ಗೊತ್ತಾಗಲೇ ಇಲ್ಲ, ಅಂದಿರಂತೆ. ಹಾಗೇ ನಾನು ಬರೆದುಕೊಟ್ಟಿದ್ದು ಅವರಿಗೆ ಇಷ್ಟ ಆಯ್ತೋ ಇಲ್ಲವೋ ಅಂತಲೂ ಅನುಮಾನ ಪಟ್ಟರಂತೆ. ಇಷ್ಟ ಆಗದೇ ಇರೋದಿಕ್ಕೆ ಅದೇನು ಯಾವುದೋ ಒಂದು ವಸ್ತುವೆ ಶ್ರೀನಿವಾಸ್ ಸರ್. ನಿಜ ಹೇಳ್ಲ ಆ ಮುನ್ನುಡಿಯಲ್ಲಿ ್ಲ ನಿಮ್ಮ ಬೆಚ್ಚನೆ ಪ್ರೀತಿ ಬಿಟ್ಟರೆ ಬೇರೇನೂ ಇಲ್ಲ. ನಿಮ್ಮ ಪ್ರೀತಿ ದೊಡ್ಡದು. ನಿಮ್ಮ ಬಗ್ಗೆ ನಮಗಿದ್ದ ಗೌರವವೂ ದೊಡ್ಡದು. ಅವತ್ತು ಬೆೆಳಿಗ್ಗೆ ಶರತ್ ಕಲ್ಕೋಡ್ ಚಿ. ಶ್ರೀನಿವಾಸ್ ರಾಜ್ ಹೋಗಿಬಿಟ್ಟರು ಅಂದಾಗ ಕ್ಷಣ ನನ್ನ ಮನಸ್ಸು ಒಪ್ಪಿಕೊಳ್ಳಲಿಕ್ಕೆ ರೆಡಿ ಇರಲಿಲ್ಲ.ಸರ್, ಮನಸ್ಸು ನೀವಿಲ್ಲದೆ ಬಿಕೋ ಅನ್ತಿದೆ. ಆದ್ರೆ ನೀವು ಬರೆದುಕೊಟ್ಟ ಮುನ್ನುಡಿ ಮಾತ್ರ ನನ್ನ ಅಂಗೈಯಲ್ಲಿ ಹಾಗೇ ಉಳಿದಿದೆ. ಅದೇ ಬೆಚ್ಚನೆ ಪ್ರೀತಿ ತುಂಬಿಕೊಂಡು.ಬೆಳಕು ಕಾಣದ ಹೂಗಳು ಪುಸ್ತಕದ ಮೊದಲ ಪ್ರತಿ ನಿಮಗೇ ಕೊಡಬೇಕು ಅನ್ನೋ ಆಸೆ ಇತ್ತು.ಈಗ ಆ ಆಸೆಯೋ ಕಮರಿಹೋಗಿದೆ. ಇನ್ನಾರಿಗೆ ಕೊಡಲಿ?

Friday, January 18, 2008

ಇನ್ನು ಈ ನದಿ ನಿಲ್ಲುವುದಿಲ್ಲ..

ಹಾಯ್ ಫ್ರೆಂಡ್ಸ

ನದಿ ಬಗ್ಗೆ ನಿಮಗೆಲ್ಲ ಖಂಡಿತಾ ಗೊತ್ತಿದೆ. ಎಲ್ಲೋ ಇವತ್ತಿನ ಮಕ್ಕಳಿಗೆ ನದಿ ಅನ್ನೋದು ಹೇಗಿರುತ್ತೆ ಅಂದ್ರೆ ಮ್ಯಾಪ್ನಲ್ಲಿ ತೋರಿಸಿ "ದಿಸ್ ಈಸ್ ರಿವರ್" ಅಂತ ಹೇಳಬಿಡ್ತಾವೆ. ಅವಕ್ಕೆ ನದಿಯ ಜಾಯಮಾನ ಗೊತ್ತಿಲ್ಲ. ಸೆಳಹು ಗೊತ್ತಿಲ್ಲ. ಪರಿಧಿ ಗೊತ್ತಿಲ್ಲ. ಅದರ ಉದ್ದ ಅಗಲವೂ ಗೊತ್ತಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಅದರ ಪ್ರೀತಿ ಗೊತ್ತಿಲ್ಲ.
ನಿಜ ಹೇಳಬೇಕು ಅಂದ್ರೆ, ಅದರ ತೆಕ್ಕೆಗೆ ಏನು ಸಿಗುತ್ತೋ ಅದನ್ನೆಲ್ಲ ತೆಗೆದುಕೊಂಡು ಹೋಗೋದು ನದಿಯ ಜಾಯಮಾನ. ಅದಕ್ಕೆ ಯಾರು ಹೆಚ್ಚೂ ಅಲ್ಲ ಕಡಿಮೆಯೂ ಅಲ್ಲ. ದಾಹ ಅಂತ ಬಗ್ಗಿದವ ನೀರು ಸಿಕ್ಕ ಖುಷಿಯಲ್ಲಿ ಸ್ವಲ್ಪ ಯಾಮಾರಿದರೂ ನದಿ ಬಿಡೊಲ್ಲ ಅನ್ನೋದು ನಿಮಗೆ ಗೊತ್ತಿದೆ. ಬದುಕೂ ಹಾಗೆ. ನದಿಯ ಥರ. ಹರಿದದ್ದೇ ದಾರಿ. ನಾವು ಅದರ ಸೆಳೆತಕ್ಕೆ ಒಳಗೊಳ್ಳಬೇಕೇ ವಿನಃ ಅದು ನಮ್ಮ ತನಕ್ಕೆ ಒಗ್ಗುವುದಿಲ್ಲ. ಅಂತಹ ನದಿಯ ಪ್ರೀತಿಯನ್ನೇ ಬೊಗಸೆಯಲ್ಲಿ ಬಾಚಿ ತಂದು ಈ ಬ್ಲಾಗ್ನಲ್ಲಿ ಇಡಲು ಪ್ರಯತ್ನಿಸುತ್ತೇನೆ.
ಇನ್ನು ಮುಂದೆ ನದಿ ನಿಲ್ಲುವುದಿಲ್ಲ. ಅದರ ಪ್ರೀತಿಯೂ.
ಒಪ್ಪಿಸಿಕೊಳ್ಳಿ.